ಹಲೋ ಗೆಳೆಯರೇ, ಇಂದಿನ ಲೇಖನಕ್ಕೆ ಎಲ್ಲರಿಗು ಸ್ವಾಗತ, ಕಾಂಗ್ರೆಸ್ ಗ್ಯಾರೆಂಟಿಗಳು ಅನುಷ್ಠಾನಕ್ಕೆ ಬಂದ ಮೇಲೆ ಬಿಪಿಎಲ್ ಕಾರ್ಡ್ಗಳಿಗೆ ಬೇಡಿಕೆ ಹೆಚ್ಚಾಗಿದೆ, ಸಾಕಷ್ಟು ಜನ ಸುಳ್ಳು ಮಾಹಿತಿಯನ್ನು ನೀಡಿ ಬಿಪಿಎಲ್ ಕಾರ್ಡ್ಗಳ ಫಲಾನುಭವಿಗಳಾಗಿದ್ದರೆ ಅಂಥವರ ಕಾರ್ಡ್ಗಳು ಇನ್ನು ಮುಂದೆ ಚಾಲ್ತಿಯಲ್ಲಿರುವುದಿಲ್ಲ, ಆಹಾರ ಇಲಾಖೆ ಹೊಸದಾಗಿ ಬಿಪಿಎಲ್ ಕಾರ್ಡ್ಗಳ ಸರ್ವೆಯನ್ನು ನಡೆಸುತ್ತಿದೆ, ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆದಿದ್ದರೆ, ಸರ್ಕಾರದಿಂದ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ, ಬಿಪಿಎಲ್ ಕಾರ್ಡ್ ಹೊಸ ನಿಯಮವೇನು ಮತ್ತು ಸುಳ್ಳು ಮಾಹಿತಿ ನೀಡಿ ಕಾರ್ಡ್ ಪಡೆದವರಿಗೆ ಏನೆಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಯಲು ಲೇಖನವನ್ನು ಸಂಪೂರ್ಣವಾಗಿ ಓದಿ.
ಗ್ಯಾರೆಂಟಿ ಸ್ಕೀಂ ಬಂದ ಮೇಲೆ ಬಿಪಿಎಲ್ ಕಾರ್ಡ್ ತುಂಬ ಡಿಮ್ಯಾಂಡ್ ಬಂದಿದೆ, ಇನ್ನು ಬಿಪಿಎಲ್ ಕಾರ್ಡ್ಗಳನ್ನು ಹೆಚ್ಚುವರಿಯಾಗಿ ಕೊಡಬೇಕು ಎಂದರೆ ರಾಜ್ಯ ಸರ್ಕಾರ ಸ್ವಯಂ ಪ್ರೇರಿತ ಆರ್ಥಿಕ ಇಲಾಖೆಯ ಅನುಮತಿಯನ್ನು ಪಡೆದು ಪ್ರತ್ಯೇಕವಾಗಿ ಕೊಡಬೇಕಾಗುತ್ತದೆ. 60-80% ಕೇಂದ್ರ ಸರ್ಕಾರ ಕೊಡುತ್ತಿದ್ದರೆ. ರಾಜ್ಯ ಸರ್ಕಾರ ನಿಮಗೆ 20-40% ವರೆಗು ನೀಡುತ್ತಿತ್ತು ಅನ್ನಭಾಗ್ಯ ಸ್ಕೀಂ ಅಡಿಯಲ್ಲಿ ಈಗ ಹೊಸದಾಗಿ ಅಪ್ಲೈ ಮಾಡಿದವರಿಗೆ ಎಲ್ಲರಿಗು ಕೂಡ ಏನಾದರ ಸಮ್ಮತಿಯನ್ನು ನೀಡಬೇಕಾದರೆ ರಾಜ್ಯ ಸರ್ಕಾರದ ಒಪ್ಪಬೇಕಿದೆ ಅದರಲ್ಲು ಕೂಡ ಆರ್ಥಿಕ ಇಲಾಖೆ ಒಪ್ಪಬೇಕಾಗುತ್ತದೆ. ಒಪ್ಪಿದರೆ ಮಾತ್ರ ನಿಮಗೆ ಬಿಪಿಎಲ್ ಕಾರ್ಡ್ ಸಿಗಲಿದೆ.
ಇದನ್ನೂ ಓದಿ: ರೇಷನ್ ಕಾರ್ಡ್ ನಿಂದ ನಿಮ್ಮ ಹೆಸರು ಡಿಲೀಟ್: ಈ ಕೂಡಲೇ ತಿಂಗಳ ಅಂತ್ಯದೊಳಗೆ ಈ ಕೆಲಸ ಮಾಡಿ
ಯಾರೆಲ್ಲ ಸುಳ್ಳು ಮಾಹಿತಿಯನ್ನು ನೀಡಿ ಅಥವಾ ತಮಗರಿವಿಲ್ಲದೆ ಬಿಪಿಎಲ್ ಕಾರ್ಡ್ಗೆ ಫಲಾನುಭವಿ ಎಂದು ಅಪ್ಲೈ ಮಾಡಿದ್ದಾರೊ, ನಿಜವಾಗಿಯು ಅವರು ಫಲಾನುಭವಿಯಾಗದೆ ಇದ್ದರೆ ಅವರ ಕಾರ್ಡ್ ರದ್ದು ಮಾಡುವ ಕೆಲಸವನ್ನು ಕಳೆದ 2 ವರ್ಷದ ಹಿಂದೆ ಆಹಾರ ಇಲಾಖೆ ಮಾಡಿದೆ ಆಗ 4 ಲಕ್ಷದಷ್ಟು ಸುಳ್ಳು ಮಾಹಿತಿಯನ್ನು ನೀಡಿದಂತ ಕಾರ್ಡ್ದಾರರನ್ನು ಆ ಎಲ್ಲಾ ಕಾರ್ಡ್ಗಳನ್ನು ರದ್ದು ಪಡಿಸಿದರು ಇದರಲ್ಲಿ ಸರ್ಕಾರ ನೌಕರರು 70,000 ಜನ ಇದ್ದರು, ಅವರು ಸರ್ಕಾರಿ ನೌಕರಾಗಿದ್ದರು ಕೂಡ ಬಿಪಿಎಲ್ ಕಾರ್ಡ್ಗಳನ್ನು ಹೊಂದಿದ್ದರು ಇದನ್ನು HRMS Software ಮೂಲಕ ಆಹಾರ ಇಲಾಖೆ ಪರಿಶೀಲನೆ ಮಾಡಿ ಅವರೆಲ್ಲರ ಕಾರ್ಡ್ಗಳನ್ನು ರದ್ದು ಪಡಿಸಿದೆ. ಸುಳ್ಳು ಮಾಹಿತಿಯನ್ನು ನೀಡಿ ಬಿಪಿಎಲ್ ಕಾರ್ಡ್ ಪಡೆದ ಜನರಿದ್ದಾರೋ ಅವರ ಕಾರ್ಡ್ಗಳನ್ನು ರದ್ದು ಮಾಡಲು ಆಹಾರ ಇಲಾಖೆ ಮುಂದಾಗಿದೆ.
ಆಹಾರ ಇಲಾಖೆಯ ನಿಯಮಗಳನ್ನು ಯಾರು ಮೀರುವಂತಿಲ್ಲ, ಸರ್ಕಾರಿ ಉದ್ಯೋಗಿಯಾಗಿರಬಾರದು, ಅತಿ ಹೆಚ್ಚು ಜಮೀನನ್ನು ಕೂಡ ಹೊಂದಿರಬಾರದು, ಪ್ರತಿ ವರ್ಷನು ಕೂಡ ಹೀಗೆ ಮಾಡಲಾಗುತ್ತದೆ. ಏಕೆಂದರೆ ಬಿಪಿಎಲ್ ಕಾರ್ಡ್ಗೆ ಅಪ್ಲೈ ಮಾಡಿದವರ ಸಂಖ್ಯೆ 3 ಲಕ್ಷಕ್ಕು ಕೂಡ ಹೆಚ್ಚು ಜನರ ಬಿಪಿಎಲ್ ಕಾರ್ಡ್ಗೆ ಅಪ್ಲೈ ಮಾಡಿದ್ದಾರೆ, ಅವರೆಲ್ಲರಿಗು ಕೂಡ ಬಿಪಿಎಲ್ ಕಾರ್ಡ್ ಕೊಡಬೇಕೆಂದರೆ ಆರ್ಥಿಕ ಇಲಾಖೆಯಿಂದ ಸಮ್ಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ ಮತ್ತು ರಾಜ್ಯ ಸರ್ಕಾರನೆ ಸಂಪೂರ್ಣವಾಗಿ ದುಡ್ಡನ್ನು ಬರಿಸಬೇಕಾಗುತ್ತದೆ. ಯಾರು ನಿಯಮದ ಒಳಗಡೆ ಇಲ್ಲ ಅವರು ಬಿಪಿಎಲ್ ಕಾರ್ಡ್ ಇಂದ ಹೊರಗುಳಿಯುವದು ಒಳ್ಳೆಯದು.
ಇತರೆ ವಿಷಯಗಳು
ವರಮಹಾಲಕ್ಷ್ಮೀ ಹಬ್ಬದ ವಿಶೇಷ: ಚಿನ್ನದ ದರ ಇಳಿಕೆ, ಹಬ್ಬದ ದಿನವೇ ಚಿನ್ನ ಖರೀದಿಸಿ; ಮಹಿಳೆಯರಿಗೆ ಅದ್ಭುತ ಕೊಡುಗೆ
Good News : 9 ಲಕ್ಷ ರೈತರ ಸಾಲ ಮನ್ನಾ ಮಾಡಿದ ಸರ್ಕಾರ, ಕೂಡಲೇ ಈ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ