ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಆರ್ ಟಿ ಓ ಡ್ರೈವಿಂಗ್ ಲೈಸೆನ್ಸ್ ಕುರಿತು ಸ್ಪಷ್ಟನೆ ನೀಡಿರುವುದರ ಬಗ್ಗೆ. ಇಂದಿನ ದಿನಮಾನಗಳಲ್ಲಿ ಎಲ್ಲರೂ ಸಹ ದ್ವಿಚಕ್ರ ವಾಹನ, ನಾಲ್ಕು ಚಕ್ರದ ವಾಹನ ,ತ್ರಿಚಕ್ರ ವಾಹನ ಹೀಗೆ ಹಲವಾರು ವಾಹನಗಳನ್ನು ಹೊಂದಿದ್ದು ಅವುಗಳಿಗೆ ವಾಹನ ಚಾಲನ ಪರವಾನಗಿಯನ್ನು ಮಾಡಿಸುವುದು ಕಡ್ಡಾಯವಾಗಿದೆ. ಅದರಂತೆ ಈಗ ಟ್ರಾಫಿಕ್ ಅಪರಾಧಗಳಿಗೆ ಸಂಬಂಧಿಸಿದಂತೆ ಆರ್ ಟಿ ಓ ಸ್ಪಷ್ಟನೆ ನೀಡಿದ್ದು, ವಾಹನ ಸವಾರರು ಈ ಮಾಹಿತಿಯನ್ನು ತಿಳಿದುಕೊಳ್ಳುವುದು ಹೆಚ್ಚು ಸೂಕ್ತವಾಗಿದೆ. ಆರ್ ಟಿ ಓ ಯಾವ ಸ್ಪಷ್ಟನೆಯನ್ನು ನೀಡಿದೆ, ವಾಹನ ಸವಾರರಿಗೆ ಯಾವ ನಿಯಮ ಜಾರಿಯಲ್ಲಿ ಇದೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.
222 ಡ್ರೈವಿಂಗ್ ಲೈಸೆನ್ಸ್ ಕ್ಯಾನ್ಸಲ್ ಆಗಿರುವುದರ ಪಟ್ಟಿ :
ಆರ್ ಟಿ ಓ ಸಂಚಾರ ನಿಯಮ ಉಲ್ಲಂಘಿಸಿದಂತ 222 ವಾಹನ ಸವಾರರ ಡ್ರೈವಿಂಗ್ ಲೈಸೆನ್ಸ್ ಕ್ಯಾನ್ಸಲ್ ಆಗಿರುವ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಂಗಳೂರು ಪೊಲೀಸರು ಜುಲೈ 13 ರಿಂದ ಜುಲೈ 26ರ ನಡುವೆ ಸಂಚಾರ ಉಲ್ಲಂಘನೆಗಳನ್ನು ದಾಖಲಿಸಿದ್ದು , ಈ ಉಲ್ಲಂಘನೆಗಳಲ್ಲಿ ಕೆಲವು ಉಲ್ಲಂಘನೆಗಳು ಅತಿ ವೇಗ ಮತ್ತು ಅಜಾಗರೂಕ ಚಾಲನೆ, ಕುಡಿದು ವಾಹನ ಚಾಲನೆ ಮತ್ತು ಹೆಲ್ಮೆಟ್ ಇಲ್ಲದೆ ಸವಾರಿ ಮಾಡಿರುವುದು ಸೇರಿದೆ. ಹೀಗೆ ಇಂತಹ ಅಪರಾಧಗಳಿಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಪ್ರಾದೇಶಿಕ ಸಾರಿಗೆ ಕಚೇರಿಗೆ ಇಂತಹ ವಿವಿಧ ಟ್ರಾಫಿಕ್ ಅಪರಾಧಗಳಿಗೆ ಸಂಬಂಧಿಸಿದಂತೆ 222 ಚಾಲನೆ ಪರವಾನಗಿಗಳನ್ನು ಅಮಾನತುಗೊಳಿಸುವಂತೆ ಪತ್ರ ಬರೆದಿದ್ದಾರೆ.
ಕುಲದೀಪ್ ಕುಮಾರ್ ಜೈನ್ ಪ್ರಕಟಣೆ :
ವಾಹನ ಚಲಾಯಿಸುವ ಸವಾರರು ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವವರ ವಿರುದ್ಧ ಹಾಗೂ ಆ ಜಾಗರೂಕತೆಯಿಂದ ವಾಹನ ಚಲಾಯಿಸುವವರ ವಿರುದ್ಧ ಚಾಲಕರು ಮತ್ತು ಪ್ರಯಾಣಿಕರಲ್ಲಿ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಜಾಗೃತಿ ಮೂಡಿಸುವುದು ಮುಖ್ಯವಾಗಿದೆ ಎಂದು ಪ್ರಕಟಣೆಯಲ್ಲಿ ಆಲೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಅವರು ಹೇಳಿದ್ದಾರೆ.
ಇದನ್ನು ಓದಿ : ನಿಮ್ಮ ಹಳೆಯ 10 ರೂಪಾಯಿಯಿಂದ ಲಕ್ಷ ಲಕ್ಷ ಹಣ ಪಡೆಯಿರಿ : ಈಗ ಹಳೆಯ ಹತ್ತು ರೂಪಾಯಿಗೆ ಭಾರಿ ಡಿಮ್ಯಾಂಡ್
ಆರ್ ಟಿ ಓ ಗಳಿಗೆ ಶಿಫಾರಸ್ಸು :
ಕಮಿಷನರ್ 222 ಚಾಲಕರು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಅವರ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಬೇಕೆಂದು ಆಯಾ ಆರ್ ಟಿ ಓ ಗಳಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಭಾರತೀಯ ದಂಡ ಸಂಹಿತೆ ಮತ್ತು ಮೋಟಾರ್ ವಾಹನ ಕಾಯ್ದೆಯಡಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದೆ. ಆರ್ ಟಿ ಓ ಗಳಿಂದ ವಿಚಾರಣೆ ನಡೆಸಲಾಗುವುದು ನಂತರ ಡ್ರೈವಿಂಗ್ ಲೈಸೆನ್ಸ್ ಗಳನ್ನು ಎರಡು ಅಥವಾ ಆರು ತಿಂಗಳವರೆಗೆ ಅಮಾನತುಗೊಳಿಸಬಹುದು ಎಂದು ಕೆಲವೊಂದು ವರದಿಗಳು ಇದ್ದಾರೆ.
ಹೀಗೆ ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿದಂತಹ ಚಾಲಕರಿಗೆ ಆರ್ಟಿಓ ಶಿಸ್ತಿನ ಕ್ರಮವನ್ನು ಕೈಗೊಳ್ಳಲು ಮುಂದಾಗಿದೆ. ಇದರಿಂದ ವಾಹನ ಸವಾರರು ವಾಹನಗಳನ್ನು ಚಾಲನೆ ಮಾಡುವಾಗ ಇರುವಂತಹ ಸಂಚಾರ ನಿಯಮಗಳನ್ನು ಜಾಗೃತಿ ಮೂಡಿಸಬೇಕೆಂಬುದು ಮಂಗಳೂರು ಪೊಲೀಸರ ಉದ್ದೇಶವಾಗಿದೆ ಎಂದು ಹೇಳಬಹುದಾಗಿದೆ. ಹೀಗೆ ಈ ಮಾಹಿತಿಯನ್ನು ಅತಿ ವೇಗವಾಗಿ ಹಾಗೂ ಸಂಚಾರ ನಿಯಮವನ್ನು ಉಲ್ಲಂಘಿಸುವಂತಹ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಶೇರ್ ಮಾಡಿ ಜೊತೆಗೆ ಸಂಚಾರ ನಿಯಮವನ್ನು ಪಾಲಿಸುವಂತಹ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಸಹ ಶೇರ್ ಮಾಡಿ ಅವರಲ್ಲೂ ಸಹ ಇಂತಹ ಜಾಗೃತಿಗಳು ಮೂಡಲಿ ಧನ್ಯವಾದಗಳು.
ಇತರೆ ವಿಷಯಗಳು :
ತಿರುಪತಿಯಲ್ಲಿ ಮುಡಿಕೊಡಲು ಕಾರಣವಾದ ವಿಚಾರ ಯಾವುದು? ತಿರುಪತಿಯಲ್ಲಿ ದುಡ್ಡನ್ನು ಹೇಗೆ ಎಣಿಸುತ್ತಾರೆ ?
ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಮತ್ತೊಂದು ಹೊಸ ನಿಯಮ! ಮನೆ ಯಜಮಾನಿ ಮೃತಪಟ್ಟಿದ್ದರೆ ಆ ಹಣ ಯಾರಿಗೆ ಸಿಗಲಿದೆ?