ನಮಸ್ಕಾರ ಸ್ನೇಹಿತರೆ, ಕರ್ನಾಟಕದ ಕೆಲ ಪ್ರದೇಶಗಳು ಬಿಸಿಲಿನಿಂದ ಕಂಗೆಟ್ಟಿದ್ದು ಹವಾಮಾನ ಇಲಾಖೆಯ ಅಧಿಕಾರಿಗಳು ಇಂದು ಸಂಜೆ ಆ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದ್ದಾರೆ. ಯಾವೆಲ್ಲ ಜಿಲ್ಲೆಗಳಲ್ಲಿ ಮಳೆ ಬೀಳಲಿದೆ ಎಂಬುದರ ಬಗ್ಗೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆಯ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗುತ್ತದೆ.
ಗುಡುಗು ಸಹಿತ ಮಳೆ :
ಹವಾಮಾನ ಇಲಾಖೆ ಇಂದು ಸಂಜೆ ಮಳೆ ಆಗುವ ಸಾಧ್ಯತೆ ಇದೆ ಎಂದು ಜನರಿಗೆ ಮಾಹಿತಿಯನ್ನು ನೀಡಿದೆ. ಮಳೆಯಾ ಭಾಗದಲ್ಲಿ ಕಾಣಿಸಿಕೊಂಡಿದೆ ಆದರೆ ರಾಜ್ಯದ್ಯಂತ ಮುಂದಿನ ತಿಂಗಳು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿನ ಧಾರವಾಡ, ದಾವಣಗೆರೆ, ಬಳ್ಳಾರಿ, ಕೊಪ್ಪಳ, ವಿಜಯನಗರ ,ರಾಯಚೂರು, ಬೆಳಗಾವಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆಯು ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಕರಾವಳಿ ಜಿಲ್ಲೆಗಳು :
ಮಲೆನಾಡು ಜಿಲ್ಲೆಗಳಲ್ಲಿ ಮುಖ್ಯವಾಗಿ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಹಾಗೂ ಕರಾವಳಿ ಕರ್ನಾಟಕ ಜಿಲ್ಲೆಗಳಲ್ಲಿ ವಿಶೇಷವಾಗಿ ಘಾಟುಗಳಲ್ಲಿ ಚದುರಿದ ಮಳೆ ಅಥವಾ ಗುಡುಗು ಸಹಿತ ಮಳೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಬೆಂಗಳೂರು ನಗರ :
ಹವಾಮಾನ ಇಲಾಖೆಯು ಬೆಂಗಳೂರುನಾದ್ಯಂತ ಗಾಳಿಯ ಕುಸಿತ ಮತ್ತು ತೇವಾಂಶದ ಲಭ್ಯತೆಯ ಪೂರೈಕೆಯಿಂದಾಗಿ ಸಂಜೆಯಿಂದ ಇಂದು ತಡ ರಾತ್ರಿಯವರೆಗೆ ಚದುರಿದ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಬೆಂಗಳೂರು ನಗರದಾದ್ಯಂತ ಇದೇ ಎಂದು ಹೇಳಲಾಗಿದೆ.
ಅಂಕಿ ಅಂಶಗಳ ಪ್ರಕಾರ ಗರಿಷ್ಠ ಮಳೆಯಾಗಿರುವ ಜಿಲ್ಲೆಗಳು :
ಅಂಕಿ ಅಂಶಗಳ ಪ್ರಕಾರ ಗರಿಷ್ಠ ಮಳೆಯಾಗಿರುವ ಜಿಲ್ಲೆಗಳ ಎಂದರೆ 43 ಮಿಲಿ ಮೀಟರ್ ಬಾಗಲಕೋಟೆ, 42.5 ಮಿಲಿಮೀಟರ್ ಉಡುಪಿ, ಬೆಳಗಾವಿಯಲ್ಲಿ 35.5 ಮಿಲಿಮೀಟರ್, 35 ಮಿ.ಮೀ ಉತ್ತರ ಕನ್ನಡದಲ್ಲಿ, ಯಾದಗಿರಿಯಲ್ಲಿ 33.5 ಮಿಲಿಮೀಟರ್, ಚಿಕ್ಕಮಗಳೂರಿನಲ್ಲಿ 30 ಮಿಲಿಮೀಟರ್, 30 ಮಿ.ಮೀ ಧಾರವಾಡದಲ್ಲಿ, ಶಿವಮೊಗ್ಗದಲ್ಲಿ 27 ಮಿಲಿ ಮೀಟರ್, ಕಲಬುರ್ಗಿಯಲ್ಲಿ 26 ಮಿಲಿಮೀಟರ್, ರಾಯಚೂರಿನಲ್ಲಿ 23. 5 ಮಿಲಿ ಮೀಟರ್ ಹಾಗೂ ವಿಜಯಪುರದಲ್ಲಿ ಮಿಲಿಮೀಟರ್ ಮಳೆ ಆಗಿದೆ ಎಂದು ಅಂಕಿ ಅಂಶಗಳು ತಿಳಿಸುತ್ತೇವೆ.
ಹೆಚ್ಚು ಮಳೆ ಬಿದ್ದಿರುವ ಟಾಪ್ 5 ಸ್ಥಳಗಳು :
ಹೆಚ್ಚು ಮಳೆ ಬಿದ್ದಿರುವ ಕರ್ನಾಟಕದ ಟಾಪ್ 5 ಸ್ಥಳಗಳೆಂದರೆ, 43 ಮಿಲಿ ಮೀಟರ್ ಬಾಗಲಕೋಟೆಯ ಕೋಟಿಕಲ್ಲ, 42.5 ಮಿಲಿ ಮೀಟರ್ ಉಡುಪಿಯ ವರಂಗ ಮತ್ತು ಗುಳೇದಗುಡ್ಡ, 41 ಮಿಲಿ ಮೀಟರ್ ಬಾಗಲಕೋಟೆಯ ಹಳದೂರು, 38.5 ಮಿಲಿಮೀಟರ್ ಬಾಗಲಕೋಟೆಯ ಮುಷ್ಟಿಗೇರಿ ಹಾಗೂ ಬಾಗಲಕೋಟೆಯಲ್ಲಿ 37.5 ಮಿಲಿಮೀಟರ್ ಮಳೆಯಾಗಿದೆ.
ದೇಶದ ವಿವಿಧ ಭಾಗಗಳಲ್ಲಿ ಮಳೆ :
ಭಾರತದ ಅತ್ಯಂತ ಈ ಪ್ರದೇಶಗಳಲ್ಲಿ ಮಳೆ ಸುರಿಯಲಿದೆ ಎಂದು ಹೇಳಲಾಗಿದೆ ಅವುಗಳೆಂದರೆ ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ, ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳದಲ್ಲಿ ವ್ಯಾಪಕವಾಗಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ. ಪ್ರತ್ಯೇಕವಾದ ಈ ರಾಜ್ಯಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅಲ್ಲದೆ ನಾಗಾಲ್ಯಾಂಡ್, ಮಿಜೋರಾಂ, ಮಣಿಪುರ, ಗಂಗಾ ನದಿ ಪಶ್ಚಿಮ ಬಂಗಾಳ, ತ್ರಿಪುರ, ಒಡಿಶಾ ಮತ್ತು ಬಿಹಾರದ ಕೆಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾಜಸ್ಥಾನ ಮತ್ತು ಸೌರಾಷ್ಟ್ರ ಕಚ್ ಹೊರತುಪಡಿಸಿ ದೇಶದ ಹಿನ್ನುಡಿದ ಭಾಗಗಳಲ್ಲಿ ಚದುರಿದ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಐದು ದಿನಗಳ ಕಾಲ ಉತ್ತರ ಪ್ರದೇಶ ,ಉತ್ತರ ಪಂಜಾಬ್ ,ಬಿಹಾರ್ ಮತ್ತು ಪಶ್ಚಿಮ ಬಂಗಾಳದಾದ್ಯಂತ ಮಳೆ ಬೀಳುವ ಸಾಧ್ಯತೆ ಹೆಚ್ಚಾಗಿದೆ ಎಂದು ಹವಮಾನ ಇಲಾಖೆ ವರದಿ ನೀಡಿದೆ.
ಹೀಗೆ ಕರ್ನಾಟಕ ರಾಜ್ಯ ಹಾಗೂ ಭಾರತದಲ್ಲಿ ಹೆಚ್ಚು ಮಳೆ ಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ ಎಂದು ಈ ಲೇಖನದಲ್ಲಿ ನಿಮಗೆ ತಿಳಿಸಲಾಗಿದೆ. ಹಾಗಾಗಿ ನಿಮ್ಮೆಲ್ಲ ಸ್ನೇಹಿತರಿಗೂ ಯಾವ ಪ್ರದೇಶಗಳಲ್ಲಿ ಹೆಚ್ಚು ಮಳೆ ಆಗಲಿದೆ ಹಾಗೂ ಕಡಿಮೆ ಮಳೆ ಆಗಲಿದೆ ಎಂಬುದರ ಬಗ್ಗೆ ಶೇರ್ ಮಾಡಿ ಧನ್ಯವಾದಗಳು