ನಮಸ್ಕಾರ ಸ್ನೇಹಿತರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಒಂದು ಅಭಿಯಾನವನ್ನು ಪ್ರಾರಂಭಿಸಿದೆ. ಅಂದರೆ ಕುಟುಂಬಗಳಿಂದ ಅಂಚಿನಲ್ಲಿರುವಂತಹ ಮಕ್ಕಳ ಕಲಿಕೆಗೆ ಸಂಬಂಧಿಸಿದ ಅಗತ್ಯತೆಗಳನ್ನು ಪರಿಹರಿಸಲು ಹಾಗೂ ಆರೋಗ್ಯಕರ ಜೀವನವನ್ನು ವಿನೂತನ ಕೋಪಕ್ರಮದಲ್ಲಿ ಉತ್ತೇಜಿಸುವ ಸಲುವಾಗಿ ಸರ್ಕಾರವು ಒಂದು ಮೊಬೈಲ್ ವ್ಯಾನ್ ಅಭಿಯಾನವನ್ನು ಆರಂಭಿಸಿದೆ. ಇದರ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಕೆಳಗಿನಂತೆ ನೋಡಬಹುದು.
ಮೊಬೈಲ್ ವ್ಯಾನ್ ಅಭಿಯಾನ :
ಸರ್ಕಾರವು 20,000 ಸಮುದಾಯದ ಸದಸ್ಯರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮುಂದಿನ 10 ದಿನಗಳಲ್ಲಿ 5000 ಮನೆಗಳಿಗೆ ಮೊಬೈಲ್ ವ್ಯಾನ್ ತಲುಪಿಸಲು ಮುಂದಾಗಿದೆ. 25 ಅಂಗನವಾಡಿ ಕೇಂದ್ರಗಳು ಹಾಗೂ 25 ಸರಕಾರಿ ಶಾಲೆಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿ ಈ ಅಭಿಯಾನವು ಕಾರ್ಯನಿರ್ವಹಿಸಲಿದೆ. ಅಂದರೆ ಮೂರರಿಂದ ಆರು ವರ್ಷ ವಯಸ್ಸಿನ ಮಕ್ಕಳು ಈ ಅಭಿಯಾನದ ಅಡಿ ಮೊಬೈಲ್ ವ್ಯಾನ್ ಸೌಲಭ್ಯವನ್ನು ಪಡೆಯಬಹುದಾಗಿದೆ. ಕಳೆದ ವರ್ಷದ ಉಪಕ್ರಮದ ಯಶಸ್ಸಿನ ಆಧಾರದ ಮೇಲೆ ಮೊಬೈಲ್ ವ್ಯಾನ್ ಅಭಿಯಾನವು ನಿರ್ಮಿಸುತ್ತದೆ.
ಈ ಮೊಬೈಲ್ ವ್ಯಾನ್ಗಳನ್ನು ಕೋವೀಸ್ ಸೂಕ್ತ ನಡವಳಿಕೆ ನೈರ್ಮಲ್ಯ ಮತ್ತು ಮುಟ್ಟಿನ ಆರೋಗ್ಯ ಹಾಗೂ ನೀರು ಮತ್ತು ನೈರ್ಮಲ್ಯ ಅಭ್ಯಾಸಗಳ ಬಗ್ಗೆ ಜನರಿಗೆ ತಿಳಿಸುವ ಸಲುವಾಗಿ ಈ ಅಭಯವನ್ನು ಬಳಸಲಾಯಿತು. ಈ ಅಭಿಯಾನವೂ ಒಂದು ಜಾಗೃತಿ ಮೂಡಿಸಲು ಮತ್ತು ಸಮುದಾಯದೊಂದಿಗೆ ತೊಡಗಿಸಿಕೊಳ್ಳಲು ಪರಿಣಾಮಕಾರಿ ಮಾಧ್ಯಮವಾಗಿದೆ ಎಂಬುದು ಸಾಬೀತಾಗಿದೆ.
ಸೇವ್ ದಿ ಚಿಲ್ಡ್ರನ್ ಸಹಯೋಗ :
ಈ ಮೊಬೈಲ್ ವ್ಯಾನ್ ಯೋಜನೆಯು ಸೇವದ ಚಿಲ್ಡ್ರನ್ ಸಹಯೋಗದದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಅಲ್ಲದೆ ಹೆಚ್ ಮತ್ತು ಎನ್ ಫೌಂಡೇಶನ್ ನಿಂದ ಸಾಮಾಜಿಕ ಶಕ್ತಿ ಉಪ ಕ್ರಮದ ಭಾಗವಾಗಿ ದಾಸಹಾಯವನ್ನು ಈ ಯೋಜನೆಯ ಪಡೆದಿದೆ. ಕರ್ನಾಟಕ ಡಿಡಬ್ಲ್ಯೂಸಿಡಿ ಉಪನಿರ್ದೇಶಕ ಎಸ್ ಸಿದ್ದರಾಮಯ್ಯ ಈ ಅಭಿಯಾನವನ್ನು ಉದ್ಘಾಟಿಸಿದರು.
ಇದನ್ನು ಓದಿ : ಗೃಹಲಕ್ಷ್ಮಿ ಯೋಜನೆಯ ಸರ್ವರ್ ಡೌನ್ ಹೊಸ ಆಪ್ ಬಿಡುಗಡೆ
ಈ ಯೋಜನೆಯ ಉದ್ದೇಶ :
ಸಮಗ್ರ ಶಿಕ್ಷಣ ,ಕೈ ತೊಳೆಯುವ ಕೇಂದ್ರಗಳು, ಮಕ್ಕಳ ಸ್ನೇಹಿ ನೈರ್ಮಲ್ಯ ಸೌಲಭ್ಯಗಳು ಹಾಗೂ ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ಮೂಲಕ 30 ಕೆಳಗೇರಿ ಸಮುದಾಯಗಳಿಗೆ ಶೈಕ್ಷಣಿಕ ಅಂತರವನ್ನು ಕಡಿಮೆ ಮಾಡಲು ಈ ಯೋಜನೆ ಯು ಪ್ರಯತ್ನಿಸುತ್ತದೆ. ದಕ್ಷಿಣ ಭಾರತದ ಸಂವಹನ ಮತ್ತು ಪ್ರಚಾರ ಸಂಸ್ಥಾಪಕರಾದ ರೂಪಾಲಿ ಗೋಸ್ವಾಮಿಯವರು ಸೇವದ ಚಿಲ್ಡ್ರನ್ ಈ ಕಸ ತೆಗೆಯುವ ಸಮುದಾಯದ ಪ್ರತಿಯೊಂದು ಮಗುವನ್ನು ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರಗಳಿಗೆ ದಾಖಲಿಸುವುದು ನಮ್ಮ ರಾಜ್ಯ ಕರ್ತವ್ಯವಾಗಿದೆ ಹಾಗೂ ಉದ್ದೇಶವಾಗಿದೆ ಎಂದಿದ್ದಾರೆ.
ಮಕ್ಕಳಿಗೆ ಆಟದ ಆಧಾರಿತ ವಿಧಾನವನ್ನು ಒದಗಿಸುವುದಲ್ಲದೆ ದೃಶ್ಯ ಕಲಿಕೆಗೆ ಹೆಚ್ಚು ಒತ್ತು ನೀಡುತ್ತೇವೆ ಹಾಗೂ ಸಂತೋಷದಾಯಕ ವಾತಾವರಣವನ್ನು ಸೃಷ್ಟಿಸಲು ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತೇವೆ. ಉಚಿತ ಮತ್ತು ಎಲ್ಲರಿಗೂ ಪ್ರವೇಶ ನೀಡುವ ಉದ್ದೇಶವನ್ನು ಈ ಅಂಗನವಾಡಿ ಕೇಂದ್ರಗಳು ಹೊಂದಿವೆ. ಪೋಷಕರು ತಮ್ಮ ಮಕ್ಕಳ ನಡವಡಿಕೆ ಮತ್ತು ಕಲಿಕಾ ಪ್ರಕ್ರಿಯೆಗಳಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಕಂಡ ನಂತರ ತನ್ನ ಮಕ್ಕಳನ್ನು ಅಂಗನವಾಡಿಗೆ ಕೇಂದ್ರಗಳಿಗೆ ಕಳುಹಿಸಲು ಬಹಳ ಉತ್ಸುಕರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ದಕ್ಷಿಣ ಭಾರತದ ಸಂವಹನ ಮತ್ತು ಪ್ರಚಾರ ಸಂಸ್ಥಾಪಕರಾದ ರೂಪ ಲಿಗೋ ಸ್ವಾಮಿ ಅವರು ಹೇಳಿದ್ದಾರೆ.
ಈ ಯೋಜನೆಯ ಸಹಾಯದಿಂದ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಅಂಗನವಾಡಿಗಳಿಗೆ ಕಳುಹಿಸುವ ಬದಲಾಗಿ ಸರ್ಕಾರಿ ಅಂಗನವಾಡಿ ಕೇಂದ್ರಗಳಿಗೆ ಕಳುಹಿಸಲು ಒಂದು ಮಹತ್ವದ ಯೋಜನೆಯಾಗಿ ಕಂಡು ಬರುತ್ತದೆ ಎಂಬುದು ನಮ್ಮ ಅಭಿಪ್ರಾಯವಾಗಿದೆ ಧನ್ಯವಾದಗಳು.
ಮನೆ ಬಾಗಲಿಗೆ ಏನು ಬರಲಿದೆ ?
ವ್ಯಾನ್ ಬರಲಿದೆ
ವ್ಯಾನ್ ಹತ್ತು ದಿನಗಳಲ್ಲಿ ಎಷ್ಟು ಮನೆ ತಲುಪಲಿದೆ ?
5000 ಮನೆಗಳಿಗೆ ಮೊಬೈಲ್ ವ್ಯಾನ್ ತಲುಪಲಿದೆ
ಇದನ್ನು ಓದಿ : ಆಭರಣ ಪ್ರಿಯರಿಗೆ ಬಂಪರ್ ಆಫರ್ : ಇದಕ್ಕಿಂತ ಉತ್ತಮ ಸಮಯ ಚಿನ್ನ ಪ್ರಿಯರಿಗೆ ಮತ್ತೊಂದಿಲ್ಲ