Friday, July 26, 2024
HomeTrending Newsಕೈ ಕೊಟ್ಟ ವರುಣ; ಮೋಡ ಬಿತ್ತನೆಗೆ ಸಜ್ಜು.! ಮೋಡ ಬಿತ್ತನೆ ಎಲ್ಲೆಲ್ಲಿ ಹೇಗೆ ನಡೆಯುತ್ತಿದೆ?

ಕೈ ಕೊಟ್ಟ ವರುಣ; ಮೋಡ ಬಿತ್ತನೆಗೆ ಸಜ್ಜು.! ಮೋಡ ಬಿತ್ತನೆ ಎಲ್ಲೆಲ್ಲಿ ಹೇಗೆ ನಡೆಯುತ್ತಿದೆ?

ಹಲೋ ಸ್ನೇಹಿತರೇ, ಇಂದಿನ ಲೇಖನಕ್ಕೆ ಎಲ್ಲರಿಗು ಸ್ವಾಗತ, ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದೆ ಬಿದ್ದಂತ ಅಲ್ಪಸ್ವಲ್ಪ ಮಳೆಯನ್ನು ನಂಬಿ ರೈತರು ಬಿತ್ತನೆ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಕಾಶ ನೋಡೋ ಪರಿಸ್ಥಿತಿಯಲ್ಲಿದ್ದಾರೆ. ಇಂತ ಸಂದರ್ಭದಲ್ಲಿ ರೈತರ ನೆರವಿಗೆ ಬರಬೇಕು ಎಂದು ಮೋಡ ಬಿತ್ತನೆ ಕಾರ್ಯವನ್ನು ನೆಡಸಲಾಗಿದೆ. ಇದರಿಂದ ರೈತರಿಗೆ ಹೇಗೆ ಅನುಕೂಲವಾಗುತ್ತದೆ. ಮೋಡು ಬಿತ್ತನೆಯನ್ನು ಹೇಗೆ ಮಾಡಲಾಗುತ್ತದೆ ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

cloud seeding
Join WhatsApp Group Join Telegram Group

ಕೈಕೊಟ್ಟ ವರಣ ಜಮೀನಲ್ಲೆ ಬತ್ತಿಹೋಗ್ತಿದೆ ಬೆಳೆ. ಸ್ವಂತ ಹಣದಲ್ಲೆ ಮೋಡ ಬಿತ್ತನೆಗೆ ಮುಂದಾದ ಶಾಸಕ ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದೆ ಅದರಲ್ಲು ಎಲಕ್ಕಿ ನಗರಿ ಹಾವೇರಿಯಲ್ಲಿ ಹಿಂದೆಂದಿಗಿಂತಲು ಕಡಿಮೆ ಮಳೆಯಾಗಿದೆ. ಇದರಿಂದ ಹಾವೇರಿಯ ಪ್ರಮುಖ ಬೆಳೆಗಳಾದ ಮೆಕ್ಕೆ ಜೋಳ ಹತ್ತಿ ಸೇರಿ ಅನೇಕ ಬೆಳೆಗಳು ಹೊಲದಲ್ಲಿಯೇ ಬತ್ತಿ ಹೋಗುತ್ತಿದೆ. ಹಾಗಾಗಿ ರಾಣಿಬೆನ್ನೂರು ಶಾಸಕ ಪ್ರಕಾಶ್‌ ಕೊಳಿವಾಡ ತಮ್ಮದೆ ಹಣದಲ್ಲಿ ಮೋಡ ಬಿತ್ತನೆ ಮಾಡಲು ನಿರ್ಧರಿಸಿದ್ದಾರೆ. ಇವತ್ತು ಹುಬ್ಬಳಿ ಎರ್ಪೋಟ್‌ನಿಂದ ಮೋಡ ಬಿತ್ತನೆಗೆ ಚಾಲನೆ ಸಿಗಲಿದೆ. ನಿಗದಿತ ವೇಳೆಗೆ ಮಳೆಯಾಗುತ್ತಿಲ್ಲ ಆದ್ದರಿಂದ ಬಿತ್ತನೆ ಮಾಡಿರುವ ರೈತರು ಸಂಕಷ್ಟದಲ್ಲಿದ್ದಾರೆ.

ಆದ್ದರಿಂದ ಮೋಡ ಬಿತ್ತನೆಯನ್ನು ಪ್ರಾರಂಭ ಮಾಡಲಿದ್ದೇವೆ, ಕಳೆದ 2015-19 ರಲ್ಲಿ ಕರ್ನಾಟಕ ಮತ್ತು ಮಹರಾಷ್ಟ್ರ ಮೋಡ ಬಿತ್ತನೆ ಯಶಸ್ವಿಯಾಗಿ ಮಾಡಿತ್ತು ದೇಶದಲ್ಲಿ ಮೋಡ ಬಿತ್ತನೆಗೆ ಸಿದ್ದಪಡಿಸಿರುವ ವಿಮಾನಗಳಿರುವುದು ಶಾಸಕ ಪ್ರಕಾಶ್‌ ಕೊಳಿವಾಡ ಬಳಿ ಮಾತ್ರ ಹಾಗಾಗಿ ರೈತರ ನೆರವಿಗೆ ನಿಂತಿರುವ ಕೊಳಿವಾಡ ತಮ್ಮದೆ ಸ್ವಂತ ಖರ್ಚಿನಲ್ಲಿ ಬಿತ್ತನೆಯನ್ನು ಮಾಡಿಸುತ್ತಿದ್ದಾರೆ. ಜಿಲ್ಲಾಧಿಕಾರಿಗೆ ಪತ್ರವನ್ನು ಬರೆದು ಮೋಡ ಬಿತ್ತನೆಗೆ ಪ್ರಾರಂಭ ಮಾಡಲಿದ್ದಾರೆ.

ಇದನ್ನೂ ಓದಿ: ರೇಷನ್ ಕಾರ್ಡ್ ಬಳಕೆದಾರರೇ ತಕ್ಷಣ ಈ ಸುದ್ದಿ ನೋಡಿ: ಮುಂದಿನ ತಿಂಗಳು ಅಕ್ಕಿ ಬೇಕಾ..! ಹಣ ಬೇಕಾ..!

ವೈಯಕ್ತಿಕವಾಗಿ ಈ ಮೋಡ ಬಿತ್ತನೆಯನ್ನು ಶಾಸಕ ಪ್ರರಂಭ ಮಾಡಿದ್ದಾರೆ, ಅವರ ಜಿಲ್ಲೆ ಮಾತ್ರ ಮೊದಲ ಪ್ರಮುಖ್ಯತೆಯನ್ನು ನೀಡುತ್ತೇನೆ ಎಂದು ಶಾಸಕ ಹೇಳಿಕೆಯನ್ನು ನೀಡಿದ್ದಾರೆ. ಒಟ್ಟಾರೆ ಹಾವೇರಿ ರೈತರ ಸಂಕಷ್ಟಕ್ಕೆ ನೆರವಾಗುವ ಮೂಲಕ ಶಾಸಕ ಪ್ರಕಾಶ್‌ ಎಲ್ಲರ ಮೆಚ್ಚುಗೆಗೆ ಮಾತ್ರರಾಗಿದ್ದಾರೆ. ಈ ಮೂಲಕ ಇತರರಿಗು ಕೂಡ ಮಾದರಿಯಾಗಿದ್ದಾರೆ.

ಮೋಡ ಬಿತ್ತನೆ ಅಥವಾ ಮಾನವ ನಿರ್ಮಿತ ಮಳೆಯ ವರ್ಧನೆಯು ಹಿಮ ಅಥವಾ ಮಳೆಯನ್ನು ಮಾಡಲು, ಸಣ್ಣ ಕಣಗಳೊಂದಿಗೆ ಮೋಡಗಳನ್ನು ಹರಡುವ ಮೂಲಕ ಹವಾಮಾನವನ್ನು ಕೃತಕವಾಗಿ ಮಾರ್ಪಡಿಸುವ ಒಂದು ಮಾರ್ಗವಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಮೋಡ ಬಿತ್ತನೆಯು ಮಳೆ ಬೀಳುವಂತೆ ಮೋಡಗಳನ್ನು ಕುಶಲತೆಯಿಂದ ನಿರ್ವಹಿಸುವುದು. ಮೋಡಗಳು ನೀರಿನ ಹನಿಗಳು ಅಥವಾ ಐಸ್ ಸ್ಫಟಿಕಗಳನ್ನು ಒಳಗೊಂಡಿರುತ್ತವೆ.

ವಾತಾವರಣದಲ್ಲಿನ ನೀರಿನ ಆವಿ ತಣ್ಣಗಾದಾಗ ಮತ್ತು ನಂತರ ಧೂಳು ಅಥವಾ ಉಪ್ಪಿನ ಕಣದ ಸುತ್ತಲೂ ಘನೀಕರಣಗೊಂಡಾಗ ಅವು ರೂಪುಗೊಳ್ಳುತ್ತವೆ. ಈ ಧೂಳು ಅಥವಾ ಮಂಜುಗಡ್ಡೆಯ ಕಣಗಳನ್ನು ಕಂಡೆನ್ಸೇಶನ್ ನ್ಯೂಕ್ಲಿಯಸ್ ಎಂದೂ ಕರೆಯುತ್ತಾರೆ, ಮಳೆಹನಿಗಳು ಅಥವಾ ಸ್ನೋಫ್ಲೇಕ್ಗಳ ರಚನೆಯನ್ನು ಸುಲಭಗೊಳಿಸುತ್ತದೆ. ಘನೀಕರಣ ನ್ಯೂಕ್ಲಿಯಸ್ಗಳಿಲ್ಲದೆ, ಮಳೆಯು ರೂಪುಗೊಳ್ಳುವುದಿಲ್ಲ ಮತ್ತು ಆದ್ದರಿಂದ, ಮಳೆಯು ಸಂಭವಿಸುವುದಿಲ್ಲ. ಮೋಡ ಬಿತ್ತನೆಯು ಕೃತಕವಾಗಿ ಘನೀಕರಣ ನ್ಯೂಕ್ಲಿಯಸ್‌ಗಳನ್ನು ವಾತಾವರಣಕ್ಕೆ ಸೇರಿಸುತ್ತದೆ, ಮಳೆ ಅಥವಾ ಹಿಮವನ್ನು ಉತ್ಪಾದಿಸುವ ಮೋಡದ ಸಾಮರ್ಥ್ಯವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ಸೇರಿಸಲಾದ ಘನೀಕರಣ ನ್ಯೂಕ್ಲಿಯಸ್‌ಗಳೊಂದಿಗೆ, ಮೋಡ ಬಿತ್ತನೆಯು ಸ್ನೋಫ್ಲೇಕ್‌ಗಳು ಅಥವಾ ಮಳೆಹನಿಗಳು ರೂಪುಗೊಳ್ಳಲು ಆಧಾರವನ್ನು ಒದಗಿಸುತ್ತದೆ.

ಮೋಡ ಬಿತ್ತನೆ ವಿಧಾನಗಳು

  1. ಬೆಚ್ಚಗಿನ ಮೋಡಗಳಿಗೆ ನೀರನ್ನು ಸಿಂಪಡಿಸುವುದು
  2. ತಣ್ಣನೆಯ ಮೋಡಗಳಲ್ಲಿ ಮಂಜುಗಡ್ಡೆಯನ್ನು ಬಿಡುವುದು
  3. ಸಿಲ್ವರ್ ಅಯೋಡೈಡ್ ಅಥವಾ ಅಂತಹುದೇ ಹರಳುಗಳನ್ನು ತಣ್ಣನೆಯ ಮೋಡಕ್ಕೆ ಸಿಂಪಡಿಸುವುದು, ನೆಲದಿಂದ ಅಥವಾ ವಿಮಾನದಿಂದ ಮೋಡದ ಮೇಲೆ

ಮೇಘ ಬಿತ್ತನೆಯ ಋಣಾತ್ಮಕ ಪರಿಣಾಮಗಳು

1. ಪ್ರಕ್ರಿಯೆಯು 100% ಪರಿಣಾಮಕಾರಿಯಾಗಿಲ್ಲ.

2. ಪ್ರಕ್ರಿಯೆಯು ತುಂಬಾ ದುಬಾರಿಯಾಗಿದೆ.

3. ಸಿಲ್ವರ್ ಅಯೋಡೈಡ್ ಬಗ್ಗೆ ಸತ್ಯವೆಂದರೆ ಅದು ಅಪಾಯಕಾರಿ ವಸ್ತುಗಳನ್ನು ಹೊಂದಿರಬಹುದು.

4.ಮೋಡ ಬಿತ್ತನೆ ಅಂತಿಮ ಪರಿಹಾರವಲ್ಲ; ಇದು ವಾಸ್ತವವಾಗಿ ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯನ್ನು ಇನ್ನಷ್ಟು ಹದಗೆಡಿಸಬಹುದು.

5. ಫಲಿತಾಂಶಗಳು ಹಾನಿಕರವಾಗಿರಬಹುದು – ಹೆಚ್ಚು ಅಥವಾ ಕಡಿಮೆ ಮಳೆ.

6. ಮೇಘ ಬಿತ್ತನೆಯನ್ನು ವಿನಾಶಕಾರಿ ಉದ್ದೇಶಗಳಿಗಾಗಿ ಬಳಸಬಹುದು.

ಇತರೆ ವಿಷಯಗಳು

ನಿದ್ರಾಸ್ಥಿತಿಗೆ ಜಾರಿದ ಪ್ರಗ್ಯಾನ್.! ಚಂದ್ರಲೋಕದ ಮೇಲೆ ಪ್ರಗ್ಯಾನ್ ಕ್ರಮಿಸಿದ ದೂರವೆಷ್ಟು?

ಬಿಪಿಎಲ್ ಕಾರ್ಡ್ ದಾರರಿಗೆ ಭರ್ಜರಿ ಸುದ್ದಿ: ಮತ್ತೊಂದು ಹೊಸ ಯೋಜನೆ ಜಾರಿ, ನಿಮಗೂ ಸಿಗಲಿದೆ ನಿವೇಶನ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments