ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ನಮ್ಮ ಈ ಲೇಖನದ ಮೂಲಕ ನೀವೆಲ್ಲರೂ ತಿಳಿದುಕೊಳ್ಳಲೇಬೇಕಾದ ವಿಷಯದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಸಾರ್ವಜನಿಕರಿಗೆ ವಿತರಿಸುವ ಪಡಿತರ ಅಕ್ಕಿಯಲ್ಲಿ ಕೃತಕ ಪ್ಲಾಸ್ಟಿಕ್ ಅಕ್ಕಿಯನ್ನು ಬೆರೆಸಲಾಗುತ್ತಿದ್ದು, ಇದರಿಂದ ಪಡಿತರ ಚೀಟಿದಾರರು ಕಂಗಾಲಾಗಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದ ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ತಪ್ಪದೇ ಕೊನೆವರೆಗೂ ಓದಿ.
ತುಮಕೂರು ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಪಡಿತರ ವಿತರಣೆಗಾಗಿ ತೆರೆದಿರುವ ಪಡಿತರ ಕೇಂದ್ರದಲ್ಲಿ ಹಾಗೂ ವಿಎಸ್ಎಸ್ ವತಿಯಿಂದ ನಡೆಯುತ್ತಿರುವ ಪಡಿತರ ಕೇಂದ್ರದಲ್ಲಿ ಸಾರ್ವಜನಿಕರಿಗೆ ಅಕ್ಕಿ ವಿತರಿಸಲಾಗುತ್ತಿದೆ. ಇತ್ತೀಚೆಗೆ ವಿತರಿಸಲಾಗುತ್ತಿರುವ ಅಕ್ಕಿಯಲ್ಲಿ ಕೃತಕವಾಗಿ ತಯಾರಿಸಿದ ಪ್ಲಾಸ್ಟಿಕ್ ಅಕ್ಕಿಯನ್ನು ಬೆರೆಸಿರುವುದು ಕಂಡುಬಂದಿದೆ.
ಇದನ್ನೂ ಓದಿ: ಸೌರ ಮಂಡಲದಲ್ಲಿ ಮತ್ತೊಂದು ಭೂಮಿ ಪತ್ತೆ! ಹೇಗಿದೆ ಗೊತ್ತಾ ಈ ಭೂಮಿ?
ಅಕ್ಕಿಯೊಂದಿಗೆ ಪ್ಲಾಸ್ಟಿಕ್ ಬಳಸಿ ಅಕ್ಕಿಯನ್ನು ಕಲಬೆರಕೆ ಮಾಡುತ್ತಿರುವ ಜಾಲಗಳನ್ನು ಪತ್ತೆ ಹಚ್ಚುವಲ್ಲಿ ಇಲಾಖೆ ಹಾಗೂ ಸರಕಾರ ವಿಫಲವಾಗಿದೆ. ಕಲಬೆರಕೆ ಅಕ್ಕಿ ವಿತರಣೆಯಿಂದ ಜಿಲ್ಲೆಯ ಪಡಿತರ ಕುಟುಂಬಗಳು ಕಂಗಾಲಾಗಿದ್ದಾರೆ.
ತುಮಕೂರು ತಾಲೂಕಿನ ಕೆಸ್ತೂರು ಗ್ರಾಮದ ವಿಎಸ್ಎಸ್ ಕೇಂದ್ರದಲ್ಲಿ ವಿತರಿಸಲಾಗಿದ್ದ ಪಡಿತರ ಅಕ್ಕಿಯಲ್ಲಿ ಅಪಾರ ಪ್ರಮಾಣದ ಕೃತಕ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದೆ. ಕುಟುಂಬದ ಮಹಿಳೆಯರು ಪ್ಲಾಸ್ಟಿಕ್ ಅಕ್ಕಿಯನ್ನು ವಿಂಗಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಇತರೆ ವಿಷಯಗಳು
ಇನ್ನು QR ಸ್ಕ್ಯಾನ್ ಮಾಡಿ ಪೇ ಮಾಡುವ ಅಗತ್ಯವಿಲ್ಲ, ಧ್ವನಿ ಸಂದೇಶದೊಂದಿಗೆ ಪಾವತಿಸಿ