ಹಲೋ ಸ್ನೇಹಿತರೆ, ಬೆಂಗಳೂರು ಬಂದ್ ಮಾಡಿರುವ ಉದ್ದೇಶ ಹಲವು ಬೇಡಿಕೆಗಳನ್ನು ಈಡೇರಿಸಲಿ ಸರ್ಕಾರ ಎಂದು ಬಂದ್ ಕರೆ ನೀಡಲಾಗಿತ್ತು. ಕರ್ನಾಟಕ ಸರ್ಕಾರವು ತಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟವು ಬೆಂಗಳೂರು ‘ಬಂದ್’ ಅನ್ನು ಹಿಂಪಡೆದಿದೆ. ಬೇಡಿಕೆ ಈಡೇರದೆ ಇದ್ದರೆ ಪ್ಲಾನ್ ಬಿ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಏನದು ಪ್ಲಾನ್ ಬಿ ಈ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.
ಕಳೆದ ಮಧ್ಯರಾತ್ರಿಯಿಂದ ಐಟಿ ರಾಜಧಾನಿಯಲ್ಲಿ ಕ್ಯಾಬ್ಗಳು, ಟ್ಯಾಕ್ಸಿಗಳು ಮತ್ತು ಇತರ ಖಾಸಗಿ ಬಸ್ಗಳು ಸೇರಿದಂತೆ ಖಾಸಗಿ ಸಾರಿಗೆ ಸೇವೆಗಳು ಸ್ಥಗಿತಗೊಂಡಿವೆ. ಕರ್ನಾಟಕ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರತಿಭಟನಾನಿರತ ಚಾಲಕರನ್ನು ಭೇಟಿ ಮಾಡಿದ ನಂತರ, ಮಧ್ಯಾಹ್ನ 2.30 ರ ಸುಮಾರಿಗೆ ಮುಷ್ಕರವನ್ನು ಹಿಂಪಡೆಯಲಾಯಿತು.
ಇದನ್ನೂ ಓದಿ: 500 ನೋಟಿನ ಬಗ್ಗೆ ಮಾಹಿತಿ: ಬೆಳ್ಳಂಬೆಳಿಗ್ಗೆ ರಿಸರ್ವ್ ಬ್ಯಾಂಕ್ ನೋಟಿನ ಬಗ್ಗೆ ಹೊಸ ಅನೌನ್ಸ್
ಖಾಸಗಿ ಸರ್ಕಾರಗಳ ಬಂದ್ ವಾಪಾಸ್ ಸಾರಿಗೆ ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ. ಬೇಡಿಕೆ ಈಡೇರಿಸದಿದ್ದರೆ ರಾಜ್ಯವ್ಯಾಪಿ ಹೋರಾಟಕ್ಕೆ ಎಚ್ಚರಿಕೆ ಖಾಸಗಿ ಸಾರಿಗೆ ಒಕ್ಕೂಟಗಳ ಬೆಂಗಳೂರು ಬಂದ್ ತಾತ್ಕಾಲಿಕವಾಗಿ ವಾಪಾಸ್ ಪಡೆಯಲಾಗಿದೆ. ಪ್ರತಿಭಟನಾ ಸ್ಥಳ ಪ್ರೀಡಂ ಪಾರ್ಕ್ ಗೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಬೇಟಿ ಕೊಟ್ಟು ಬೇಡಿಕೆ ಈಡೇರಿಸುವ ಭರವಸೆ ಕೊಟ್ರು. ಸಾರಿಗೆ ಸಚಿವರ ಭರವಸೆ ಬೆನ್ನಲ್ಲೇ ಇವತ್ತಿನ ಬೆಂಗಳೂರು ಬಂದ್ ವಾಪಾಸ್ ಪಡೆಯುವುದಾಗಿ ಒಕ್ಕೂಟದ ನಟರಾಜ್ ಶರ್ಮಾ ಘೋಷಿದರು.
2 ತಿಂಗಳಲ್ಲಿ ಕೊಟ್ಟ ಮಾತಂತೆ ಬೇಡಿಕೆ ಈಡೇರಿಸಬೇಕು ಇಲ್ಲ ಅಂದ್ರೆ ಮುಂದೆ ಉಪವಾಸ ಸತ್ಯಾಗ್ರಹ ಕೂರುತ್ತೀವಿ ಎಂದು ಹೇಳಿಕೆ ಕೊಟ್ರು. ಖಾಸಗಿ ಬಂದ್ ಹಿಂಪಡೆದ ಬೆನ್ನಲ್ಲೇ ಬೆಂಗಲೂರು ಸಹಜ ಸ್ಥಿತಿಯತ್ತಾ ಮರಳಿದೆ.ಬಂದ್ ಮುಗಿಸಿ ಆಟೋ ಚಾಲಕರು ಕೆಲಸಕ್ಕೆ ಹಾಜರಾದರೂ. ಬೇಡಿಕೆ ಈಡೇರಿಸದೆ ಇದ್ದರೆ ರಾಜ್ಯವ್ಯಾಪಿ ಹೋರಾಟ ಆಗತ್ತೆ ಎಂದು ಖಾಸಗಿ ಇಲಾಖೆ ಒಕ್ಕೂಟದವರು ಎಚ್ಚರಿಕೆ ಕೊಟ್ಟಿದ್ದಾರೆ.
ಇತರೆ ವಿಷಯಗಳು:
ಬಡವರಿಗಾಗಿ ಕಡಿಮೆ ಬೆಲೆಗೆ ಸಿಲಿಂಡರ್! LPG ಬೆಲೆ ಕೇವಲ 200 ರೂ. ಹಬ್ಬಕ್ಕೆ ಕೇಂದ್ರ ಸರ್ಕಾರದ ಕೊಡುಗೆ
ಕೇವಲ ಸ್ಕ್ಯಾನಿಂಗ್ ಮೂಲಕ ATM ನಿಂದ ಹಣ ಡ್ರಾ ಮಾಡಬಹುದು; ATM ಕಾರ್ಡ್ ಬದಲು ಬ್ಯಾಂಕ್ ನಲ್ಲಿ ಈ ಕಾರ್ಡ್ ಪಡೆದುಕೊಳ್ಳಿ