ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ಬಹು ಮುಖ್ಯವಾದ ಮಾಹಿತಿ ಏನೆಂದರೆ, ನಮ್ಮ ರಾಜ್ಯದಲ್ಲಿ ಸಾಕಷ್ಟು ನೀರಿನ ಕೊರತೆ ಎದುರಾಗಿದ್ದರು ಸಹ ತಮಿಳುನಾಡಿಗೆ ರಾಜ್ಯ ಸರ್ಕಾರ ನೀರು ಹರಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ಬಂದ್ ಗೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಸೆಪ್ಟೆಂಬರ್ 29ರಂದು ಕರೆ ನೀಡಿದ್ದಾರೆ. ಹಾಗಾದರೆ ಈ ಬಂದ್ ಗೆ ಸಂಬಂಧಿಸಿದಂತಹ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.
ಕರ್ನಾಟಕ ಬಂದ್ :
ಕರ್ನಾಟಕ ಬಂದ್ ವಿಷಯಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಚರ್ಚಿಸಿದ ನಂತರ ಕರ್ನಾಟಕವನ್ನು ಸೆಪ್ಟೆಂಬರ್ 29ರಂದು ಬಂದ್ ಮಾಡಲು ಘೋಷಣೆ ಮಾಡಿದ್ದಾರೆ. ಈ ಕುರಿತು ಅವರು ಮಾತನಾಡಿದ್ದು ಸೆಪ್ಟೆಂಬರ್ 29ರಂದು ಕರ್ನಾಟಕ ಸಂಪೂರ್ಣವಾಗಿ ಬಂದ್ ಆಗಲಿದೆ. ರಾಜ್ಯದಲ್ಲಿರುವಂತಹ ಎಲ್ಲಾ ಜಿಲ್ಲೆಗಳು ಸಹ ಕಂಪ್ಲೀಟ್ ಬಂದ್ ಆಗಬೇಕು ರಾಜ್ಯದಲ್ಲಿ ಏನೇ ಸಮಸ್ಯೆ ಬಂದರೂ ಸಹ ನಾವು ಧರಣಿ ಮಾಡುತ್ತೇವೆ ರಾಜ್ಯದ ಜನರು ಕರ್ನಾಟಕ ಬಂದ್ ಗೆ ಬೆಂಬಲ ಕೊಡಬೇಕು ಎಂದು ವಾಟಾಳ್ ನಾಗರಾಜ್ ಅವರು ರಾಜ್ಯದ ಜನತೆಗೆ ಮನವಿ ಮಾಡಿದರು.
ಯಾವೆಲ್ಲ ಪ್ರದೇಶಗಳು ಬಂದ್ ಆಗಲಿವೆ :
ವಾಟಾಳ್ ನಾಗರಾಜ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು ಇಂದಿನ ಬೆಂಗಳೂರು ಬಂದ್ಗೆ ನಮ್ಮ ಯಾವುದೇ ಬೆಂಬಲ ಇರುವುದಿಲ್ಲ ಹಾಗಾಗಿ ನಾವು ನಮ್ಮ ಸಲಹೆಗಳನ್ನು ಅವರು ಪಡೆದಿಲ್ಲ ಅದೊಂದು ರಾಜಕೀಯ ಪ್ರೇರಿತ ಬಂದಾಗಿದೆ ಎಂದು ಬೆಂಗಳೂರಿನ ಬಂದ್ ಗೆ ದೂರಿದರು. ಕೇವಲ ಬೆಂಗಳೂರಿಗೆ ಮಾತ್ರ ಈ ಬಂಧನ್ನು ಸೀಮಿತ ಮಾಡಲಾಗಿದ್ದು ನಾವು ಮಾಡುತ್ತಿರುವಂತಹ ಸೆಪ್ಟೆಂಬರ್ 29ರಂದು ಬಂದ್ ಬೆಳಗಾವಿ ಮುಂಬೈ ಕರ್ನಾಟಕ ಹೈದರಾಬಾದ್ ಕರ್ನಾಟಕ ಮಂಗಳೂರು ಪ್ರದೇಶ ದಕ್ಷಿಣ ಕರ್ನಾಟಕ ಗಳನ್ನು ಕಾವೇರಿ ಬಂದ್ ನಿಂದ ದೂರ ಇರಿಸುವುದು ಸರಿ ಇಲ್ಲ ಹಾಗಾಗಿ ಅಖಂಡ ಕರ್ನಾಟಕಕ್ಕೆ ಈ ಹಿನ್ನೆಲೆಯಲ್ಲಿ ಕರೆ ನೀಡಲಾಗಿದೆ ಎಂದು ಮಟನ್ ನಾಗರಾಜ್ ಅವರು ತಿಳಿಸಿದರು.
ಇದನ್ನು ಓದಿ : ಸರ್ಕಾರಿ ಆಸ್ಪತ್ರೆಯಲ್ಲಿ ಉದ್ಯೋಗ : ಯುವಕ ಯುವತಿಯರಿಗೆ ಭರ್ಜರಿ ಉದ್ಯೋಗವಕಾಶ ಈ ಕೂಡಲೇ ಅರ್ಜಿ ಸಲ್ಲಿಸಿ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ :
ಸೆಪ್ಟೆಂಬರ್ 29 ರಂದು ಮಾಡಲಿರುವ ಕರ್ನಾಟಕ ಬಂದ್ ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ಕನ್ನಡಪರ ಸಂಘಟನೆಗಳು ಸಹ ಈ ಬಂದ್ ಗೆ ಬೆಂಬಲ ನೀಡಿದೆ. ನಮ್ಮ ಹೋರಾಟದ ಬಿಸಿಯು ದೆಹಲಿಯವರೆಗೂ ಮುಟ್ಟಲಿದೆ ಎಂದು ಹೇಳಿದರು. ಅಲ್ಲದೆ ಕಾವೇರಿ ನದಿ ನೀರು ಹರಿಯುವುದನ್ನು ತಮಿಳುನಾಡಿಗೆ ವಿರೋಧಿಸಿ ನಾಳೆ ರಾಜ ಭವನ ಮುತ್ತಿಗೆ ಹಾಕಲಾಗುವುದು ಎಂದು ವಾಟಳ್ ನಾಗರಾಜ್ ಅವರು ರಾಜ್ಯದ ಜನತೆಗೆ ಹಾಗೂ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.
ಹೀಗೆ ಸೆಪ್ಟೆಂಬರ್ 29ರಂದು ಕರ್ನಾಟಕ ಸಂಪೂರ್ಣ ಬಂದ್ ಆಗಲಿದೆ ಎಂಬ ವಿಚಾರವೂ ನಿಮಗೆ ತಿಳಿಸಲಾಗಿದ್ದು ಈ ವಿಷಯದ ಬಗ್ಗೆ ಎಲ್ಲರಿಗೂ ಶೇರ್ ಮಾಡುವುದರ ಮೂಲಕ ಸೆಪ್ಟೆಂಬರ್ 29 ರ ಒಳಗಾಗಿ ನಿಮ್ಮ ಯಾವುದೇ ಕೆಲಸಗಳಿದ್ದರೂ ಅವುಗಳನ್ನು ಮಾಡಿಕೊಳ್ಳಲು ತಿಳಿಸಿ. ಆದರೂ ಕರ್ನಾಟಕ ಬಂದ್ ನೀವು ಸಹ ಬೆಂಬಲ ನೀಡಲು ಯೋಚಿಸುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಸಹ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ರಾಜ್ಯದ ಜನರಿಗೆ ಡಬಲ್ ಶಾಕ್.! ನಾಳೆ ಈ ಎಲ್ಲಾ ಸೇವೆಗಳು ಯಾರಿಗೂ ಸಿಗುವುದಿಲ್ಲ
15ನೇ ಕಂತು ಬಿಡುಗಡೆ ಸಮಯ: ಎಲ್ಲ ರೈತರಿಗೂ ಸಂತಸದ ಸುದ್ದಿ, ಈ ದಿನ ಬ್ಯಾಂಕ್ ಖಾತೆಗೆ 15ನೇ ಕಂತಿನ ಹಣ