ನಮಸ್ಕಾರ ಸ್ನೇಹಿತರೇ, ಇವತ್ತಿನ ಲೇಖನದಲ್ಲಿ ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣವು ಸರ್ಕಾರ ಬಿಡುಗಡೆ ಮಾಡಿರುವುದರ ಬಗ್ಗೆ ತಿಳಿಸಲಾಗುತ್ತಿದೆ. ಸದ್ಯ ನಮ್ಮ ಕರ್ನಾಟಕದಲ್ಲಿ ಈಗ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ 63,00,000 ಮಹಿಳೆಯರು ಈ ಯೋಜನೆಯ ಪ್ರಯೋಜನವನ್ನು ಪಡೆದಿರುವ ಮೂಲಕ ಅವರ ಬ್ಯಾಂಕ್ ಖಾತೆಗೆ 200 ರೂಪಾಯಿಗಳ ಹಣವನ್ನು ಸರ್ಕಾರ ಜಮಾ ಮಾಡಿದೆ. ಆದರೆ ಇದುವರೆಗೂ ಸಹ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತಹ ಮಹಿಳೆಯರಿಗೆ ಬಂದಿರುವುದಿಲ್ಲ ಹಾಗಾದರೆ ಈ ಲೇಖನದಲ್ಲಿ ನಿಮಗೆ ಎರಡು ಸಾವಿರ ರೂಪಾಯಿಗಳು ಬರೆದಿದ್ದಕ್ಕೆ ಕಾರಣಗಳೇನು ಹಾಗೂ ಈ ಹಣವನ್ನು ಯಾವಾಗ ಮಹಿಳೆಯರ ಖಾತೆಗೆ ಬಿಡುಗಡೆ ಮಾಡಲಾಗುತ್ತದೆ ಎಂಬುದರ ಬಗ್ಗೆ ತಿಳಿಸಲಾಗುತ್ತದೆ.
ಗೃಹಲಕ್ಷ್ಮಿ ಯೋಜನೆಯ ಎರಡು ಕಂತಿನ ಹಣ ಒಟ್ಟಿಗೆ :
ಮಕ್ಕಳ ಮತ್ತು ಮಹಿಳಾ ಕಲ್ಯಾಣ ಸಚಿವೆಯದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕರ್ನಾಟಕದ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಮೊದಲನೇ ಕಂತಿನ ಹಣವು ಈ ತಿಂಗಳು ಬರದೇ ಇದ್ದರೆ ಅವರಿಗೆ ನೇರವಾಗಿ ಮುಂದಿನ ತಿಂಗಳು ಹಾಗೂ ಈ ತಿಂಗಳ 2000 ರೂಪಾಯಿಗಳು ಅಂದರೆ ಒಟ್ಟಿಗೆ ನಾಲ್ಕು ಸಾವಿರ ರೂಪಾಯಿಗಳನ್ನು ಮಹಿಳೆಯರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಹಣ ಬರದೆ ಇದ್ದರೆ ಈ ಕೆಲಸ ಮಾಡಿ :
ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಡಿಬಿಟಿಯ ಮೂಲಕ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ಜಮಾ ಮಾಡಲು ನಿರ್ಧರಿಸಿದೆ. ಡಿ ಬಿ ಟಿ ಎಂದರೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಎಂದರ್ಥ. ಇದರ ಮೂಲಕ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುತ್ತಿತ್ತು. ಮೊದಲನೇದಾಗಿ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. https://play.google.com/store/apps/details?id=com.dbtkarnataka ಈ ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ಅದನ್ನು ಡೌನ್ಲೋಡ್ ಮಾಡಿ ಎಂಟರ್ ಆಧಾರ್ ನಂಬರ್ ಎಂದು ಕೇಳಿದಾಗ ಅದರಲ್ಲಿ ನಿಮ್ಮ ಆಧಾರಿಕ ಸಂಖ್ಯೆಯನ್ನು ನಮೂದಿಸಬೇಕು. ಇದಾದ ನಂತರ ಓಟು ಪಿ ಬಂದ ನಂತರ ಓಟಿಪಿಯನ್ನು ನಮೂದಿಸಿ ವೇರಿಫೈ ಓಟಿಪಿ ಎಂದು ಕ್ಲಿಕ್ ಮಾಡಬೇಕಾಗುತ್ತದೆ.
ಇದನ್ನು ಓದಿ : ಉಚಿತ ಲ್ಯಾಪ್ಟಾಪ್ ವಿತರಣೆ : ಸೆಪ್ಟೆಂಬರ್ 20ರ ಒಳಗಾಗಿ ಅರ್ಜಿ ಸಲ್ಲಿಸಿದವರಿಗೆ ಮಾತ್ರ
ಓಟಿಪಿಯನ್ನು ನಮೂದಿಸಿದ ನಂತರ ಅದರಲ್ಲಿ ನೀವು ಪರ್ಸನಲ್ ಇನ್ಫರ್ಮೇಷನ್ ಅನ್ನು ಹಾಗೂ ನಿಮ್ಮ ಹೆಸರು ಮನೆಯ ಅಡ್ರೆಸ್ ಜೊತೆಗೆ ಊರಿನ ಪಿನ್ ಕೋಡ್ ಹಾಗೂ ಜೆಂಡರ್ ಯಾವುದು ಎಂಬುದು ಜೊತೆಗೆ ಹುಟ್ಟಿದ ದಿನಾಂಕವನ್ನು ಹಾಗೂ ಮೊಬೈಲ್ ನಂಬರ್ ಅನ್ನು ಸಹ ಭರ್ತಿ ಮಾಡಬೇಕಾಗುತ್ತದೆ. ಇದಾದ ನಂತರ ನೀವು ನಾಲ್ಕು ಸಂಖ್ಯೆಯ ಪಾಸ್ವರ್ಡ್ ಅನ್ನು ಕ್ರಿಯೇಟ್ ಮಾಡಿದ ನಂತರ ಸಬ್ಮಿಟ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ಇದಾದ ನಂತರ ನಿಮಗೆ ಹೋಂ ಪೇಜ್ ನಲ್ಲಿ ಪೇಮೆಂಟ್ ಸ್ಟೇಟಸ್ ಎಂದು ತೋರಿಸಿದ ನಂತರ ಅದರ ಮೇಲೆ ಕ್ಲಿಕ್ ಮಾಡಿ ನೀವು ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯ ಸ್ಟೇಟಸ್ ಅನ್ನು ನೋಡಬಹುದಾಗಿದ್ದು ಇದರ ಬಗ್ಗೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಾಗೂ ಅನ್ನಭಾಗ್ಯ ಯೋಜನೆಯ ಹಣವು ಬಂದಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.
ಇದಾದ ನಂತರ ಅದರ ಪಕ್ಕದಲ್ಲಿ ಸೀಡಿಂಗ್ ಸ್ಟೇಟಸ್ ಆಫ್ ಆಧಾರ್ ಇನ್ ಬ್ಯಾಂಕ್ ಅಕೌಂಟ್ ಎಂದು ಇರುತ್ತದೆ ಅದರಲ್ಲಿ ನೀವು ಯಾವ ಬ್ಯಾಂಕ್ ಖಾತೆಗೆ ಆದರ್ಶೀದಿಂಗ್ ಆಗಿದೆ ಎಂದು ಸಹ ತಿಳಿದುಕೊಳ್ಳಬಹುದು. ಇದಾದ ನಂತರ ಸರ್ಕಾರದಿಂದ ಬಂದಿರುವಂತಹ ಪ್ರತಿಯೊಂದು ಹಣದ ವರ್ಗಾವಣೆಯನ್ನು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ.
ಹೀಗೆ ಗೃಹಲಕ್ಷ್ಮಿ ಯೋಜನೆಯ ಹಣವು ಬರದೇ ಇದ್ದರೆ ಈ ಸಣ್ಣ ಕೆಲಸವನ್ನು ಮಾಡಿದರೆ ಸಾಕು ಇದರಿಂದ ನೀವು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಬಹುದಾಗಿದೆ. ಹೀಗೆ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯು ಸದ್ಯ ಈಗ ಕರ್ನಾಟಕ ರಾಜ್ಯದಲ್ಲಿ ಸಾಕಷ್ಟು ಯಶಸ್ವಿಯಾಗಿದೆ ಎಂದು ಹೇಳಬಹುದಾಗಿದೆ ಹೀಗೆ ಗೃಹಲಕ್ಷ್ಮಿ ಯೋಜನೆಯ ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರು ಹಾಗು ಸಂಬಂಧಿಕರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಸರ್ಕಾರದಿಂದ ಮತ್ತೊಂದು ಭಾಗ್ಯ : ಮನೆ ಕಟ್ಟಲು ಸೈಟ್ ವಿತರಣೆ ,ಆನ್ಲೈನ್ ಅರ್ಜಿ ಸಲ್ಲಿಸಿ