ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಶ್ರೇಷ್ಠ ನಟ ಸಿನಿಮಾ ರಂಗದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಪಡೆದುಕೊಂಡಂತಹ ಒಬ್ಬನೇ ಒಬ್ಬ ನಟ ಎಂದರೆ ಅದು ಪುನೀತ್ ರಾಜಕುಮಾರ್. ಸಾಕಷ್ಟು ಸಮಾಜ ಸೇವೆಗಳು ಪುನೀತ್ ರಾಜಕುಮಾರ್ ರವರು ನಿಧನ ಹೊಂದಿದ ನಂತರ ಬೆಳಕಿಗೆ ಬಂದವು. ಪುನೀತ್ ರಾಜಕುಮಾರ್ ಅವರು ಅದೆಷ್ಟೋ ಅನಾಥ ಮಕ್ಕಳಿಗೆ ಆಶ್ರಯವನ್ನು ನೀಡುವುದರ ಮೂಲಕ ಶಿಕ್ಷಣಜ್ಞಾನವನ್ನು ಸಹ ನೀಡಿದರು. ಆದರೆ ಅಕ್ಟೋಬರ್ 29 ರಂದು ಅಂತಹ ಶ್ರೇಷ್ಠನಟನನ್ನು ನಾವೆಲ್ಲ ಕಳೆದುಕೊಳ್ಳಬೇಕಾಯಿತು. ಆದರೆ ಇದೀಗ ಪುನೀತ್ ರಾಜಕುಮಾರ್ ರವರ ಪತ್ನಿಯಾದ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು ಪುನೀತ್ ರಾಜಕುಮಾರ್ ರವರ ಒಂದು ಆಸೆ ಇತ್ತು ಆಸೆ ಇಂದಿಗೂ ಸಹ ನೆರವೇರಲಿಲ್ಲ ಎಂದು ಹೇಳಿದ್ದಾರೆ. ಹಾಗಾದರೆ ಪುನೀತ್ ರಾಜಕುಮಾರ್ ಅವರ ಆಸೆ ಏನು ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸಲಾಗುತ್ತದೆ.
ಕಂಪ್ಲೀಟ್ ಫ್ಯಾಮಿಲಿ ಮ್ಯಾನ್ :
ನಟ ಪುನೀತ್ ರಾಜಕುಮಾರ್ ರವರು ಇದೀಗ ನಮ್ಮ ಜೊತೆ ದೈಹಿಕವಾಗಿ ಇಲ್ಲದಿದ್ದರೂ ಸಹ ಅವರ ನೆನಪುಗಳು ನಮ್ಮನ್ನು ಕಾಡದೇ ಬಿಡುತ್ತಿಲ್ಲ ಅವರ ನೆನಪುಗಳು ಎಂದಿಗೂ ಅಮರ, ಇದರಿಂದಾಗಿ ಅವರು ನಮ್ಮ ಜೊತೆ ಇಲ್ಲ ಎಂದು ತಿಳಿದುಕೊಳ್ಳಲು ಸಾಧ್ಯವೇ ಇಲ್ಲ. ಅಡಿಷ್ಟೋ ಯುವಜನರಿಗೆ ಹಾಗೂ ಪ್ರತಿ ಕ್ಷಣ ಅಭಿಮಾನಿಗಳಿಗೆ ಇವರು ಎರಡನೇ ನೀಡುತ್ತಿದ್ದಾರೆ ಇಂದಿಗೂ ಸಹ. ಇದರ ಜೊತೆಗೆ ನಟ ಪುನೀತ್ ರಾಜಕುಮಾರ್ ರವರ ದಾಂಪತ್ಯ ಜೀವನವು ಅಶ್ವಿನಿ ಪುನೀತ್ ರಾಜಕುಮಾರ್ ಜೊತೆ ಆರಂಭವಾಗಿದ್ದು ಇವರಿಗೆ ಇಬ್ಬರೂ ಪುತ್ರಿಯರು ಸಹ ಇದ್ದಾರೆ. ಇವರು ಹೆಚ್ಚಾಗಿ ತಮ್ಮ ಫ್ಯಾಮಿಲಿಯೊಂದಿಗೆ ಸಮಯ ಕಳೆಯುವ ನಟರಾಗಿದ್ದು, ಶಿವರಾಜಕುಮಾರ್ ಹಾಗೂ ರಾಘವೇಂದ್ರ ರಾಜಕುಮಾರ್ ರವರ ಜೊತೆಗೂ ಸಹ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದು, ನಟ ಪುನೀತ್ ರಾಜಕುಮಾರ್ ರವರು ಸಿನಿಮಾ ಜೊತೆಗೆ ಫ್ಯಾಮಿಲಿ ಮ್ಯಾನ್ ಆಗಿಯೂ ಗುರುತಿಸಿಕೊಂಡಿರುವುದು ಎಲ್ಲರಿಗೂ ಇಷ್ಟವಾಗಿರುವ ಒಬ್ಬ ಶ್ರೇಷ್ಠ ನಟರಾಗಿದ್ದಾರೆ.
ಅಪ್ಪು ಅವರ ಆಸೆ :
ನಟ ಪುನೀತ್ ರಾಜಕುಮಾರ್ ರವರನ್ನು ಎಲ್ಲರೂ ಪ್ರೀತಿಯಿಂದ ಅಪ್ಪು ಎಂದು ಸಹ ಕರೆಯುತ್ತಾರೆ. ನಟ ಪುನೀತ್ ರಾಜಕುಮಾರ್ ಅವರು ದೈಹಿಕವಾಗಿ ಎಷ್ಟು ಫಿಟ್ ಆಗಿದ್ದರೂ ಎಂದರೆ ಅವರು ವರ್ಕೌಟ್ ಅನ್ನು ಹೇಗೆ ಇಷ್ಟಪಡುತ್ತಿದ್ದರು ಅದೇ ರೀತಿ ಆಹಾರವನ್ನು ಸಹ ಇಷ್ಟಪಟ್ಟು ತಿನ್ನುತ್ತಿದ್ದರ ಜೊತೆಗೆ ತಮ್ಮ ದೇಹವನ್ನು ಕಟ್ಟುನಿಟ್ಟಾಗಿ ನೋಡಿಕೊಳ್ಳುತ್ತಿದ್ದರು. ಚಿಕನ್ ಬಿರಿಯಾನಿ ರಾಗಿ ಮುದ್ದೆ ಎಂದರೆ ಹೆಚ್ಚಿನ ಪ್ರೀತಿಯನ್ನು ಅಪ್ಪು ಹೊಂದಿದ್ದರು. ಅಪ್ಪುಗೆ ಶೂಟಿಂಗ್ ವೇಳೆಯಲ್ಲಾದರೂ ಸಹ ಇಲ್ಲ ಮನೆಯಲ್ಲಿ ಇದ್ದರೂ ಸಹ ಅವರಿಗೆ ಚಿಕನ್ ಬಿರಿಯಾನಿ ಬೇಕಿತ್ತು. ಅಪ್ಪು ನಾನ್ ವೆಜ್
ಅನ್ನು ವೆಜ್ಗಿಂತಲೂ ಹೆಚ್ಚು ಇಷ್ಟಪಡುತ್ತಿದ್ದರು. ಊಟದಲ್ಲಿ ನಾನ್-ವೆಜ್ ಹೇಗೆ ಇಷ್ಟವೋ ಅದರಂತೆ ಪುನೀತ್ಗೆ ಕಾಫಿ ಎಂದರೂ ಸಹ ಬಲು ಪ್ರೀತಿ. ಅದರಂತೆ ಪುನೀತ್ ಒಂದು ಕೆಫೆ ತಡೆಯಬೇಕೆಂದು ಹಾಗಾಗಿ ಹೇಳುತ್ತಿದ್ದರಂತೆ. ಅಲ್ಲದೆ ಒಮ್ಮೆಯಾದರೂ ಕೆಫೆ ತೆರೆದೆ ತೆರೆಯುತ್ತೇನೆ ಎಂದು ಹೇಳುತ್ತಿದ್ದು ಕೆಫೆರೆಯುವುದರ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು. ಆದರೆ ಅವರ ಈ ಆಸೆ ನೆರವೇರಲಿಲ್ಲ ಎಂದು ಪುನೀತ್ ರಾಜಕುಮಾರ್ ಅವರ ಹೆಂಡತಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಹೇಳಿದ್ದಾರೆ. ಅಲ್ಲದೆ ಪುನೀತ್ ರಾಜಕುಮಾರ್ ಅವರಿಗೆ ಯಾವ ಆಹಾರ ಇಷ್ಟ ಯಾವ ಅಡುಗೆ ಪ್ರೀತಿ ಹಾಗೂ ಏನೆಲ್ಲಾ ಅವರು ತಿನ್ನಲು ಬಯಸುತ್ತಿದ್ದರು ಎಂಬುದು ವಿಚಾರವನ್ನು ಸಹ ಕುರಿತು ಮಾಹಿತಿಯನ್ನು ತಿಳಿಸಿದ್ದಾರೆ.
ಇದನ್ನು ಓದಿ :ಪ್ರತಿಯೊಬ್ಬರ ಖಾತೆಗೆ ₹2000 ಜಮಾ! ಕೇಂದ್ರ ಸರ್ಕಾರದಿಂದ ಘೋಷಣೆ, ಯಾವ ದಿನ ಬರಲಿದೆ ಗೊತ್ತಾ ?
ಹೀಗೆ ನಟ ಪುನೀತ್ ರಾಜಕುಮಾರ್ ಅವರು ಅಗಲಿದ ನಂತರ ಅವರಿಗೆ ಕರ್ನಾಟಕ ರತ್ನ ನೀಡುವುದರ ಮೂಲಕ ಅವರನ್ನು ಡಾಕ್ಟರ್ ಪುನೀತ್ ರಾಜಕುಮಾರ್ ಎಂದು ಕರೆಯಲಾಗುತ್ತದೆ. ಅವರು ನಟರಾದರು ಸಹ ತಮ್ಮ ಹೃದಯ ಶ್ರೀಮಂತಿಕೆಯಲ್ಲಿ ಹೆಚ್ಚಿನ ಅಭಿಮಾನಿಗಳನ್ನು ಸಂಪಾದಿಸಿದ್ದರು. ಅಕಾಲಿಕ ಹೃದಯಘಾತನಿಂದ ಅಪ್ಪು ಅಭಿಮಾನಿಗಳನ್ನು ಅಗಲಿದ್ದಾರೆಯೇ ಹೊರತು ಅವರು ಮಾನಸಿಕವಾಗಿ ಅಭಿಮಾನಿಗಳ ಜೊತೆಯಲ್ಲಿಯೇ ಇದ್ದಾರೆ. ಪ್ರತಿದಿನ ಅಪ್ಪು ಅವರ ಸಮಾಧಿಗೆ ಹಲವಾರು ಅಭಿಮಾನಿಗಳು ತೆರಳಿ ನಮನ ಸಲ್ಲಿಸುತ್ತಿರುತ್ತಾರೆ. ಅಪ್ಪು ನಮ್ಮನ್ನೆಲ್ಲ ಆಗಲಿ ವರ್ಷಗಳು ಹುರುಳಿದರು ಸಹ ಇನ್ನೂ ಸಹ ಅವರ ನೆನಪು ಅಭಿಮಾನಿಗಳ ಮನದಲ್ಲಿ ಜೀವಂತವಾಗಿಯೇ ಇದೆ.
ಇವರು ಒಂದು ರೀತಿಯಲ್ಲಿ ಪರಮಾತ್ಮನಾಗಿದ್ದು, ತಮ್ಮ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ದೇವರು ಎಂದು ಕರೆದಿದ್ದು ಪರಮಾತ್ಮ ಇನ್ನೂ ಸಹ ಅಭಿಮಾನಿಗಳ ಮನದಲ್ಲಿ ಜೀವಂತವಾಗಿದ್ದಾರೆ. ಅಪ್ಪು ಈಗ ಜೊತೆಗಿರದ ಜೀವ ಎಂದಿಗೂ ಜೀವಂತ ಎಂಬಂತೆ ತಮ್ಮ ನೆನಪನ್ನು ಸದಾ ಕಾಡುವಂತೆ ಮಾಡುತ್ತಿದ್ದಾರೆ. ಹೀಗೆ ಅಪ್ಪು ಅವರ ಈ ಆಸೆಯ ಬಗ್ಗೆ ನಿಮ್ಮ ಸ್ನೇಹಿತರು ಯಾರಾದರೂ ಅಪ್ಪುವಿನ ಹುಚ್ಚು ಅಭಿಮಾನಿ ಯಾರಾದರೂ ಇದ್ದರೆ ಅವರಿಗೆ ಶೇರ್ ಮಾಡಿ ಹಾಗೂ ನಿಮ್ಮ ಸಂಬಂಧಿಕರಿಗೂ ಹಾಗೂ ಸ್ನೇಹಿತರಿಗೂ ಸಹ ಶೇರ್ ಮಾಡಿ ಧನ್ಯವಾದಗಳು.