ನಮಸ್ಕಾರ ಸ್ನೇಹತರೇ ರಾಜ್ಯಸರ್ಕಾರ ಜಾರಿಗೊಳಿಸಿದ ಗ್ಯಾರೆಂಟಿ ಯೋಜನೆಗಳಲ್ಲಿ ಎರಡು ಗ್ಯಾರೆಂಟಿ ಯೋಜನೆಗಳಿಗೆ ರೇಷನ್ ಕಾರ್ಡ್ ಅಗತ್ಯವಾಗಿ ಬೇಕು. ಹಾಗಾಗಿ ರಾಜ್ಯದಲ್ಲಿ ಹಲವಾರು ಹೊಂದಿದಂತಹ ಜನರು ಕುಟುಂಬದ ಮುಖ್ಯಸ್ಥರ ಹೆಸರನ್ನು ಬದಲಾವಣೆ ಮಾಡಲು ಕಾಯುತ್ತಿದ್ದರು. ಅದರಂತೆ ಈಗ ಕುಟುಂಬದ ಮುಖ್ಯಸ್ಥರ ಹೆಸರನ್ನು ಬದಲಾವಣೆ ಮಾಡಲು ರಾಜ್ಯ ಸರ್ಕಾರ ಒಪ್ಪಿಗೆಯನ್ನು ನೀಡಿದೆ. ಹಾಗಾದರೆ ಮುಖ್ಯಸ್ಥರ ಹೆಸರನ್ನು ಹೇಗೆ ಬದಲಾವಣೆಗೆ ಮಾಡಬೇಕು ಯಾವೆಲ್ಲ ದಾಖಲೆಗಳು ಬೇಕು ಹಾಗೂ ಯಾವ ನಿಯಮಗಳನ್ನು ಅನುಸರಿಸಬೇಕು ಎಂಬುದರ ಮಾಹಿತಿಯನ್ನು ತಿಳಿಸಲಾಗುತ್ತದೆ.
ಮುಖ್ಯಸ್ಥರ ಬದಲಾವಣೆಗೆ ಸರ್ಕಾರದಿಂದ ಆದೇಶ :
ರಾಜ್ಯ ಸರ್ಕಾರವು ರೇಷನ್ ಕಾರ್ಡ್ ನಲ್ಲಿ ಮುಖ್ಯಸ್ಥರ ಹೆಸರನ್ನು ಬದಲಾವಣೆ ಮಾಡಲು ಅವಕಾಶವನ್ನು ಕಲ್ಪಿಸಿದೆ. ರಾಜ್ಯದಲ್ಲಿ ಹಲವಾರು ಪಡಿತರ ಚೀಟಿಯಲ್ಲಿ ಹಲವಾರು ಜನರು ಹೆಚ್ಚಾಗಿ ಪುರುಷರನ್ನು ಮುಖ್ಯಸ್ಥರನ್ನಾಗಿ ಮಾಡಲಾಗಿತ್ತು. ಆದರೆ ಅಂತವರು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಹಣವನ್ನು ಪಡೆಯಲು ಸಾಧ್ಯವಾಗದ ಕಾರಣ ಮುಖ್ಯಸ್ಥರ ಬದಲಾವಣೆಯನ್ನು ಹಲವಾರು ಜನರು ಪಡಿತರ ಚೀಟಿಯಲ್ಲಿ ಮಾಡಲು ನಿರೀಕ್ಷಿಸುತ್ತಿದ್ದರು. ಇಂತಹ ಜನರಿಗೆ ಈಗ ರಾಜ್ಯ ಸರ್ಕಾರವು ಮುಖ್ಯಸ್ಥರ ಹೆಸರನ್ನು ಬದಲಾವಣೆ ಮಾಡಲು ಅವಕಾಶವನ್ನು ಕಲ್ಪಿಸಿದೆ. ಈ ನಿಟ್ಟಿನಲ್ಲಿ ಆಯಾಜಿಲ್ಲಾ ಆಹಾರ ಇಲಾಖೆ ಕಚೇರಿಗೆ ಮಹಿಳೆಯರು ಭೇಟಿ ನೀಡುವುದರ ಮೂಲಕ ಸದಸ್ಯರ ಹೆಸರನ್ನು ಬದಲಾವಣೆ ಮಾಡಲು ಅವಕಾಶವನ್ನು ಆಹಾರ ಇಲಾಖೆಯು ಕಲ್ಪಿಸಿದೆ. ಅದರಂತ ರಾಮನಗರ ಅನ್ಯಾಯ ಬೆಲೆ ಅಂಗಡಿಯಲ್ಲಿ ಈಗಾಗಲೇ ಮುಖ್ಯಸ್ಥರ ಹೆಸರನ್ನು ಬದಲಾವಣೆ ಮಾಡಲು ರಾಜ್ಯ ಸರ್ಕಾರ ಅವಕಾಶವನ್ನು ಕಲ್ಪಿಸಿಕೊಟ್ಟಿದೆ ಎಂದು ಉಪನಿರ್ದೇಶಕ ರಮ್ಯಾ ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಮುಖ್ಯಸ್ಥರ ಹೆಸರನ್ನು ಬದಲಾವಣೆ ಮಾಡಲು ನಿಯಮಗಳು :
ರೇಷನ್ ಕಾರ್ಡ್ ನಲ್ಲಿ ಪುರುಷರು ಕುಟುಂಬದ ಮುಖ್ಯಸ್ಥರಾಗಿದ್ದಲ್ಲಿ ಅಥವಾ ಸಂಬಂಧಗಳು ತಪ್ಪಾಗಿ ನಮೂದಿಸಿದ್ದರೆ ಅಂತಹ ಕುಟುಂಬದ ಮುಖ್ಯಸ್ಥರನ್ನಾಗಿ ಮಹಿಳೆಯರನ್ನು ಮುಖ್ಯಸ್ಥರನ್ನಾಗಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮರಣ ಸದಸ್ಯರ ಹೆಸರನ್ನು ಪಡಿತರ ಚೀಟಿಯಲ್ಲಿ ತೆಗೆಯಲು ನ್ಯಾಯಬೆಲೆ ಅಂಗಡಿಯಲ್ಲಿ ಈ ಕೆವೈಸಿ ಮೂಲಕ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಹೇಳಲಾಗಿದೆ. ಅಲ್ಲದೆ ಆಯಾ ತಾಲೂಕಿನ ಆಹಾರ ಶಾಖೆಯನ್ನು ಸಾರ್ವಜನಿಕರು ತಮ್ಮ ಪಡಿತರ ಚೀಟಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ನಿವಾರಿಸಲು ಅವಕಾಶ ಕಲ್ಪಿಸಲಾಗಿದೆ.
ಇದನ್ನು ಓದಿ : ಮೋದಿಯಿಂದ ದೇಶದ ರೈತರಿಗೆ ಬಿಗ್ ಶಾಕ್..! ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ಇನ್ನಿಲ್ಲ
ಮುಖ್ಯಸ್ಥರ ಹೆಸರನ್ನು ಬದಲಾಯಿಸುವ ವಿಧಾನ :
ರೇಷನ್ ಕಾರ್ಡ್ ನಲ್ಲಿ ಕುಟುಂಬದ ಸದಸ್ಯರ ಮುಖ್ಯಸ್ಥರ ಹೆಸರನ್ನು ಬದಲಾವಣೆ ಮಾಡಲು ಅಭ್ಯರ್ಥಿಗಳು ತಮ್ಮ ಸಮೀಪದ ಪಡಿತರ ಚೀಟಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಬೇಕು. ಅರ್ಜಿಯನ್ನು ಮುಖ್ಯಸ್ಥರ ಹೆಸರನ್ನು ಬದಲಾವಣೆ ಮಾಡುವುದಕ್ಕೆ ನೀಡಲಾಗಿದೆ. ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಬಯೋಮೆಟ್ರಿಕ್ ದೃಢೀಕರಣದ ಮೂಲಕ ಅಭ್ಯರ್ಥಿಗಳು ದಾಖಲೆಗಳನ್ನು ದೃಢೀಕರಿಸಬೇಕು. ಹೀಗೆ ಕೆಲವೊಂದಿಷ್ಟು ಪ್ರಕ್ರಿಯೆಗಳ ನಂತರ ನಿಮ್ಮ ಮೊಬೈಲ್ ಗೆ ಆಹಾರ ಕಚೇರಿಯಿಂದ ಎಸ್ಎಂಎಸ್ ಬರುತ್ತದೆ. ಎಸ್ಎಂಎಸ್ ಬಂದ ನಂತರ ಸ್ವೀಕೃತಿ ಪತ್ರವನ್ನು ನೀಡುವುದರ ಮೂಲಕ ಪಡಿತರ ಚೀಟಿಯನ್ನು ಹೊಸದಾಗಿ ಪಡೆಯಬಹುದಾಗಿದೆ.
ಹೀಗೆ ರಾಜ್ಯ ಸರ್ಕಾರವು ಘೋಷಿಸಿದಂತಹ ಗ್ಯಾರಂಟಿ ಯೋಜನೆಯ ಗಳಿಗೆ ಪಡಿತರ ಚೀಟಿಯು ಕಡ್ಡಾಯವಾಗಿದ್ದು, ಆ ಪಡಿತರ ಚೀಟಿಯಲ್ಲಿ ಮುಖ್ಯಸ್ಥರು ಮಹಿಳೆಯರಾಗಿರುವುದು ಒಂದು ರೀತಿಯಲ್ಲಿ ಹೆಚ್ಚು ಅನುಕೂಲವನ್ನು ಮಾಡಲು ಸಹಾಯಕವಾಗಿದೆ. ಹೀಗೆ ಪಡಿತರ ಚೀಟಿಯಲ್ಲಿ ಹೆಸರನ್ನು ಬದಲಾಯಿಸಲು ಹಾಗೂ ಮರಣ ಹೊಂದಿದ ಹೆಸರನ್ನು ತೆಗೆಯಲು ಅವಕಾಶವನ್ನು ರಾಜ್ಯ ಸರ್ಕಾರ ಒದಗಿಸಿರುವುದರ ಬಗ್ಗೆ ನಿಮ್ಮ ಸ್ನೇಹಿತರು ಹಾಗು ಸಂಬಂಧಿಕರಿಗೂ ಸಹ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಹೆಣ್ಣು ಮಕ್ಕಳಿಗೆ ಭರ್ಜರಿ ಗುಡ್ ನ್ಯೂಸ್! ರಾಜ್ಯ ಸರ್ಕಾರದ ಈ ಹೊಸ ಯೋಜನೆಯಿಂದ ಪ್ರತಿಯೊಬ್ಬರಿಗೂ 50,000