Thursday, July 25, 2024
HomeInformationರಾಜೀವ್ ಗಾಂಧಿ ಆವಾಸ್ ಯೋಜನೆ: ಕರ್ನಾಟಕ ಸರ್ಕಾರದ ಘೋಷಣೆ

ರಾಜೀವ್ ಗಾಂಧಿ ಆವಾಸ್ ಯೋಜನೆ: ಕರ್ನಾಟಕ ಸರ್ಕಾರದ ಘೋಷಣೆ

ನಮಸ್ಕಾರ ಸ್ನೇಹಿತರೆ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ವಸತಿರಹಿತ ಮತ್ತು ಭೂ ರಹಿತ ವ್ಯಕ್ತಿಗಳಿಗೆ ಕೆಲವೊಂದು ಹೃದಯ ಸ್ಪರ್ಶಿಸುದ್ದಿಯನ್ನು ಕರ್ನಾಟಕ ಸರ್ಕಾರವು ಅನಾವರಣಗೊಳಿಸಿದೆ. ಅದೇನೆಂದರೆ ಬೆಂಗಳೂರು ನಗರ ಜಿಲ್ಲೆಯ ನಿವಾಸಿಗಳಿಗೆ 3 ಲಕ್ಷ ರೂಪಾಯಿಗಳು ವಾರ್ಷಿಕ ಆದಾಯ ಮಿತಿಗಳನ್ನು ಮತ್ತು ಇತರ ಜಿಲ್ಲೆಗಳ ನಿವಾಸಿಗಳಿಗೆ ಎರಡು ಲಕ್ಷ ರೂಪಾಯಿಗಳಿಗೆ ಮಿತಿಯನ್ನು ಹೇರುವ ಮೂಲಕ ರಾಜ್ಯ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ನೀವು ನೋಡಬಹುದು.

Rajiv Gandhi Awas Yojana
Rajiv Gandhi Awas Yojana
Join WhatsApp Group Join Telegram Group

ನನ್ನ ಮನೆ ಯೋಜನೆ :

ಭಾಗ್ಯ ಸಂಪದ ಎಂಬ ಅಂದರೆ ನನ್ನ ಮನೆ ಎಂದು ಕರೆಯಲ್ಪಡುವ ಈ ಪ್ರಗತಿಪರ ಉಪಕ್ರಮವು ಭಾಗ್ಯ ಸಂಪದ ಎಂಬ ವಸತಿ ಯೋಜನೆಯ ಭಾಗವಾಗಿದ್ದು ಇದರಲ್ಲಿ ದೀನದಲಿತರ ಜನರಿಗೆ ರಸ್ತೆಗಳು ಒಳಚರಂಡಿ ವ್ಯವಸ್ಥೆಗಳು ನೀರು ಸರಬರಾಜು ಮತ್ತು ವಿದ್ಯುತ್ ನಂತಹ ಅಗತ್ಯ ಸೌಲಭ್ಯಗಳೊಂದಿಗೆ ಶಾಶ್ವತ ಮನೆಗಳನ್ನು ಒದಗಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ. ಅರಹ ಸಾರ್ವಜನಿಕರಿಂದ ಅಂದರೆ ನಿಗಮದ ಹಂಚಿಕೆ ನಿಯಮಗಳ ಅಡಿಯಲ್ಲಿ ಫ್ಲಾಟ್ ಗಳನ್ನು ಹೊಂದಲು ಬಯಸುವವರಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.

ಯೋಜನೆಯ ಅರ್ಹತೆಗಳು :

ಸರ್ಕಾರದ ಈ ಯೋಜನೆಯ ಪ್ರಯೋಜನಗಳನ್ನು ಪಡೆಯಬೇಕಾದರೆ ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕು ಅವುಗಳೆಂದರೆ, ಅಭ್ಯರ್ಥಿಯು ಕರ್ನಾಟಕ ರಾಜ್ಯದ ನಿವಾಸಿಗಳಾಗಿದ್ದು ಕನಿಷ್ಠ ಬೆಂಗಳೂರು ನಗರ ಅಥವಾ ಗ್ರಾಮಾಂತರ ಅಥವಾ ರಾಮನಗರ ಜಿಲ್ಲೆಯಲ್ಲಿ ಐದು ವರ್ಷಗಳ ಕಾಲ ವಾಸವಾಗಿರಬೇಕು. ಆಧಾರ್ ಸಂಖ್ಯೆ ಮತ್ತು ಪಡಿತರ ಚೀಟಿಯನ್ನು ಅರ್ಜಿದಾರರು ಹೊಂದಿರಬೇಕು. ಚುನಾವಣಾ ಆಯೋಗವು ನೀಡಿರುವ ಗುರುತಿನ ಚೀಟಿಯನ್ನು ಅರ್ಜಿದಾರರು ಕಡ್ಡಾಯವಾಗಿ ಹೊಂದಿರಬೇಕು. ವಸತಿ ರಹಿತ ವಾಗಿರಬೇಕು ಮತ್ತು ಅರ್ಜಿದಾರರ ಹೆಸರಿನಲ್ಲಿ ಅಥವಾ ಕುಟುಂಬದ ಹೆಸರಿನಲ್ಲಿ ಯಾವುದೇ ಆಸ್ತಿ ಅಥವಾ ಮನೆಗಳನ್ನು ಹೊಂದಿರಬಾರದು. 3 ಲಕ್ಷ ರೂಪಾಯಿಗಳನ್ನು ಬೆಂಗಳೂರಿ ನಗರ ಜಿಲ್ಲೆಯ ನಿವಾಸಿಗಳಿಗೆ ವಾರ್ಷಿಕ ಆದಾಯ ಹಾಗೂ 2 ಲಕ್ಷ ರೂಪಾಯಿಗಳನ್ನು ಇತರ ಜಿಲ್ಲೆಗಳ ನಿವಾಸಿಗಳಿಗೆ ಆದಾಯವನ್ನು ಮಿತಿಗೊಳಿಸಲಾಗಿದೆ. ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಹೊಂದಿರಬೇಕು.

ಅರ್ಜಿ ಸಲ್ಲಿಸುವ ವಿಧಾನ :

ಕರ್ನಾಟಕ ಸರ್ಕಾರದ ಈ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾದರೆ ಅಭ್ಯರ್ಥಿಗಳು ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವುದರ ಮೂಲಕ ಉಚಿತವಾಗಿ ಈ ಯೋಜನೆಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ಪೂರ್ಣಗೊಳಿಸಬಹುದು. https://ashraya.karnataka.gov.in ಆನ್ಲೈನ್ ನಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

15 ತಿಂಗಳ ಯೋಜನೆ :

ಪ್ರತಿ ಮನೆಯ ಘಟಕ ವೆಚ್ಚವು ಅಂದರೆ ಸಕ್ಸಸ್ ಹೊಂ ಯೂನಿಟ್ಟಿಗೆ 13,25,000 ಆಗಿದ್ದು ಬ್ಯಾಂಕ್ ಸಾಲದ ಜೊತೆಗೆ ಫಲಾನುಭವಿಗಳು ಸಂಪೂರ್ಣ ಮೊತ್ತಕ್ಕೆ ಕೊಡಗಿ ನೀಡುತ್ತಾರೆ. ವಸತಿ ಯೋಜನೆಯ ಗುಣಮಟ್ಟದ ಭರವಸೆಯನ್ನು ಕರ್ನಾಟಕ ರಾಜ್ಯ ಸರ್ಕಾರವು ರಾಜೀವ್ ಗಾಂಧಿ ವಸತಿ ನಿಗಮದ ನಿರ್ಮಾಣ ಸಂಸ್ಥೆಯಾದ ಕರ್ನಾಟಕ ರಾಜ್ಯ ಆವಾಸಸ್ಥಾನ ಕೇಂದ್ರ ಮೇಲ್ವಿಚಾರಣೆ ಮಾಡುತ್ತದೆ ಎಂದು ಹೇಳಬಹುದಾಗಿದೆ. ಮೂರನೇ ಪಕ್ಷದ ತಂತ್ರಜ್ಞರು ನಿರ್ಮಾಣದ ವಿವಿಧ ಹಂತಗಳಲ್ಲಿ ಈ ಯೋಜನೆಗೆ ಸಂಬಂಧಿಸಿದೆ ಗುಣಮಟ್ಟದ ತಪಾಸಣೆಯನ್ನು ನಡೆಸುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ನಿಗಮದ ವೆಬ್ಸೈಟ್ಗಳು ಮಾರ್ಗಸೂಚಿಗಳು ಸುತ್ತೋಲೆಗಳು ಪ್ರಮುಖ ಪತ್ರಗಳು ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ನಮೂನೆಗಳು ಮತ್ತು ಗ್ರಾಹಕರ ಅವಶ್ಯಕತೆಗಳು ಸೇರಿದಂತೆ ಸಮಗ್ರ ಮಾಹಿತಿಯನ್ನು ನಿಗಮದ ವೆಬ್ ಸೈಟ್ ನಲ್ಲಿ ಪಡೆಯಬಹುದಾಗಿದ್ದು, ಮುಂದಿನ ಹದಿನೈದು ತಿಂಗಳಲ್ಲಿ ಈ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆಯನ್ನು ರಾಜ್ಯ ಸರ್ಕಾರ ಹೊಂದಿದೆ.

ಇದನ್ನು ಓದಿ : ಈ ಜಿಲ್ಲೆಯ ಮಹಿಳೆಯರಿಗೆ ಗೃಹಲಕ್ಷ್ಮಿ ಎರಡನೇ ಕಂತಿನ ಹಣ ಬಿಡುಗಡೆ : ನಿಮ್ಮ ಜಿಲ್ಲೆಯ ಹೆಸರು ಇದೆಯೇ.?

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :

ಈ ಯೋಜನೆಗೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿಯನ್ನು ಅಂದರೆ ಹೆಚ್ಚಿನ ಮಾಹಿತಿಯನ್ನು ಪಡೆಯಬೇಕಾದರೆ ಯಾವುದೇ ಸಾಮಾನ್ಯ ಸೇವ ಕೇಂದ್ರಕ್ಕೆ ವ್ಯಕ್ತಿಗಳು ಭೇಟಿ ನೀಡಬಹುದು ಮತ್ತು ಸಹಾಯ ಅಥವಾ ಮೇಲ್ವಿಚಾರಣೆಗಾಗಿ ಈ ಕೆಳಗಿನ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡುವುದರ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ. ಅವುಗಳೆಂದರೆ,080-23118888,22106888,8088253773,9845015018,9448287514,9448021564. ಹೀಗೆ ನನ್ನ ಮನೆ ಉಪಕ್ರಮವು ಕರ್ನಾಟಕ ಸರ್ಕಾರದ್ದಾಗಿದ್ದು ಇದರಲ್ಲಿ ವಸತಿ ರಹಿತ ಮತ್ತು ಭೂ ರಹಿತ ಜನಸಂಖ್ಯೆಗೆ ಭರವಸೆಯ ಕಿರಣವಾಗಿದೆ ಎಂದು ಹೇಳಬಹುದಾಗಿದೆ.

ಒಟ್ಟಿನಲ್ಲಿ ರಾಜ್ಯ ಸರ್ಕಾರದ ಈ ಯೋಜನೆಯು ಜನರಿಗೆ ಮೂಲಭೂತ ಸೌಕರ್ಯಗಳೊಂದಿಗೆ ಶಾಶ್ವತ ಮನೆಗಳನ್ನು ಪಡೆಯಲು ಅವಕಾಶ ಕಲ್ಪಿಸುತ್ತದೆ ಎಂದು ಹೇಳಬಹುದಾಗಿತ್ತು ಈ ಯೋಜನೆಯ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡುವ ಮೂಲಕ ಅವರು ವಸತಿ ರಹಿತವಾಗಿದ್ದರೆ ಅವರು ಸ್ವಂತ ಮನೆಯನ್ನು ಕೊಂಡುಕೊಳ್ಳಲು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಬಂಗಾರದ ಬೆಲೆಯಲ್ಲಿ ಮತ್ತೆ ಇಳಿಕೆ : ಚಿನ್ನ ಖರೀದಿಸುವವರಿಗೆ ಇದು ಉತ್ತಮ ಸಮಯ

ಈ ವ್ಯಕ್ತಿಗೆ ವಿಕಿಪೀಡಿಯ ಎಂದು ಯಾಕೆ ಕರೆಯುತ್ತಾರೆ..? ನಾನು ನಂದಿನಿ ಸಾಂಗ್ ಕರ್ತೃ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments