ನಮಸ್ಕಾರ ಸ್ನೇಹಿತರೇ, ಬರ ಪರಿಹಾರ ಘೋಷಣೆ ಕರ್ನಾಟಕದಲ್ಲಿ ಮಾಡಿರುವ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತಿದೆ. ಮಳೆಯ ಪ್ರಮಾಣ ರಾಜ್ಯದಲ್ಲಿ ಕಡಿಮೆಯಾಗಿರುವುದರಿಂದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಸುಮಾರು 105 ತಾಲ್ಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿದ್ದಾರೆ. ಹಾಗಾದರೆ ಈ ಲೇಖನದಲ್ಲಿ ಆ 105 ತಾಲೂಕುಗಳ ಬಗ್ಗೆ ಸಂಪೂರ್ಣ ವಿವರವನ್ನು ನೋಡಬಹುದು.
105 ತಾಲ್ಲೂಕುಗಳು ಬರಪೀಡಿತ :
ಸನ್ಮಾನ್ಯ ಶ್ರೀ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 105 ತಾಲೂಕುಗಳನ್ನು ಸೆಪ್ಟೆಂಬರ್ 4ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಸರ್ಕಾರವು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲು ನಿರ್ಧರಿಸಿದೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ತೋರಣಗಲ್ಲು ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಶನಿವಾರ ಮಾತನಾಡಿದ ಮುಖ್ಯಮಂತ್ರಿ 113 ತಾಲ್ಲೂಕುಗಳಲ್ಲಿ ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆಯನ್ನು ನಡೆಸಿದ್ದು ತಮ್ಮ ವರದಿಯಲ್ಲಿ 105 ತಾಲ್ಲೂಕುಗಳನ್ನು ಬರಬೇಡಿ ತಾಲೂಕುಗಳು ಎಂದು ವರದಿ ಹೇಳುತ್ತಿದೆ ಎಂದು ಹೇಳಿದರು.
73 ತಾಲೂಕುಗಳು ಬರಗಾಲದ ಪರಿಸ್ಥಿತಿ :
ಇನ್ನು ರಾಜ್ಯದಲ್ಲಿ 73 ತಾಲೂಕುಗಳು ಬರಗಾಲದ ಪರಿಸ್ಥಿತಿಯನ್ನು ಎದುರಿಸುತ್ತಿವೆ ಎಂದು ವರದಿ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ಈ ಬಗ್ಗೆ ಇಂತಹ ತಾಲೂಕುಗಳನ್ನು ಬರಬೇಡಿ ತ ತಾಲೂಕುಗಳೆಂದು ಘೋಷಿಸುವುದರ ಮೂಲಕ ಅವುಗಳಿಗೆ ಬರ ಪರಿಹಾರ ಘೋಷಿಸುವ ಕುರಿತು ತೀರ್ಮಾನವನ್ನು ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಹೇಳಿದರು. ಕರ್ನಾಟಕದಲ್ಲಿ ಜುಲೈ ಮತ್ತು ಆಗಸ್ಟ್ ನಲ್ಲಿ ಮಳೆ ಕೊರತೆಯಾಗಿದ್ದು ಶೇಕಡ 56 ರಷ್ಟು ಮಳೆ ಕೊರತೆಯನ್ನು ಆಗಸ್ಟ್ ನಲ್ಲಿ ರಾಜ್ಯವು ಕಂಡಿದೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.
ಕೇಂದ್ರ ಸರ್ಕಾರದ ಹಸ್ತಕ್ಷೇಪ :
ಕೇಂದ್ರ ಸರ್ಕಾರವು ತಮಿಳುನಾಡು ಮತ್ತು ಕರ್ನಾಟಕ ನಡುವಿನ ಕಾವೇರಿ ಜಲ ವಿವಾದವನ್ನು ಬಗೆಹರಿಸಲು ಮಧ್ಯಸ್ತಿಕೆ ವಹಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋರಿದರು. ರಾಜ್ಯ ಸರ್ಕಾರವು ಕಾವೇರಿ ಸಮಸ್ಯೆ ಕುರಿತು ಚರ್ಚಿಸಲು ಪ್ರಧಾನಿ ಮತ್ತು ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಲು ಸರ್ವ ಪಕ್ಷ ನಿಯೋಗವನ್ನು ಕೊಂಡುಯಲು ಉದ್ದೇಶಿಸಿದೆ ಎಂದು ಹೇಳುವ ಮೂಲಕ ಅದಕ್ಕಾಗಿ ಅಪಾಯಿಂಟ್ಮೆಂಟ್ ಅನ್ನು ಕೇಳಲಾಗಿದ್ದು, ಕರ್ನಾಟಕದಲ್ಲಿನ ನೀರಿನ ಸಮಸ್ಯೆಯ ನೈಜತೆಯನ್ನು ಪ್ರೇಕ್ಷಕರು ಬಂದರೆ ಸರ್ಕಾರವು ಪ್ರಧಾನಿ ಮತ್ತು ಸಚಿವರಿಗೆ ತಿಳಿಸುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು. 113 ಅಡಿ ನೀರು ಕೆಆರ್ಎಸ್ ಅಣೆಕಟ್ಟೆಯಲ್ಲಿ ಸಂಗ್ರಹವಾಗಿದ್ದು ಮುಂಗಾರು ಮಳೆಯ ಕೊರತೆಯಿಂದಾಗಿ ಹಾರಂಗಿ ಮತ್ತು ಕಬಿನಿ ಅಣೆಕಟ್ಟೆಗಳು ಸಹ ನೀರಿನ ಕೊರತೆಯನ್ನು ಎದುರಿಸುತ್ತಿವೆ ಎಂದು ಹೇಳಿದರು. ರೈತರು ಬೆಳೆದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಕರ್ನಾಟಕದಲ್ಲಿ ಸಾಧ್ಯವಾಗುತ್ತಿಲ್ಲ ಹಾಗಾಗಿ ಕೇಂದ್ರ ಸರ್ಕಾರವು ನೀರು ಹಂಚಿಕೆಗೆ ಸಂಬಂಧಿಸಿದಂತೆ ಬಿಕ್ಕಟ್ಟಿನ ಸೂತ್ರ ಅಳವಡಿಸುವ ಅಗತ್ಯವಿದೆ ಎಂದು ಹೇಳಿದ್ದು ಬರ ಪರಿಹಾರ ಘೋಷಿಸುವ ನಿರ್ಧಾರವನ್ನು ಹೊಂದಿದ್ದಾರೆ ಎಂದು ಹೇಳಬಹುದಾಗಿದೆ.
ಹೀಗೆ ಕರ್ನಾಟಕ ರಾಜ್ಯದಲ್ಲಿ ಸುಮಾರು 105 ತಾಲ್ಲೂಕುಗಳು ಬರಪೀಡಿತ ತಾಲೂಕುಗಳು ಎಂದು ಘೋಷಿಸಲು ರಾಜ್ಯ ಸರ್ಕಾರವು ನಿರ್ಧರಿಸಿದ್ದು ಆ ಬರಪೀಡಿತ ತಾಲೂಕುಗಳಿಗೆ ಬರ ಪರಿಹಾರವನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಹೀಗೆ ನಿಮ್ಮ ತಾಲೂಕುಗಳು ಯಾರಾದರೂ ಬರಬೇಡಿ ತಾಲೂಕುಗಳಾಗಿದ್ದರೆ ಅವುಗಳನ್ನು ರಾಜ್ಯ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವುದರ ಮೂಲಕ ಅದರಲ್ಲಿ ನಿಮ್ಮ ತಾಲೂಕುಗಳ ಪಟ್ಟಿ ಇದೆಯೇ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳಿ ಧನ್ಯವಾದಗಳು.
ಇತರೆ ವಿಷಯಗಳು :
ವಿಮಾನದಲ್ಲಿ ಹಾರುವ ಕನಸು ನನಸಾಗುವ ಸಮಯ, ಪ್ರತಿ ಟಿಕೆಟ್ ಮೇಲೆ ಸಬ್ಸಿಡಿ ಲಭ್ಯ; ಎಂ.ಬಿ ಪಾಟೀಲ್ ಸ್ಪಷ್ಟನೆ
ಸೆಪ್ಟೆಂಬರ್ 10 ಕೊನೆಯ ಅವಕಾಶ: ಬಿಪಿಎಲ್ ಕಾರ್ಡ್ ದಾರರಿಗೆ ಸರ್ಕಾರದ ಆದೇಶ, ಈ ಕೆಲಸ ಕಡ್ಡಾಯವಾಗಿ ಮಾಡಲೇಬೇಕು