ನಮಸ್ಕಾರ ಸ್ನೇಹಿತರೆ ಕನ್ನಡ ಚಿತ್ರರಂಗದಲ್ಲಿ ಚಂದನವನದ ಚಿನ್ನಾರಿ ಮುತ್ತ ಎಂದ ಕೂಡಲೇ ಎಲ್ಲರಿಗೂ ನೆನಪಾಗುವ ವ್ಯಕ್ತಿಯಿಂದಲೇ ಅದು ಕೇವಲ ನಟ ವಿಜಯ್ ರಾಘವೇಂದ್ರ ಅವರು. ಅನಿಕ ಸಿನಿಮಾಗಳನ್ನು ಕನ್ನಡದಲ್ಲಿ ಮಾಡಿ ತೆರೆ ಮೇಲೆ ಮಾತ್ರ ಹೀರೋ ಆಗಿರದೆ ನಿಜ ಜೀವನದಲ್ಲಿಯೂ ಸಹ ಅಂದರೆ ವೈಯಕ್ತಿಕ ಜೀವನದಲ್ಲಿಯೂ ಸಹ ಹೀರೊ ಆಗಿರುವ ವಿಜಯ್ ರಾಘವೇಂದ್ರ ಅವರಿಗೆ ಈಗ ಆಘಾತಕಾರಿಯಾದ ಸುದ್ದಿ ಬರಸಿಡಿಲಿನಂತೆ ಬಂದಿದೆ. ಇದರಿಂದ ವಿಜಯ ರಾಘವೇಂದ್ರ ಅವರ ಕುಟುಂಬ ಮಾತ್ರವಲ್ಲದೆ ಇಡೀ ರಾಜ್ಯವೇ ಆಕ್ರಂದನದಲ್ಲಿ ಮುಳುಗಿದೆ. ಹಾಗಾದರೆ ಆಘಾತಕಾರಿ ಸುದ್ದಿ ಯಾವುದು ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.
ವಿಜಯ ರಾಘವೇಂದ್ರ ಅವರ ಮಡದಿ ಇನ್ನಿಲ್ಲ :
ಪ್ರೀತಿಸಿ ಮದುವೆಯಾದ ನಟ ವಿಜಯ ರಾಘವೇಂದ್ರ ಅವರ ವಿಚಾರ ಬಹುತೇಕ ಎಲ್ಲರಿಗೂ ಸಹ ತಿಳಿದಿದೆ. ಮೊದಲ ಬಾರಿ ಮಲ್ಲೇಶ್ವರಂ ಕಾಫಿ ಡೇ ನಲ್ಲಿ ಸ್ಪಂದನ ಅವರನ್ನು ನೋಡಿದಂತಹ ವಿಜಯ ರಾಘವೇಂದ್ರ ಅವರು ಪ್ರೀತಿ ಮಾಡಲು ಪ್ರಾರಂಭಿಸಿದರು. ಸ್ಪಂದನ ಅವರ ತಂದೆಯವರಾದ ನಿವೃತ್ತ ಪೊಲೀಸ ಅಧಿಕಾರಿ ಶಿವರಾಮ್ ಅವರ ಪುತ್ರಿಯಾದ ಇವರು 2017 ಆಗಸ್ಟ್ 26ರಂದು ನಟ ವಿಜಯ್ ರಾಘವೇಂದ್ರ ಅವರಿಬ್ಬರೂ ಸಹ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದು ಎಲ್ಲರಿಗೂ ತಿಳಿದಿದ್ದು ಇವರಿಬ್ಬರ ಜೋಡಿ ಕಂಡು ಎಲ್ಲರೂ ಸಹ ಮೇಡ್ ಫಾರ್ ಈಚ್ ಅದರ್ ಎಂದು ಹೇಳುತ್ತಿದ್ದರು. ಇದೇ ತಿಂಗಳು 16ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಇಬ್ಬರು ಸಹ ಆಚರಿಸಲು ಸಾಕಷ್ಟು ತಯಾರಿಗಳನ್ನು ಮಾಡಲಾಗುತ್ತಿತ್ತು. ಇವರಿಬ್ಬರಿಗೂ ಸಹ ಶೌರ್ಯ ಎಂಬ ಮಗ ಜನಿಸಿದ್ದು ಇವರ ಜೀವನವು ಖುಷಿಯಿಂದಲೇ ಸಾಗುತ್ತಿತ್ತು.
ಸ್ಪಂದನ ಅವರಿಗೆ ಏನಾಗಿತ್ತು :
ಸ್ಪಂದನ ಅವರು ಥೈಲ್ಯಾಂಡ್ ಪ್ರವಾಸದಲ್ಲಿದ್ದು ಅವರಿಗೆ ಹೃದಯಘಾತವಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬರುತ್ತಿದೆ. ಸ್ಪಂದನ ಅವರಿಗೆ ಲೋ ಬಿಪಿ ಹಾಗು ಹೃದಯಘಾತ ಎರಡು ಸಹ ಉಂಟಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಿ ಬರುತ್ತಿದ್ದು ಅವರ ಪಾರ್ಥಿವ ಶರೀರವನ್ನು ನಾಳೆ ಬೆಂಗಳೂರಿಗೆ ತರಲಾಗುತ್ತದೆ ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿಯೇ ವಿಧಿ ವಿಧಾನ ಕಾರ್ಯವೆಲ್ಲವೂ ನಡೆಯಲಿದೆ.
ದೊಡ್ಡ ಆಘಾತಕಾರಿ ಸುದ್ದಿ :
ರಾಜ್ಯದ್ಯಂತ ಈಗಾಗಲೇ ಪುನೀತ್ ರಾಜಕುಮಾರ್ ಅವರ ಹಠಾತ್ ನಿಧನದ ಸುದ್ದಿಯು ರಾಜ್ಯದ ಜನರಲ್ಲಿ ಕಂಬನಿ ಮಿಡಿಯುವಂತೆ ಮಾಡಿದ್ದು ಆದರೆ ಇದೀಗ ನಟ ವಿಜಯ ರಾಘವೇಂದ್ರ ಅವರ ಪತ್ನಿಯ ನಿಧನವು ಸಹ ರಾಜ್ಯದ ಜನರಲ್ಲಿ ಕಂಬನಿ ಮಿಡಿಯುವಂತೆ ಮಾಡಿದೆ. ಅಲ್ಲದೆ ಇದು ಕುಟುಂಬದಲ್ಲಿಯೂ ಸಹ ಅನ್ಯೋನ್ಯವಾಗಿದ್ದ ಅವರ ನಿಧನದ ಸುದ್ದಿ ಕೇಳಿ ಎಲ್ಲರೂ ಸಹ ಆಕ್ರಂದದಲ್ಲಿ ಇರುವುದನ್ನು ನೋಡಬಹುದಾಗಿದೆ.
ವಿವಾಹ ವಾರ್ಷಿಕೋತ್ಸವ :
ನಟ ವಿಜಯ ರಾಘವೇಂದ್ರ ಹಾಗೂ ಸ್ಪಂದನ ಅವರ ವಿವಾಹವು 2007ರ ಆಗಸ್ಟ್ 26ರಂದು ನಡೆದಿದ್ದು ಅವರ ವಿವಾಹ ವಾರ್ಷಿಕೋತ್ಸವಕ್ಕೆ ಇನ್ನು ಕೇವಲ 18 ದಿನಗಳು ಮಾತ್ರ ಬಾಕಿ ಉಳಿದಿದ್ದವು ಆದರೆ ಈಗ ಈ ದುರಂತ ನಡೆದಿರುವುದು ಒಂದು ರೀತಿಯಲ್ಲಿ ಯೋಚನೆವಾಗಿದೆ. ವಿಜಯ ರಾಘವೇಂದ್ರ ಅವರು ತಮ್ಮ ಪತ್ನಿಯ ಮೇಲೆ ಹೆಚ್ಚು ಪ್ರೀತಿಯನ್ನು ಹೊಂದಿದ್ದು ಅವರು ಅತೀವವಾಗಿ ತಮ್ಮ ಪತ್ನಿಯನ್ನು ಪ್ರೀತಿಸುತ್ತಿದ್ದರು. ಕೆಲವು ಕಾರ್ಯಕ್ರಮಗಳಲ್ಲಿಯೂ ಸಹ ತಮ್ಮ ಹೆಂಡತಿಯ ಬಗ್ಗೆ ತಮ್ಮ ಮಾತುಗಳನ್ನು ಆಡುತ್ತಿದ್ದರು. ಆದರೆ ಈಗ ಅವರ ಈ ಅಗಲಿಕೆಯು ಸಾಕಷ್ಟು ನೋವನ್ನು ಉಂಟುಮಾಡಲಿದೆ ಹಾಗೂ ಇದು ಜನರಿಗೂ ಸಹ ಆರಗಿಸಿಕೊಳ್ಳಲಾಗದ ದುಃಖವಾಗಿದೆ ಎಂದು ಹೇಳಬಹುದಾಗಿದೆ.
ಒಟ್ಟಾರೆಯಾಗಿ ಹುಟ್ಟು ಸಾವು ಈ ಎರಡು ಸಹ ನಮ್ಮ ಕೈಯಲ್ಲಿ ಇರುವುದಿಲ್ಲ ಯಾವ ಕಾರಣಕ್ಕೆ ನಾವು ಒಬ್ಬರಿಗೊಬ್ಬರು ಆಪ್ತರಾಗಿರುತ್ತೇವೆಯೋ ಹಾಗೆ ದೂರರಾಗಿರುತ್ತೆವೆಯೋ ಎಂಬುದು ತಿಳಿಯುವ ಹೊತ್ತಿಗಾಗಿದೆ ಇಂತಹ ಆಘಾತಕಾರಿ ಸುದ್ದಿಗಳು ಇಡೀ ಜೀವನವನ್ನೇ ನಾಶ ಮಾಡುವುದುಂಟು. ಈ ನೋವು ನಟ ವಿಜಯ ರಾಘವೇಂದ್ರ ಅವರಿಗೆ ತಡೆಯುವ ಶಕ್ತಿಯನ್ನು ಆ ದೇವರು ಅವರಿಗೆ ನೀಡಲಿ ಎಂಬುದು ನಮ್ಮ ಹಾರೈಕೆಯಾಗಿದೆ ಹೀಗೆ ನಟ ವಿಜಯ್ ರಾಘವೇಂದ್ರ ಅವರ ಪತ್ನಿಯ ನಿಧನದ ಸುದ್ದಿಯನ್ನು ಎಲ್ಲರಿಗೂ ಸಹ ಶೇರ್ ಮಾಡಿ ಅವರ ಆತ್ಮಕ್ಕೆ ಶಾಂತಿ ಸಿಗರಂತೆ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಗೃಹಲಕ್ಷ್ಮಿ ಯೋಜನೆ ಹಣ ಜೊತೆಗೆ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಸೌಲಭ್ಯ! ಈ ಕೂಡಲೇ ಇಲ್ಲಿಂದ ಅರ್ಜಿ ಸಲ್ಲಿಸಿ