ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರವು ಈಗಾಗಲೇ ಹೆಣ್ಣು ಮಕ್ಕಳಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅದರಲ್ಲಿ ಗೃಹಲಕ್ಷ್ಮಿ ಯೋಜನೆ ಹಾಗೂ ಶಕ್ತಿ ಯೋಜನೆಯು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಕಾರ್ಯವನ್ನು ಮಾಡುತ್ತಿದೆ. ಅದರಂತೆ ಈಗ ಹೆಣ್ಣು ಮಕ್ಕಳಿಗಾಗಿ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಮೂಲಕ 50,000ಗಳನ್ನು ಹೆಣ್ಣು ಮಕ್ಕಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಿದೆ. ಹಾಗಾದರೆ ಹೊಸ ಯೋಜನೆ ಯಾವುದು? ಈ ಯೋಜನೆಯ ಲಾಭವನ್ನು ಹೇಗೆ ಪಡೆಯುವುದು ಎಂಬುದರ ಮಾಹಿತಿಯನ್ನು ನಿಮಗೆ ಈಗ ತಿಳಿಸಲಾಗುತ್ತಿದೆ.
ಹೆಣ್ಣು ಮಕ್ಕಳಿಗಾಗಿ ಹೊಸ ಯೋಜನೆ :
ಸರ್ಕಾರವು 50,000ಗಳನ್ನು ಸರ್ಕಾರಿ ಹೆಣ್ಣು ಮಕ್ಕಳ ಖಾತೆಗೆ ಹಾಕುತ್ತಿದೆ. ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಸರ್ಕಾರವು ಹೆಣ್ಣು ಮಕ್ಕಳಿಗಾಗಿ ಸುರಕ್ಷಿತ ಯೋಜನೆ ಎಂಬ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯ ಮುಖ್ಯ ಉದ್ದೇಶವೇನೆಂದರೆ ಹೆಣ್ಣು ಬ್ರೂಣ ಹತ್ಯೆ ಮತ್ತು ಲಿಂಗಾನುಪಾತವನ್ನು ತಡೆಗಟ್ಟುವುದಾಗಿದೆ. ಅಲ್ಲದೆ ಈ ಯೋಜನೆಯ ಜೊತೆಗೆ ರಾಜ್ಯ ಸರ್ಕಾರವು ಹೆಣ್ಣು ಮಕ್ಕಳಿಗಾಗಿ ಭಾಗ್ಯಲಕ್ಷ್ಮಿ ಯೋಜನೆಯನ್ನು ಸಹ ಜಾರಿಗೆ ತಂದಿದೆ. ಭಾಗ್ಯಲಕ್ಷ್ಮಿ ಯೋಜನೆಯ ಅಡಿಯಲ್ಲಿ ರಾಜ್ಯದ ಪ್ರತಿ ಹೆಣ್ಣು ಮಗುವಿಗೆ ಸರಿಯಾದ ಶಿಕ್ಷಣವನ್ನು ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದ್ದು ಈ ಯೋಜನೆಗೆ ಸಂಬಂಧಿಸಿ ದಂತೆ ಹೆಣ್ಣು ಮಕ್ಕಳಿಗೆ ಆರ್ಥಿಕ ಸಹಾಯವನ್ನು ಸಹ ನೀಡಿದಂತಾಗುತ್ತದೆ. ಭಾಗ್ಯಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪೋಷಕರಿಗೆ ಹೆಣ್ಣು ಮಗು ಜನಿಸಿದಾಗ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ ಹಾಗೂ ಸರ್ಕಾರವು ಮಕ್ಕಳ ಶಿಕ್ಷಣದ ಸಮಯದಲ್ಲಿ ಸಹಾಯ ಮಾಡುತ್ತದೆ.
ಭಾಗ್ಯಲಕ್ಷ್ಮಿ ಯೋಜನೆ 2023 :
ಭಾಗ್ಯಲಕ್ಷ್ಮಿ ಯೋಜನೆಯನ್ನು ರಾಜ್ಯ ಸರ್ಕಾರವು ಜಾರಿಗೆ ತಂದಿದ್ದು ಈ ಯೋಜನೆಯ ಅಡಿಯಲ್ಲಿ ಹೆಣ್ಣು ಮಗು ಜನಿಸಿದಾಗ ಅವಳ ಹೆಸರಲ್ಲಿ ಐವತ್ತು ಸಾವಿರ ರೂಪಾಯಿಗಳ ಪಾಂಡುಗಳನ್ನು ನೀಡಲಾಗುತ್ತದೆ. 21 ವರ್ಷಗಳಲ್ಲಿ ಈ ಬಾಂಡ್ ಪಕ್ವವಾಗುತ್ತದೆ ಹಾಗೂ 21 ವರ್ಷಗಳಿಗೆ ಈ ಬಾಂಡ್ ಮೌಲ್ಯವು 2 ಲಕ್ಷ ಗಳಷ್ಟು ಮೌಲ್ಯವನ್ನು ಹೊಂದಿರುತ್ತದೆ. ಅಲ್ಲದೆ ಹೆಣ್ಣು ಮಗು ಹುಟ್ಟಿದ ಸಮಯದಲ್ಲಿ ತಾಯಿಗೆ ಮಗಳ ಪೋಷಣೆಗಾಗಿ ಪ್ರತ್ಯೇಕವಾಗಿ ಐದು ಸಾವಿರದ ನೂರು ರೂಪಾಯಿಗಳನ್ನು ನೀಡಲಾಗುತ್ತದೆ. ಆರನೇ ತರಗತಿಗೆ ಈ ಹೆಣ್ಣು ಮಗು ಪ್ರವೇಶ ಪಡೆದಾಗ ಅವಳಿಗೆ ನೆರವನ್ನು ನೀಡುವುದಕ್ಕಾಗಿ 3000ಗಳನ್ನು ನೀಡುತ್ತದೆ. 5000ಗಳನ್ನು ಆ ಹೆಣ್ಣು ಮಗುವಿಗೆ ಎಂಟನೇ ತರಗತಿ ಬಂದಾಗ ರಾಜ್ಯ ಸರ್ಕಾರ ನೀಡುವುದರ ಜೊತೆಗೆ ಅವರ ಆರ್ಥಿಕ ಅಗತ್ಯತೆಗಳನ್ನು ಪೂರೈಸಲು ಈ ಹಣವು ಸಹಾಯಕವಾಗುತ್ತದೆ ಎಂದು ತಿಳಿಸಿದೆ.
ಇದನ್ನು ಓದಿ : 8.5 ಕೋಟಿ ರೈತರ ಖಾತೆಗೆ 17,000 ಕೋಟಿ ರೂ ಜಮಾ! ಹಣ ಬಂದಿಲ್ವಾ ಹಾಗಾದ್ರೆ ಕೂಡಲೇ ಈ ಕೆಲಸ ಮಾಡಿ
ಭಾಗ್ಯಲಕ್ಷ್ಮಿ ಯೋಜನೆಗೆ ಇರುವ ಅರ್ಹತೆಗಳು :
ರಾಜ್ಯ ಸರ್ಕಾರವು ಜಾರಿಗೆ ತಂದಂತಹ ಲಕ್ಷ್ಮಿ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾದರೆ ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಅವುಗಳೆಂದರೆ, ಬಿಪಿಎಲ್ ಕುಟುಂಬದ ಹೆಣ್ಣು ಮಕ್ಕಳಿಗೆ ಮಾತ್ರ ಈ ಯೋಚನೆಯು ಸಹಾಯಕವಾಗಿದೆ. ಈ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾದರೆ ಬಿಪಿಎಲ್ ಕುಟುಂಬದ ಆದಾಯವು ಪ್ರತಿ ವರ್ಷ 2 ಲಕ್ಷಕ್ಕಿಂತ ಹೆಚ್ಚಿನ ಆದಾಯವನ್ನು ಹೊಂದಿರಬಾರದು. 2006ರ ನಂತರ ಜನಿಸಿದಂತಹ ಹೆಣ್ಣು ಮಕ್ಕಳು ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ಅಂಗನವಾಡಿ ಕೇಂದ್ರದಲ್ಲಿ ಹೆಣ್ಣು ಮಗು ಜನಿಸಿದ ಒಂದು ತಿಂಗಳೊಳಗೆ ನೊಂದಣಿ ಮಾಡಿಸಬೇಕು. ಸರ್ಕಾರಿ ಶಾಲೆಗೆ ಹೆಣ್ಣು ಮಗಳ ವಿದ್ಯಾಭ್ಯಾಸಕ್ಕಾಗಿ ಪ್ರವೇಶ ನೀಡಬೇಕಾಗುತ್ತದೆ. ಈ ಯೋಜನೆಯಡಿಯಲ್ಲಿ ಮುಖ್ಯ ಉದ್ದೇಶವೇನೆಂದರೆ 18 ವರ್ಷಕ್ಕಿಂತ ಮೊದಲು ಆ ಮಗುವಿಗೆ ಮದುವೆಯನ್ನು ಮಾಡಬಾರದು ಎಂಬ ಉದ್ದೇಶವನ್ನು ಈ ಯೋಜನೆಯ ಅಡಿಯಲ್ಲಿ ರಾಜ್ಯ ಸರ್ಕಾರವು ಹೊಂದಿದೆ. ಈ ಯೋಜನೆಯ ಲಾಭವನ್ನು ಸರ್ಕಾರಿ ನೌಕರರು ಪಡೆಯಲು ಸಾಧ್ಯವಿಲ್ಲ.
ರಾಜ್ಯ ಸರ್ಕಾರವು ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಹಾಗೂ ಅವರ ಆರ್ಥಿಕ ಅಗತ್ಯತೆಗಳನ್ನು ಪೂರೈಸುವ ಸಲುವಾಗಿ ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದ್ದು, ಯೋಜನೆಯ ಮೂಲಕ ಹೆಣ್ಣು ಮಕ್ಕಳ ಭ್ರೂಣ ಹತ್ಯೆಯನ್ನು ಹಾಗೂ ಲಿಂಗಾನುಪಾತವನ್ನು ತಡೆಯಲು ಸಹಾಯಕವಾಗಿದೆ ಎಂದು ಹೇಳಬಹುದಾಗಿದೆ. ಹೀಗೆ ಈ ಯೋಜನೆಗೆ ಸಂಬಂಧಿಸಿ ದಂತೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಯಾರಾದರೂ ಹೆಣ್ಣು ಮಗುವಿಗೆ ಜನ್ಮ ಇದ್ದರೆ ಅವರಿಗೂ ಸಹ ಶೇರ್ ಮಾಡಿ ಅಲ್ಲದೆ ನಿಮ್ಮ ಸಂಬಂಧಿಕರಿಗೂ ಸಹ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಆನ್ಲೈನ್ ಮೂಲಕ ಹೊಸ ರೇಷನ್ ಕಾರ್ಡ್ ಪಡೆಯಿರಿ : ಕ್ಯೂಆರ್ ಕೋಡ್ ರೇಷನ್ ಕಾರ್ಡ್ ಪಡೆಯಲು ಇಂದೇ ಇಲ್ಲಿಂದ ಅರ್ಜಿ ಸಲ್ಲಿಸಿ
ಅಪ್ಪುವಿನ ಕೊನೆಯ ಆಸೆ ಮಣ್ಣುಪಾಲು! ನೆರವೇರದ ಈ ಆಸೆ ಯಾವುದು ಗೊತ್ತೇ? ಕೇಳಿದ್ರೆ ನೀವೂ ಕೂಡಾ ಶಾಕ್!