ನಮಸ್ಕಾರ ಸ್ನೇಹಿತರೆ, ಆನ್ಲೈನ್ ನಲ್ಲಿ ತಮಗೆ ಬೇಕಾದಂತಹ ಪ್ರಾಡಕ್ಟ್ ಗಳನ್ನು ಪ್ರತಿಯೊಬ್ಬರೂ ಸಹ ಆರ್ಡರ್ ಮಾಡುತ್ತಾರೆ. ಗೂಗಲ್ ನಲ್ಲಿ ನಮಗೆ ಬೇಕಾಗಿರುವಂತಹ ಮಾಹಿತಿಗಳನ್ನು ಸರ್ಚ್ ಮಾಡುತ್ತೇವೆ ಆದರೆ ಬಳಕೆದಾರರು ಮಾಡುವಂತಹ ಈ ಕೆಲಸವನ್ನೇ ಬಂಡವಾಳವನ್ನಾಗಿ ಇಟ್ಟುಕೊಂಡು ಆನ್ಲೈನ್ ಕಳ್ಳರು ಹಣವನ್ನು ಲೂಟಿ ಮಾಡುವಂತಹ ಕೆಲಸವನ್ನು ಮಾಡುತ್ತಿರುತ್ತಾರೆ. ಹಾಗಾಗಿ ಸರ್ಚ್ ಮಾಡುವಾಗ ಬಹಳ ಜಾಗರೂಕತೆಯಿಂದ ಸರ್ಚ್ ಮಾಡಬೇಕು ಇಲ್ಲದಿದ್ದರೆ ದೊಡ್ಡ ಪ್ರಮಾಣದಲ್ಲಿ ಹಣ ಖಾತೆಯಿಂದ ಯಾವಾಗ ಕಳುವು ಆಗುತ್ತದೆ ಎಂಬುದನ್ನು ಊಹಿಸಿಕೊಳ್ಳಲು ನಾವು ಸಾಧ್ಯವಾಗುವುದಿಲ್ಲ. ಹಾಗಾದರೆ ನಿಮಗೆ ಇವತ್ತಿನ ಲೇಖನದಲ್ಲಿ ಒಬ್ಬ ವ್ಯಕ್ತಿಗೆ ವಂಚನೆ ಆಗಿರುವುದರ ಬಗ್ಗೆ ತಿಳಿಸಲಾಗುತ್ತಿದೆ.
63 ಸಾವಿರಕ್ಕೂ ಅಧಿಕಾರ ಕಳುವು :
ಒಬ್ಬ ವ್ಯಕ್ತಿ ಇತ್ತೀಚಿಗಷ್ಟೇ, ಗೂಗಲ್ ನಲ್ಲಿ ಸರ್ಚ್ ಮಾಡುತ್ತಿರುವಾಗಲೇ ಆತನ ಖಾತೆಯಿಂದ ನಿಮಿಷಗಳಲ್ಲಿ 63,000ಗಳಿಗಿಂತಲೂ ಹೆಚ್ಚಿನ ಹಣವು ಕಳುವಾಗಿರುವುದು ಕಂಡುಬಂದಿದೆ. ಹಾಗಾದರೆ ಈ ಘಟನೆ ಎಲ್ಲಿ ನಡೆದಿದ್ದು ಎಂದು ನೋಡುವುದಾದರೆ.
ಕರ್ನಾಟಕದಲ್ಲಿ ನಡೆದ ಘಟನೆ :
ಈ ಘಟನೆಯು ಕರ್ನಾಟಕದಲ್ಲಿ ನಡೆದಿದ್ದು ವ್ಯಕ್ತಿಯ ಪತ್ನಿಯ ಖಾತೆಯಿಂದ ಹಣವನ್ನು ಕದಿಯಲಾಗಿದೆ ಎಂಬುದಾಗಿ ಹೇಳಲಾಗುತ್ತಿದೆ. ಈ ವ್ಯಕ್ತಿಯ ಪತ್ನಿಯೂ ಒಂದು ಪ್ರಾಡಕ್ಟ್ ಅನ್ನು ಜುಲೈ 18ರಂದು ಆರ್ಡರ್ ಮಾಡಿದ್ದರು. ಆದರೆ ಆ ಪ್ರಾಡಕ್ಟ್ 26 ನೇ ತಾರೀಖಿನಂದು ಬಂದಾಗ ಅದರ ಕ್ವಾಲಿಟಿ ತುಂಬಾ ಕೆಟ್ಟದಾಗಿತ್ತು ಎಂದು ತಿಳಿದು ಬಂದಿದ್ದು ಈ ವಿಷಯವನ್ನು ತಿಳಿದುಕೊಳ್ಳಲು ಗೂಗಲ್ ನಲ್ಲಿ ಕಸ್ಟಮರ್ ಕೇರ್ ನಂಬರ್ ಫೋನ್ ಮಾಡಿದಾಗ ಆಕೆಯ ಗಂಡ ಆಗ ಸ್ಕ್ಯಾನ್ ನಡೆದಿದೆ. ಅಂದರೆ ಕಂಪನಿಯ ರೆಪ್ರೆಸೆಂಟೇಟಿವ್ ಎಂಬುದಾಗಿ ಹೇಳಿ ಪ್ರಾಡಕ್ಟ್ ಅನ್ನು ವಾಪಸ್ ಪಡೆದಿದ್ದು ಆದರೆ ಅದು ಕಂಪನಿಯ ನಂಬರ್ ಆಗಿರದೆ ಬದಲಾಗಿ ಫ್ರಾಡ್ ನಂಬರ್ ಆಗಿದ್ದು, ಬ್ಯಾಂಕ್ ಡೀಟೇಲ್ಸ್ ಅನ್ನು ಪ್ರಾಡಕ್ಟ್ ಅನ್ನು ವಾಪಸ್ ಮಾಡುವಂತಹ ಪ್ರಕ್ರಿಯೆಗೆ ಕೇಳಿದಾಗ ಇದನ್ನು ತಿಳಿಯದಂತ ಅವರು ವ್ಯಕ್ತಿಯು ತನ್ನ ಹೆಂಡತಿಯ ಬ್ಯಾಂಕ್ ಡೀಟೇಲ್ಸ್ ಹಾಗು ಎಟಿಎಂ ಕಾರ್ಡ್ ಡೀಟೇಲ್ಸ್ ಅನ್ನು ಆತನಿಗೆ ನೀಡಿದರ ಪರಿಣಾಮವಾಗಿ 63 ಸಾವಿರಕ್ಕೂ ಹೆಚ್ಚಿನ ಹಣವು ಬ್ಯಾಂಕ್ ಖಾತೆಯಿಂದ ಕಳುವಾಗಿದೆ. ಈ ವಿಷಯವೇ ಆತನು ಮಾಡಿದಂತಹ ದೊಡ್ಡ ತಪ್ಪಾಗಿತ್ತು. ಹಾಗಾಗಿ ನೀವು ಸಹ ಈ ರೀತಿಯ ತಪ್ಪನ್ನು ಒಂದುವೇಳೆ ಮುಂದೆ ಮಾಡುವುದಕ್ಕೆ ಹೋಗಬೇಡಿ ಎಂಬುದಾಗಿ ಈ ಘಟನೆಯನ್ನು ನಿಮಗೆ ಈ ಲೇಖನದಲ್ಲಿ ತಿಳಿಸಿದ್ದೇವೆ.
ಇದನ್ನು ಓದಿ : ತಾತ್ಕಾಲಿಕವಾಗಿ ಗೃಹಲಕ್ಷ್ಮಿ ನೋಂದಣಿ ಸ್ಥಗಿತ : ಹಣ ಖಂಡಿತಾ ಬರುತ್ತೆ ಹೀಗೆ ಮಾಡಿ ಕೂಡಲೇ
ಈ ಪ್ರಕರಣದ ಸಂಪೂರ್ಣ ತನಿಖೆ :
ಕೆಲವೇ ಸಮಯದಲ್ಲಿ ಅಕೌಂಟ್ ನಲ್ಲಿದ್ದ ಹಣವು ಬ್ಯಾಂಕ್ ಡೀಟೇಲ್ಸ್ ಹಾಗು ಎಟಿಎಂ ಕಾರ್ಡ್ ನೀಡಿದಂತಹ ಸಂದರ್ಭದಲ್ಲಿ 63,000 ಹಣ ಕಳುವಾಗಿದ್ದು ಇದನ್ನು ಚೆಕ್ ಮಾಡಿದ ನಂತರ ಯಾವುದೋ ಅನಾಮಿಕ ನಂಬರ್ ನಿಂದ ಈ ಹಣ ಹೋಗಿರುತ್ತದೆ ಎಂದು ತಿಳಿದು ಬಂದಿದೆ. ಸದ್ಯಕ್ಕೆ ಸೈಬರ್ ಪೊಲೀಸರಿಗೆ ಈ ಪ್ರಕರಣವನ್ನು ನೀಡಿದ್ದು ಅವರು ಪ್ರಕರಣ ದಾಖಲು ಮಾಡಿರುವ ಮೂಲಕ ಸಂಪೂರ್ಣ ತನಿಖೆಗೆ ಪೊಲೀಸರು ಒಳಪಡಿಸಿದ್ದಾರೆ.
ಹಾಗಾಗಿ ನೀವು ಕೂಡ ಇನ್ನು ಮುಂದೆ ಯಾವುದೋ ಗೊತ್ತಿಲ್ಲದೇ ನಂಬರ್ ನಿಂದ ಬರುವಂತಹ ಕರೆಗೆ ಬ್ಯಾಂಕ್ ಡೀಟೇಲ್ಸ್ ಗಳನ್ನು ಕೊಡಲು ಹೋಗಬೇಡಿ. ಹೀಗೆ ಕರ್ನಾಟಕದಲ್ಲಿ ನಡೆದಿರುವಂತಹ ಈ ಘಟನೆ ಕೆಲವೊಂದಿಷ್ಟು ಜನರಿಗೆ ಅರಿವು ಮೂಡುತ್ತದೆ ಎಂದು ಹೇಳಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಶೇರ್ ಮಾಡುವ ಮೂಲಕ ಅವರು ಸಹ ಇಂತಹ ವಂಚನೆಗಳಿಂದ ಮುಕ್ತರನ್ನಾಗಿ ಮಾಡುವಂತೆ ಸಹಕರಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಕೆಲವು ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲು ತಡೆ : ಪರಿಹಾರ ಇಲ್ಲ ರೈತರಿಗೆ ಬೇಸರ
ದಾರಿಮೇಲೆ ಸಿಕ್ಕಿದ ಪರ್ಸ್ ಎತ್ತಿಕೊಳ್ತಿರಾ? ಅಪ್ಪಿತಪ್ಪಿ ತಗೊಂಡ್ರೆ ಜೈಲೇ ಗತಿ..!