Saturday, July 27, 2024
HomeGovt Schemeವಾರಂತ್ಯದಲ್ಲಿ ಮಳೆ ಅಬ್ಬರ ಜೋರು : ಈ ಜಿಲ್ಲೆಯ ರೈತರಿಗೆ ಸಂತಸ, ಸಿಹಿಸುದ್ದಿ ಕೊಟ್ಟ ಹವಾಮಾನ...

ವಾರಂತ್ಯದಲ್ಲಿ ಮಳೆ ಅಬ್ಬರ ಜೋರು : ಈ ಜಿಲ್ಲೆಯ ರೈತರಿಗೆ ಸಂತಸ, ಸಿಹಿಸುದ್ದಿ ಕೊಟ್ಟ ಹವಾಮಾನ ಇಲಾಖೆ

ನಮಸ್ಕಾರ ಸ್ನೇಹಿತರೆ, ರಾಜ್ಯದ ಹಲವು ಭಾಗಗಳಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಉತ್ತಮ ಮಳೆಯಾಗುತ್ತಿತ್ತು ವಾರಾಂತ್ಯದಲ್ಲಿಯೂ ಸಹ ಗುಡುಗು ಸಹಿತ ವ್ಯಾಪಕ ಮಳೆಯು ರಾಜದ ಹಲವು ಜಿಲ್ಲೆಗಳಲ್ಲಿ ಆಗಲಿದೆ ಎಂದು ಹವಾಮಾನ ಇಲಾಖೆಯು ರಾಜ್ಯದ ಜನತೆಗೆ ಮುನ್ಸೂಚನೆಯನ್ನು ನೀಡಿದೆ. ಹಾಗಾದರೆ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟು ಮಳೆಯಾಗಲಿದೆ ಎಂದು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

Heavy rain during the weekend
Heavy rain during the weekend
Join WhatsApp Group Join Telegram Group

ಹವಾಮಾನ ಇಲಾಖೆಯ ವರದಿ :

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಶನಿವಾರ ಮತ್ತು ಭಾನುವಾರ ವ್ಯಾಪಕವಾಗಿ ಚದುರಿನಂತೆ ಭಾರಿ ಮಳೆ ಆಗಲಿದೆ ಎಂದು ರಾಜ್ಯದ ಜನತೆಗೆ ಹವಾಮಾನ ಇಲಾಖೆಯ ಮುನ್ಸೂಚನೆಯನ್ನು ನೀಡಿದೆ. ಅಲ್ಲದೆ ಮಲೆನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿಯೂ ಸಹ ವ್ಯಾಪಕವಾಗಿ ಮಳೆಯಾಗುತ್ತದೆ ಎಂದು ಹೇಳಿದ್ದು, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿಯೂ ಸಹ ಹವಾಮಾನ ಇಲಾಖೆಯ ಉತ್ತಮ ಮಳೆಯಾಗಲಿದೆ ಎಂದು ವರದಿಯನ್ನು ತಿಳಿಸಿದೆ. ಎಲ್ಲೋ ಅಲರ್ಟ್ ಘೋಷಣೆ : ಬೆಳಗ್ಗೆ 8:30 ಶುಕ್ರವಾರ 125 ಮಿಲಿ ಮೀಟರ್ ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ತಾಲೂಕಿನ ಸೋಮೇಶ್ವರದಲ್ಲಿ ಮಳೆಯಾಗಿದ್ದು ಅತಿ ಹೆಚ್ಚು ಮಳೆಯಾದ ಪ್ರದೇಶವಾಗಿದೆ ಎಂದು ರಾಜ್ಯದಲ್ಲಿ ಹೇಳಬಹುದು. ಎಲ್ಲೋ ಅಲರ್ಟ್ ಘೋಷಣೆಯನ್ನು ಶನಿವಾರ ಕರಾವಳಿ ಜಿಲ್ಲೆಗಳಾದ ಉಡುಪಿ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿಂದ ಘೋಷಣೆ ಮಾಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಿರುವ ವರದಿ :

ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು ಮಳೆ ಮತ್ತಷ್ಟು ಬಿಡಿಸು ಪಡೆಯುವ ಸಾಧ್ಯತೆ ಇದೆ ಎಂದು ರಾಜ್ಯದ ಜನತೆಗೆ ಹವಾಮಾನ ಇಲಾಖೆಯ ತಿಳಿಸಿದ್ದು ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ ಗುರುವಾರ 63 ಮಿಲಿ ಮೀಟರ್ ಮಳೆಯಾಗಿದ್ದು, 35.6 ಮಿ ಮೀಟರ್ ನಾಪೋಕ್ಳು ಭಾಗದಲ್ಲಿ ಹಾಗೂ ೨೪. ಮಿಲಿ ಮೀಟರ್ ವಿರಾಜಪೇಟೆ ಜೊತೆಗೆ 20ಮಿ ಪೊನ್ನಂಪೇಟೆ ಯಲ್ಲಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇವುಗಳ ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರು 63.3 ಮಿಲಿಮೀಟರ್, 54 ಮಿಲಿಮೀಟರ್ ಸುಳ್ಯದಲ್ಲಿ, 43 ಮಿಲಿ ಮೀಟರ್ ಮಣಿಯಲ್ಲಿ, 40 ಪಾಯಿಂಟ್ ಎರಡು ಮೀಟರ್ ಧರ್ಮಸ್ಥಳದಲ್ಲಿ, 38.6 ಮಿಮೀ ಮಂಗಳೂರಿನಲ್ಲಿ, 37 ಮಿಲಿ ಮೀಟರ್ ಪುತ್ತೂರಿನಲ್ಲಿ, ಹಾಗೂ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. :

ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ 39 ಮಿಲಿ ಮೀಟರ್, 31.4 ಮಿಲಿಮೀಟರ್ ಕಾರ್ಕಳದಲ್ಲಿ, ಮೂರು ಮಿಲಿ ಮೀಟರ್ ಉಡುಪಿಯಲ್ಲಿ ಮಳೆಯಾಗಿದೆ ಎಂದು ಹೇಳಬಹುದಾಗಿದೆ. ಉತ್ತರ ಕನ್ನಡದ ಗೋಕರ್ಣದಲ್ಲಿ 36.4 ಮಿಲಿಮೀಟರ್, 23.4 ಮಿಲಿ ಮೀಟರ್ ಕ್ಯಾಸಲ್ ರಾಕ್ ನಲ್ಲಿ ಮಳೆಯಾಗಿದೆ. 23 ಮಿಲಿ ಮೀಟರ್ ಕೊಟ್ಟಿಗೆಹಾರ ಅಂದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ, 18.6 ಮಿಲಿಮೀಟರ್ ಶೃಂಗೇರಿಯಲ್ಲಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ 42.2 ಮಿಲಿ ಮೀಟರ್, ಚಾಮರಾಜನಗರದ ಬಂಡಿಪುರದಲ್ಲಿ 20ಮಿಟರ್ ಜೊತೆಗೆ 19.6 ಮಿಲಿಮೀಟರ್ ನಷ್ಟು ಶಿವಮೊಗ್ಗ ಜಿಲ್ಲೆಯ ಹಂಚಿದ ಕಟ್ಟೆಯಲ್ಲಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನು ಓದಿ : ಒಂದೇ ಚಾರ್ಜ್‌ನಲ್ಲಿ 300 ಕಿಮೀ ಓಡುತ್ತೆ ಈ ಬೈಕ್‌..! ಇಷ್ಟು ಕಡಿಮೆ ಬೆಲೆಯಲ್ಲಿ ಇಷ್ಟೆಲ್ಲ ವೈಶಿಷ್ಠ್ಯ

ಜಿಲ್ಲಾವಾರು ಮಳೆ ಮುನ್ಸೂಚನೆ :

ಹವಾಮಾನ ಇಲಾಖೆಯು ರಾಜ್ಯದ ಜನತೆಗೆ ಜಿಲ್ಲಾವಾರು ಮಳೆ ಮುನ್ಸೂಚನೆಯನ್ನು ನೀಡಿದ್ದು ಗುಡುಗು ಸಹಿತ ಭಾರಿ ಮಳೆಯು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ರಾಮನಗರ, ತುಮಕೂರು, ಮಂಡ್ಯ ,ಬೀದರ್ ,ದಕ್ಷಿಣ ಕನ್ನಡ ,ಕೊಡಗು ,ಯಾದಗಿರಿ ,ಹಾಸನ, ಬೆಂಗಳೂರು ಗ್ರಾಮಾಂತರ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಆಗಲಿದೆ. ಅದರಂತೆ ಚಿತ್ರದುರ್ಗ ,ವಿಜಯನಗರ ,ಬೆಳಗಾವಿ ,ಚಿಕ್ಕಮಗಳೂರು, ದಾವಣಗೆರೆ ,ಕಲಬುರ್ಗಿ, ಬೆಂಗಳೂರು ನಗರ ,ಚಿಕ್ಕಬಳ್ಳಾಪುರ, ಚಾಮರಾಜನಗರ ,ಕೊಪ್ಪಳ ,ಕೋಲಾರ ,ಶಿವಮೊಗ್ಗ, ಬಾಗಲಕೋಟೆ ಹಾಗೂ ವಿಜಯಪುರ ಸೇರಿದಂತೆ ಈ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ಸೂಚನೆ ನೀಡಿದೆ.

ಹೀಗೆ ಹವಾಮಾನ ಇಲಾಖೆಯ ಪ್ರಕಾರ ಈ ಜಿಲ್ಲೆಗಳಲ್ಲಿ ವಾರಂತ್ಯದಲ್ಲಿ ಮಳೆ ಅಬ್ಬರ ಜೋರಾಗಿದ್ದು ಹಾಗೂ ಕೆಲವೊಂದು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಮೂಲಕ ತಂಪು ವಾತಾವರಣವನ್ನು ವಾರಾಂತ್ಯದಲ್ಲಿ ರಾಜ್ಯಾದ್ಯಂತ ಕಾಣಬಹುದಾಗಿದೆ. ಹೀಗೆ ರಾಜ್ಯದಂತ ಎಷ್ಟು ಮಳೆ ಆಗಲಿದೆ ಎಂದು ಅದರ ಬಗ್ಗೆ ನಿಮ್ಮೆಲ್ಲ ಸ್ನೇಹಿತರಿಗೂ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಮನೆಯಲ್ಲಿ ಬಂಗಾರ ಇಟ್ಟುಕೊಂಡಿದ್ದೀರಾ: ಹಾಗಾದರೆ ನಿಮಗೆ ಈ ವಿಷಯ ಗೊತ್ತಾ..?

ರಸ ಪ್ರಶ್ನೆಯಲ್ಲಿ ಗೆದ್ದರೆ 1 ಲಕ್ಷ ಬಹುಮಾನ: ಪ್ರವೇಶ ಶುಲ್ಕ ಇಲ್ಲ ಉಚಿತವಾಗಿ ಭಾಗವಹಿಸಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments