ನಮಸ್ಕಾರ ಸ್ನೇಹಿತರೇ, ಪ್ರತಿಯೊಬ್ಬ ನಾಗರಿಕ ಕೂಡ ದೇಶದಲ್ಲಿ ಆರ್ಥಿಕವಾಗಿ ಸದೃಢನಾಗಬೇಕು ಹಾಗೂ ಅವನು ಯಾವುದೇ ಕಾಯಿಲೆ ಬಂದರೆ ಅಥವಾ ಅನಾರೋಗ್ಯಕ್ಕೆ ಒಳಗಾದರೆ ವಿಮ ಸೌಲಭ್ಯವನ್ನು ಆಸ್ಪತ್ರೆಯ ಬಿಲ್ಪಾವತಿಸಲು ಹೊಂದಿರಬೇಕು ಹಾಗಾಗಿ ಸಾಕಷ್ಟು ಯೋಜನೆಗಳನ್ನು ಕೇಂದ್ರ ಸರ್ಕಾರವು ಜಾರಿಗೆ ತರುತ್ತ ಇದೆ. ಅದರಂತೆ ಈಗ ಮತ್ತೊಂದು ಕೇಂದ್ರ ಸರ್ಕಾರದ ಯೋಜನೆ ಗೆ ಸಂಬಂಧಿಸಿ ದಂತೆ ಈ ಲೇಖನದಲ್ಲಿ ನಿಮಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗುತ್ತಿದೆ.
ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ :
ಅತ್ಯಂತ ಕಡಿಮೆ ಮುತ್ತದಲ್ಲಿ ಯಾರು ವಿಮೆ ಸೌಲಭ್ಯವನ್ನು ಬಯಸುತ್ತಾರೋ ಅಂತವರು ಈ ಯೋಜನೆಯ ಮೂಲಕ ವಿಮ ಸೌಲಭ್ಯವನ್ನು ಪಡೆದುಕೊಳ್ಳುವುದಕ್ಕೆ ಕೇಂದ್ರ ಸರ್ಕಾರವು ಅವಕಾಶ ಕಲ್ಪಿಸಿದೆ. ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಗೆ ಭಾರತೀಯ ನಾಗರಿಕರು ಪ್ರತಿಯೊಬ್ಬರು ಸಹ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಯೋಜನೆಯ ಅಡಿಯಲ್ಲಿ ವಾರ್ಷಿಕವಾಗಿ ಕೇವಲ 436 ರೂಪಾಯಿಗಳನ್ನು ಅಭ್ಯರ್ಥಿಯು ಪಾವತಿಸಿದರೆ ಸಾಕು ಅವರು ಎರಡು ಲಕ್ಷದವರೆಗೆ ವಿಮೆ ಸೌಲಭ್ಯವನ್ನು ಪಡೆಯಬಹುದಾಗಿದೆ. 2015ರಲ್ಲಿ ಕೇಂದ್ರ ಸರ್ಕಾರದ ಈ ಯೋಜನೆಯ ಮೊತ್ತ
ಈ ಯೋಜನೆಯ ಅಡಿಯಲ್ಲಿ ಪ್ರತಿ ವರ್ಷ ಅಭ್ಯರ್ಥಿಗಳು ಇಷ್ಟು ಹಣ ಪಾವತಿ ಮಾಡಿದರೆ ಸಾಕು. ಅಂದರೆ ನೀವು ಜೀವನ್ ಜ್ಯೋತಿ ಭೀಮ ಯೋಜನೆಯ ಪಾಲಿಸಿಯನ್ನು ಖರೀದಿ ಮಾಡುವುದಾದರೆ 436 ರೂಪಾಯಿಗಳನ್ನು ಪ್ರತಿ ವರ್ಷಕ್ಕೆ ಮೀಸಲಿಡಬೇಕಾಗುತ್ತದೆ. ಈ ಪಾಲಿಸಿಯ ಮೊತ್ತ 330 ರೂಪಾಯಿಗಳು 2022ರ ಮೊದಲು ಇತ್ತು. ಆದರೆ ಈ ಮೊತ್ತವನ್ನು ಈಗ 436 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಜೀವನ್ ಜ್ಯೋತಿ ಪಾಲಿಸಿಯನ್ನು ಮಾಡಿಸಿ ಕೊಳ್ಳಲು ನೀವು ಯಾವುದೇ ಬ್ಯಾಂಕ್ ಶಾಖೆಗೆ ಭೇಟಿ ನೀಡಬಹುದು ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಮನೆಯಲ್ಲಿಯೇ ಕುಳಿತು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಯೋಜನೆಯ ಅರ್ಹತೆಗಳು :
ಕೇಂದ್ರ ಸರ್ಕಾರದ ಈ ಯೋಜನೆಯ ಸಂಬಂಧಿಸಿದಂತೆ ಪಾಲಿಸಿಯನ್ನು ಮಾಡಿಸಲು ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಅವುಗಳೆಂದರೆ 18ರಿಂದ 50 ವರ್ಷ ವಯಸ್ಸಾಗಿರಬೇಕು. ಈ ಪಾಲಿಸಿಯು 55 ವರ್ಷ ಆದ ನಂತರ ವ್ಯಕ್ತಿಗೆ ಮುಗಿಯುತ್ತದೆ. ಈ ಯೋಜನೆಯ ಪಾಲಿಸಿಯನ್ನು ಪ್ರತಿ ವರ್ಷ ರಿನಿವಲ್ ಮಾಡಿಸಿಕೊಳ್ಳಬೇಕು. ಈ ಪಾಲಿಸಿಯ ಅಡಿಯಲ್ಲಿ ಆರಂಭದಿಂದ ಹಣವನ್ನು ಪೇ ಮಾಡಿ ಯಾವುದಾದರು ಒಂದು ಶದಲ್ಲಿ ಠೇವಣಿ ಮಾಡಿಲ್ಲ ಎಂದರೆ ಈ ಯೋಜನೆಯ ಪ್ರಯೋಜನ ನಿಮಗೆ ಸಿಗುವುದಿಲ್ಲ ಹಾಗೂ ಈ ಪಾಲಿಸಿಯು ಸಹ ಮುಕ್ತಾಯವಾಗುತ್ತದೆ. ಮೇ 9 2015 ರಂದು ಯೋಜನೆಗೆ ಚಾಲನೆ : ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಯನ್ನು ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಮೇ 9 2015ರಂದು ಆರಂಭಿಸಿದರು. ಪ್ರತಿಯೊಬ್ಬ ಭಾರತೀಯನು ಕೂಡ ಈ ಯೋಜನೆಯ ಅಡಿಯಲ್ಲಿ ಪಾಲಿಸಿಯನ್ನು ತೆಗೆದುಕೊಳ್ಳುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾದರೆ ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಹೋಗುವುದರ ಮೂಲಕ ಆನ್ಲೈನಲ್ಲಿ ಪಾಲಿಸಿ ಆರಂಭಿಸಬೇಕು.
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು :
ಪ್ರಧಾನ ಮಂತ್ರಿ ಭೀಮಾ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಲವೊಂದು ದಾಖಲೆಗಳನ್ನು ಅಭ್ಯರ್ಥಿಗಳು ಹೊಂದಿರಬೇಕಾಗುತ್ತದೆ ಅವುಗಳೆಂದರೆ ಆಧಾರ್ ಕಾರ್ಡ್, ಪಾಸ್ಪೋರ್ಟ್ ಸೈಜ್ ಫೋಟೋ ,ಬ್ಯಾಂಕ್ ಪಾಸ್ ಬುಕ್ ,ಪಾನ್ ಕಾರ್ಡ್ ಹಾಗೂ ಮೊಬೈಲ್ ನಂಬರ್ ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಅಭ್ಯರ್ಥಿಗಳು ಹೊಂದಿರಬೇಕಾಗುತ್ತದೆ.
ಹೀಗೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬರೂ ಸಹ ವಿಮಪಾಲಿಸಿಯನ್ನು 436 ರೂಪಾಯಿಗಳಲ್ಲಿ ಮಾಡಿಸಿಕೊಳ್ಳಲು ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ. ಇದರಿಂದ ಸುಮಾರು 2 ಲಕ್ಷ ರೂಪಾಯಿಗಳವರೆಗೆ ಹಣವನ್ನು ಪಡೆಯಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ನಿಮ್ಮೆಲ್ಲಾ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡುವುದರ ಮೂಲಕ ಅವರು ಈ ಯೋಜನೆಯ ಮೂಲಕ ವಿಮಪಾಲಿಸಿಯನ್ನು ಪಡೆಯಲು ಅವಕಾಶ ಕಲ್ಪಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಬಡವರು ಈ ವಸ್ತುವನ್ನು ಎಸೆಯುತ್ತಾರೆ ಆದರೆ ಶ್ರೀಮಂತರು ತಮ್ಮ ಜೇಬಿನಲ್ಲಿ ಇಡುತ್ತಾರೆ? ಚಿಂತಿಸಬೇಡಿ ಉತ್ತರ ಇಲ್ಲಿದೆ