ನಮಸ್ಕಾರ ಸ್ನೇಹಿತರೇ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ಕರ್ನಾಟಕದ ಬರಪೀಡಿತ ಊರುಗಳ ಪಟ್ಟಿ ಬಿಡುಗಡೆ ಮಾಡಿರುವುದರ ಬಗ್ಗೆ. ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಹಿನ್ನೆಲೆಯ ಕಾರಣದಿಂದಾಗಿ ನೂರಕ್ಕೂ ಹೆಚ್ಚು ತಾಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ ಎಂದು ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅದರಂತೆ ಈ ಲೇಖನದಲ್ಲಿ ರಾಜ್ಯ ಸರ್ಕಾರವು ಯಾವ ಜಿಲ್ಲೆಗಳು ಬರಪೀಡಿತ ಜಿಲ್ಲೆಗಳು ಹಾಗೂ ತಾಲೂಕುಗಳು ಎಂದು ಘೋಷಣೆ ಮಾಡಲಾಗಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.
ಬರಪೀಡಿತ ತಾಲೂಕುಗಳು :
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಅವರು ಬೆಳೆ ಸಮೀಕ್ಷೆಯನ್ನು ರಾಜ್ಯದ್ಯಂತ ನಡೆಸಲಾಗುತ್ತಿದ್ದು, ಅದರ ಮೂಲಕ ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಕಾರಣದಿಂದಾಗಿ ನೂರಕ್ಕೂ ಹೆಚ್ಚು ತಾಲೂಕುಗಳನ್ನು ಸರ್ಕಾರ ಬರಬೇಡಿ ಪ್ರದೇಶಗಳು ಎಂದು ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಿದರು. ಸಮೀಕ್ಷೆಯ ವರದಿ ಯನ್ನು ಅಧಿಕಾರಿಗಳಿಗೆ ಆಗಸ್ಟ್ 30ರ ಒಳಗಾಗಿ ಸಲ್ಲಿಸಲು ಸೂಚಿಸಲಾಗಿದೆ ಸರ್ಕಾರವು ಬರಪೀಡಿತ ತಾಲೂಕುಗಳ ಪಟ್ಟಿಯನ್ನು ಸೆಪ್ಟೆಂಬರ್ ವೇಳೆಗೆ ಪ್ರಕಟಿಸುವುದಾಗಿ ಹೇಳಿದೆ ಎಂದು ಕೃಷಿ ಸಚಿವರು ತಿಳಿಸಿದರು. ಬರಗಾಲದ ಪರಿಸ್ಥಿತಿಯನ್ನು ಸುಮಾರು 130 ತಾಲೂಕುಗಳು ಎದುರಿಸುತ್ತಿವೆ.
ಅಲ್ಲದೆ ಈ ತಾಲೂಕುಗಳನ್ನು ಬೆಳೆ ಸಮೀಕ್ಷೆ ನಡೆಸದೆ ಬರಪೀಡಿತ ಪ್ರದೇಶಗಳು ಎಂದು ಘೋಷಿಸಲು ಸಾಧ್ಯವಿಲ್ಲ ಹಾಗಾಗಿ ರಾಜ್ಯಾದ್ಯಂತ ಸಮೀಕ್ಷೆಯನ್ನು ಅಧಿಕಾರಿಗಳು ನಡೆಸುತ್ತಿದ್ದು ಅದು ಮುಗಿದ ನಂತರವೇ ಈ ವರದಿಯನ್ನು ಕೇಂದ್ರಕ್ಕೆ ಕಳುಹಿಸುತ್ತೇವೆ. ಇದರಿಂದಾಗಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಬರಪೀಡಿತ ಪ್ರದೇಶಗಳು ಯಾವುವು ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹೇಳಿದರು. ಮೋಡ ಬಿತ್ತನೆಗೆ ಸರ್ಕಾರವು ಆ ಪ್ರದೇಶಗಳಲ್ಲಿ ಮುಂದಾಗುತ್ತದೆ ಎಂದು ಈ ಬಗ್ಗೆ ಸಚಿವರು ತಿಳಿಸಿದರು. ಆದರೆ ಸಕಾರಾತ್ಮಕ ಫಲಿತಾಂಶಗಳನ್ನು ಹಿಂದಿನ ಉಪಕ್ರಮಗಳು ನೀಡಲಿಲ್ಲ. ಪರಿಸರನ ಸಭೆ ಅಧಿಕಾರಿಗಳೊಂದಿಗೆ ನಡೆಸಿದ ಸಚಿವರು ಶೇಕಡ 79 ರಷ್ಟು ಗುರಿ ಉತ್ತಮ ಮಳೆಯಾಗಿ ಭೂಮಿಯಲ್ಲಿ ಬಿತ್ತನೆ ಪೂರ್ಣಗೊಂಡಿದೆ. ಎಂದು ಆರಂಭದಲ್ಲಿ ತಿಳಿಸಿದರು.
ಬೆಳೆ ಪರಿಹಾರ :
ರೈತರು ಈಗ ಬೀಜದ ರಸಗೊಬ್ಬರಗಳ ಕೊರತೆ ಇಲ್ಲದಿದ್ದರೂ ಸಹ ಮಳೆಯ ಕೊರತೆಯಿಂದಾಗಿ ಸಾಕಷ್ಟು ಬೆಳೆ ನಷ್ಟವನ್ನು ಎದುರಿಸಬೇಕಾಗುತ್ತದೆ. ಬೋರ್ವೆಲ್ಗಳು ಜಲಾಶಯಗಳು ಮತ್ತು ಕೃಷಿ ಹೊಂಡಗಳಂತಹ ನೀರಾವರಿ ಸೌಲಭ್ಯಗಳು ಇರುವಂತಹ ಪ್ರದೇಶಗಳಲ್ಲಿ ರೈತರು ಈ ರೀತಿಯ ಸಮಸ್ಯೆಗಳನ್ನು ಎದುರಿಸುವುದಿಲ್ಲ ಆದರೆ ಮಳೆಯನ್ನೇ ಅವಲಂಬಿಸಿರುವಂತಹ ರೈತರು ಮಾತ್ರ ಸಂಕಷ್ಟದಲ್ಲಿದ್ದಾರೆ. ಕನಿಷ್ಠ ಶೇಕಡ 50ರಷ್ಟು ಬೆಳೆದ ಬೆಳೆಗಳನ್ನು ಮುಂದಿನ ವಾರದಲ್ಲಿ ಉತ್ತಮ ಮಳೆಯಾದರೆ ರೈತರು ಉಳಿಸಬಹುದು ಆದರೆ ಅಂತಹ ಯಾವುದೇ ಲಕ್ಷಣಗಳು ರಾಜ್ಯದಲ್ಲಿ ಕಾಣಿಸುತ್ತಿಲ್ಲ ಎಂದು ಹೇಳಿದರು. 35.9 ಕೋಟಿ ರೂಪಾಯಿಗಳನ್ನು 35,000 ರೈತರಿಗೆ ಬೆಳೆ ಪರಿಹಾರಕ್ಕಾಗಿ ನೀಡಲಾಗಿದೆ ಎಂದು ಹೇಳಿದರು.
ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ಬಾಗಲಕೋಟೆ ಗದಗ ಬೆಳಗಾವಿ ಮತ್ತು ತುಮಕೂರಿನ ಸುಮಾರು 194 ಗ್ರಾಮ ಪಂಚಾಯಿತಿಗಳಲ್ಲಿ 35 ಸಾವಿರಕ್ಕೂ ಹೆಚ್ಚು ರೈತರಿಗೆ 35.9 ಕೋಟಿ ರೂಪಾಯಿಗಳನ್ನು ಮಳೆ ಕೊರತೆಯಿಂದಾಗಿ ಬೆಳೆ ಹಾನಿಯಾಗಿರುವವರಿಗೆ ಪರಿಹಾರವಾಗಿ ನೀಡಲಾಗಿದೆ ಎಂದು ತಿಳಿಸಿದರು.
ಹೀಗೆ ಬರಪರಿಸ್ಥಿತಿಯ ಕುದ್ದು ಮಾಹಿತಿಯನ್ನು ನೋಡಲು ಎಲ್ಲ ಜಿಲ್ಲೆಗಳಿಗೆ ಅಧಿಕಾರಿಗಳು ಭೇಟಿ ನೀಡಲು ನೇಮಿಸಲಾಗಿದೆ ಎಂದು ಸಚಿವರು ತಿಳಿಸುವುದರ ಮೂಲಕ ಬರಪೀಡಿತ ಪ್ರದೇಶಗಳು ಯಾವುವು ಎಂಬುದನ್ನು ತಿಳಿಯಬಹುದಾಗಿದೆ. ಇದರಿಂದ ರಾಜ್ಯ ಸರ್ಕಾರವು ಆ ಪ್ರದೇಶಗಳಲ್ಲಿ ಇರುವ ರೈತರಿಗೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲು ಸುಲಭವಾಗುತ್ತದೆ ಎಂದು ಹೇಳಬಹುದಾಗಿದೆ.
ಹೀಗೆ ಸುಮಾರು ನೂರಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತ ರಾಜ್ಯಗಳಾಗಿವೆ ಎಂದು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ಎಲ್ಲಾ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಶೇರ್ ಮಾಡಿ ಧನ್ಯವಾದಗಳು.