ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ರೈತರಿಗಾಗಿ ಜಾರಿಗೆ ತಂದಿರುವ ಹೊಸ ಹೊಸ ಯೋಜನೆಗಳ ಬಗ್ಗೆ ತಿಳಿಸಲಾಗುತ್ತಿದೆ. ಹಲವಾರು ರೀತಿಯಾದ ಯೋಜನೆಗಳನ್ನು ದೇಶದ ಬೆನ್ನೆಲುಬು ರೈತನಿಗಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತರುತ್ತಲೇ ಇದೆ. ರೈತರ ಸಂಕಷ್ಟ ಸ್ಥಿತಿಯಿಂದ ಪಾರಾಗಲು ಹಲವಾರು ಯೋಜನೆಗಳನ್ನು ಸರ್ಕಾರವು ಜಾರಿಗೆ ತಂದಿದ್ದು ಇದೀಗ ಬರಗಾಲ ಮಳೆ ಹಾನಿಯಿಂದ ಹಾಳಾದ ಬೆಳೆಗಳಿಗೆ ವಿಮಾ ಯೋಜನೆಯನ್ನು ಆರಂಭಿಸಿರುವುದರ ಬಗ್ಗೆ ನಿಮಗೆ ತಿಳಿಸಲಾಗುತ್ತಿದೆ. ಹಾಗಾದರೆ ಈ ಯೋಜನೆ ಏನು ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗುತ್ತದೆ.
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ :
ಭಾರತದ ಮುಖ್ಯ ವ್ಯಾಪಾರವೆಂದು ಕೃಷಿಯನ್ನು ಪರಿಗಣಿಸಲಾಗಿದೆ. ಕೋಟ್ಯಂತರ ರೈತರು ಇಂದಿಗೂ ಕೃಷಿ ಮಾಡುತ್ತಿದ್ದಾರೆ. ಕೃಷಿಯು ಪ್ರಸ್ತುತ ತುಂಬಾ ಕಷ್ಟಕರವಾಗಿದ್ದು ವಾಸ್ತವವಾಗಿ ರೈತರು ತಮ್ಮ ಬೆಳೆಗಳ ನಾಶವಾಗಿತ್ತಿರುವುದರ ಬಗ್ಗೆ ಕಂಗಲಾಗಿದ್ದಾರೆ. ಕೋಟ್ಯಂತರ ರೈತರು ಇದರಿಂದಾಗಿ ಸಾಲದ ಸುಳಿಯಲ್ಲಿ ಮುಳುಗಿರುವುದನ್ನು ನಾವು ನೋಡಬಹುದಾಗಿದೆ. ಇಂತಹ ರೈತರ ಕುಟುಂಬದ ಸಾಕಷ್ಟು ಸಂಕಷ್ಟಗಳನ್ನು ದುರಿಸಬೇಕಾಗಿದ್ದು ಈ ಎಲ್ಲಾ ವಿಷಯಗಳನ್ನು ಸರ್ಕಾರವು ಗಮನದಲ್ಲಿಟ್ಟುಕೊಂಡು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯನ್ನು ರೈತರಿಗಾಗಿ ಪ್ರಾರಂಭಿಸಿದೆ. ರೈತರಿಗೆ ಅವರ ಬೆಳೆಗಳು ವಿಫಲವಾದಾಗ ಆರ್ಥಿಕ ಸಹಾಯವನ್ನು ಈ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರವು ನೀಡುತ್ತದೆ.
ಮಾಧ್ಯಮ ವರದಿಗಳ ಪ್ರಕಾರ :
2023 ಜುಲೈ 30ರಂದು ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆಯು 48.50 ಲಕ್ಷಕ್ಕೂ ಹೆಚ್ಚು ಬೆಳೆ ವಿಮಾನಗಳನ್ನು ಮಾಡುವುದರ ಮೂಲಕ ಒಂದೇ ದಿನದಲ್ಲಿ ದಾಖಲೆಯನ್ನು ಸೃಷ್ಟಿಸಿದೆ. ನೈಸರ್ಗಿಕ ವಿಕೋಪಗಳಿಂದ ತಮ್ಮ ಬೆಳೆಗಳನ್ನು ರೈತರು ರಕ್ಷಿಸಿಕೊಳ್ಳಲು ಈ ಯೋಜನೆಯ ಅಡಿಯಲ್ಲಿ ನೋಂದಣಿಯನ್ನು ಮಾಡಿಕೊಳ್ಳಬೇಕಾಗುತ್ತದೆ.
ಬೆಳೆ ವಿಮಾ ಯೋಜನೆಯ ವೈಶಿಷ್ಟತೆಗಳು :
ಈ ಯೋಜನೆಯ ಅಡಿಯಲ್ಲಿ ಎಲ್ಲಾ ಬೆಳೆಗಾರರು ಮತ್ತು ಗೇಣಿದಾರ ರೈತರನ್ನು ಸೇರಿಸಲಾಗಿದ್ದು ಈ ಯೋಜನೆಯಡಿಯಲ್ಲಿ ಎಲ್ಲಾ ರೀತಿಯ ಬೆಳೆಗಳನ್ನು ಕಾಣಬಹುದಾಗಿದೆ. ಶೇಕಡ 2% ರಷ್ಟು ಖಾರಿಫ್ ಬೆಳೆಗಳಿಗೆ ಹಾಗೂ ಶೇಕಡ 15ರಂತೆ ಇತರ ಬೆಳೆಗಳಿಗೆ ಕನಿಷ್ಠ ದರಗಳನ್ನು ರೈತರಿಗೆ ನಿಗದಿಪಡಿಸಲಾಗಿದೆ. ನಿಗದಿತ ವಿಮಾ ಮೊಟ್ಟವನ್ನು ರೈತರು ಬೆಳೆ ನಷ್ಟಕ್ಕೆ ಪಡೆಯಬಹುದಾಗಿದೆ. ನಿಖರವಾದ ಅಂದಾಜುಗಳನ್ನು ಬೆಳೆಯೋಜನೆ ಅಡಿಯಲ್ಲಿ ಮಾಡಲು ಅನೇಕ ತಂತ್ರಗಳನ್ನು ಬಳಸಲಾಗುತ್ತದೆ. ಸರ್ಕಾರವು ಮಾಡಿದ ಹಕ್ಕುಗಳಲ್ಲಿ ಪಾರದರ್ಶಕತೆಯನ್ನು ತರಲು ಈ ತಂತ್ರಜ್ಞಾನವನ್ನು ಬಳಸುತ್ತಿದೆ.
ನೋಂದಣಿ ಸಲ್ಲಿಸುವ ವಿಧಾನ :
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸು ಬೇಕಾದರೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ. ಅಧಿಕೃತ ವೆಬ್ಸೈಟ್ ಎಂದರೆ http://pmfby.gov.in ಈ ವೆಬ್ ಸೈಟ್ ಗೆ ಭೇಟಿ ನೀಡುವುದರ ಮೂಲಕ ತಮ್ಮ ಹೆಸರನ್ನು ರೈತರು ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ.
ಫಸಲ್ ಭೀಮಾ ಯೋಜನೆಗೆ ನೊಂದಣಿ ಮಾಡಿಸಲು ಪ್ರಮುಖ ಲಿಂಕುಗಳು :
ರೈತರು ಪ್ರಧಾನಮಂತ್ರಿ ಫಸಲ್ ಭೀಮಾ ಬೆಳೆಯೋಜನೆ ಅಡಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅದಕ್ಕಾಗಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ ಇದಾದ ನಂತರ ನೀವು ರೈತ ಕಾಲ್ ಸೆಂಟರ್ ನಿಂದ ಸಹಾಯ ಪಡೆದು ಕ್ರೆಡಿಟ್ ಕಾರ್ಡ್ ಅನ್ನು ಹೊಂದಿದ್ದರೆ ಸುಲಭವಾಗಿ ನಿಮ್ಮ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ನೀವು ಬೇರೆ ಯಾವುದೇ ವಿಧಾನಗಳ ಮೂಲಕ ತಮ್ಮ ಹೆಸರನ್ನು ನೋಂದಾಯಿಸಲು ಬಯಸಿದರೆ ಸಿಎಂಸಿ ಕೇಂದ್ರಕ್ಕೆ ಹೋಗಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
ಇದನ್ನು ಓದಿ : ಶಾಲೆಗೆ ರಜೆ: 1ರಿಂದ 12ರವರೆಗೆ ಶಾಲಾ ವಿದ್ಯಾರ್ಥಿಗಳಿಗೆ ರಜೆಯೋ ರಜೆ, ಇಷ್ಟು ದಿನ ರಜೆ ಯಾಕೆ ಗೊತ್ತೇ.?
ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆಯ ಇನ್ನಿತರ ವಿವರಗಳು :
ರೈತರು ಪ್ರಧಾನಮಂತ್ರಿ ಬೆಳೆ ವಿಮಾ ಯೋಜನೆಗೆ ಕ್ಲೇಮ್ ಮಾಡಿದ ನಂತರ 72 ಗಂಟೆಗಳ ಒಳಗಾಗಿ ರೈತರು ತಮ್ಮ ಬೆಳೆ ನಷ್ಟದ ಬಗ್ಗೆ ಕೃಷಿ ಇಲಾಖೆಗೆ ತಿಳಿಸಬೇಕಾಗುತ್ತದೆ. ಇದಾದ ನಂತರ ನೀವು ಈ ಯೋಜನೆಯ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿ ಎಷ್ಟು ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂಬುದರ ಬಗ್ಗೆ ನೀವು ಹೇಳುವುದರ ಮೂಲಕ ಎಲ್ಲ ಸಂಬಂಧಿತ ಮಾಹಿತಿಯನ್ನು ನೀವು ಇದರಲ್ಲಿ ನೀಡಬೇಕಾಗುತ್ತದೆ.
ಹೀಗೆ ಕೇಂದ್ರ ಸರ್ಕಾರವು ರೈತರ ಬೆಳೆ ನಷ್ಟಕ್ಕಾಗಿ ಯೋಜನೆಗಳನ್ನು ಪ್ರಾರಂಭಿಸಿದ್ದು ಈ ಯೋಜನೆಗಳ ಸಂಪೂರ್ಣ ಪ್ರಯೋಜನವನ್ನು ಫಲಾನುಭವಿಗಳು ಪಡೆಯಬಹುದಾಗಿದೆ. ಹೀಗೆ ನಿಮ್ಮ ರೈತರಿಗೆ ಬೆಳೆ ಹಾನಿಯಾಗಿದ್ದಾರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡುವುದರ ಮೂಲಕ ಅವರು ಈ ಯೋಜನೆಯ ಸಂಪೂರ್ಣ ಲಾಭವನ್ನು ಪಡೆಯುವಂತೆ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಶಾಲೆಗೆ ರಜೆ: 1ರಿಂದ 12ರವರೆಗೆ ಶಾಲಾ ವಿದ್ಯಾರ್ಥಿಗಳಿಗೆ ರಜೆಯೋ ರಜೆ, ಇಷ್ಟು ದಿನ ರಜೆ ಯಾಕೆ ಗೊತ್ತೇ.?
ರೈಲು ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೇವೆ..! ಇದರ ಪಾಸ್ವರ್ಡ್ ಪಡೆಯುವುದು ಹೇಗೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ