ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಉತ್ತರ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಸುಮಾರು 17 ಮಂದಿ ಸಾವನ್ನಪ್ಪಿದ್ದಾರೆ. ಹಾಗಾದರೆ ಉತ್ತರ ಪ್ರದೇಶದಲ್ಲಿ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟು ಮಳೆಯಾಗಿದೆ ಹಾಗೂ ಎಷ್ಟು ಜನರು ಸಾವನ್ನಪ್ಪಿದ್ದಾರೆ ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗುತ್ತದೆ.
ಉತ್ತರ ಪ್ರದೇಶದಲ್ಲಿ ಭಾರಿ ಮಳೆ :
ಉತ್ತರ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಕಳೆದ 24 ಗಂಟೆಗಳಲ್ಲಿ 19 ಮಂದಿ ಸಾವನ್ನಪ್ಪಿದ್ದಾರೆ ಎಂದು ಸೋಮವಾರ ಸಂಜೆ ರಾಜ್ಯ ಪರಿಹಾರ ಆಯುಕ್ತರ ಕಛೇರಿ ಮಾಹಿತಿ ನೀಡಿದೆ. ಉತ್ತರ ಪ್ರದೇಶದ ಕಾನ್ಪುರ, ಲಕ್ನೋ ,ಹುನ್ನಾವೋ, ಹರ್ದೋಯಿ ಮತ್ತು ಸೀತಾಪುರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾಡಳಿತಗಳು ಮುಂಜಾಗ್ರತ ಕ್ರಮವಾಗಿ ಶಾಲೆಗಳ ರಜೆ ಘೋಷಣೆ ಮಾಡಿವೆ. ನಾಲ್ಕು ಜನರು ಹರಿದು ಈ ಜಿಲ್ಲೆಯಲ್ಲಿ ಸಾವನ್ನಪ್ಪಿದ್ದು ಮೂವರು ಬಾರಾ ಬಂಕಿಯಲ್ಲಿ ಹಾಗೂ ತಲಾ ಇಬ್ಬರು ಪ್ರತಾಪ್ಘಡ ಮತ್ತು ಕನೋಜ್ ನಿಂದ ಜೊತೆಗೆ ಕಾನ್ಪುರ, ಅಮೇತಿ ಡಿಯೊರಿಯ, ಜಲೌನ್, ಉನ್ನಾವ್ ರಾಂಪುರ, ಸಂಭಾಲ್ ಮತ್ತು ಮುಜಫರ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಪರಿಹಾರ ಆಯುಕ್ತರ ಕಚೇರಿ ವರದಿಯು ತಿಳಿಸಿದೆ. 13 ಮಂದಿ ಸಾವು : 13 ಮಂದಿ ಭಾರಿ ಮಳೆಗೆ ಸಾವನ್ನಪ್ಪಿದ್ದರೆ ನಾಲ್ವರು ಸಿಡಿಲು ಬಡಿದು ಪ್ರಾಣವನ್ನು ಕಳೆದುಕೊಂಡಿದ್ದಾರೆ ಅದರಂತೆ ನೀರಿನಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇಬ್ಬರು ಸಹೋದರರು ಕಲ್ಲು ಮತ್ತು ಅವನಿ ಶಂಭುವರು ಕನ್ವೆಜಿನಲ್ಲಿ ತಿರುವ ಪ್ರದೇಶದ ಲಾಲ್ಕಿಯಾಪುರ ಗ್ರಾಮದಲ್ಲಿ ಮನೆಯ ಮೇಲ್ಚಾವಣಿ ಕುಸಿದು ಸಾವನ್ನಪ್ಪಿದ್ದಾರೆ.
ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ :
ಉತ್ತರ ಪ್ರದೇಶದ ಕೆಲವೊಂದಿಷ್ಟು ಜಿಲ್ಲೆಗಳಲ್ಲಿ ಸಾಕಷ್ಟು ಮಳೆಯಾಗುತ್ತಿದ್ದು ಅಂತಹ ಜಿಲ್ಲೆಗಳೆಂದರೆ ಮುರದಾಬಾದ್, ಕನೌಜ್ ,ಸಂಭಾಲ್, ರಾಂಪುರ, ಬಾರಾಬಂಕಿ, ಹತ್ರಾ ಸ್, ಕಾಸ್ಗಂಜ್, ಬಿಜ್ನೂರ್ ,ಲಕ್ನೋ, ಅಮ್ರೋಹ ಬರ್ಹೈಚ್ , ಕಾನ್ಪುರ ಸೀತಾಪುರ ಸೇರಿದಂತೆ ರಾಜ್ಯದಲ್ಲಿರುವಂತಹ ಎಲ್ಲ 22 ಜಿಲ್ಲೆಗಳಲ್ಲಿ 40 ಮಿ.ಮೀ ಗು ಹೆಚ್ಚು ಮಳೆಯೂ ಕಳೆದ 24 ಗಂಟೆಗಳಲ್ಲಿ ಆಗಿದೆ. ಕಳೆದ 24 ಗಂಟೆಗಳಲ್ಲಿ ನಿರಂತರ ಮಳೆ : ರಾಜ್ಯದಲ್ಲಿ ನಿರಂತರವಾಗಿ ಕಳೆದ 24 ಗಂಟೆಗಳಿಂದಲೂ ಮಳೆಯು ಸುರಿಯುತ್ತಿರುವ ಮಾಹಿತಿಯನ್ನು ಯುಪಿಎಸಿಎಂ ಯೋಗಿ ಆದಿತ್ಯನಾಥ್ ರವರು ಪಡೆದಿದ್ದು ಅವರು ಪರಿಹಾರ ಕಾರ್ಯವನ್ನು ಮಳೆ ಬೀಡಿತ ಜಿಲ್ಲೆಗಳಲ್ಲಿ ವೇಗಗೊಳಿಸುವಾಗ ಪರಿಸ್ಥಿತಿಗೆ ತ್ವರಿತವಾಗಿ ಸ್ಪಂದಿಸುವಂತೆ ಸೂಚನೆಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿದರು. ಶೀಘ್ರವಾಗಿ ಮಂಜೂರಾದ ಆರ್ಥಿಕ ಪರಿಹಾರವನ್ನು ವಿತರಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಹವಾಮಾನ ಇಲಾಖೆಯ ಮುನ್ಸೂಚನೆ :
ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯ ಪ್ರಕಾರ ಸೆಪ್ಟೆಂಬರ್ 14ರ ವರೆಗೆ ಉತ್ತರ ಪ್ರದೇಶದಲ್ಲಿ ಭಾರಿ ಮಳೆ ಆಗುತ್ತಿದ್ದು ಸೆಪ್ಟೆಂಬರ್ 14ರವರೆಗೆ ಪೂರ್ವ ವಲಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹಾಗೂ ಲಘುಮಳೆಯು ಸೆಪ್ಟೆಂಬರ್ 17ರ ವರೆಗೆ ಮುಂದುವರೆಯುತ್ತದೆ ಎಂದು ಪರಿಹಾರ ಆಯುಕ್ತರ ಕಚೇರಿ ಅಧಿಕಾರಿಗಳು ರಾಜ್ಯದ ಜನತೆಗೆ ತಿಳಿಸಿದ್ದಾರೆ. ರಾಜ್ಯದ್ಯಂತ ಸಿಡಿಲಿನ ಎಚ್ಚರಿಕೆ ಇದ್ದರೂ ಸಹ ಸೆಪ್ಟೆಂಬರ್ 15ರವರೆಗೆ ಸೆಪ್ಟೆಂಬರ್ 17ರ ವರೆಗೆ ರಾಜ್ಯದ ಪಶ್ಚಿಮ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇದನ್ನು ಓದಿ : ಮರದಿಂದ ಮಾಡಿದ ವಾಷಿಂಗ್ ಮಷಿನ್..! ಹೇಗಿದೆ ಗೊತ್ತಾ? ಈ ವಿಡಿಯೋ ನೋಡಿದ್ರೆ ದಂಗಾಗ್ತೀರ
ರಾಜ್ಯದ ರಾಜಧಾನಿ ಲಕ್ನೋ :
ಸೋಮವಾರ ಬೆಳಗ್ಗೆ 8:00ಯವರೆಗೆ ರಾಜ್ಯದ ರಾಜಧಾನಿ ಲಕ್ನೋದಲ್ಲಿ 99.9 ಮಿಲಿ ಮೀಟರ್ ಮಳೆಯಾಗಿದ್ದು ರಾಜ್ಯದಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಜನರು ಅನಗತ್ಯವಾಗಿ ತೀವ್ರ ಸಿಡಿಲಿನ ಸಾಧ್ಯತೆಯ ಹಿನ್ನೆಲೆಯಿಂದ ಹೊರಗೆ ಬರದಂತೆ, ರಾಜ್ಯ ಸರ್ಕಾರವು ಸೂಚನೆ ನೀಡಿದೆ. ಸಿಡಿಲು ಬಡೆದು ನಗರದ ಮಧ್ಯ ಭಾಗದಲ್ಲಿರುವ ಪ್ರಸಿದ್ಧ ವಿಶಾಲವಾದ ಅಂಬೇಡ್ಕರ್ ಉದ್ಯಾನವನದಲ್ಲಿ ಸ್ಥಾಪಿಸಲಾದ 60 ಆನೆಗಳ 52ನೇ ಪ್ರತಿಮೆ ಹಾನಿಗೊಳದಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ. 140 ಕುರಿಗಳು ಉನ್ನ ಓದಲ್ಲಿ ಹಲವು ಸ್ಥಳಗಳಲ್ಲಿ ಸಿಡಿಲು ಬಡಿದು ಸಾವನ್ನಪ್ಪಿವೆ ಎಂದು ಡಿಸಿಎಂ ಹಸ್ಸನ್ ಗಂಜ್ ನವೀನ್ ಚಂದ್ರ ಮಾಹಿತಿ ನೀಡಿದ್ದಾರೆ. ಹತ್ತು ಜಿಲ್ಲೆಗಳ 19 ತಹಸೀಲ್ಗಳು ಪ್ರವಾಹಕ್ಕೆ ಸಿಲುಕಿವೆ ಎಂದು ರಾಜ್ಯದಲ್ಲಿ ವರದಿಯನ್ನು ನೀಡಲಾಗಿದೆ. ಹೀಗೆ ಉತ್ತರ ಪ್ರದೇಶದಲ್ಲಿ ಭಾರಿ ಮಳೆಯ ಹಿನ್ನೆಲೆಯಿಂದಾಗಿ 19 ತಹಸಿಲ್ಗಳು ಪ್ರವಾಹಕ್ಕೆ ಸಿಲುಕಿ ಇದರ ಪರಿಣಾಮವಾಗಿ ಆಶ್ರಯ ಮನೆಗಳನ್ನು ಸ್ಥಾಪಿಸಲಾಗಿದ್ದರು ಸಹ ಯಾರನ್ನು ಅಲ್ಲಿಗೆ ಸ್ಥಳಾಂತರಿಸಲಾಗಿಲ್ಲ ಮತ್ತು ಎನ್ ಡಿ ಆರ್ ಎಸ್ ಮತ್ತು ಎಸ್ ಡಿ ಆರ್ ಎಫ್ ತಂಡಗಳನ್ನು ಕೆಲವು ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ ಮತ್ತು ಉತ್ತರ ಪ್ರದೇಶದಲ್ಲಿ ಹೆಚ್ಚಿನ ಅಲರ್ಟ್ ಅನ್ನು ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೀಗೆ ಉತ್ತರ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ರಾಜ್ಯದಲ್ಲಿ ಸಾಕಷ್ಟು ತೊಂದರೆಗಳಾಗುತ್ತಿದ್ದು ಅಲ್ಲಿನ ಮುಖ್ಯಮಂತ್ರಿಗಳು ಬೇಗ ಪರಿಹಾರ ನೀಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಹೀಗೆ ಉತ್ತರ ಪ್ರದೇಶದಲ್ಲಿ ಭಾರಿ ಮಳೆಯಾಗಿರುವುದರ ಬಗ್ಗೆ ನೀವು ಈ ಲೇಖನದಲ್ಲಿ ತಿಳಿದುಕೊಳ್ಳಬಹುದಾಗಿದ್ದು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಸಹ ಶೇರ್ ಮಾಡಿ ಇದರಿಂದ ಅವರು ಸಹ ಉತ್ತರಪ್ರದೇಶದಲ್ಲಿ ಏನೆಲ್ಲಾ ಹಾನಿಯಾಗಿವೆ ಎಂಬುದರ ಬಗ್ಗೆ ತಿಳಿದುಕೊಳ್ಳಲಿ ಧನ್ಯವಾದಗಳು.
ಇತರೆ ವಿಷಯಗಳು :
ಗೃಹಲಕ್ಷ್ಮಿ ಹಣ ಬಂದಿಲ್ವಾ .? ಕೂಡಲೇ ಈ ಕಚೇರಿಗೆ ಭೇಟಿ ನೀಡಿ, ಹಣ ಪಡೆದುಕೊಳ್ಳಿ
ಹೆಣ್ಣು ಮಗು ಹುಟ್ಟಿದರೆ ಸಿಗುತ್ತೆ ₹50,000! ಈ ರೀತಿಯಾಗಿ ಅಪ್ಲೇ ಮಾಡಿದರೆ ಸಿಗಲಿದೆ ಸಂಪೂರ್ಣ ಲಾಭ