ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ರಾಜ್ಯ ಸರ್ಕಾರವು ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದಂತಹ ಪಡಿತರ ಚೀಟಿದಾರರಿಗೆ ಬಿಪಿಎಲ್ ಹೆಲ್ತ್ ಕಾರ್ಡನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹಾಗಾದರೆ ಈ ಬಿಪಿಎಲ್ ಹೆಲ್ತ್ ಕಾರ್ಡ್ ಏನು? ಈ ಬಿಪಿಎಲ್ ಹೆಲ್ತ್ ಕಾರ್ಡ್ ನ ಪ್ರಯೋಜನಗಳೇನು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.
ಬಿಪಿಎಲ್ ಹೆಲ್ತ್ ಕಾರ್ಡ್:
ಜಾತಕ ಪಕ್ಷಿಯಂತೆ ಕಾಯುತ್ತಿರುವ ಅರ್ಹರಿಗೆ ಸರ್ಕಾರವು ಈಗ ಸಿಹಿ ಸುದ್ದಿಯನ್ನು ನೀಡಿದ್ದು ಹೊಸದಾಗಿ ಆದ್ಯತಾ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಲು ರಾಜ್ಯ ಸರ್ಕಾರ ಹೊರಡಿಸಿದೆ. ಬಿಪಿಎಲ್ ಕಾರ್ಡ್ ಕೇವಲ ಆರೋಗ್ಯ ಸೇವೆ ಸೌಲಭ್ಯದ ಸಲುವಾಗಿ ಬಯಸಿರುವರಿಗೆ ಬಿಪಿಎಲ್ ಹೆಲ್ತ್ ಕಾರ್ಡ್ ಅನ್ನು ಸಹ ಶೀಘ್ರವೇ ವಿತರಣೆ ಆಗಲಿದೆ ಎಂದು ಹೇಳಲಾಗಿದೆ. ಈ ಬಿಪಿಎಲ್ ಹೆಲ್ತ್ ಕಾರ್ಡ್ ಆರೋಗ್ಯ ಸೌಲಭ್ಯಕ್ಕೆ ಮಾತ್ರ ಸೀಮಿತವಾಗಿದ್ದು ಇದರಿಂದ ಪಡಿತರವನ್ನು ಪಡೆಯಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರ ಹೊರಡಿಸಿದಂತಹ 5 ಗ್ಯಾರಂಟಿ ಯೋಜನೆಗಲ್ಲಿ ನಾಲ್ಕು ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದಿವೆ. ಈ ಯೋಜನೆಗಳ ಲಾಭವನ್ನು ಪಡೆಯಲು ಮುಖ್ಯವಾಗಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವುದು ಕಡ್ಡಾಯವಾಗಿದೆ ಹಾಗಾಗಿ ಬಿಪಿಎಲ್ ಕಾರ್ಡ್ ಗಾಗಿ ಅರ್ಜಿಯನ್ನು ಸಲ್ಲಿಸಲು ನೂಕು ನುಗ್ಗಲು ಉಂಟಾಗಿದೆ. ಇದೆಲ್ಲದರ ನಡುವೆ ಕೇಂದ್ರ ಸರ್ಕಾರವು ವಿಧಿಸಿದ ಮಿತಿ ನಡುವೆಯೂ ಸಹ ಬಿಪಿಎಲ್ ಕಾರ್ಡ್ ಅನ್ನು ವಿತರಿಸಲಾಗಿದೆ. ಆರೋಗ್ಯ ಸೇವೆಗಾಗಿ ಬಿಪಿಎಲ್ ಕಾರ್ಡ್ ಅನ್ನು ಹೊಂದಲು ಹಲವಾರು ಜನರು ಬಯಸಿದ್ದರು. ಹಾಗಾಗಿ ರಾಜ್ಯ ಸರ್ಕಾರವು ಆರೋಗ್ಯ ಸೇವೆಗಾಗಿ ಬಿಪಿಎಲ್ ಹೆಲ್ತ್ ಕಾರ್ಡ್ ಅನ್ನು ಜಾರಿಗೊಳಿಸಲು ನಿರ್ಧರಿಸಿದೆ.
ಮನೆಮನೆ ಸಮೀಕ್ಷೆ :
ಬಿಪಿಎಲ್ ಪಡಿತರ ಮತ್ತು ಆರೋಗ್ಯ ಕಾರ್ಡ್ ನ್ನು ಆಂಧ್ರಪ್ರದೇಶ ಸರ್ಕಾರವು ನಿರ್ಧರಿಸಿದೆ. ಅದರಂತೆ ಈಗ ಆಂಧ್ರಪ್ರದೇಶ ಮಾದರಿಯಲ್ಲಿ ಸಹ ನಾವು ಬಿಪಿಎಲ್ ಪಡಿತರ ಮತ್ತು ಆರೋಗ್ಯ ಕಾರ್ಡ್ ವಿತರಿಸುವಂತೆ ಸದನ ಸಮಿತಿನತ್ತ ಮಾಧ್ಯಮದವರು ಗಮನ ಸೆಳೆದಾಗ ಕೆಎಚ್ ಮುನಿಯಪ್ಪ ಅವರು ಈ ರೀತಿ ಹೇಳಿದ್ದಾರೆ. ನನಗೂ ವಂತಹ ಯೋಚನೆ ಹೊಳೆದಿದ್ದು ಕಾರ್ಯರೂಪಕ್ಕೆ ತರುವ ಮುನ್ನ ಸ್ಪಷ್ಟನೆ ಕಂಡುಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ. ಪಡಿತರ ವ್ಯವಸ್ಥೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಮನೆಮನೆ ಸಮೀಕ್ಷೆ ಕೈಗೊಳ್ಳಲು ತೀರ್ಮಾನಿಸಲಾಗಿದೆ ಹಾಗೂ ಅರ್ಹರಿಗೆ ಅನುಕೂಲ, ನಿಗದಿತ ಮಾಲದಂಡ ಪೂರ್ಣ ಹಾಗೂ ಪೋಲು ಪಡೆಯುವುದಕ್ಕಾಗಿ ಈ ಸಮೀಕ್ಷೆಯನ್ನು ನಡೆಸಲಾಗುತ್ತದೆ. ಆರೋಗ್ಯ ಸೇವೆಗಾಗಿ ಬಿಪಿಎಲ್ ಕಾರ್ಡ್ ಬಳಸುತ್ತಿರುವುದು ಗಮನಕ್ಕೆ ಬಂದಿದೆ ಎಂದಿದ್ದಾರೆ. ಮನೆಮನೆ ಸಮೀಕ್ಷೆ ನಡೆಸಿದಾಗ ಹಲವಾರು ಜನರು ನಮಗೆ ಪಡಿತರ ಸಂಬಂಧಿಸಿದಂತೆ ಅಕ್ಕಿ ಬೇಡ ಬದಲಾಗಿ ವೈದ್ಯಕೀಯ ಸೌಲಭ್ಯಗಳು ಬೇಕು ಎಂದು ಹೇಳಿದ್ದಾರೆ ಎಂದು ಕೆಎಚ್ ಮುನಿಯಪ್ಪ ಅವರು ಮಾಹಿತಿ ನೀಡಿದ್ದಾರೆ. ಹಾಗಾಗಿ ಸುಗಮ ಪಡಿತರ ವ್ಯವಸ್ಥೆಗೆ ಮನೆ ಮನೆ ಸಮೀಕ್ಷೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಹೀಗೆ ರಾಜ್ಯ ಸರ್ಕಾರವು ಪಡಿತರ ಚೀಟಿಯನ್ನು ಹೊಂದಿದವರಿಗಾಗಿ ಪಡಿತರ ಹೆಲ್ತ್ ಕಾರ್ಡ್ ಅನ್ನು ನೀಡಲು ನಿರ್ಧರಿಸಿದೆ. ಈ ಪಡಿತರ ಹೆಲ್ತ್ ಕಾರ್ಡ್ ನಲ್ಲಿ ಪಡಿತರವನ್ನು ಪಡೆಯಲು ಸಾಧ್ಯವಿಲ್ಲ ಬದಲಾಗಿ ತಮಗೆ ಅಗತ್ಯ ಸಂದರ್ಭಗಳಲ್ಲಿ ಬೇಕಾದ ಚಿಕಿತ್ಸಾ ಸೌಲಭ್ಯವನ್ನು ಪಡೆಯಬಹುದಾಗಿದೆ. ಹೀಗೆ ರಾಜ್ಯ ಸರ್ಕಾರ ಜಾರಿಗೊಳಿಸಲಿರುವ ಈ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರು ಹಾಗು ಸಂಬಂಧಿಕರಿಗೂ ಸಹ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಆನ್ಲೈನ್ ಮೂಲಕ ಹೊಸ ರೇಷನ್ ಕಾರ್ಡ್ ಪಡೆಯಿರಿ : ಕ್ಯೂಆರ್ ಕೋಡ್ ರೇಷನ್ ಕಾರ್ಡ್ ಪಡೆಯಲು ಇಂದೇ ಇಲ್ಲಿಂದ ಅರ್ಜಿ ಸಲ್ಲಿಸಿ
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಮಹಿಳೆಯರಿಗೆ 2 ಹೊಸ ರೂಲ್ಸ್: ಕಡ್ಡಾಯವಾಗಿ ಪಾಲಿಸಬೇಕು ಇಲ್ಲ ಅಂದ್ರೆ ಹಣ ಇಲ್ಲ