ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ರಾಜ್ಯ ಸರ್ಕಾರವು ಆಟೋ ಚಾಲಕರಿಗಾಗಿ ಹೊಸ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿದೆ. ರಾಜ್ಯ ಸರ್ಕಾರವು ಆಟೋ ಚಾಲಕರಿಗಾಗಿ ಓಲಾ ಮತ್ತು ಉಬರ್ ನಂತಹ ಅಪ್ಲಿಕೇಶನ್ಗಳನ್ನು ಪ್ರಾರಂಭಿಸಲು ಕರ್ನಾಟಕ ಸರ್ಕಾರವು ಯೋಚಿಸುತ್ತಿದೆ ಎಂದು ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ತಿಳಿಸಿದ್ದಾರೆ. ಹಾಗಾದರೆ ಯಾವ ರೀತಿ ಈ ಯೋಜನೆ ಇರಲಿದೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದಾಗಿದೆ.
ಕ್ಯಾಬ್ ಅಗ್ರಿಗೇಟರ್ :
ರಾಜ್ಯ ಸರ್ಕಾರವು ಅಗ್ರಿಗೇಟರ್ಗಳಾದ ಓಲಾ ಮತ್ತು ಉಬರ್ ನಂತಹ ಅಪ್ಲಿಕೇಶನ್ಗಳನ್ನು ಪ್ರಾರಂಭಿಸಲು ಈಗಾಗಲೇ ಯೋಚಿಸಿದ್ದು ಈ ಯೋಜನೆಗೆ ಸಂಬಂಧಿಸಿ ದಂತೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಸೋಮವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಹಾಗೂ ಇನ್ನಿತರ ಸಚಿವರುಗಳ ಜೊತೆ ಟ್ಯಾಕ್ಸಿ ಯೂನಿಯನ್ ಗಳು ಮತ್ತು ಆಟೋ ಯೂನಿಯನ್ ಗಳ ಜೊತೆ ಕುರಿತು ಚರ್ಚಿಸಿ ಅವರುಗಳು ವ್ಯಕ್ತಪಡಿಸಿದ ಕಳವಳವನ್ನು ನೋಡಿದಂತಹ ರಾಜ್ಯ ಸರ್ಕಾರವು ಈ ಅಪ್ಲಿಕೇಶನ್ಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ರಾಜ್ಯ ಸರ್ಕಾರವು ಕ್ಯಾಬ್ ಅಗ್ರಿಗೇಟರ್ ಗಳ ಹೆಚ್ಚಿನ ಕಮಿಷನ್ ನಿಂದ ಕ್ಯಾಪ್ ಚಾಲಕರು ಅನೇಕ ಅಡೆಚಣೆಗಳನ್ನು ಎದುರಿಸುತ್ತಿದ್ದಾರೆ ಎಂದು ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಸಾರಿಗೆ ಸಚಿವರು ಸರ್ಕಾರವು ಅವರ ಸಮಸ್ಯೆಗಳನ್ನು ಆಲಿಸಿದ್ದು ಅವರಿಗಾಗಿಯೇ ಹೊಸ ಅಪ್ಲಿಕೇಶನ್ ಗಳನ್ನು ಪ್ರಾರಂಭಿಸುವ ಬಗ್ಗೆ ಯೋಜನೆಯನ್ನು ಮಾಡುತಿದ್ದೇವೆ ಎಂದು ತಿಳಿಸಿದರು. ಗ್ರಾಹಕರು ಅಪ್ಲಿಕೇಶನ್ಗಳ ಮೂಲಕ ಕ್ಯಾಬ್ ಸವಾರಿಗಳನ್ನು ಬುಕ್ ಮಾಡಬಹುದು ಎಂದು ಹೇಳಿದ್ದು ಇದರಿಂದ ಆಟೋ ಯೂನಿಯನ್ ಮತ್ತು ಟ್ಯಾಕ್ಸಿ ಯೂನಿಯನ್ ಗಳ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸುತ್ತೇವೆ ಎಂದು ಸಚಿವರು ತಿಳಿಸಿದರು.
ಇದನ್ನು ಓದಿ : ಟೊಮೇಟೋ ಬೆಲೆ ಏಕಾಏಕಿ ಕುಸಿತ; ಕೆಂಪು ಸುಂದರಿ ಪ್ರಿಯರ ಮುಖದಲ್ಲಿ ಮಂದಹಾಸ! ರೈತರ ಮೊಗದಲ್ಲಿ ಆತಂಕ
ಆಟೋ ಚಾಲಕರು :
ಕಳೆದ ವರ್ಷ ನಮ್ಮ ಯಾತ್ರೆ ಎಂಬ ಅಪ್ಲಿಕೇಶನ್ ನನ್ನು ಬೆಂಗಳೂರಿನ ಆಟೋರಿಕ್ಷಾ ಡ್ರೈವರ್ ಯೂನಿಯನ್ ಬಿಡುಗಡೆ ಮಾಡಿದ್ದು ಇದು ಆಟೋ ಪ್ರಯಾಣಿಕರಲ್ಲಿ ಜನಪ್ರಿಯತೆಯನ್ನು ಗಳಿಸಿತು. ಹಾಗಾಗಿ ರಾಜ್ಯ ಸರ್ಕಾರವು ಈಗ ಓಲ ಉಬರ್ ಮತ್ತು ರಾಪಿಡೋನಂತಹ ಅಪ್ಲಿಕೇಶನ್ಗಳಿಗೆ ಅಪ್ಲಿಕೇಶನ್ ಅನ್ನು ಸ್ಪರ್ಧೆಯಲ್ಲಿ ಪ್ರಾರಂಭಿಸಲಾಗಿದೆ. ವೈಟ್ ಬೋರ್ಡ್ ನೊಂದಿಗೆ ಹಾವು ಅಕ್ರಮವಾಗಿ ಓಡಿಸುತ್ತಿರುವ ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸುವ ಅಗತ್ಯವನ್ನು ಸಹ ಆಟೋ ಒಕ್ಕೂಟಗಳು ತಿಳಿಸುತ್ತೇವೆ. ಹಾಗಾಗಿ ಈ ಯೋಜನೆಯನ್ನು ಅವರ ಜೀವನೋಪಾಯಕ್ಕಾಗಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಶಕ್ತಿ ಯೋಜನೆಯ ವಿರುದ್ಧ ಪರಿಹಾರ ಕ್ರಮವನ್ನು ಆಟೋ ಚಾಲಕರು ಕೇಳಿದ ಪರಿಣಾಮವಾಗಿ ಅವರಿಗಾಗಿ ಹೊಸ ಅಪ್ಲಿಕೇಶನ್ ಅನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡಲು ವಿಧಾನಸಭೆಯಲ್ಲಿ ಚರ್ಚಿಸಲಾಗುತ್ತಿದೆ ಎಂದು ಸಾರಿಗೆ ಸಚಿವರು ತಿಳಿಸಿದರು. ಸಾರಿಗೆ ಸಚಿವರೊಂದಿಗೆ ಒಕ್ಕೂಟಗಳ ಎರಡನೇ ಸಭೆ ಕಳೆದ ವಾರದಲ್ಲಿ ಇದು ಆಗಿದ್ದು, ಆಟೋ ಚಾಲಕರು ಜುಲೈ 27ರಂದು ಮುಷ್ಕರವನ್ನು ಹೂಡಲು ತಿಳಿಸಿದ್ದರು. ಸರ್ಕಾರವು ಮೊದಲ ಸಭೆಯಲ್ಲಿ ಆಟೋ ಚಾಲಕರ ಬೇಡಿಕೆಗಳನ್ನು ಆಲಿಸಿದ ನಂತರ ಆಟೋ ಚಾಲಕರು ಮುಷ್ಕರವನ್ನು ಹಿಂದೆ ತೆಗೆದುಕೊಳ್ಳಲು ನಿರ್ಧರಿಸಿದರು ನಂತರ ಅವರು ಆಗಸ್ಟ್ ನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗುವಂತೆ ಕೇಳಿಕೊಂಡರು ಎಂದು ಹೇಳಬಹುದಾಗಿದೆ.
ಹೀಗೆ ರಾಜ್ಯ ಸರ್ಕಾರ ಆಟೋ ಚಾಲಕರಿಗಾಗಿ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದ್ದು ಶಕ್ತಿ ಯೋಜನೆಯಿಂದ ಕಂಗಲಾಗಿದ್ದ ಅವರು ರಾಜ್ಯ ಸರ್ಕಾರದ ಈ ಯೋಜನೆಯ ಬಗ್ಗೆ ತಿಳಿದು ಸಂತೋಷ ಪಡುತ್ತಿದ್ದಾರೆ. ಹೀಗೆ ಈ ಯೋಜನೆಗೆ ಸಂಬಂಧಿಸಿ ದಂತೆ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರು ಯಾರಾದರೂ ಆಟೋ ಚಾಲಕರಾಗಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಹಾಗೂ ಇನ್ನಿತರರಿಗೂ ಸಹ ಈ ಮಾಹಿತಿಯನ್ನು ಶೇರ್ ಮಾಡುವುದರ ಮೂಲಕ ಆಟೋ ಚಾಲಕರು ಈ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಪಡೆಯುವಂತೆ ಮಾಡಿ ಧನ್ಯವಾದಗಳು
ಇತರೆ ವಿಷಯಗಳು :
ಚಿನ್ನದ ದರ ಕುಸಿತ..! ಖರೀದಿ ಮಾಡುವವರಿಗೆ ಗುಡ್ ಟೈಮ್ ದರವನ್ನು ಗಮನಿಸಿ ಕೂಡಲೇ ಭೇಟಿ ನೀಡಿ