ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಸಾಂಕ್ರಾಮಿಕ ರೋಗವಾದ ಮದ್ರಾಸ್ ಐ ಸೋಂಕಿತ ಪ್ರಕರಣಗಳ ಬಗ್ಗೆ. ರಾಜ್ಯದ್ಯಂತ ಕೋವಿಡ್ 19 ಸಂಕ್ರಾಮಿಕ ರೋಗದ ಬಳಿಕ ಮತ್ತೊಂದು ಈಗ ದೇಶದಲ್ಲಿ ಸಾಂಕ್ರಾಮಿಕ ರೋಗದ ಸಮಸ್ಯೆ ಆತಂಕಕ್ಕೆ ಕಾರಣವಾಗಿದೆ. ಮದ್ರಾಸ್ ಅಥವಾ ಕಣ್ಣಿನ ಸೋಂಕು ದೇಶದ ಮೂಲೆ ಮೂಲೆಯಲ್ಲಿಯೂ ಸಹ ಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ಹಾಗಾದರೆ ಏನಿದು ಮದ್ರಾಸ್ ಇದಕ್ಕೆ ಕಾರಣಗಳೇನು ಇದರ ಈ ರೋಗದ ಲಕ್ಷಣಗಳೇನು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.
ಮದ್ರಾಸ್ ಐ ಅಥವಾ ಕಣ್ಣಿನ ಸೋಂಕು ಹೆಚ್ಚಾಗಲು ಕಾರಣ :
ಕಣ್ಣಿನಲ್ಲಿ ಸತತವಾಗಿ ನೀರು ಬರುವುದು ,ಕಣ್ಣಿಗೆ ಕಿರಿಕಿರಿ, ತುರಿಕೆ ,ಕಣ್ಣಿನ ರೆಪ್ಪೆಗಳು ಬಾತುಕೊಳ್ಳುವುದು, ಕಣ್ಣುಗಳು ಕೆಂಪಾಗುವುದು ಹಾಗೂ ಕಣ್ಣುಗಳಲ್ಲಿ ವಿಪರೀತ ನೋವು ಕಂಡು ಬರುತ್ತಿರುವುದು. ಇದು ಇತ್ತೀಚಿನ ಕೆಲವು ಮೂರು ನಾಲ್ಕು ದಿನಗಳಲ್ಲಿ ಕಂಡು ಬರುತ್ತಿರುವ ಸಾಮಾನ್ಯ ಸಮಸ್ಯೆಗಳಾಗಿದೆ. ಮುಖ್ಯವಾಗಿ ಜನರು ಕಣ್ಣಿನ ಕ್ಲಿನಿಕ್ ಮತ್ತು ಆಸ್ಪತ್ರೆಗಳಿಗೆ ಉತ್ತರ ಭಾರತದ ಅನೇಕ ಭಾಗಗಳಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಅದರಂತೆ ಈಗ ಮದ್ರಾಸ್ ಐ ಪ್ರಕರಣಗಳು ಕರ್ನಾಟಕದಲ್ಲಿಯೂ ಸಹ ಸಾಮೂಹಿಕವಾಗಿ ವರದಿಯಾಗುತ್ತಿವೆ. ವಿಪರೀತ ಮಳೆ ಹಾಗೂ ಥಂಡಿ ವಾತಾವರಣದ ಸನ್ನಿವೇಶದಿಂದ ಕಣ್ಣಿನ ಸೋಂಕು, ಹರಡುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಾಯಶಹ ಮುಂದಿನ ದಿನಗಳಲ್ಲಿ ಅಂದರೆ ಮುಂದಿನ ಒಂದು ವಾರದಲ್ಲಿ ಈ ಸಮಸ್ಯೆ ವಿಕೋಪಕ್ಕೆ ಹೋಗುವ ಸಾಧ್ಯತೆ ಇದೆ. ಹಾಗಾಗಿ ಇದನ್ನು ಕಣ್ಣುಗಳ ಸೋಂಕಿನ ಏರಿಕೆಯನ್ನು ಸಾಂಕ್ರಾಮಿಕ ರೋಗ ಎಂದು ವೈದ್ಯರು ತಿಳಿಸಿದ್ದಾರೆ.
ಮದ್ರಾಸ್ ಐ ಪ್ರಕರಣಗಳು ದೇಶದಾದ್ಯಂತ ಹೆಚ್ಚುತ್ತಿದ್ದು, ಇದೀಗ ಮದ್ರಾಸ್ ಪ್ರಕರಣಗಳು ಕರ್ನಾಟಕದಲ್ಲೂ ಸಹ ಸೋಂಕಿತರ ಪ್ರಮಾಣ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಕಾಣಬಹುದಾಗಿದೆ. ಹಾಗಾಗಿ ಆರೋಗ್ಯ ಇಲಾಖೆಯು ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಲು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಮದ್ರಾಸ್ ಐ ಅಥವಾ ವೈರಾಣಗಳಿಂದ ಹರಡುವ ಕಣ್ಣಿನ ಸಮಸ್ಯೆ ಆಗಿರುವುದನ್ನು ಕಂಜಕ್ಟಿವ್ ವೈರಸ್ ಎಂದು ಕರೆಯಲಾಗುತ್ತಿದ್ದು ಇದು ವಾತಾವರಣದಲ್ಲಿ ತೇವಾಂಶ ಹೆಚ್ಚಾದಾಗ ಅಥವಾ ಚಳಿ ವಾತಾವರಣದಲ್ಲಿ ಇಂತಹ ವೈರಾಣುಗಳು ಹುಟ್ಟಿಕೊಂಡು ನೆರವಾಗಿ ಕಣ್ಣಿನ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಕೆಲವೊಂದು ಮಾರ್ಗಸೂಚಿಗಳನ್ನು ಆರೋಗ್ಯ ಇಲಾಖೆಯು ಜನರಿಗೆ ತಿಳಿಸಿದೆ.
ಮದ್ರಾಸ್ ಐ ರೋಗದ ಲಕ್ಷಣಗಳು :
ಮದ್ರಾಸ್ ಐ ರೋಗದ ಲಕ್ಷಣಗಳೆಂದರೆ ಕಣ್ಣು ಕೆಂಪಾಗುತ್ತದೆ, ಕಣ್ಣಿನಲ್ಲಿ ನೀರು ಸೋರುವಿಕೆ ಅಂದರೆ ಅತಿಯಾದ ಕಣ್ಣೀರು, ಕಣ್ಣಿನ ತುರಿಕೆ ,ಸತತ ಕಣ್ಣು ನೋವು ಹಾಗೂ ಕಣ್ಣಿನ ಒಳಗಡೆ ಚುಚ್ಚುವಿಕೆ, ದೃಷ್ಟಿ ಮಂಜಾಗುವುದು, ಕಣ್ಣಿನ ಎರಡು ರೆಪ್ಪೆಗಳು ಕೀವು ಮಿಶ್ರಿತದಿಂದ ಕೂಡಿರುವುದು ಹಾಗೂ ಬೆಳಕನ್ನು ನೋಡಲು ಸಾಧ್ಯವಾಗದೇ ಇರುವುದು ಈ ಮದ್ರಾಸ್ ಐ ರೋಗದ ಲಕ್ಷಣಗಳಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆಯು ಎಚ್ಚರವಹಿಸುವಂತೆ ಜನರಿಗೆ ಸೂಚನೆ ನೀಡಿದೆ.
ಮುಂಜಾಗ್ರತಾ ಕ್ರಮಗಳು :
ಆರೋಗ್ಯ ಇಲಾಖೆಯು ಜನರಿಗೆ ಮುಂಜಾಗ್ರತ ಕ್ರಮಗಳನ್ನು ನೀಡಿದ್ದು ಅವುಗಳೆಂದರೆ ಜನರು ಹೆಚ್ಚು ಸ್ವಚ್ಛತೆಗೆ ಆದ್ಯತೆ ನೀಡಬೇಕು, ಸೋಂಕಿತರ ಕಣ್ಣಿನ ನೇರಸಂಪರ್ಕದಿಂದ ಜನರು ದೂರ ಇರಬೇಕು, ಸೋಂಕಿತರು ಬಳಸಿದಂತಹ ಕರವಸ್ತ್ರ ಅಥವಾ ಇತರ ವಸ್ತುಗಳನ್ನು ಅವರು ಬಳಸಬಾರದು, ನೀರಿನಿಂದ ಆಗುವ ಹಾಗೆ ಸೋಪು ಕೈಗಳನ್ನು ತೊಳೆಯಬೇಕು, ಶೀತ ಜ್ವರ ಕೆಮ್ಮು ಇದ್ದಲ್ಲಿ ಸೋಂಕಿತರು ಕೂಡಲೇ ಚಿಕಿತ್ಸೆ ಪಡೆಯಬೇಕು. ಸೋಂಕಿತರಲ್ಲಿ ತೀವ್ರ ಸೋಂಕು ಉಂಟಾದರೆ ತಕ್ಷಣವೇ ನೇತ್ರ ತಜ್ಞರನ್ನು ಭೇಟಿ ಮಾಡಿ ಚಿಕಿತ್ಸೆಯನ್ನು ಸರಿಯಾದ ಸಮಯದಲ್ಲಿ ಪಡೆದುಕೊಳ್ಳಬೇಕು.
ಹೀಗೆ ರಾಜ್ಯದಾದ್ಯಂತ ಕಣ್ಣಿನ ಸೋಂಕು ಹೆಚ್ಚಾಗುತ್ತಿದ್ದು, ಇದು ಮುಂದಿನ ದಿನಗಳಲ್ಲಿ ಹೆಚ್ಚು ಪರಿಣಾಮಕಾರಿಯನ್ನು ಬೀರಲಿದೆ ಎಂದು ಆರೋಗ್ಯ ಇಲಾಖೆಯು ಮಾಹಿತಿ ನೀಡಿದ್ದು, ಹಾಗಾಗಿ ಈ ಸಾಂಕ್ರಾಮಿಕ ರೋಗದ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕೆಂದು ಆರೋಗ್ಯ ಇಲಾಖೆಯೂ ತಿಳಿಸಿದೆ. ಹೀಗೆ ರಾಜ್ಯಾದ್ಯಂತ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದು ಈ ಬಗ್ಗೆ ಎಚ್ಚರ ವಹಿಸಲು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಸಹ ತಿಳಿಸಿ ಹಾಗೂ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು
ಇತರೆ ವಿಷಯಗಳು :
ಟೊಮೇಟೋ ಬೆಲೆ ಏಕಾಏಕಿ ಕುಸಿತ; ಕೆಂಪು ಸುಂದರಿ ಪ್ರಿಯರ ಮುಖದಲ್ಲಿ ಮಂದಹಾಸ! ರೈತರ ಮೊಗದಲ್ಲಿ ಆತಂಕ