ಹಲೋ ಸ್ನೇಹಿತರೇ, ಇಂದಿನ ಲೇಖನಕ್ಕೆ ಎಲ್ಲರಿಗು ಸ್ವಾಗತ, ಸರ್ಕಾರ ಒಂದರ ಮೇಲೊಂದು ಗ್ಯಾರೆಂಟಿಗಳನ್ನು ಜಾರಿಗೊಳಿಸುತ್ತಿದ್ದಂತೆ, ರೇಷನ್ ಕಾರ್ಡ್ದಾರರು ಖುಷಿಯಾಗಿದ್ದಾರೆ, ಆದರೆ ಕಾರ್ಡ್ ಇಲ್ಲದವರು ಕಾರ್ಡ್ಗಾಗಿ ಅರ್ಜಿ ಸಲ್ಲಿಸಿದವರು ಸರ್ಕಾರದ ನಿರ್ಧಾರಕ್ಕಾಗಿ ಎದುರು ನೋಡುತ್ತಿದ್ದು, ಆದರೆ ಸರ್ಕಾರದ ಕಡೆಯಿಂದ ಈಗ ಗುಡ್ನ್ಯೂಸ್ ಸಿಕ್ಕಿದ್ದು ಸಧ್ಯದಲ್ಲೆ ಹೊಸ ಕಾರ್ಡ್ಗಳು ವಿತರಣೆಯಾಗಲಿವೆ, ಈ ವಿಷಯದ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.
5 ಗ್ಯಾರೆಂಟಿ ಸ್ಕೀಂ ರೇಷನ್ ಕಾರ್ಡ್ ಇದ್ದವರಿಗೆ ಉಚಿತ ಅಕ್ಕಿ ಹಾಗೂ ಹಣ ಹೀಗಾಗಿ ರೇಷನ್ ಕಾರ್ಡ್ಗೆ ಬೇಡಿಕೆ ಹೆಚ್ಚಾಗಿದಿಯಾ, ಆದ್ರೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಆದರೆ ಅದೇ ಅರ್ಜಿದಾರರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಅನ್ನಭಾಗ್ಯ ಅಕ್ಕಿಗೆ ಬಿಪಿಎಲ್ ಕಾರ್ಡ್ ಬೇಕು, ಗೃಹಲಕ್ಷ್ಮಿ ಹಣಕ್ಕು ರೇಷನ್ ಕಾರ್ಡ್ ಬೇಕು ಸರ್ಕಾರದ ಯಾವುದೆ ಸೌಲಭ್ಯ ಪಡೆಯಬೇಕು ಎಂದರೆ ಪಡಿತರ ಕಾರ್ಡ್ ಬೇಕೆ ಬೇಕು, ಆದರೆ ಚುನಾವಣೆ ಬರುತ್ತಿದ್ದಂತೆ ರೇಷನ್ ಕಾರ್ಡ್ ವಿತರಣೆ ಸ್ಥಗಿತವಾಗಿತ್ತು, ಅರ್ಜಿ ಸಲ್ಲಿಸಬೇಕೆಂದವರು ನಿರಾಸೆಗೊಂಡಿದ್ದರೆ, ಆದರೆ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ.
ಅರ್ಜಿ ಸಲ್ಲಿಸಿದವರಿಗೆ ಶೀಘ್ರದಲ್ಲೇ ರೇಷನ್ ಕಾರ್ಡ್. ಹಳೆ ಅರ್ಜಿ ಸರಿಯಾದ ನಂತರ ಹೊಸ ಕಾರ್ಡ್ಗು ಅರ್ಜಿ, ರಾಜ್ಯದ ವಿಧಾನಸಭಾ ಚುನಾವಣೆ ಮುಗಿದ ಬಳಿಕ ಬಿಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಕೆ ಮಾಡುವುದನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಇದಕ್ಕು ಮುನ್ನ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ವಿಲೇವಾರಿ ಕೂಡ ಆಗಿಲ್ಲ ಅದರಲ್ಲು ಒಂದರ ಮೇಲೊಂದು ಗ್ಯಾರೆಂಟಿ ಜಾರಿಯಾಗುತ್ತಿದ್ದು ಬಿಪಿಎಲ್ ಕಾರ್ಡ್ಗೆ ಹೆಚ್ಚಿನ ಬೇಡಿಕೆ ಬಂದಿದೆ.ಹೀಗಾಗಿ ಕಾರ್ಡ್ ಯಾವಾಗ ಕೊಡುತ್ತಾರೊ ಎಂದು ಅರ್ಜಿಸಲ್ಲಿಸಿದವರು ಕಾದುಕೂತಿದ್ದಾರೆ ಎನ್ನಲಾಗುತ್ತಿದೆ. ಅರ್ಜಿದಾರರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಈಗಾಗಲೇ 75% ಪರಿಶೀಲನೆ ಮುಗಿದಿದ್ದು, ಪರಿಶೀಲನೆ ಮುಗಿಯುತ್ತಿದಂತೆ ಅರ್ಹರಿಗೆ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಆ ಬಳಿಕ ಸರ್ಕಾರದ ಒಪ್ಪಿಗೆ ಪಡೆದು ಹೊಸ ಕಾರ್ಡ್ಗು ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ರಾಜ್ಯದಲ್ಲಿ 1 ಕೋಟಿ 77 ಲಕ್ಷದಷ್ಟು ಬಿಪಿಎಲ್ ಕಾರ್ಡ್ದಾರರಿದ್ದು, 11 ಲಕ್ಷದಷ್ಟು ಅಂತ್ಯೋದಯ ಕಾರ್ಡ್ದಾರರಿದ್ದಾರೆ.
ಹೊಸ ಕಾರ್ಡ್ ವಿತರಣೆಯಾದರೆ ಮತ್ತೆ 3 ಲಕ್ಷ ಕಾರ್ಡ್ದಾರರು ಲಿಸ್ಟ್ಗೆ ಸೇರಲಿದ್ದಾರೆ. ಬ್ಯಾಂಕ್ ಕೆವೈಸಿ ಮಾಡಿಸದವರಿಗೆ ಇಲ್ಲ ಹಣ ಭಾಗ್ಯ, ಅನ್ನಭಾಗ್ಯ ಯೋಜನೆಯಡಿ ಸರ್ಕಾರ ಹಣವನ್ನು ನೀಡುತ್ತಿದ್ದು. ಆದರೆ ಬ್ಯಾಂಕ್ ಅಕೌಂಟ್ ಇಲ್ಲದವರಿಗೆ, ಆಧಾರ್ ಲಿಂಕ್ ಆಗದವರಿಗೆ ಜುಲೈನಲ್ಲಿ ಹಣ ಹಾಕಿಲ್ಲ ಅಂತವರು ಇಕೆವೈಸಿ ಮಾತ್ರ ಈ ತಿಂಗಳ ಹಣ ಬರಲಿದೆ, ಈ ಸಂಬಂಧ ಸರ್ಕಾರವೆ 2 ಲಕ್ಷಕ್ಕು ಹೆಚ್ಚು ಜನರಿಗೆ ಕಾರ್ಡ ಮಾಡಿಸಿದ್ದು ಉಳಿದವರು ತಮ್ಮ ಬ್ಯಾಂಕ್ ಅಕೌಂಟ್ ಸರಿಮಾಡಿಕೊಳ್ಳಬೇಕು ಎಂದು ಆಹಾರ ಇಲಾಖೆ ಎಂಡಿ ತಿಳಿಸಿದ್ದಾರೆ.
ಇತರೆ ವಿಷಯಗಳು
ಹಣ ಸಂಪಾದಿಸಲು ಫೋನ್ ಪೇನಲ್ಲಿದೆ ಸುಲಭ ಮಾರ್ಗ.! ಪ್ರತಿದಿನ ಹಣ ನಿಮ್ಮ ಖಾತೆಗೆ.! ಸಣ್ಣ ಕೆಲಸ ಮಾಡಿ ದೊಡ್ಡ ಮೊತ್ತ ಗಳಿಸಿ