ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ವರುಣ ರಾಜ್ಯದ್ಯಂತ ಆಗಮಿಸುವ ಬಗ್ಗೆ. ಕರುನಾಡಿನ ಜನತೆಗೆ ಅಂತು ಬರದಿಂದ ಮುಕ್ತಿ ಸಿಗುವ ಸಮಯ ಬಂದಿದೆ ಎಂದು ಹೇಳಬಹುದಾಗಿದೆ. ರಾಜ್ಯದ್ಯಂತ ಇಂದಿನಿಂದ ಇನ್ನೂ ಐದು ದಿನಗಳ ಕಾಲ ಭಾರಿ ಮಳೆ ಯಾಗಲಿದೆ ಎಂದು ಹವಾಮಾನ ಇಲಾಖೆಯ ಮಾಹಿತಿಯನ್ನು ರಾಜ್ಯದ ಜನತೆಗೆ ತಿಳಿಸಿದೆ. ಹಾಗಾದರೆ ಅತಿ ಹೆಚ್ಚು ಮಳೆ ಯಾವ ಯಾವ ಜಿಲ್ಲೆಗಳಲ್ಲಿ ಆಗಲಿದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ಸಂಪೂರ್ಣ ವಾಗಿ ತಿಳಿಸಲಾಗುತ್ತದೆ.
ಒಣ ಹವೆ :
ಒಣ ಹಭೆಯು ರಾಜ್ಯದ್ಯಂತ ಆಗಸ್ಟ್ ನಲ್ಲಿ ಕಂಡುಬಂದಿದ್ದು ಗುರುವಾರ ಸಂಜೆ ಬಹುತೇಕ ಭಾಗಗಳಲ್ಲಿ ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿದಿದೆ ಎಂದು ಹೇಳಬಹುದಾಗಿದೆ. ಬೆಂಗಳೂರು ನಗರ ವೀಕ್ಷಣಾಲಯವು ಭಾರತೀಯ ಹವಾಮಾನ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಶುಕ್ರವಾರ ಬೆಳಗ್ಗೆ 8.30 ರವರೆಗೆ 88.9 ಮಿಲಿ ಮೀಟರ್ ಮಳೆಯನ್ನು ದಾಖಲಿಸಿದೆ ಎಂದು ಹೇಳಬಹುದಾಗಿದೆ. ಐ ಎಂ ಡಿ ಡೇಟಾ : ಕುತೂಹಲಕಾರಿಯಾಗಿ ಇದೆ ಆಗಸ್ಟ್ ನಲ್ಲಿ imd ಡೇಟಾ ಪ್ರಕಾರ ಕೆಲವು ನಗರಗಳಲ್ಲಿ ಕೇವಲ 12.6 ಮಿಲಿಮೀಟರ್ ಮಳೆಯನ್ನು ಕಂಡಿದೆ ಎಂದು ಹೇಳಬಹುದಾಗಿದೆ. ನಿನ್ನೆ ಬೆಂಗಳೂರು ನಗರದಲ್ಲಿ ಸೆಪ್ಟೆಂಬರ್ ನ ಸಂಪೂರ್ಣ ತಿಂಗಳ ಸರಾಸರಿ ಮಳೆಯ ಆಧಾರದ ಮೇಲೆ 42.6 ಪ್ರತಿಶತದಷ್ಟು ಮಳೆಯು ಆಗಿದೆ ಎಂದು ಸ್ವತಂತ್ರ ಹವಾಮಾನ ಬ್ಲಾಗರ್ ಸಾಮಾಜಿಕ ಮಾಧ್ಯಮ ಫ್ಲಾಟ್ ಫಾರ್ಮ್ ಎಕ್ಸ್ ನಲ್ಲಿ ಹಿಂದೆ ಟ್ವಿಟರ್ ನಲ್ಲಿ ಗಮನಿಸಲಾಗಿದೆ. ಇನ್ನೆರಡು ವೀಕ್ಷಣಾಲಯಗಳಾದ ಬೆಂಗಳೂರು ಎಚ್ ಎ ಎಲ್ ವಿಮಾನ ನಿಲ್ದಾಣ ಮತ್ತು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ರಮವಾಗಿ ಮಳೆಯೂ 68.3 ಮಿಲಿ ಮೀಟರ್ ಮತ್ತು 46.4 ಮಿಲಿಮೀಟರ್ ರಷ್ಟು ದಾಖಲಾಗಿದೆ ಎಂದು ಹೇಳಲಾಗಿದೆ.
ಕರ್ನಾಟಕದ ಕೆಲವು ಭಾಗಗಳಲ್ಲಿ ಮಳೆ :
ಐ ಎಂ ಡಿಯ ತಾಜಾ ಮುನ್ಸೂಚನೆಯ ಪ್ರಕಾರ ಬೆಂಗಳೂರು ನಗರದಲ್ಲಿ ಇನ್ನಷ್ಟು ಮಳೆಯಾಗುವ ಮುನ್ಸೂಚನೆಯನ್ನು ಶುಕ್ರವಾರ ತಿಳಿಸಲಾಗಿದೆ. ಅದರಂತೆ ಕರ್ನಾಟಕದ ಕೆಲವು ಭಾಗಗಳಲ್ಲಿ ಸೆಪ್ಟೆಂಬರ್ 8ರವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯು ಸೂಚನೆ ನೀಡಿದೆ. ಸೆಪ್ಟೆಂಬರ್ 5 ಮತ್ತು 6 ರಂದು ಕರಾವಳಿ ಕರ್ನಾಟಕ ದಕ್ಷಿಣ ಕನ್ನಡ ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ವ್ಯಾಪಕ ಹಗುರದಿಂದ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ ಎಂದು ಜನತೆಗೆ ಮಾಹಿತಿಯನ್ನು ನೀಡಿದೆ. ಅದರಂತೆ ಬೆಂಗಳೂರಿಗೆ ಸಂಬಂಧಿಸಿದಂತೆ ಭಾನುವಾರ ಬೆಳಗಿನ ಜಾವದ ತನಕ ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸೂಚನೆ ಇದೆ ಎಂದು ಮಾಹಿತಿ ನೀಡಿದೆ.
ಹವಾಮಾನ ಇಲಾಖೆಯ ಪ್ರಕಾರ ಸಾಮಾನ್ಯವಾಗಿ ಮೋಡಕವಿದ ವಾತಾವರಣ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಹಾಗೂ ಕೆಲವೊಮ್ಮೆ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡಿನಲ್ಲಿ ಸೆಪ್ಟೆಂಬರ್ ಒಂದು ಮತ್ತು ಎರಡರಂದು ಹಾಗೂ ಉತ್ತರ ಒಳನಾಡಿನಲ್ಲಿ ಸೆಪ್ಟೆಂಬರ್ 3 ಮತ್ತು 4 ರಂದು ಭಾರಿ ಮಳೆ ಆಗುವ ಬಗ್ಗೆ ಎಚ್ಚರಿಕೆಯನ್ನು ಹವಾಮಾನ ಇಲಾಖೆ ಸೂಚಿಸಿದೆ.
ಒಟ್ಟಾರೆಯಾಗಿ ಮಳೆಯೋ ಕರ್ನಾಟಕ ರಾಜ್ಯದ್ಯಂತ ಸುರಿಯುತ್ತಿದ್ದು ರೈತರು ಸ್ವಲ್ಪ ಸಮಯದ ಕಾಲ ನಿಟ್ಟಿಸಿರು ಬಿಡುವಂತಾಗಿದೆ. ಮಳೆಯನ್ನೇ ನಂಬಿ ಬದುಕುತ್ತಿದ್ದ ರೈತರಿಗೆ ಇದು ಸಂತೋಷದ ಸುದ್ದಿ ಎಂದು ಹೇಳಿದರು ತಪ್ಪಾಗಲಾರದು. ಹೀಗೆ ಈ ಮಾಹಿತಿಯ ಬಗ್ಗೆ ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡಿ ಧನ್ಯವಾದಗಳು