ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳು ಇದೀಗ ಜಾರಿಗೆ ಬಂದಿವೆ. ಆದರೆ ಜನಸಾಮಾನ್ಯರಿಗೂ ಕೂಡ ಸಿಹಿ ಸುದ್ದಿಯೂ ಹೌದು ಸಂಕಷ್ಟವೂ ಹೌದು, ಶಕ್ತಿ ಯೋಜನೆಯ ಪರಿಣಾಮ ಹಲವಾರು ಗೊಂದಲಕ್ಕೆ ಕಾರಣವಾಗಿದೆ. ಇದರಿಂದಾಗಿ ಮಕ್ಕಳಿಗೆ, ಯುವಕರಿಗೆ ಮುಖ್ಯವಾಗಿ ವಿದ್ಯಾರ್ಥಿಗಳಿಗೆ, ವೃದ್ದರಿಗೆ ಹಲವಾರು ತೊಂದರೆ ಉಂಟಾಗಿದೆ. ಇದರ ಪರಿಣಾಮ ಏನಾಗಿದೆ ಎಂಬುದನ್ನು ಈ ಲೇಖನದಲ್ಲಿ ವಿವರವಾಗಿ ತಿಳಿಸಿದ್ದೇವೆ. ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.
ರಾಜ್ಯ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾಗಿರುವ ಮಹಿಳೆಯರ ಉಚಿತ ಬಸ್ ಪ್ರಯಾಣದಿಂದಾಗಿ ಹಲವಾರು ತೊಂದರೆ ಉಂಟಾಗುತ್ತಿದೆ. ಶಕ್ತಿ ಯೋಜನೆಯಿಂದ ಇದೀಗ ಹಲವಾರು ಪರಿಣಾಮ ಉಂಟಾಗಿದೆ. ಶಕ್ತಿಯೋಜನೆಗೆ ಸಂಕಷ್ಟ ಎದುರಾಗಿದೆ. ಅವ್ಯವಸ್ಥೆ ಪ್ರಶ್ನಿಸಿ ಕಾನೂನು ವಿದ್ಯಾರ್ಥಿಗಳಿಂದ ಹೈಕೋರ್ಟ್ಗೆ PIL ಸಲ್ಲಿಕೆಯಾಗಿದೆ. ಶಕ್ತಿ ಯೋಜನೆಯಿಂದಾಗಿ ಸಾರಿಗೆ ಬಸ್ನಲ್ಲಿ ಜನದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಜನರದಟ್ಟಣೆ ಹೆಚ್ಚಳದಿಂದ ಸರಿಯಾಗಿ ಸೀಟುಗಳು ಸಿಗುತ್ತಿಲ್ಲ. ಸಿಟ್ಗಾಗಿ ಹೊಡೆದಾಟ ನಡೆಯುತ್ತಿದೆ. ಹಿರಿಯ ನಾಗರಿಕರು ಮಕ್ಕಳಿಗೆ ಬಸ್ಗಳನ್ನು ಹತ್ತಲು ಆಗುತ್ತಿಲ್ಲ. ಕೆಲವು ಕಡೆ ಬಸ್ ಹತ್ತಲು ಆಗದೇ ವಿದ್ಯಾರ್ಥಿಗಳು ಕೆಳಗೆ ಬಿದ್ದಿರುವ ಘಟನೆಗಳು ಕೂಡ ನಡೆದಿದೆ. ವಿದ್ಯಾರ್ಥಿಗಳು ಶಾಲಾ ಕಾಲೇಜು ಪರೀಕ್ಷೆಗಳಿಗೆ ಸರಿಯಾದ ಸಮಯಕ್ಕೆ ಹೋಗಲು ಆಗುತ್ತಿಲ್ಲ. ಶಕ್ತಿ ಯೋಜನೆಗೆ ಒಂದೇ ವಾರದಲ್ಲಿ ತೆರಿಗೆದಾರರಿಂದ 3 ಕೋಟಿ ಹಣ ಯೋಜನೆಗೆ ಬಳಕೆಯಾಗಿದ್ದು, ವರ್ಷಕ್ಕೆ 3200 ರಿಂದ 3400 ಕೋಟಿ ನಷ್ಟವಾಗುತ್ತದೆ.
ಟಿಕೆಟ್ ಖರೀದಿ ಮಾಡಿದವರಿಗೆ 50% ರಷ್ಟು ಸೀಟನ್ನು ಮೀಸಲಿಡಬೇಕು. ದೂರದ ಊರುಗಳಿಗೆ ನಿಂತು ಪ್ರಯಾಣ ಮಾಡಲು ಅವಕಾಶ ನೀಡಬಾರದು. ಮಕ್ಕಳು, ವೃದ್ದರ ಬಸ್ ಪ್ರವೇಶಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು PIL ಮೂಲಕ ಕಾನೂನು ವಿದ್ಯಾರ್ಥಿಗಳು ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದಾರೆ. ಒಟ್ಟಿನಲ್ಲಿ ಫ್ರೀ ಬಸ್ ನಿಂದ ಕೇವಲ ಮಕ್ಕಳಿಗಲ್ಲದೇ ವೃದ್ದರಿಗೂ, ಪುರುಷರಿಗೂ ಸಮಸ್ಯೆಯಾಗುತ್ತಿದೆ. ಇದರ ಬಗ್ಗೆ ದ್ವನಿ ಎತ್ತಬೇಕಾಗಿದೆ ಎಂದು ಸಾಮಾಜಿಕ ಮಾಧ್ಯಮಗಳು ಕೂಡ ತಿಳಿಸುತ್ತಿವೆ. ಯಾಕೆಂದರೆ ಉಚಿತ ಬಸ್ ಪ್ರಯಾಣ ಎಂದು ಹೆಚ್ಚಿನ ಮಹಿಳೆಯರು ಬಸ್ ನಲ್ಲಿ ಓಡಾಟವನ್ನು ಶುರು ಮಾಡಿಕೊಂಡಿದ್ದಾರೆ. ಇದರಿಂದ ಶಾಲಾ ಮಕ್ಕಳಿಗೆ ಸಮಸ್ಯೆಯಾಗುತ್ತಿದ್ದು, ಇದಕ್ಕೆ ತಕ್ಕ ಪರಿಹಾರ ನೀಡಬೇಕೆಂದು ಹೈಕೋರ್ಟ್ಗೆ ಪಿಐಎಲ್ ಸಲ್ಲಿಸಲಾಗಿದೆ. ಹೈಕೋರ್ಟ್ ಇದನ್ನು ಯಾವಾಗ ಪರಿಗಣಿಸುತ್ತದೆ, ಏನಾದರು ಮಾರ್ಗಸೂಚಿ ಬಿಡುಗಡೆ ಮಾಡುತ್ತಾ? ಅಥವಾ ಸರ್ಕಾರಕ್ಕೆ ಏನೆಲ್ಲಾ ಮಾಹಿತಿ ಕೊಡುತ್ತಾ, ಎಂದು ನೋಡೊಣ.
ಇತರೆ ವಿಷಯಗಳು:
Gruhalakshmi New Update: ಗೃಹಲಕ್ಷ್ಮಿ ಅಪ್ಲಿಕೇಶನ್ ಕೇವಲ 3 ನಿಮಿಷ…! ಅರ್ಜಿ ಸಲ್ಲಿಸಲು ಹೊಸ ಚಾಟ್ ಬಾಟ್ ಆರಂಭ?