ಹಲೋ ಸ್ನೇಹಿತರೇ, ಇಂದಿನ ಲೇಖನಕ್ಕೆ ಎಲ್ಲರಿಗು ಸ್ವಾಗತ, ರೈತರಿಗೆ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕೇಂದ್ರದಿಂದ 6000 ಸಾವಿರ, ರಾಜ್ಯದಿಂದ 4000 ಹಣವನ್ನು ರೈತರಿಗೆ ನೀಡಲಾಗುತ್ತಿದ್ದು, ಈ ಯೋಜನೆಯನ್ನು ಸರ್ಕಾರ ಈಗ ರದ್ದು ಗೊಳಿಸಿ ಹೊಸ ಯೋಜನೆಯನ್ನು ಜಾರಿಗೆ ತಂದಿದೆ, ಇನ್ಮುಂದೆ ಖಾತೆಗೆ ಪ್ರತಿ ತಿಂಗಳು 2000 ರೂ ಜಮೆಯಾಗುವ ಹೊಸ ಸ್ಕೀಂ, ಯಾವುದು ಈ ಹೊಸ ಸ್ಕೀಂ ಮತ್ತು ಸಮ್ಮಾನ್ ನಿಧಿ ಯೋಜನೆಯನ್ನು ರದ್ದುಗೊಳಿಸಿರುವ ಬಗ್ಗೆ ಕೃಷಿ ಸಚಿವರು ಏನು ಹೇಳಿಕೆಯನ್ನು ನೀಡಿದ್ದಾರೆ ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.
ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದು, ಸಂಪುಟ ವಿಸ್ತರಣೆ ಆದ ನಂತರದಲ್ಲಿ ಅತಿ ಹೆಚ್ಚು ಇಲಾಖಾವಾರು ಸವಾಲುಗಳನ್ನು ಎದುರಿಸುವುದು ಕೃಷಿ ಇಲಾಖೆ. ಈ ಭಾರಿ ಕರ್ನಾಟಕ ದೊಡ್ಡ ಸಂಕಷ್ಟದಲ್ಲಿದೆ. ಬರಪೀಡಿತ ತಾಲೂಕುಗಳನ್ನು ಕೂಡ ಘೋಷಣೆ ಮಾಡಲಾಗಿದೆ. 161 ತಾಲೂಕು ಅತಿ ಹೆಚ್ಚಿನ ಬರಪೀಡಿತ ತಾಲೂಕು ಮತ್ತು 35 ಸಾಧಾರಣ ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡಲಾಗಿದೆ. 15 ವರ್ಷಗಳ ನಂತರ ಬರಪೀಡಿತ ತಾಲೂಕು ಕರ್ನಾಟಕದಲ್ಲಿ ಘೋಷಣೆಯಾಗಿರುವುದು. ಕೃಷಿ ಇಲಾಖೆಗೆ ಇದರ ನೇರ ಎಫೆಕ್ಟ್, ಪ್ರಕೃತಿಯಲ್ಲಿ ವಿಕೋಪಗಳು ಹೇಳಿ ಕೇಳಿ ಬರುವುದಿಲ್ಲ ಕೆಲವೊಂದು ಸಂದರ್ಭದಲ್ಲಿ ಎಲ್ಲವನ್ನು ಕೂಡ ಎದುರಿಸಬೇಕಾಗುತ್ತದೆ ಎಂದು ಕೃಷಿ ಸಚಿವ ಎನ್.ಚಲುವರಾಯ ಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ: KSRTC ನೌಕರರಿಗೆ ಗುಡ್ ನ್ಯೂಸ್ ಕೊಟ್ಟ ಸಾರಿಗೆ ಸಚಿವರು.! ಹಬ್ಬಕ್ಕೆ ಸಿಕ್ಕೇಬಿಡ್ತು ಬಂಪರ್
ಬಹಳ ವರ್ಷದ ನಂತರ ಈ ರೀತಿಯ ಸನ್ನಿವೇಶ ಎದುರಾಗಿದೆ ಎಂದಿದ್ದಾರೆ. ಕಾವೇರಿ ಸಮಸ್ಯೆಯು ಕೂಡ ಎದುರಾಗಿದೆ. ಬರದ ಪರಿಸ್ಥಿತಿಯನ್ನು ಮನದಲ್ಲಿ ಇಟ್ಟುಕೊಂಡು ಕೃಷಿಕರಿಗೆ ಅನುಕೂಲವಾಗುವಂತಹ ಕೆಲಸವನ್ನು ಸರ್ಕಾರ ಮಾಡಲಿದಿಯಾ ಕೃಷಿ ಸಮ್ಮಾನ್ ಎನ್ನುವ ಯೋಜನೆಯಲ್ಲಿ ಕೇಂದ್ರದಿಂದ 6000 ರೂ ರಾಜ್ಯ ಸರ್ಕಾರದಿಂದ 4000 ಅರ್ಧ ವರ್ಷದ ಲೆಕ್ಕದಲ್ಲಿ ಕೊಡುತ್ತಿದ್ದು. ರಾಜ್ಯದಿಂದ ಬರುತ್ತಿದ ನಿಧಿ ಹಣ ಇನ್ಮುಂದೆ ಸಿಗುವುದಿಲ್ಲ ಎಂದು ಸಿಎಂ ಹೇಳಿಕೆಯನ್ನು ನೀಡಿದ್ದಾರೆ. ಆದರೆ ಇದಕ್ಕೆ ಉತ್ತರವಾಗಿ ಕೃಷಿ ಸಚಿವರು ಈ ಸೌಲಭ್ಯ ರಾಜ್ಯದಿಂದ ಬರಿ 50000 ಸಾವಿರ ಜನರಿಗೆ ಮಾತ್ರ 2000 ತಲುಪುತ್ತಿತ್ತು. ಖರ್ಚ್ ಆಗುತ್ತಿದ್ದು ಬರೀ 2000 ಕೋಟಿ ಇದರ ಬದಲು ಪರ್ಯಾಯವಾಗಿ ಪ್ರತಿ ಮನೆಯ ಒಬ್ಬ ಮಹಿಳೆಗೆ 2000 ರೂ ನೀಡುತ್ತೇವೆ ಅದು 1 ಕೋಟಿ 10 ಲಕ್ಷದ ಮನೆಗಳಿಗೆ ಈ ಅನುದಾನವನ್ನು ಬೇರೆ ರೀತಿಯಲ್ಲಿ ನೀಡುತಿದ್ದೇವೆ, ನಾವು ನಿಲ್ಲಿಸಿಲ್ಲ ಈ ಯೋಜನೆಯನ್ನು ಎಂದಿದ್ದಾರೆ.
ಕೃಷಿ ಭಾಗ್ಯ ಯೋಜನೆಯಡಿಯಲ್ಲಿ 3 ಲಕ್ಷ ಸಾಲವನ್ನು ಕೊಡುತ್ತಿದ್ದು ಅದನ್ನು ಈಗ 15 ಲಕ್ಷಕ್ಕೆ ಏರಿಕೆ ಮಾಡಲಾಗಿದೆ, 3 % ಬಡ್ಡಿದರದಲ್ಲಿ ಸಾಲವನ್ನು ನೀಡಲಾಗುತ್ತದೆ. ರಾಜ್ಯ ಸರ್ಕಾರ ಯೋಜನೆಗಳು ಪ್ರತಿ ಕುಟುಂಬಕ್ಕೆ ಶಕ್ತಿ ಮತ್ತು ಸಹಕಾರವಾಗಲಿ ಎಂದು ಕೃಷಿ ಸಚಿವರು ಹೇಳಿದ್ದಾರೆ. ಬರಪೀಡಿತ ಎಂದು ಘೋಷಣೆಯಾದ ಮೇಲೆ ರೈತರಿಗೆ ಅನುಕೂಲವೇನು? 13600 ಕೃಷಿಕ ಬೇಸಾಯಕ್ಕೆ, ನೀರಾವರಿಗೆ 18000, 25000 ಬಹುಮುಖ ಬೆಳೆಗೆ ಪರಿಹಾರವನ್ನು ಹೆಚ್ಚು ಮಾಡಲಾಗಿದೆ. ಕೇಂದ್ರ ಸರ್ಕಾರಕ್ಕಿಂತ ರಾಜ್ಯ ಸರ್ಕಾರ ಹೆಚ್ಚಿಗೆ ಮಾಡಿದೆ. ರೈತರಿಗೆ ಅನುದಾನವನ್ನು ಹೆಚ್ಚಿಗೆ ಮಾಡಿದ್ದೇವೆ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.
ಇತರೆ ವಿಷಯಗಳು
ಹಾಲಿನ ಡೈರಿ ಸ್ಥಾಪಿಸಲು 50% ಸಹಾಯಧನ.! ಹಸು ಸಾಕಲು ಸರ್ಕಾರದಿಂದ ಬಂಪರ್ ಸಬ್ಸಿಡಿ.! ಪ್ರಯೋಜನ ಪಡೆಯುವುದು ಹೇಗೆ?
ಗಣೇಶ ಹಬ್ಬದ ಗುಡ್ ನ್ಯೂಸ್: ಎಲ್ಲ ರೈತರ 1 ಲಕ್ಷ ರೂ. ಸಾಲ ಮನ್ನಾ ಘೋಷಣೆ..! ಕೂಡಲೇ ಪಟ್ಟಿ ನೋಡಿ