ನಮಸ್ಕಾರ ಸ್ನೇಹಿತರೇ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ 5 ಗ್ಯಾರಂಟಿ ಯೋಜನೆಗಳನ್ನು ತನ್ನ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಅದರಂತೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷವು ನುಡಿದಂತೆ ನಡೆಯುವ ಮಾತಿನಂತೆ 5 ಗ್ಯಾರಂಟಿ ಯೋಜನೆಗಳಲ್ಲಿ ಈಗಾಗಲೇ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ಅದರಲ್ಲಿ ಈಗ ನಿಮಗೆ ತಿಳಿಸುತ್ತಿರುವ ಮುಖ್ಯ ಗ್ಯಾರೆಂಟಿ ಯೋಜನೆ ಎಂದರೆ ಅದು ಶಕ್ತಿ ಯೋಜನೆಯ ಬಗ್ಗೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವಾಗ ರಾಜ್ಯ ಸರ್ಕಾರವು ಬಹುಶಹ ಸ್ವಲ್ಪ ಆತುರದ ನಿರ್ಧಾರವನ್ನು ತೆಗೆದುಕೊಂಡಿದೆಯಾ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿ ಬರುತ್ತಿದ್ದು ಇದಕ್ಕೆ ಮುಖ್ಯ ಕಾರಣವಾಗಿ ಶಕ್ತಿ ಯೋಜನೆ ಎಂದು ಹೇಳಬಹುದಾಗಿದೆ. ಶಕ್ತಿ ಯೋಜನೆಯ ಅಡಿಯಲ್ಲಿ ರಾಜ್ಯ ಸರ್ಕಾರವು ಮಹಿಳೆಯರಿಗೆ ಉಚಿತವಾಗಿ ಬಸ್ಸಿನಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಿ ಕೊಟ್ಟಿರುವುದರಿಂದ ಮಹಿಳೆಯರಂತೂ ಬಸ್ ನಲ್ಲಿ ಪ್ರಯಾಣ ಮಾಡುವುದರಿಂದ ಹೆಚ್ಚು ಖುಷಿಯಾಗಿದ್ದಾರೆ. ಆದರೆ ಈಗ ಬಸ್ಸಿನ ಸಿಬ್ಬಂದಿಗಳು ಸಂಬಳವೇ ಸಿಗದೇ ಪರದಾಡುತ್ತಿರುವ ಪರಿಸ್ಥಿತಿಯನ್ನು ನೋಡಬಹುದಾಗಿದೆ. ಹಾಗಾದರೆ ಈ ಲೇಖನದಲ್ಲಿ ಏನು ನಿಮಗೆ ತಿಳಿಸಲಾಗುತ್ತಿದೆ ಎಂಬುದರ ಬಗ್ಗೆ ಈ ಲೇಖನವನ್ನು ಪೂರ್ತಿ ಓದಿ.
ಸರ್ಕಾರದಿಂದ ಸಾರಿಗೆ ಸಂಸ್ಥೆಗೆ ಹಣ ಜಮವಾಗಿಲ್ಲ :
ಕಲ್ಯಾಣ ಕರ್ನಾಟಕ ಸಾರಿಗೆ ಎಲ್ಲಿ ಕೆಲಸ ಮಾಡುತ್ತಿರುವಂತಹ ಸಿಬ್ಬಂದಿಗಳಿಗೆ ಸರಿಯಾದ ಸಮಯಕ್ಕೆ ವೇದನೆ ಸಿಗದೆ ಪರದಾಡುತ್ತಿದ್ದಾರೆ. ಈ ತಿಂಗಳ 10ನೇ ತಾರೀಕು ಕಳೆದರೂ ಸಹ ಕಳೆದ ತಿಂಗಳು ಆಗಬೇಕಿದ್ದ ಸಂಬಳ ಸಿಕ್ಕಿಲ್ಲ. ಇದರಿಂದಾಗಿ ಸಿಬ್ಬಂದಿಯ ಕುಟುಂಬದಲ್ಲಿ ಸಾಕಷ್ಟು ತೊಂದರೆಗಳಾಗಿ ಅವರು ಪರದಾಡುವಂತೆ ಆಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ಸಾರಿಗೆ ಸಿಬ್ಬಂದಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ತಿಂಗಳ ಮೊತ್ತ 77 ಕೋಟಿ ರೂಪಾಯಿಗಳು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಇರುವಂತಹ ಸಿಬ್ಬಂದಿಗಳಿಗೆ ಪಾವತಿಸಬೇಕಾದ ಹಣವಾಗಿದೆ. ಕೆಎಸ್ಆರ್ಟಿಸಿಯಲ್ಲಿ ಮಹಿಳೆಯರ ಓಡಾಟ ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಹೆಚ್ಚಾದ ಕಾರಣ ಕೆಎಸ್ಆರ್ಟಿಸಿಯಲ್ಲಿ ಹೆಚ್ಚಿನ ಕಲೆಕ್ಷನ್ ಆಗಿರುವುದಿಲ್ಲ. ಶಕ್ತಿ ಯೋಜನೆ ಜೂನ್ 11ರಿಂದ ಜಾರಿಗೆ ಬಂದಿದ್ದು ಅಲ್ಲಿಂದ ಇಲ್ಲಿಯವರೆಗೆ ಸುಮಾರು ಅಂದರೆ ಒಂದು ತಿಂಗಳ ಅವಧಿಯಲ್ಲಿ 47.80 ಕೋಟಿ ರೂಪಾಯಿಗಳನ್ನು ಹೇಳಲಾಗಿದೆ. ಆದರೆ 37.33 ಕೋಟಿ ರೂಪಾಯಿಗಳನ್ನು ಆರ್ಥಿಕ ಇಲಾಖೆಯು ಜಮೆ ಮಾಡಿದೆ. ಉಳಿದ ಹಣ ಪಾವತಿ ಆಗದ ಕಾರಣ ಸಿಬ್ಬಂದಿಗಳ ವೇತನ 77 ಕೋಟಿ ರೂಪಾಯಿಗಳ ಅಷ್ಟಿದೆ. ಅದಕ್ಕೆ ಹೋಲಿಕೆ ಮಾಡಿದರೆ ಸರ್ಕಾರವು ಸಾರಿಗೆ ಇಲಾಖೆಗೆ ಶೇಕಡ 50ರಷ್ಟು ಹಣವನ್ನು ಪಾವತಿ ಮಾಡಬೇಕಿತ್ತು ಎಂದು ಕೆಲವೊಂದು ಮೂಲಗಳು ತಿಳಿಸುತ್ತಿವೆ.
ಎರಡು ತಿಂಗಳ ಹಣ ಆಗಿರುವುದಿಲ್ಲ :
ಸಂಸ್ಥೆಯ ಎಂಡಿ ಗಮನಕ್ಕೆ ಈಗಾಗಲೇ ಸಾರಿಗೆ ಸಂಸ್ಥೆಯ ಸಿಬ್ಬಂದಿಯ ಸಂಘಟನೆಯವರು ತಮಗೆ ಸಂಬಳ ಆಗಲಿಲ್ಲ ಎಂದು ಮಾಹಿತಿಯನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ತಾರೀಕಿನಂದು ಪ್ರತಿ ತಿಂಗಳು ಸಂಬಳ ಆಗುತ್ತಿತ್ತು ಆದರೆ ಈಗ ಸಿಬ್ಬಂದಿಯ ಸ್ಯಾಲರಿ ಎರಡು ತಿಂಗಳಿನಿಂದ ಬಹಳ ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಸುಮಾರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಡಿಯಲ್ಲಿ 22 ಸಿಬ್ಬಂದಿಗಳು ಕಲಬುರ್ಗಿ, ಯಾದಗಿರಿ, ಕೊಪ್ಪಳ ,ಬಳ್ಳಾರಿ, ವಿಜಯಪುರ, ಬೀದರ್, ರಾಯಚೂರು, ವಿಜಯನಗರ ಮೊದಲ ಎಂಟು ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಒಟ್ಟು ಕೊಡಬೇಕಾಗಿರುವ ಸಂಬಳದಲ್ಲಿ 77 ಕೊಟ್ಟೂರು ರೂಪಾಯಿಗಳು ಸರ್ಕಾರದಿಂದ ಸಂಪೂರ್ಣವಾಗಿ ನೀಡಿರುವುದಿಲ್ಲ. 5 ಕೋಟಿ ರೂಪಾಯಿಗಳವರೆಗೆ ಕಲ್ಯಾಣ ಕರ್ನಾಟಕ ಸಾರಿಗೆ ಇಲಾಖೆಯಿಂದ ಪ್ರತಿದಿನ ಸಂಸ್ಥೆಗೆ ಟಿಕೆಟ್ ನಿಂದ ಹಣ ಸಂಗ್ರಹವಾಗಿಯುತ್ತಿತ್ತು.
ಈಗ ಕೇವಲ ಪುರುಷರಿಗೆ ಮಾತ್ರ ಟಿಕೆಟ್ ಅನ್ನು ನೀಡುವುದರಿಂದ ಎರಡು ಕೋಟೆ 30 ಲಕ್ಷ ಗಳಷ್ಟು ಮಾತ್ರ ಹಣ ಸಂಗ್ರಹವಾಗುತ್ತಿದೆ. ಈ ಹಣವು ಬಸ್ ಗಳಿಗೆ ಡೀಸೆಲ್ ಅನ್ನು ತುಂಬಿಸಲು ಸರಿಯಾಗುತ್ತದೆಯೇ ಹೊರತು ಸಿಬ್ಬಂದಿಗಳಿಗೆ ಸಂಬಳ ನೀಡಲು ಆಗುವುದಿಲ್ಲ ಎಂದು ಹೇಳಲಾಗುತ್ತಿದೆ. ಸರ್ಕಾರವು ಕೆಎಸ್ಆರ್ಟಿಸಿಗೆ ಉಚಿತ ಟಿಕೆಟ್ ನಿಂದಾಗಿ 126 ಕೋಟಿಗಳಷ್ಟು ಹಣವನ್ನು ಕೊಡಬೇಕು ಆದರೆ ಈ ಹಣವನ್ನು ಕೊಡುವಲ್ಲಿ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಗೆ ವಿಳಂಬವಾಗುತ್ತಿರುವ ಕಾರಣ ಸಂಬಳವಿಲ್ಲದೆ ಕಂಗಾಲಾಗಿದ್ದಾರೆ. ಇದರಿಂದ ಅವರು ತಮ್ಮ ದಿನನಿತ್ಯದ ಖರ್ಚನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ.
ಹೀಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯ ಅಡಿಯಲ್ಲಿ ಕೆಲವೊಂದಿಷ್ಟು ತೊಂದರೆಗಳು ಉಂಟಾಗುತ್ತಿದ್ದು ಅದರಲ್ಲಿ ಈಗ ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವಂತಹ ಸಿಬ್ಬಂದಿಗಳಿಗೆ ಈ ತೊಂದರೆ ಸಾಕಷ್ಟಾಗುತ್ತಿದೆ ಎಂದು ಹೇಳಲಾಗುತ್ತಿದೆ. ಶಕ್ತಿ ಯೋಜನೆಯ ಅಡಿಯಲ್ಲಿ ಸಂಬಳ ನೀಡಲಾಗುತ್ತಿಲ್ಲ ಎಂದು ಕೆಎಸ್ಆರ್ಟಿಸಿ ಸಿಬ್ಬಂದಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದು ಸರ್ಕಾರವು ಅವರ ಬೇಡಿಕೆಯನ್ನು ತಕ್ಷಣವೇ ಈಡೇರಿಸುವುದರ ಮೂಲಕ ಅವರಿಗೆ ಸಂಬಳವನ್ನು ನೀಡಿ ತಮ್ಮ ಅಗತ್ಯತೆಗಳನ್ನು ಈಡೇರಿಸಿಕೊಳ್ಳಲು ಹಾಗೂ ಇತರ ಖರ್ಚು ಹಾಗೂ ಮನೆಯ ಖರ್ಚುಗಳನ್ನು ನಿಭಾಯಿಸಲು ಸಹಾಯವಾಗುವಂತೆ ಮಾಡಿ ಎಂದು ಹೇಳಬಹುದಾಗಿದೆ. ಹೀಗೆ ಈ ಮಾಹಿತಿಯ ಬಗ್ಗೆ ನಿಮ್ಮೆಲ್ಲ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಶೇರ್ ಮಾಡುವುದರ ಮೂಲಕ ಕೆಎಸ್ಆರ್ಟಿಸಿ ಸಿಬ್ಬಂದಿಯ ತೊಂದರೆಗಳನ್ನು ನೀವು ಸಹ ತಿಳಿದುಕೊಳ್ಳಿ ಧನ್ಯವಾದಗಳು.