ನಮಸ್ಕಾರ ಸ್ನೇಹಿತರೆ, ಇಂದು ನಿಮಗೆಲ್ಲರಿಗೂ ತಿಳಿಸುತ್ತಿರುವ ಒಂದು ಉಪಯುಕ್ತ ಮಾಹಿತಿ ಎಂದರೆ ಕೇಂದ್ರ ಸರ್ಕಾರದಿಂದ ನಿರುದ್ಯೋಗಿಗಳಿಗೆ ಹೊಸ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಯೋಜನೆಯ ನಿರುದ್ಯೋಗಿ ಯುವಕ ಯುವತಿಯರಿಗೆ ತರಬೇತಿ ನೀಡುವುದರ ಮೂಲಕ ಕೆಲಸವನ್ನು ನೀಡುತ್ತಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಯಾವೆಲ್ಲ ಅಭ್ಯರ್ಥಿಗಳು ಯೋಜನೆಯ ಅರ್ಹತೆಯನ್ನು ಪಡೆಯಬಹುದು ಹಾಗೂ ಇದರ ಉದ್ದೇಶ, ಸೌಲಭ್ಯಗಳು, ಪ್ರಯೋಜನಗಳು ಮೊದಲಾದ ವಿಷಯಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನಂತೆ ತಿಳಿಸಲಾಗುತ್ತದೆ.
ಪ್ರಧಾನಮಂತ್ರಿ ದಕ್ಷ ಯೋಜನೆ :
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವೀರೇಂದ್ರ ಕುಮಾರ್ ಅವರು ಪ್ರಧಾನಮಂತ್ರಿ ದಕ್ಷ್ ಯೋಜನೆಯ ಹೋಟೆಲ್ ಹಾಗೂ ಮೊಬೈಲ್ ಅಪ್ಲಿಕೇಶನ್ ಅನ್ನು ಆಗಸ್ಟ್ ಐದು 2021 ರಂದು ಪ್ರಾರಂಭಿಸಿದ್ದಾರೆ. ಪ್ರಧಾನಮಂತ್ರಿ ದಕ್ಷತೆ ಮತ್ತು ನುರಿತ ಫಲಾನುಭವಿ ಯೋಜನೆ ಎಂದು ಸಹ ಈ ಯೋಜನೆಯನ್ನು ಕರೆಯಲಾಗುತ್ತದೆ. ಈ ಪ್ರಧಾನ ಮಂತ್ರಿ ದಕ್ಷ್ ಯೋಜನೆಯು ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ ಮತ್ತು ಸಫಾಯಿ ಕರ್ಮಚಾರಿಗಳ ಗುರಿ ಈ ಗುಂಪಿಗೆ ಮಾತ್ರ ಉಚಿತ ತರಬೇತಿಯನ್ನು ನೀಡಲಾಗುವುದು.
ಈ ಯೋಜನೆಗೆ ಕೇಂದ್ರ ಸರ್ಕಾರವು ನೀಡಿರುವ ಮೊತ್ತ :
ಸಾವಿರದಿಂದ 3 ಸಾವಿರದವರೆಗೆ 80 ಪರ್ಸೆಂಟ್ ಅಥವಾ ಅದಕ್ಕಿಂತ ಹೆಚ್ಚು ಹಾಜರಾತಿ ಪಡೆದ ಎಲ್ಲಾ ತರಬೇತಿದಾರರಿಗೆ ಸ್ಟೈಫಂಡ್ ಮತ್ತು ವೇತನ ಪರಿಹಾರವಾಗಿ ಈ ಯೋಜನೆಯು ಒದಗಿಸುತ್ತದೆ. ಈ ಯೋಜನೆ ಅಡಿಯಲ್ಲಿ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದಂತಹ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ ಜೊತೆಗೆ ಅಭ್ಯರ್ಥಿಗಳ ಪ್ರಮಾಣಿಕರಿಸಿದ ಮತ್ತು ಮೌಲ್ಯಮಾಪನದ ನಂತರ ಯೋಜನೆಯ ಸಹ ನೀಡಲಾಗುತ್ತದೆ.
ಈ ಯೋಜನೆಯ ಮುಖ್ಯ ಉದ್ದೇಶ :
ಯುವಕ ಯುವತಿಯರಿಗೆ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಕೌಶಲ್ಯಗಳನ್ನು ಒದಗಿಸುವುದು ಪ್ರಧಾನಮಂತ್ರಿ ದಕ್ಷ್ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದರ ಜೊತೆಗೆ ಸ್ವಯಂ ಉದ್ಯೋಗದ ನೆರವನ್ನು ಅವರಿಗೆ ಈ ಯೋಜನೆಯ ಮೂಲಕ ನೀಡಲಾಗುವುದು. ಅಭ್ಯರ್ಥಿಗಳಿಗೆ ಅಲ್ಪಾವಧಿಯ ತರಬೇತಿ ಕಾರ್ಯಕ್ರಮ ಹಾಗೂ ದೀರ್ಘಾವಧಿ ತರಬೇತಿ ಕಾರ್ಯಕ್ರಮದ ಜೊತೆಗೆ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಎಲ್ಲಾ ಅಭ್ಯರ್ಥಿಗಳಿಗೂ ತರಬೇತಿಯನ್ನು ನೀಡಲಾಗುವುದು.ಈ ಯೋಜನೆಯ ಮೂಲಕ 50,000 ಯುವಕರು 2023 – 24ರಲ್ಲಿ ಇದರ ಉಪಯೋಗವನ್ನು ಪಡೆಯಲಿದ್ದಾರೆ.
ಪ್ರಧಾನ ಮಂತ್ರಿ ದಕ್ಷ್ ಯೋಜನೆಯ ಅಧಿಕೃತ ವೆಬ್ಸೈಟ್ :
ಕೇಂದ್ರ ಸರ್ಕಾರವು ಜಾರಿಗೆ ತಂದಂತಹ ಪ್ರಧಾನ ಮಂತ್ರಿ ದಕ್ಷ್ ಯೋಜನೆಯ ಪ್ರಯೋಜನವನ್ನು ಪಡೆಯಲು ಕೇಂದ್ರ ಸರ್ಕಾರವು ಒಂದು ಅಧಿಕೃತ ವೆಬ್ಸೈಟ್ ಅನ್ನು ಒದಗಿಸಿದೆ. ಈ ವೆಬ್ ಸೈಟ್ ನ ಮೂಲಕ ಯುವಕರು ಅರ್ಜಿಯನ್ನು ಸಲ್ಲಿಸಬಹುದು.ಪಾರದರ್ಶಕತೆಯೊಂದಿಗೆ ಆಯ್ಕೆಯಾದ ಎಲ್ಲಾ ಫಲಾನುಭವಿಗಳಿಗೆ ತರಬೇತಿ ನೀಡಲಾಗುತ್ತದೆ. ಈ ತರಬೇತಿಯು ಉಚಿತವಾಗಿರುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಇರುವ ಅಧಿಕೃತ ವೆಬ್ಸೈಟ್ ಎಂದರೆ https://pmdaksh.dosje.gov.in,
ಇದನ್ನು ಓದಿ : ಜಿಯೋ ಕಂಪನಿ ಎರಡು ವಾರ್ಷಿಕ ರಿಚಾರ್ಜ್ ಘೋಷಿಸಿದೆ : ಪ್ರತಿನಿತ್ಯ 2GB ಡೇಟಾ ಜೊತೆಗೆ 365 ದಿನ ಉಚಿತ ಕರೆ
ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಅಗತ್ಯ ದಾಖಲೆಗಳೆಂದರೆ :
ಜಾತಿ ಪ್ರಮಾಣ ಪತ್ರ, ವಾಸ ಸ್ಥಳದ ಪ್ರಮಾಣ ಪತ್ರ, ಸರ್ಕಾರ, ಪಾಸ್ಪೋರ್ಟ್ ಅಳತೆಯ ಭಾವಚಿತ್ರ, ಮೊಬೈಲ್ ನಂಬರ್, ಪ್ರಮಾಣ ಪತ್ರ ಹಾಗೂ ಮೊದಲಾದವು. ಹೀಗೆ ಈ ಎಲ್ಲಾ ದಾಖಲೆಗಳನ್ನು ಸಲ್ಲಿಸುವುದರ ಮೂಲಕ ಪ್ರಧಾನ ಮಂತ್ರಿ ದಕ್ಷ್ ಯೋಜನೆಯ ಪ್ರಯೋಜನವನ್ನು ಪಡೆಯಬಹುದು.
ಒಟ್ಟಾರೆ ಹೇಳುವುದಾದರೆ ಕೇಂದ್ರ ಸರ್ಕಾರವು ನಿರುದ್ಯೋಗ ಯುವಕರಿಗೆ ನೀಡಿರುವ ಈ ಯೋಜನೆಯು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುವುದರ ಮೂಲಕ ಹಿಂದುಳಿದ ವರ್ಗಗಳಿಗೆ ಒಂದು ಆಶಾಕಿರಣವಾಗಿ ಕಾರ್ಯನಿರ್ವಹಿಸಬೇಕು ಎಂಬುದು ನಮ್ಮ ಅಭಿಪ್ರಾಯವಾಗಿದೆ.
ಯೋಜನೆಯ ಹೆಸರು ಯಾವುದು ?
ಪ್ರಧಾನ ಮಂತ್ರಿ ದಕ್ಷ್ ಯೋಜನೆ
ಯಾರಿಗೆ ಉಪಯೋಗವಾಗಲಿದೆ ಈ ಯೋಜನೆ ?
ನಿರುದ್ಯೋಗಿ ಯುವಕ ಯುವತಿಯರಿಗೆ
ಅಧಿಕೃತ ವೆಬ್ಸೈಟ್ ಯಾವುದು ?
https://pmdaksh.dosje.gov.in
ಇದನ್ನು ಓದಿ : ಕೇಂದ್ರ ಸರ್ಕಾರದಿಂದ ಪ್ರತಿ ಮಹಿಳೆಯರಿಗೂ 5000ರೂಪಾಯಿಗಳು ಸಿಗಲಿದೆ :ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ