ನಮಸ್ಕಾರ ಸ್ನೇಹಿತರೆ, ಅತಿ ಸುದ್ದಿಯಲ್ಲಿದ್ದ ಕಾಂಗ್ರೆಸ್ ಸರ್ಕಾರದ ಯೋಜನೆಯಲ್ಲಿ ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆ ಯಾಗಿದೆ. ಮಹಿಳೆಯರು ಈ ಯೋಜನೆಯ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಆದರೆ ಕೆಲವರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದವರಲ್ಲಿ ಹಣ ಬಿಡುಗಡೆಯಾಗಿಲ್ಲ. ಅದೇ ರೀತಿ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿಯೂ ಸಹ ಅದರ ಫಲಾನುಭವಿಗಳಿಗೆ ಹಣ ಜಮಾ ಆಗಿರುವುದಿಲ್ಲ. ಹಾಗಾಗಿ ಈ ಹಣ ಏಕೆ ಜಮಾ ಆಗಿಲ್ಲ ಎನ್ನುವುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗುತ್ತದೆ.
ಮನೆಯ ಯಜಮಾನಿ ಮಹಿಳೆ ಆಗಿರಬೇಕು :
ಗೃಹಲಕ್ಷ್ಮಿ ಯೋಜನೆಯ ಹಣವು ಅರ್ಜಿ ಸಲ್ಲಿಕೆ ಮಾಡಿದವರಿಗೆ ಮಾತ್ರ ದೊರೆಯುತ್ತಿದ್ದು ಅದರಲ್ಲಿಯೂ ಸಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರು ಸಹ ಕೆಲವೊಂದಿಷ್ಟು ಜನರಿಗೆ ಹಣ ಜಮಾ ಆಗಿರುವುದಿಲ್ಲ. ಅರ್ಜಿಯನ್ನು ಸಲ್ಲಿಸಿದರು ಸಹ ಹಣ ಜಮಾ ಆಗಿರದೆ ಇರುವುದಕ್ಕೆ ಕಾರಣ ರೇಷನ್ ಕಾರ್ಡ್ ನಲ್ಲಿ ಮನೆಯ ಯಜಮಾನನ ಹೆಸರು ಮೊದಲಿಗೆ ದಾಖಲೆಯಾಗಿದ್ದರೆ ಯೋಜನೆಯ ಹಣ ದೊರೆಯುವುದಿಲ್ಲ ಅದೇ ರೀತಿ ಈ ನಿಯಮವು ಸಹ ಅನ್ನಭಾಗ್ಯ ಯೋಜನೆಗೂ ಸಹ ಅನ್ವಯವಾಗಿದ್ದು ಅರ್ಜಿ ಸಲ್ಲಿಕೆ ಮಾಡುವಾಗ ಈ ವಿಚಾರ ಗಮನಿಸಬಹುದಾಗಿದೆ.
ತಿದ್ದುಪಡಿ ಅವಕಾಶ :
ರೇಷನ್ ಕಾರ್ಡ್ ತಿದ್ದುಪಡಿಗೆ ಈಗ ರಾಜ್ಯ ಸರ್ಕಾರವು ಅವಕಾಶ ನೀಡಿದ್ದು ಇದರಲ್ಲಿ ಅವರ ಹೆಸರು ಬದಲಾವಣೆ ಹಾಗೂ ಮನೆಯ ಜಮಾನಿಯ ಹೆಸರನ್ನು ಸೇರ್ಪಡೆ ಮಾಡುವುದು ಹಾಗೆ ಕೆಲವೊಂದು ವಿವರಗಳನ್ನು ಬದಲಾವಣೆ ಮಾಡಲು ರೇಷನ್ ಕಾರ್ಡ್ ನಲ್ಲಿ ಅವಕಾಶ ನೀಡಲಾಗಿದೆ.
ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗಿದೆಯೇ :
ಅನ್ನಭಾಗ್ಯ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ 10 ಕೆಜಿ ಅಕ್ಕಿ ನೀಡುವ ಯೋಜನೆಗೆ ಈಗ ಬದಲಾಗಿ 5 ಕೆಜಿ ಅಕ್ಕಿ ಹಾಗೂ 5 ಕೆಜಿ ಅಕ್ಕಿಗೆ ಪ್ರತಿ ಕೆಜಿಯಂತೆ 34 ರೂಪಾಯಿಗಳನ್ನು ಅಂದರೆ ಒಟ್ಟು 170 ರೂಪಾಯಿಗಳನ್ನು ನೇರವಾಗಿ ರೇಷನ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಹಾಕಲಾಗುತ್ತಿತ್ತು. ಹಾಗಾಗಿ ಈ ತಿಂಗಳ ಹಣ ಜಮಾ ಆಗಿದೆಯೇ ಇಲ್ಲವೇ ಎಂಬುದನ್ನು ಮೊಬೈಲ್ ಮೂಲಕವೇ ರೇಷನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡಬಹುದಾಗಿದೆ.
ಇದನ್ನು ಓದಿ : ಈ ಹುಡುಗನಿಗೆ ಪುಸ್ತಕಗಳ ಗುಂಪಲ್ಲಿ ಅಡಗಿರುವ ಛತ್ರಿಯನ್ನು ಹುಡುಕಿಕೊಡುವಿರಾ?
ಈಕೆ ವೈಸಿ ಮಾಡಿಸಬೇಕು :
ಈಕೆ ವೈಸಿ ಯನ್ನು ಆಧಾರ್ ಕಾರ್ಡಿಗೆ ರೇಷನ್ ಕಾರ್ಡ್ ಲಿಂಕ್ ಮಾಡಿಸುವುದು ಕೂಡ ಕಡ್ಡಾಯವಾಗಿದ್ದು ಈ ಕೆಲಸವನ್ನು ಈ ಕೂಡಲೇ ಮಾಡಬೇಕು ಇಲ್ಲದಿದ್ದರೆ ಗೃಹಲಕ್ಷ್ಮಿ ಯೋಜನೆಯ ಹಣ ಹಾಗೂ ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುವುದಿಲ್ಲ.
ಹೀಗೆ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣವು ಏಕೆ ಜಮಾ ಆಗಿರುವುದಿಲ್ಲ ಎನ್ನುವುದಕ್ಕೆ ಈ ಮೇಲಿನ ಅಂಶಗಳು ತಿಳಿದು ಬರುತ್ತವೆ. ಹಾಗಾಗಿ ಈ ಅಂಶಗಳಿಗೆ ಸಂಬಂಧಿಸಿದಂತೆ ನೀವು ಈ ಕೂಡಲೇ ಸರಿಪಡಿಸಿಕೊಳ್ಳಿ. ಹೀಗೆ ಈ ಎಲ್ಲ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಸಿಮ್ ಕಾರ್ಡ್ ಬ್ರೇಕಿಂಗ್ ನ್ಯೂಸ್: ಈ ನಿಯಮ ಮೀರಿದ್ರೆ 10 ಲಕ್ಷ ದಂಡ ಕಟ್ಟಿಟ್ಟ ಬುತ್ತಿ..!
ಈ ದೇವಸ್ಥಾನದಲ್ಲಿ ಇಲಿಗಳಿಗೆ ಮೊದಲ ನೈವೇದ್ಯ… ಅವು ತಿಂದು ಉಳಿದದ್ದು ಭಕ್ತರಿಗೆ ಪ್ರಸಾದ