ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ ಜಾರಿಗೆ ಬಂದ ಕಾಂಗ್ರೆಸ್ ಸರ್ಕಾರವು ಹಲವಾರು ಯೋಜನೆಗಳನ್ನು ಘೋಷಿಸಿದೆ. ಅದರಂತೆ ಕೆಲವು ಯೋಜನೆಗಳು ಪ್ರಸ್ತುತ ಜಾರಿಯಲ್ಲಿವೆ. ಅಂತಹ ಜಾರಿಯಾದ ಪ್ರಮುಖ ಯೋಜನೆ ಎಂದರೆ ಶಕ್ತಿ ಯೋಜನೆ ಈ ಯೋಜನೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಸರ್ಕಾರ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದೆ. ಇದರ ಪೂರ್ಣ ಮಾಹಿತಿಯನ್ನು ಈಗ ನಾನು ನಿಮಗೆ ತಿಳಿಸುತ್ತಿದ್ದೇನೆ.
ಮಹಿಳೆಯರಿಗಾಗಿ ಶಕ್ತಿ ಯೋಜನೆ :
ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದ 5 ಗ್ಯಾರಂಟಿಗಳಲ್ಲಿ ಮಹಿಳೆಯರಿಗಾಗಿ ಶಕ್ತಿ ಯೋಜನೆಯು ಸಹ ಒಂದಾಗಿದೆ. ಕರ್ನಾಟಕ ರಾಜ್ಯದಲ್ಲಿ ಜೂನ್ 11ರಿಂದ ಈ ಶಕ್ತಿ ಯೋಜನೆ ಜಾರಿಯಾಗಿದ್ದು, ರಾಜ್ಯದಾದ್ಯಂತ ಮಹಿಳೆಯರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ನೀಡಿರುವ 5 ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆಯ ಮಾತ್ರ ಯಶಸ್ವಿಯಾಗಿ ಜಾರಿಯಾಗಿರುವುದನ್ನು ನೋಡಬಹುದು.
ವಾರ್ಷಿಕ ವೆಚ್ಚ :
ಸರ್ಕಾರ ಘೋಷಿಸಿರುವ 5 ಭರವಸೆಗಳನ್ನು ಈಡೇರಿಸಲು ವಾರ್ಷಿಕವಾಗಿ ಸುಮಾರು 50ರಿಂದ 60 ಕೋಟಿಯಷ್ಟು ವೆಚ್ಚವಾಗುತ್ತದೆ. ಈಗಾಗಲೇ ಶಕ್ತಿ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದ್ದು ಈ ಯೋಜನೆಗಾಗಿ ಕೇವಲ ಒಂದೇ ದಿನದಲ್ಲಿ ಸರ್ಕಾರವು ಕೋಟಿ ಕೋಟಿ ಹಣವನ್ನು ಖರ್ಚು ಮಾಡಿದೆ.
ಉಚಿತ ಪ್ರಯಾಣದ ಪರಿಣಾಮ :
ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಮಹಿಳೆಯರಿಗಾಗಿ ಶಕ್ತಿ ಯೋಜನೆಯ ಅಡಿಯಲ್ಲಿ ಉಚಿತ ಪ್ರಯಾಣವನ್ನು ಕಲ್ಪಿಸಿದ್ದು, ಪ್ರತಿನಿತ್ಯ ಲಕ್ಷಾಂತರ ಮಹಿಳೆಯರು ಪ್ರಯಾಣವನ್ನು ಮಾಡುತ್ತಿದ್ದಾರೆ. ಇದರಿಂದ ಮಹಿಳೆಯರ ತಳ್ಳಾಟದಿಂದ ಹಾಗೂ ನೂಕುನಗಲಿನಿಂದಾಗಿ ಸರ್ಕಾರಿ ಬಸ್ಗಳ ಕಿಟಕಿ ಬಾಗಿಲುಗಳು ಸಾಕಷ್ಟು ಹಾನಿಯಾಗಿದೆ. ಇದರಿಂದಾಗಿ ರಾಜ್ಯ ಸರ್ಕಾರವು ಉಚಿತ ಪ್ರಯಾಣದ ಶಿಸ್ತನ್ನು ಕಾಪಾಡುವ ಉದ್ದೇಶದಿಂದ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.
ಉಚಿತ ಬಸ್ ಪ್ರಯಾಣದ ಹೊಸ ಮಾರ್ಗಸೂಚಿ :
ಉಚಿತ ಬಸ್ ಪ್ರಯಾಣದಿಂದ ಹಲವಾರು ತೊಂದರೆಗಳಾಗುತ್ತಿದ್ದು, ಇದನ್ನು ತಪ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಆ ಮಾರ್ಗ ಸೂಚಿ ಎಂದರೆ ದೂರದ ಪ್ರಯಾಣಕ್ಕೆ ಹೋಗುವ ಪ್ರಯಾಣಿಕರಿಗೆ ಕಾಯ್ದಿರಿಸಿದ ಟಿಕೆಟ್ ಟಿಕೆಟ್ ಅನ್ನು ನೀಡುವ ಅವಕಾಶದ ಬಗ್ಗೆ ಚಿಂತನೆ ನಡೆಸಿದೆ. ಇತರೆ ಪ್ರಯಾಣಿಕರಿಗೆ ಸ್ಟ್ಯಾಂಡಿಂಗ್ ಪ್ರಯಾಣದಿಂದ ತೊಂದರೆ ಆಗಲಿದ್ದು, ಪ್ರಯಾಣಿಕರು ಈ ಮೊದಲೇ ಹಾಸನವನ್ನು ಕಾಯ್ದಿರಿಸುವ ಮೂಲಕ ಎಲ್ಲರೂ ಆರಾಮವಾಗಿ ಪ್ರಯಾಣವನ್ನು ಮಾಡಲು ಅವಕಾಶ ಕಲ್ಪಿಸಿದೆ.
ಇದನ್ನು ಓದಿ : RTOನ ಹೊಸ ನಿಯಮ ಜಾರಿ ಮಾಡಲಾಗಿದೆ, ಒಮ್ಮೆ ತಿಳಿದುಕೊಳ್ಳಿ
ಮಹಿಳೆಯರಿಗೆ ಹೊಸ ಸೌಲಭ್ಯ :
ಮಹಿಳೆಯರಿಗಾಗಿ ಸಿದ್ದರಾಮಯ್ಯ ಸರ್ಕಾರ ಹೊಸ ಸೌಲಭ್ಯವನ್ನು ನೀಡುವುದರ ಮೂಲಕ ಉಚಿತ ಪ್ರಯಾಣಕ್ಕೆ ಮತ್ತೊಂದು ಸಹಿಸುದ್ದಿಯನ್ನು ನೀಡಿದ್ದಾರೆ. ಕಾಲ್ ಸುದ್ದಿ ಎಂದರೆ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಶಕ್ತಿ ಯೋಜನೆಯನ್ನು ವ್ಯವಸ್ಥಿತವಾಗಿ ನಡೆಸಲು, ಸಾರಿಗೆ ಹಾಗೂ ಮಂಜೂರಾತಿ ಸಚಿವರು ಸೂಚಿಸಿರುವಂತೆ ವಿಭಾಗಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಜನಸಂಖ್ಯೆ ಹೆಚ್ಚಿರುವ 10 ಸ್ಥಳಗಳನ್ನು,
ವಿಶೇಷ ಹಬ್ಬ ಹಾಗೂ ಜಾತ್ರೆ ಇರುವಂತಹ ದಿನಗಳನ್ನು ಗುರುತಿಸಿ ಪ್ರಯಾಣಿಕರಿಗೆ ಅನುಗುಣವಾಗಿ ಹೆಚ್ಚುವರಿ ಬಸ್ ಗಳನ್ನು ನೀಡಲು ಮುಂದಾಗಿದೆ. ಹಾಗೆಯೇ ಟಿಕೆಟ್ ನೀಡುವುದು, ಗುರುತಿಸಿರುವಂತಹ ಸ್ಥಳಗಳಲ್ಲಿ ಹೆಚ್ಚು ಸಿಬ್ಬಂದಿಗಳನ್ನು ನಿಯೋಜಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಆಗುವ ರೀತಿಯಲ್ಲಿ ಎಲ್ಲಾ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ, ರಾಜ್ಯ ಸರ್ಕಾರವು ಸೂಚಿಸಿದೆ. ಮಹಿಳೆಯರ ಉಚಿತ ಪ್ರಯಾಣದಿಂದಾಗಿ ಸರ್ಕಾರವು ಹೆಚ್ಚುವರಿ ಬಸ್ ಗಳನ್ನು ನಿಯೋಜಿಸಲು ಚಿಂತನೆ ನಡೆಸಿದೆ ಇದು ಮಹಿಳೆಯರ ಶಕ್ತಿ ಯೋಜನೆಗೆ ಒಂದು ಉಪಯುಕ್ತವಾದ ತೀರ್ಮಾನವೆಂದು ಗಣನೆಗೆ ತೆಗೆದುಕೊಳ್ಳಬಹುದಾಗಿದೆ.
ಒಟ್ಟಾರೆಯಾಗಿ ಶಕ್ತಿ ಯೋಜನೆಗೆ ಸಂಬಂಧಿಸಿ ದಂತೆ ನಮ್ಮ ಅಭಿಪ್ರಾಯದಲ್ಲಿ ಹೇಳುವುದಾದರೆ, ಈ ಯೋಜನೆಯ ಮೂಲಕ ಕೆಲವು ಮಹಿಳಾ ಕಾರ್ಮಿಕರಿಗೆ ಉಪಯೋಗವಾದರೆ ಪುರುಷರಿಗೆ ಈ ಯೋಜನೆಯಿಂದ ತುಂಬಾ ತೊಂದರೆಯಾಗುತ್ತಿದೆ ಎಂದು ಹೇಳಬಹುದು. ಯೋಜನೆಯನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಬೇಕಾದರೆ ಬಹಳ ಬೇಗನೆ ಸರ್ಕಾರ ಚಿಂತನೆ ನಡೆಸಿದ ಹೆಚ್ಚುವರಿ ಬಸ್ಗಳ ನಿಯೋಜನೆಗೆ ಬೇಗ ಕ್ರಮ ಕೈಗೊಳ್ಳಬೇಕೆಂಬುದು ನಮ್ಮ ಅಭಿಪ್ರಾಯವಾಗಿದೆ.
ಉಚಿತ ಪ್ರಯಾಣದ ಜೊತೆಗೆ ಯಾವ ಹೆಚ್ಚುವರಿ ಸೌಲಭ್ಯ ದೊರೆಯಲಿದೆ ?
ಹೆಚ್ಚುವರು ಬಸ್ ನೀಡುವುದು ಹಬ್ಬ ಮತ್ತು ಜಾತ್ರೆಗೆ
ಶಕ್ತಿಯೋಜನೆಯಲ್ಲಿ ಯಾರಿಗೆ ಉಚಿತ ಪ್ರಯಾಣ ?
ಮಹಿಳೆಯರಿಗೆ ಉಚಿತ ಪ್ರಯಾಣ
ಹೊಸ ಮಾರ್ಗಸೂಚಿಯಲ್ಲಿ ಏನಿದೆ ?
ಮುಂಗಡ ಟಿಕೆಟ್ ಅನ್ನು ಕಾಯ್ದಿರಿಸಿಕೊಳ್ಳಬಹುದು
ಇದನ್ನು ಓದಿ : ಕೇಂದ್ರ ಸರ್ಕಾರದಿಂದ ಪ್ರತಿ ಮಹಿಳೆಯರಿಗೂ 5000ರೂಪಾಯಿಗಳು ಸಿಗಲಿದೆ :ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ