ಹಲೋ ಸ್ನೇಹಿತರೆ, ಸರ್ಕಾರದ ಗ್ಯಾರೆಂಟಿ ಖುಷಿಯಲ್ಲಿರುವ ಜನರಿಗೆ ಶಾಕಿಂಗ್ ನ್ಯೂಸ್. ರಾಜ್ಯದ್ಯಂತ ಉಚಿತ ಕರೆಂಟ್ ಘೋಷಿಸಿದ ಸರ್ಕಾರಕ್ಕೆ ಈಗ ಸಮಸ್ಯೆ ಎದುರಾಗಿದೆ. ಗ್ಯಾರೆಂಟಿ ಮದ್ಯೆ ಕರೆಂಟ್ ನೀಡುವುದು ಸವಾಲಾಗಿದೆ. ಮಳೆಯಿಲ್ಲದೆ ವಿದ್ಯುತ್ ಉತ್ಪಾದನೆಯಲ್ಲಿ ಕುಸಿತ ಕಂಡಿದೆ. ಇಂತಹ ಮಳೆಗಾಲದಲ್ಲಿ ಲೋಡ್ ಶೆಡ್ಡಿಂಗ್ ಮಾಡುವ ಪರಿಸ್ಥಿತಿ ಎದುರಾಗಿದೆ. ಹೀಗಾದರೆ ಸರ್ಕಾರ ಮುಂದಿನ ಕತೆ ಏನು? ಕರೆಂಟ್ ಇನ್ಮುಂದೆ ಇರಲ್ವಾ? ಪವರ್ ಕಟ್ ದಿನಕ್ಕೆ ಎಷ್ಟು ಗಂಟೆ ಮಾಡಲಾಗುತ್ತದೆ. ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.
ಹೀಗಾಗಿ ವಿದ್ಯುತ್ ಖರೀದಿ ಮಾಡಲು ಸರ್ಕಾರ ಮುಂದಾಗಿದೆ. ವಿದ್ಯುತ್ ಕೊರೆತೆಯಿಂದ ಅಘೋಷಿತ ಲೋಡ್ ಶೆಡ್ಡಿಂಗ್. ಮಳೆಕೊರೆತಯಿಂದ ಲೋಡ್ ಶೆಡ್ಡಿಂಗ್ ಮೊರೆ ಹೋಗಿದೆ. ರೈತರ ಬೆಳೆಗಳು, ಕೈಗಾರಿಕೆಗಳಿಗೆ ಸೂಕ್ತ ಸಮಯಕ್ಕಿಲ್ಲ ವಿದ್ಯುತ್, ಈಗ ವಿದ್ಯುತ್ ಹೊಂದಿಸೋದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಬರದ ನಡುವೆ ರಾಜ್ಯ ಸರ್ಕಾರಕ್ಕೆ ಎದುರಾಗಿರುವಂತಹ ಮತ್ತೊಂದು ಸಂಕಷ್ಟ ಇದಾಗಿದೆ. ಮಳೆ ಕೊರೆತಯಿಂದಾಗಿ ರಾಜ್ಯಕ್ಕೆ ವಿದ್ಯುತ್ ಕ್ಷಾಮದ ಚಿಂತೆ ಎದುರಾಗಿದೆ. ಬೇಡಿಕೆಗೆ ತಕ್ಕಂತೆ ವಿದ್ಯುತ್ ಖರೀದಿಸಲು ಸರ್ಕಾರ ಮುಂದಾಗಿದೆ. ಮಳೆಗಾಲದಲ್ಲೇ ಗಣನೀಯವಾಗಿ ವಿದ್ಯುತ್ ಬೇಡಿಕೆ ಏರಿಕೆಯಾಗಿದೆ.
ಸದ್ಯ ಪ್ರತೀದಿನ 9 ರಿಂದ 11 ಸಾವಿರ ಮೆಗಾ ವ್ಯಾಟ್ ಉತ್ಪಾದನೆ ರಾಜ್ಯದಲ್ಲಿ ದಿನವೊಂದಕ್ಕೆ 16 ಸಾವಿರ ಮೆಗಾ ವ್ಯಾಟ್ ಗೆ ಬೇಡಿಕೆಯಾಗಿದೆ. ಒಂದು ದಿನಕ್ಕೆ 16 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಬೇಕಾಗತ್ತೆ ಆದರೆ ಸದ್ಯಕ್ಕೆ ಉತ್ಪಾದನೆಯಾಗುತ್ತಿರುವ ವಿದ್ಯುತ್ 9 ರಿಂದ 11 ಸಾವಿರ ಮೆಗಾ ವ್ಯಾಟ್ ಮಾತ್ರ ಆಗಸ್ಟ್ ಅಂತ್ಯಕ್ಕೆ 16932 ಮೆಗಾ ವ್ಯಾಟ್ ವಿದ್ಯುತ್ ಬಳಕೆಯಾಗಿದೆ. ಮಳೆ ಇಲ್ಲದ ಕಾರಣಕ್ಕೆ ಪಂಪಸೆಟ್ ಮೊರೆ ಹೋಗಿದ್ದಾರೆ ರೈತರು.
ಇದನ್ನೂ ಸಹ ಓದಿ: ಇನ್ಮುಂದೆ ಸರ್ಕಾರಿ ಅಧಿಕಾರಿಗಳು ಐಫೋನ್ ಬಳಸುವಂತಿಲ್ಲ.? ಕಾರಣ ಏನು ಗೊತ್ತಾ..!
ಗೃಹಜ್ಯೋತಿ ಕಾರಣಕ್ಕೆ ವಿದ್ಯುತ್ ಬಳಕೆಯಲ್ಲಿ ಹೆಚ್ಚಳವಾಗಿದೆ. ಕೈಗಾರಿಕ ಕ್ಷೇತ್ರದಿಂದಲೂ ವಿದ್ಯುತ್ ಬೇಡಿಕೆ ಪ್ರಮಾಣದಲ್ಲಿ ಏರಿಕೆಯಾಗಿದೆ. ರಾಜ್ಯದಲ್ಲಿ 31 ಸಾವಿರದ 669 ಮೆಗಾ ವ್ಯಾಟ್ ಒಟ್ಟು ಉತ್ಪಾದನಾ ಸಾಮರ್ಥ್ಯ ಆದರೆ ಕಳೆದ 3 ತಿಂಗಳಿಂದ ಅರ್ಧದಷ್ಟು ವಿದ್ಯುತ್ ಉತ್ಪಾದನೆ ಆಗಿಲ್ಲ ಎಲ್ಲದಕ್ಕೂ ಮೂಲ ಕಾರಣ ಮಳೆ.
ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ ಅದೇ ದೊಡ್ಡ ದೊಡ್ಡ ಸಮಸ್ಯೆಗಳಿಗೆ ಕಾರಣವಾಗುತ್ತಾ ಇದೆ. ಒಂದು ಕಡೆ ಬರದ ಪರಿಸ್ಥತಿ ಮತ್ತೊಂದು ಕಡೆ ವಿದ್ಯುತ್ ಉತ್ಪಾದನೆಯಲ್ಲಿ ಆಗಿರುವ ಭಾರೀ ಇಳಿಕೆ ಈಗ ವಿದ್ಯುತ್ ಖರೀದಿ ಮಾಡಲು ಸರ್ಕಾರ ಚಿಂತನೆ ನೆಡೆಸಬೇಕಾದ ಪರಿಸ್ಥಿತಿ ಎದುರಾಗಿದೆ.
ಇತರೆ ವಿಷಯಗಳು:
ಸೆಪ್ಟೆಂಬರ್ ರೇಷನ್ ಜೊತೆ 7 ಸಾವಿರ ಉಚಿತ; ಪಡಿತರ ಚೀಟಿ ಫಲಾನುಭವಿಗಳಿಗೆ ಭರ್ಜರಿ ಆಫರ್..!
ಬಂದ್ ಯಾವಾಗ ಕೊನೆಗೊಳ್ಳಲಿದೆ ಗೊತ್ತಾ..? ವಿದ್ಯಾರ್ಥಿಗಳಿಗೆ ಉದ್ಯೋಗಿಗಳಿಗೆ ರಜಾ ಇದೆಯಾ.? ಇಲ್ಲಿದೆ ಡಿಟೇಲ್ಸ್