ಹಲೋ ಸ್ನೇಹಿತರೆ, ಇಂದಿನ ನಮ್ಮ ಲೇಖನಕ್ಕೆ ಎಲ್ಲರಿಗೂ ಸ್ವಾಗತ, ರಾಜ್ಯದಲ್ಲಿ ಭಾರಿ ಬಹುಮತದಿಂದ ಆಯ್ಕೆಯಾಗಿರುವ ಕಾಂಗ್ರೆಸ್ ಸರ್ಕಾರ ಜೂನ್ 11 ರಂದು ಮೊದಲ ಗ್ಯಾರಂಟಿಯಾಗಿ ಶಕ್ತಿ ಯೋಜನೆಯನ್ನು ಜಾರಿಗೆ ತಂದಿತ್ತು, ಈ ಯೋಜನೆಯ ಲಾಭವನ್ನು ಇಲ್ಲಿಯವರೆಗೆ ಹಲವಾರು ಮಹಿಳೆಯರು ಪಡೆದಿದ್ದು, ಈಗ ಎಲ್ಲಾ ಮಹಿಳೆಯರಿಗೆ ಮಹತ್ವದ ಮಾಹಿತಿ ಬಂದಿದ್ದು ಈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಮಿಸ್ ಮಾಡದೆ ಕೊನೆಯವರೆಗೂ ಓದಿ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ 5 ಗ್ಯಾರಂಟಿಗಳನ್ನು ನೀಡುವುದಾಗಿ ಭರವಸೆ ನೀಡಿತ್ತು, ಅದರಲ್ಲೂ ಮಹಿಳೆಯರಿಗೆ ಉಚಿತ ಬಸ್ ಸೇವೆ ಒದಗಿಸುವ ಶಕ್ತಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ರಾಜ್ಯದ ಹಲವು ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ, ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿರುವ ಶಕ್ತಿ ಯೋಜನೆಯ ಬಗ್ಗೆ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ ಅವರು, ಈ ಯೋಜನೆಯಿಂದ ಸಾರ್ವಜನಿಕ ಸಾರಿಗೆ ಸರ್ಕಾರಿ ಬಸ್ ನ ಪ್ರಯಾಣಕ್ಕೆ ಒತ್ತು ನೀಡಿದಂತಾಗಿದೆ. ಮಹಿಳೆಯರಿಗೂ ಆರ್ಥಿಕ ಬೆಂಬಲ ಎಂದು ಹೇಳಿದರು.
ರಾಜ್ಯ ಸರ್ಕಾರದಿಂದ ಹೊಸ ಬಸ್ ಖರೀದಿ:
ಶಕ್ತಿ ಯೋಜನೆ ಆರಂಭವಾದ ದಿನದಿಂದ ಇಲ್ಲಿಯವರೆಗೆ ಹಲವಾರು ಮಹಿಳೆಯರು ಪ್ರಯಾಣ ಮಾಡಿದ್ದು ಇನ್ನು ಕೆಲವು ಗ್ರಾಮೀಣ ಪ್ರದೇಶ ಹಳ್ಳಿ ಕಡೆ ಸರ್ಕಾರಿ ಬಸ್ ನ ಸೌಲಭ್ಯ ಇಲ್ಲ, ಇದರ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ, ಇನ್ನು ಹೆಚ್ಚು ಹೊಸ ಬಸ್ಗಳನ್ನು ಬಿಡುತ್ತೆವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ, ನಾಲ್ಕು ಸಾರಿಗೆ ನಿಗಮಗಳಿಂದ 4 ಸಾವಿರ ಬಸ್ಗಳ ಖರೀದಿ ಮಾಡಲು ನಿರ್ಧಾರಿಸಿದ್ದೇವೆ, ಜಿಲ್ಲೆಯ 20 ಗ್ರಾಮಗಳಿಗೆ ಸರಕಾರಿ ಬಸ್ ಇಲ್ಲ ಎಂದು ತಿಳಿದು ಬಂದಿದೆ, ಎಲ್ಲಿ ಬಸ್ ಇಲ್ಲ ಈ ವಿಚಾರವಾಗಿ ಹಳ್ಳಿಗಳಿಗೆ ಸಮೀಕ್ಷೆ ನಡೆಯುತ್ತಿದೆ. ಶೀಘ್ರದಲ್ಲೆ ಎಲ್ಲಾ ಹಳ್ಳಿಗಳಿಗೂ ಬಸ್ ಬಿಡುತ್ತೇವೆ ಎಂದು ಸಚಿವರು ಹೇಳಿದ್ದಾರೆ.
ಮಹಿಳೆಯರಿಂದ ಹೆಚ್ಚು ಪ್ರಯಾಣ:
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯಡಿ ಮಹಿಳಾ ಪ್ರಯಾಣಿಕರ ಸಂಖ್ಯೆ ದಿನ ದಿಂದ ದಿನಕ್ಕೆ ಹೆಚ್ಚಾಗಿದ್ದು, ಮಹಿಳೆಯರು ಈ ಯೋಜನೆಗೆ ಸಂತೋಷವನ್ನು ವ್ಯಕ್ತ ಪಡಿಸಿದ್ದಾರೆ, ಕಳೆದ ವಾರಕ್ಕೆ ಹೋಲಿಕೆ ಮಾಡಿದ್ರೆ ಹೋದ ವಾರದ ದಿನದಲ್ಲಿಯು ಹೆಚ್ಚು ಪ್ರಯಾಣ ಪ್ರಯಾಣ ಮಾಡಿದ್ದಾರೆ, ಇನ್ನು ಗ್ರಾಮೀಣ ಭಾಗದ ಸ್ಥಳದಲ್ಲಿ ಹೆಚ್ಚು ಬಸ್ ಹಾಕಿ ಅಲ್ಲಿಯು ಸರ್ಕಾರಿ ಬಸ್ ಸಂಚರಿಸುವಂತೆ ಮಾಡುತ್ತೇವೆ ಎಂದಿದ್ದಾರೆ.
ಇತರೆ ವಿಷಯಗಳು:
ನೀವು ಯಾವ ರೀತಿಯ ಜೀವನಶೈಲಿಯನ್ನು ಇಷ್ಟಪಡುತ್ತೀರಿ? ನಿಮ್ಮ ಜೀವನಶೈಲಿ ತಿಳಿಯಲು ಸಣ್ಣ ಪರೀಕ್ಷೆ
ಸಾಲ ಮನ್ನಾಕ್ಕೆ ಹೊಸ ರೂಲ್ಸ್: ಈಗ ಈ ಬ್ಯಾಂಕ್ ನಲ್ಲಿ ಖಾತೆಯಿದ್ದರೆ ಮಾತ್ರ ಸಂಪೂರ್ಣ ಸಾಲ ಮನ್ನಾ