ನಮಸ್ಕಾರ ಸ್ನೇಹಿತರೇ, ಕರ್ನಾಟಕದ ಹಲವು ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರತೀಯ ಹವಾಮಾನ ಇಲಾಖೆಯು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ. ಹವಾಮಾನ ಇಲಾಖೆಯ ಅಧಿಕಾರಿಗಳು ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಹಾಗಾದರೆ ಗುಡುಗು ಸಹಿತ ಮಳೆ ಯಾವ ಪ್ರದೇಶದಲ್ಲಿ ಆಗುತ್ತಿದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.
ಸಾಧಾರಣ ಮಳೆ :
ಹವಾಮಾನ ಇಲಾಖೆಯ ಮಲೆನಾಡಿನ ಹಲವು ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು ಎಂಬುದರ ಬಗ್ಗೆ ಮುನ್ನೆಚ್ಚರಿಕೆಯನ್ನು ಅಲ್ಲಿನ ಜನತೆಗೆ ತಿಳಿಸಿದೆ. ವಣ ಹವೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮುಂದುವರೆಯಲಿದ್ದು, ಸಾಧಾರಣ ಮಳೆ, ದಕ್ಷಿಣ ಒಳನಾಡಿನ ಕೆಲ ಪ್ರದೇಶಗಳಲ್ಲಿ ಆಗಲಿದೆ ಎಂಬುದರ ಬಗ್ಗೆ ತಿಳಿಸಿದೆ.
ಗುಡುಗು ಸಹಿತ ಮಳೆ :
ಭಾರತೀಯ ಹವಾಮಾನ ಇಲಾಖೆಯ ಈ ಮೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಆ ಮೂರು ಜಿಲ್ಲೆಗಳೆಂದರೆ ಮಂಡ್ಯ, ರಾಮನಗರ ಮತ್ತು ತುಮಕೂರು ಜಿಲ್ಲೆಗಳು.
ಸೆಪ್ಟೆಂಬರ್ 12ರಂದು ಸುರಿದ ಮಳೆ :
ಕರ್ನಾಟಕ ರಾಜ್ಯದ್ಯಂತ ಸೆಪ್ಟೆಂಬರ್ 12ರಂದು ಯಾವ ಪ್ರದೇಶದಲ್ಲಿ ಎಷ್ಟು ಮಳೆಯಾಗಿದೆ ಎಂಬುದರ ಬಗ್ಗೆ ಇದೀಗ ನೀವು ನೋಡಬಹುದು. 76.5 ಮಿ.ಮೀ ದಕ್ಷಿಣ ಕನ್ನಡದಲ್ಲಿ ,71.5 ಮಿಲಿಮೀಟರ್ ಉಡುಪಿಯಲ್ಲಿ ,58 ಮಿಲಿ ಮೀಟರ್ ಕಲಬುರ್ಗಿಯಲ್ಲಿ, 56 ಮಿಲಿಮೀಟರ್ ಶಿವಮೊಗ್ಗದಲ್ಲಿ ,40.5ಮಿಲಿ ಮೀಟರ್ ಬೆಂಗಳೂರು ನಗರದಲ್ಲಿ, 39 ಮಿಲಿ ಮೀಟರ್ ಉತ್ತರ ಕನ್ನಡ ದಲ್ಲಿ, ಯಾದಗಿರಿಯಲ್ಲಿ 37 ಮೀಟರ್ ,ಚಿಕ್ಕಮಗಳೂರಿನಲ್ಲಿ 39 ಮಿಲಿಮೀಟರ್, ಕೊಡಗಿನಲ್ಲಿ 31 ಮಿಲಿ ಮೀಟರ್, ರಾಯಚೂರಿನಲ್ಲಿ 37 ಮಿಲಿ ಮೀಟರ್ ,ರಾಮನಗರದಲ್ಲಿ 30 ಮಿಲಿಮೀಟರ್ ,ವಿಜಯಪುರದಲ್ಲಿ 29 ಕಿಲೋಮೀಟರ್, ಹಾಸನದಲ್ಲಿ 24 ಮಿಲಿ ಮೀಟರ್ ಸೆಪ್ಟೆಂಬರ್ 12ರಂದು ಮಳೆಯಾಗಿದೆ.
ಅಧಿಕ ಮಳೆಯಾದ ಸ್ಥಳಗಳು :
ಸೋಮೇಶ್ವರ ದಕ್ಷಿಣ ಕನ್ನಡದಲ್ಲಿ 76.5 ಮಿಲಿ ಮೀಟರ್, 71.5 ಮಿಲಿಮೀಟರ್ ಮಡಮಕ್ಕಿ ಮತ್ತು ಉಡುಪಿಯಲ್ಲಿ ,60 ಮಿಲಿ ಮೀಟರ್, ನಾಡ್ ಪಾಲು ಮತ್ತು ಉಡುಪಿಯಲ್ಲಿ ,58 ಮಿಲಿ ಮೀಟರ್ ರಾಜಪುರ ಮತ್ತು ಕಲಬುರ್ಗಿಯಲ್ಲಿ ,56 ಮಿಲಿಮೀಟರ್ ಶಿವಮೊಗ್ಗ ಮತ್ತು ಸುಳಗೋಡದಲ್ಲಿ ಅಧಿಕ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದೇಶದ ವಿವಿಧ ಭಾಗಗಳಲ್ಲಿ ಮಳೆ :
ಕರ್ನಾಟಕ ರಾಜ್ಯವಲ್ಲದೆ ದೇಶದ ವಿವಿಧ ಭಾಗಗಳಲ್ಲಿಯೂ ಮಳೆಯಾಗಿದ್ದು ಹವಾಮಾನ ಇಲಾಖೆಯು ಯಾವ ಭಾಗಗಳಲ್ಲಿ ಎಷ್ಟು ಮಳೆಯಾಗಿದೆ ಎಂಬುದರ ಬಗ್ಗೆ ಮಾಹಿತಿ ನೀಡಿದೆ.
ಹವಾಮಾನ ಇಲಾಖೆಯ ದೇಶದ ಈ ಭಾಗಗಳಲ್ಲಿ ಹೆಚ್ಚು ಮಳೆ ಆಗುವ ಸಾಧ್ಯತೆ ಇದೆ ಎಂದು ಹೇಳಿದ್ದು ಅತಿ ಹೆಚ್ಚು ಮಳೆಗೂ ಒಡಿಶಾದಲ್ಲಿ ಆಗುತ್ತದೆ ಎಂಬುದರ ಬಗ್ಗೆ ಮುನ್ಸೂಚನೆಯನ್ನು ನೀಡಿದೆ.
ಅತಿಹೆಚ್ಚು ಮಳೆಯಾಗುವ ರಾಜ್ಯಗಳು :
ಹವಾಮಾನ ಇಲಾಖೆಯು ಚತ್ತೀಸ್ಗಢ ,ಪೂರ್ವ ಮಧ್ಯ ಪ್ರದೇಶ , ಉತ್ತರಾಖಾoಡ ,ವಿದರ್ಭ, ಗಂಗಾ ನದಿ ಪಶ್ಚಿಮ ಬಂಗಾಳ, ಮೇಘಾಲಯ ,ಅಸ್ಸಾಂ, ಜಾರ್ಖಂಡ್, ಮಣಿಪುರ ನಗರ ,ಕರಾವಳಿ ಆಂಧ್ರಪ್ರದೇಶ ,ತ್ರಿಪುರ ಮತ್ತು ಯಾನಂ ನ ಪ್ರತ್ಯೇಕ ಸ್ಥಳಗಳಲ್ಲಿ ಹವಮಾನ ಇಲಾಖೆಯು ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಇದನ್ನು ಓದಿ : ಆಧಾರ್ ಕಾರ್ಡ್ ಎಚ್ಚರ..! ಈ ತಪ್ಪು ಮಾಡಿದ್ರೆ ನಿಮ್ಮ ಖಾತೆಯಲ್ಲಿ ಹಣ ಖಾಲಿ, ಇಲ್ಲಿದೆ ಡಿಟೇಲ್ಸ್
ಗುಡುಗು ಸಹಿತ ಮಳೆ :
ಹವಾಮಾನ ಇಲಾಖೆಯ ಅಧಿಕಾರಿಗಳು ಗುಡುಗು ಸಹಿತ ಮಳೆಯು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪ್ರತ್ಯೇಕ ಸ್ಥಳಗಳಲ್ಲಿ ಬಿರುಗಾಳಿಯ ಜೊತೆಗೆ ಆಗಲಿದೆ ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ.
ಒಟ್ಟಾರೆಯಾಗಿ ಕರ್ನಾಟಕ ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಲ್ಲಿಯೂ ಸಹ ಹೆಚ್ಚಿನ ಮಳೆಯಾಗುತ್ತಿದ್ದು ಮುಂಬರುವ ದಿನಗಳಲ್ಲಿಯೂ ಗುಡುಗು ಸಹಿತ ಮಳೆಯು ಕೆಲವೊಂದಿಷ್ಟು ಪ್ರದೇಶಗಳಲ್ಲಿ ಆಗುತ್ತದೆ ಎಂದು ಹೇಳುವುದರ ಮೂಲಕ ಸಾಧಾರಣ ಮಳೆಯ ಬಗ್ಗೆಯೂ ಸಹ ಮಾಹಿತಿಯನ್ನು ನೀಡಿದ್ದಾರೆ.
ಹೀಗೆ ಭಾರತ ಮತ್ತು ಕರ್ನಾಟಕ ರಾಜ್ಯದಲ್ಲಿ ಯಾವ ಯಾವ ಭಾಗಗಳಲ್ಲಿ ಎಷ್ಟು ಮಳೆಯಾಗಲಿದೆ ಹಾಗೂ ಯಾವ ಭಾಗಗಳಲ್ಲಿ ಗುಡುಗು ಸಹಿತ ಮಳೆ ಆಗಲಿದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ನೀವು ನೋಡಬಹುದಾಗಿದ್ದು ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರಿಗೂ ಕಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಗಂಡಸರು ಬೇಗ ಸುಸ್ತಾಗ್ತಾರೆ ಆದರೆ ಹೆಂಗಸರು ಬೇಕು ಬೇಕು ಎನ್ನುತ್ತಾರೆ ಏನಿದು..?
ಬ್ಯಾಂಕ್ ಬ್ಯಾಲೆನ್ಸ್ Zero ಇದ್ರೂ ಪಾವತಿ ಮಾಡಬಹುದು: ಗೂಗಲ್ ಪೇ ಫೋನ್ ಪೇ ಬಳಕೆದಾರರಿಗೆ ಗುಡ್ ನ್ಯೂಸ್