ಹಲೋ ಸ್ನೇಹಿತರೇ, ಇಂದಿನ ಲೇಖನಕ್ಕೆ ಎಲ್ಲರಿಗು ಸ್ವಾಗತ, ಕನ್ನಡಿಗರಿಗೆ ಕಾವೇರಿ ವಿಚಾರವಾಗಿ ಪದೇ ಪದೇ ಅನ್ಯಾಯವಾಗುತ್ತಿದೆ. 1.5 ಕೋಟಿ ಜನರ ದಾಹವನ್ನು ನೀಗಿಸುತ್ತಿದ್ದಳು ಕಾವೇರಿ, ಸಂಕಷ್ಟದ ಪರಿಸ್ಥಿತಿಯಲ್ಲು ಸರ್ಕಾರ ಹಾಗೂ ಪ್ರಾಧಿಕಾರ ಜೊತೆಗೆ ಸುಪ್ರೀಂ ಕೋರ್ಟ್ನ ನಡೆಗೆ ಕನ್ನಡಿಗರು ವಿರೋಧಿಸಿ ತಮ್ಮ ಬಳಿ ಇರುವ ಕೊನೆಯ ಅಸ್ತ್ರ ಬಂದ್ ಮಾಡಲು ನಿರ್ಧಾವನ್ನು ಮಾಡಿದ್ದಾರೆ. ರಾಜ್ಯದ ಜನರಿಗೆ ಡಬಲ್ ಶಾಕ್ ಏನು? ನಾಳೆ ಯಾವೆಲ್ಲ ಸೇವೆಗಳು ಇರುವುದಿಲ್ಲ, ಯಾವೆಲ್ಲ ಸೇವೆಗಳು ಇರುತ್ತದೆ ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.
ಕಾವೇರಿ ವಿವಾದದಲ್ಲಿ ರಾಜ್ಯದ ಜನರಿಗೆ ಡಬಲ್ ಶಾಕ್, 3 ದಿನದ ಅಂತರದಲ್ಲಿ ರಾಜ್ಯದ ಜನರಿಗೆ ಎರಡೆರಡು ಶಾಕ್. ಯಾಕಂದ್ರೆ ನಾಳೆ ಬೆಂಗಳೂರು ಬಂದ್ ಆದ್ರೆ ಇವತ್ತು ಇಡೀ ರಾಜ್ಯ ಯಾವತ್ತು ಬಂದ್ ಆಗುತ್ತದೆ ಎಂದು ದಿನಾಂಕವನ್ನು ಘೋಷಣೆ ಮಾಡಲಾಗುತ್ತದೆ. ಕಾವೇರಿ ಬಂದ್ ವಿಚಾರದಲ್ಲಿ ಪ್ರತಿಷ್ಠೆ, ಕದನ ಬೆಂಗಳೂರಿಗರಿಗೆ ಡಬಲ್ ಶಾಕ್. ಇಂದು ಕರ್ನಾಟಕ ಬಂದ್ ಬಗ್ಗೆ ತೀರ್ಮಾನ ತಮಿಳುನಾಡಿಗೆ ಕಾವೇರಿ ನೀರು ಕಂಡಿಸಿ ಮೈಸೂರಿನಲ್ಲಿ ಕಿಚ್ಚು ಹೆಚ್ಚಾಗುತ್ತಿದೆ. ಕನ್ನಡಿಗರ ಆಕ್ರೋಷದ ಕಟ್ಟಡ ಒಡೆದಿದೆ. ಹೋರಾಟ ತೀರ್ವ ಸ್ವರೂಪ ಪಡೆದುಕೊಳ್ಳುತ್ತಿದೆ. ನಾಳೆ ಬೆಂಗಳೂರು ಬಂದ್ಗೆ ಕರೆ ಕೊಟ್ಟಿದ್ದು, 150ಕ್ಕು ಹೆಚ್ಚು ಸಂಘಟನೆಗಳು ಬಂದ್ ಬೆಂಬಲಿಸಿದೆ. ಆದರೆ ಕನ್ನಡ ಒಕ್ಕೂಟ ಬೆಂಗಳೂರು ಬಂದ್ ಬೆಂಬಲಿಸುತ್ತಿಲ್ಲ.
ಇದನ್ನೂ ಓದಿ: ಹವಾಮಾನ ಇಲಾಖೆ ಮುನ್ಸೂಚನೆ.! ಇಂದು ಸಂಜೆಯಿಂದ ರಾಜ್ಯದಲ್ಲಿ ಈ 5 ಜಿಲ್ಲೆಗಳಲ್ಲಿ ಭಾರೀ ಮಳೆ
ಬೆಂಗಳೂರು ಬಂದ್ ಬದಲು ಅಖಂಡ ಕರ್ನಾಟಕ ಬಂದ್ಗೆ ಪ್ಲಾನ್ ಮಾಡಿದೆ. ರಾಜ್ಯದ ಜನರಿಗೆ ಡಬಲ್ ಬಂದ್ ಶಾಕ್ ತಟ್ಟಲಿದೆ ಎನ್ನಲಾಗುತ್ತದೆ. ಬೆಂಗಳೂರಿನಲ್ಲಿ ನಾಳೆ ಈ ಸೇವೆಗಳು ಸಿಗುವುದಿಲ್ಲ. ಆಟೋ, ಓಲಾ, ಉಬರ್, ಖಾಸಗಿ ಬಸ್, ಹೋಟೆಲ್, ರೆಸ್ಟೋರೆಂಟ್, ಬಿಬಿಎಂಪಿ ಸೇವೆ ಎಲ್ಲವು ಕೂಡ ನಾಳೆ ಇರುವುದಿಲ್ಲ ಜೊತೆಗೆ ಗೂಡ್ಸ್ ವಾಹನ ಸಿಗೋದು ಡೌಟ್. ಬಿಎಂಟಿಸಿ ಬಸ್ ನೌಕರರು ಏನು ನಿರ್ಧಾರವನ್ನು ಮಾಡಲಿದ್ದಾರೆ. ಬಂದ್ ವಿರುದ್ದ, ಖಾಸಗಿ ಬಸ್ಗಳು ಇರುವುದಿಲ್ಲ ಆದರೆ ಸರ್ಕಾರ ಬಸ್ಗಳ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಹೋಟೆಲ್ ಮತ್ತು ಬಿಎಂಟಿಸಿ ಬಗ್ಗೆ ಇನ್ನು ನಿಕರವಾದ ಮಾಹಿತಿ ಸಿಕ್ಕಿಲ್ಲ ಆದರೆ ಓಲಾ, ಉಬರ್, ಖಾಸಗಿ ಬಸ್ ಇದೆಲ್ಲವು ಕೂಡ ಇರೋದಿಲ್ಲ.
ನಾಳೆ ಬೆಂಗಳೂರು ಬಂದ್ ಇದ್ದರು ಈ ಸೇವೆಗಳು ಸಿಗುತ್ತದೆ. ಸರ್ಕಾರಿ ಆಸ್ಪತ್ರೆ ಗಳು, ಖಾಸಗಿ ಆಸ್ಪತ್ರೆಗಳು ಓಪನ್ ಇರುತ್ತದೆ. ಆಸ್ಪತ್ರೆಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಲಿದೆ. ತುರ್ತು ಸೇವೆಗಳಿಗೆ ಯಾವುದೆ ಯಾವುದೆ ರೀತಿ ಕೊರತೆ ಇರುವುದಿಲ್ಲ ಮೆಡಿಕಲ್ ಶಾಪ್ ಕೂಡ ಓಪನ್ ಇರುತ್ತದೆ, ಇನ್ನು ದಿನಸಿ, ಹಾಲು ಎಂದಿನಂತೆ ಲಭ್ಯವಾಗಿರುತ್ತದೆ. ಜನಸಾಮಾನ್ಯರಿಗೆ ಯಾವುದೇ ತೊಂದರೆಯಾಗದಂತೆ ಅಂಚೆ ಕಚೇರಿ ಕೂಡ ಓಪನ್ ಇರುತ್ತದೆ. ಅಂಬ್ಯುಲೆನ್ಸ್ ಸೇವೆಗಳೂ ಕೂಡ ಸಮಸ್ಯೆ ಇರುವುದಿಲ್ಲ.
ಇತರೆ ವಿಷಯಗಳು
ರೈಲು ಟಿಕೆಟ್ ಪಡೆದ ನಂತರವೂ ಪ್ರಯಾಣಿಕರು ದಂಡ ಪಾವತಿಸಬೇಕು, ಏನಿದು ರೈಲ್ವೆಯ ವಿಶಿಷ್ಟ ನಿಯಮ?
ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ದಿಢೀರ್ ಕುಸಿತ; 10 ಗ್ರಾಂ ಚಿನ್ನಕ್ಕೆ ಇಷ್ಟು ದುಡ್ಡು ಕೊಟ್ರೆ ಸಾಕು!