ಕರ್ನಾಟಕದ ರಾಜ್ಯದ ಜನರಿಗೆ ರಾಜ್ಯ ಸರ್ಕಾರದಿಂದ ಒಂದು ಬಂಪರ್ ಸುದ್ದಿ ಅದೇನೆಂದರೆ ಅನೇಕ ಬಡವರ ಹಸಿವನ್ನು ನೀಗಿಸುತ್ತಿರುವ ಇಂದಿರಾ ಕ್ಯಾಂಟೀನ್ ಮರುಚಾಲನೆ ನೀಡಲಾಗುತ್ತಿದ್ದು
.ಇದರ ಮೂಲಕ ಆಹಾರ ಪೂರೈಸಲು ನಿರ್ಧರಿಸಲಾಗಿದೆ .ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಕೊನೆವರೆಗೂ ಪೂರ್ಣ ಓದಿ ನಿಮಗೆ ಆಹಾರದ ಪಟ್ಟಿಯು ಸಹ ದೊರೆಯಲಿದೆ. ಬೆಳಗ್ಗೆ ಮಧ್ಯಾಹ್ನ ಯಾವ್ಯಾವ ಉಪಹಾರ ದೊರೆಯಲಿದೆ ಎಂಬುದು ತಿಳಿಯಬಹುದು.
2017ರಲ್ಲಿ ಇಂದಿರಾ ಕ್ಯಾಂಟೀನ್ ಆರಂಭ
ಹೌದು 2017ರಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಅನ್ನು ತೆರೆದಿದ್ದರು ಇದರ ಮೂಲಕ ಅನೇಕ ಬಡವರು ಹಾಗೂ ಮಧ್ಯಮವರ್ಗದವರು ಆಹಾರವನ್ನು ಬೆಳಗ್ಗೆ ಹಾಗೂ ಮಧ್ಯಾಹ್ನ ಸೇವಿಸುತ್ತಿದ್ದರು .ನಾವು ಗಮನಿಸಬೇಕಾದ ವಿಷಯವೆಂದರೆ ಕಳೆದ 3 ವರ್ಷಗಳಿಂದಲೂ ಸಹ ಕ್ಯಾಂಟೀನ್ಗಳ ನಿರ್ವಹಣೆ ಕೊರತೆಯಿಂದ ಜನರಿಗೆ ಆಹಾರ ಪೂರೈಕೆ ಆಗುತ್ತಿರಲಿಲ್ಲ .ಹಾಗೂ ಇಂದಿರಾ ಕ್ಯಾಂಟೀನ್ ದುರಸ್ತಿಗೊಳಿಸಿ ಹೊಸ ರೂಪದಲ್ಲಿ ಮತ್ತೆ ಆರಂಭಿಸಲಾಗುತ್ತಿತ್ತು ಹೀಗಿರುವಾಗ ಮತ್ತೆ ಇಂದಿರಾ ಕ್ಯಾಂಟೀನ್ ಮರು ಚಾಲನೆ ನೀಡಲಾಗುತ್ತಿದೆ.
ಸಿಎಂ ಸಿದ್ದರಾಮಯ್ಯನವರ ಇಂದಿರಾ ಕ್ಯಾಂಟೀನ್ ದುರಸ್ತಿ ಸಂಬಂಧಿಸಿದಂತೆ ಕ್ರಮಗಳನ್ನು ಕೈಗೊಳ್ಳಲು ಪ್ರತಿಯೊಂದು ಜಿಲ್ಲಾಡಳಿತಕ್ಕೂ ಸೂಚನೆ ಈ ಮೂಲಕ ಇಂದಿರಾ ಕ್ಯಾಂಟೀನ್ ಗೆ ಹೊಸ ಜೀವ ತಂದಂತಾಗುತ್ತಿದೆ.
ಮರು ಚಾಲನೆ ಯಾವಾಗ
ಇಂದಿರಾ ಕ್ಯಾಂಟೀನ್ ಮರುಚಾಲನೆಗೆ ಸಿಎಂ ಸಿದ್ದರಾಮಯ್ಯನವರು ಸೋಮವಾರದಂದು ಸರ್ಕಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಮೂಲಕ ಬೆಂಗಳೂರನ್ನು ಹೊರತುಪಡಿಸಿ. ಇತರೆ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ತಾಲೂಕು ಕೇಂದ್ರಗಳಲ್ಲಿ ಒಟ್ಟು 170 ಇಂದಿರಾ ಕ್ಯಾಂಟೀನ್ ಗಳಿವೆ. ಅವುಗಳನ್ನು ಬಹುತೇಕ ನಿರ್ವಹಣೆ ಸಮಸ್ಯೆಯಿಂದ ಸ್ಥಗಿತಗೊಂಡಿವೆ ಅವುಗಳನ್ನು ಈಗ ಪಟ್ಟಿ ಮಾಡುವ ಮೂಲಕ ಮತ್ತೆ ಆಹಾರ ಪೂರೈಕೆ ಆರಂಭಿಸಿ ಇಂದಿರಾ ಕ್ಯಾಂಟೀನ್ ಮರು ಚಾಲನೆ ಮಾಡಲಿದ್ದಾರೆ .
ಇದರಿಂದ ಸ್ಥಳೀಯವಾಗಿ ಅನೇಕ ಜನರಿಗೆ ಉಪಯೋಗವಾಗಲಿದ್ದು ತುಂಬಾ ಸಂತೋಷವನ್ನು ಸಹ ವ್ಯಕ್ತಪಡಿಸುತ್ತಿದ್ದಾರೆ ಇಂದಿರ ಕ್ಯಾಂಟೀನ್ ಗುತ್ತಿಗೆ ನೀಡುವ ಮೂಲಕ ಹೊಸದಾಗಿ ಆಹಾರ ಪೂರೈಸಲು ತಿಳಿಸಲಾಗಿದೆ ಹಾಗಾಗಿ ಇಂತ ಕ್ಯಾಂಟೀನ್ ಸದ್ಯದಲ್ಲಿಯೇ ಸ್ಥಗಿತಗೊಂಡಿರುವ ಕ್ಯಾಂಟೀನ್ ಗಳು ಆರಂಭಿಸಲಾಗುವುದು.
ಜನರಲ್ಲಿ ಸಂತೋಷ ಹೆಚ್ಚಿಸಿದೆ ಇಂದಿರಾ ಕ್ಯಾಂಟೀನ್ ಮರು ಚಾಲನೆ
170 ಇಂದಿರಾ ಕ್ಯಾಂಟೀನ್ ಗಳು ಅನೇಕ ಕಾರಣಗಳಿಂದ ಸ್ಥಗಿತಗೊಂಡಿದೆ ಮರು ಚಾಲನೆ ನೀಡುತ್ತಿರುವ ರಾಜ್ಯ ಸರ್ಕಾರವು ಆಹಾರ ಪೂರೈಸುವ ವ್ಯವಸ್ಥೆ ಮಾಡುತ್ತಿದ್ದು. ಅನೇಕ ಜನರಲ್ಲಿ ಪ್ರತಿದಿನ ಕೂಲಿ ಕೆಲಸ ಮಾಡುವವರಲ್ಲಿ ಒಂದು ಹೊತ್ತಿನ ಊಟ ದೊರೆಯುತ್ತದೆ ಆ ಮೂಲಕ ಅವರಿಗೆ ಸಂತಸ ಹೆಚ್ಚಾಗುತ್ತಿದೆ ನಾಗು ಎಲ್ಲ ಜನರಿಗೂ ಸ್ವಚ್ಛತೆ ಹಾಗೂ ಗುಣಮಟ್ಟದ ಆಹಾರವನ್ನು ವಿತರಿಸಲಾಗುವುದು .
ಇಂದಿರ ಕ್ಯಾಂಟೀನ್ ಗಳಲ್ಲಿ ವಿಧ ವಿಧವಾದ ಆಹಾರ ವಿತರಣೆ ಮಾಡಲು ಹೊಸ ಮೆನು ಸಿದ್ಧಪಡಿಸಲಾಗಿದೆ ಹಳೆಯ ಮೆನ್ನೆಗಿಂತ ಬೇರೆ ಬೇರೆ ಆಹಾರ ಪೂರೈಕೆ ಮಾಡಲು ತೀರ್ಮಾನಿಸಲಾಗಿದೆ ಆಹಾರ ಪೂರೈಕೆಯಲ್ಲಿ ಜನರಿಗೆ ಗುಣಮಟ್ಟ ಆಹಾರ ಪ್ರಮಾಣ ನೀಡುವುದರಲ್ಲಿ ಯಾವುದೇ ರಾಜ ಮಾಡಿಕೊಳ್ಳದೆ ಆಹಾರ ಪೂರೈಸಬೇಕೆಂದು ಸೂಚಿಸಲಾಗಿದೆ ಹಾಗೂ ಇದರ ಉಪಯೋಗವನ್ನು ಪ್ರತಿಯೊಬ್ಬರೂ ಸಹ ಪಡೆದುಕೊಳ್ಳಲು ತಿಳಿಸಲಾಗಿದೆ ಹಾಗಾಗಿ ಇಂದಿರಾ ಕ್ಯಾಂಟೀನ್ ಮರುಚಾಲನೆಯು ರಾಜ್ಯದ ಜನರಲ್ಲಿ ತುಂಬಾ ಸಂತೋಷವನ್ನು ತಂದಿದೆ.
ಇದನ್ನು ಓದಿ : ಗ್ರಾಮ ಒನ್ ಕೇಂದ್ರ ಓಪನ್ ಮಾಡಲು ಅರ್ಜಿ ಆಹ್ವಾನ ಹಣ ಸಂಪಾದಿಸಲು ಒಂದು ಸುವರ್ಣ ಅವಕಾಶ
ಅನೇಕ ಕಡೆಗಳಲ್ಲಿ ಇಂದಿರ ಕ್ಯಾಂಟೀನ್ ಇಲ್ಲ ಆರಂಭಿಸುವಂತೆ ಒತ್ತಾಯಿಸುತ್ತಿದ್ದಾರೆ ಜನ
ಹೌದು ಅನೇಕ ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್ ವ್ಯವಸ್ಥೆ ಇಲ್ಲ ಹಾಗಾಗಿ ಅನೇಕ ಜನ ಒತ್ತಾಯಿಸುತ್ತಿದ್ದಾರೆ ಹಾಗೂ ಬೆಂಗಳೂರು ನಗರವನ್ನು ಹೊರತುಪಡಿಸಿ ಇದರ ಸ್ಥಳಿಯ ಸಂಸ್ಥೆಗಳಿಗೆ ಸರ್ಕಾರದ ಕಡೆಯಿಂದ ಅನುದಾನ ಬಿಡುಗಡೆಯಾಗಲಿದ್ದು ಅದರಂತೆ ಕ್ಯಾಂಟೀನ್ ಗಳ ನಿರ್ವಹಣೆಗೆ ಆಹಾರ ಪೂರೈಕೆಗೆ ರಾಜ್ಯ ಸರ್ಕಾರ 70ರಷ್ಟು ಅನುದಾನವನ್ನು ನೀಡುತ್ತದೆ ಹಾಗೂ ಉಳಿದ ಶೇಕಡ 30ರಷ್ಟು ಸ್ಥಳೀಯ ಸಂಸ್ಥೆಗಳೆ ಬರಿಸಬೇಕೆಂದು ಹೇಳಿದರು
ಸರ್ಕಾರದ ಮುಖ್ಯ ಉದ್ದೇಶ ಸ್ವಚ್ಛತೆ ಹಾಗೂ ಗುಣಮಟ್ಟದ ಆಹಾರವನ್ನು ಜನರಿಗೆ ನೀಡುವುದು ಇಂದಿರಾ ಕ್ಯಾಂಟೀನ್ ಮೂಲಕ ಹಸಿವು ಮುಕ್ತ ಕರ್ನಾಟಕ ಮಾಡುವುದು ಯಾರು ಸಹ ಹೊಟ್ಟೆ ಹಸಿವಿನಿಂದ ಇರಬಾರದು ಎನ್ನುವುದು ಇಂದಿರ ಕ್ಯಾಂಡಿನ ಮುಖ್ಯ ಉದ್ದೇಶ. ಕಡಿಮೆ ದರದಲ್ಲಿ ಇಂದಿರಾ ಕ್ಯಾಂಟೀನ್ ನಲ್ಲಿ ಒಂದು ಉತ್ತಮ ಗುಣಮಟ್ಟದ ಆಹಾರವನ್ನು ಜನರಿಗೆ ನೀಡುವ ಒಂದು ಉತ್ತಮ ಯೋಜನೆ ಎನ್ನುತ್ತಾರೆ ಜನ ಲೇಖನವನ್ನು ಪೂರ್ಣವಾಗಿ ಓದಿದ್ದಕ್ಕಾಗಿ ಧನ್ಯವಾದಗಳು.
ಇಂದಿರಾ ಕ್ಯಾಂಟೀನ್ ಗೆ ರಾಜ್ಯ ಸರ್ಕಾರ ಎಷ್ಟೋ ರಷ್ಟು ಅನುದಾನ ನೀಡುತ್ತದೆ
70ರಷ್ಟು ಅನುದಾನ ನೀಡಲಿದೆ
ಸ್ಥಳೀಯ ಸಂಸ್ಥೆಗಳು ಎಷ್ಟರಷ್ಟು ಅನುದಾನ ನೀಡಬೇಕು
ಶೇಕಡ 30ರಷ್ಟು ಅನುದಾನ ನೀಡಬೇಕು