ನಮಸ್ಕಾರ ಸ್ನೇಹಿತರೆ ಕರ್ನಾಟಕ ಸರ್ಕಾರವು ರಾಜ್ಯದ ಮಹಿಳೆಯರಿಗೆ ಶಕ್ತಿ ಯೋಜನೆ ಅಡಿ ಉಚಿತ ಪ್ರಯಾಣವನ್ನು ನೀಡಿದ್ದು, ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ ಬೆನ್ನಲ್ಲೇ ಈಗ ಕೆ ಎಸ್ ಆರ್ ಟಿ ಸಿ ಫುಲ್ ರಶ್ ಆಗಿದೆ. ಈ ಯೋಜನೆ ಕೆಲ ಮಹಿಳೆಯರಿಗೆ ಸಂತೋಷವಾಗಿದ್ದರೆ ಇನ್ನೂ ಕೆಲವು ಮಹಿಳೆಯರಿಗೆ ಈ ಯೋಜನೆ ಬೇಡವಾಗಿತ್ತು ಎಂಬ ಮಾತು ಬರುತ್ತಿದೆ.
ಹಾಗೆಯೇ ಈ ಯೋಜನೆ ಅಡಿ ಬಸ್ ಫ್ರೀ ಮಾಡಿದಂತೆ ಬೆಂಗಳೂರಿನ ನಮ್ಮ ಮೆಟ್ರೋ ಸಹ ಫ್ರೀ ಮಾಡಬೇಕೆಂಬ ಹೊಸ ಬೇಡಿಕೆಗಳು ಸರ್ಕಾರದ ಮುಂದೆ ಬಂದು ತಲುಪಿದೆ. ಈ ವಿಚಾರವಾಗಿ ಸಂಪೂರ್ಣ ಮಾಹಿತಿಯನ್ನು ಇದೀಗ ನೋಡಬಹುದು.
ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಉಚಿತ ಪ್ರಯಾಣಕ್ಕೆ ಮನವಿ
ಬೆಂಗಳೂರಿನಲ್ಲೇ ವೈದ್ಯಕೀಯ ವೃತ್ತಿ ಮಾಡುತ್ತಿರುವ ಮಹಿಳೆ ಒಬ್ಬರು ಸರ್ಕಾರಕ್ಕೆ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿಯೂ ಉಚಿತ ಸೇವೆ ನೀಡುವಂತೆ ಮನವಿಯನ್ನು ನೀಡಿದ್ದಾರೆ. ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ವನ್ನು ಬಸ್ ನಲ್ಲಿ ನೀಡುವ ಯೋಜನೆಯ ಚರ್ಚೆಯ ಹಂತದಲ್ಲೇ ಇದ್ದು ಇದೀಗ ಹೊಸ ಬೇಡಿಕೆ ಹಾಗೂ ಸಮಸ್ಯೆಗೆ ಆಹ್ವಾನ ನೀಡಿದಂತಾಗಿದೆ.
ಇದನ್ನು ಓದಿ :SSLC ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ ಇಲ್ಲಿದೆ ಅಧಿಕೃತ ವೆಬ್ ಸೈಟ್ ಲಿಂಕ್
ಮಹಿಳೆಯ ಮನವಿಗೆ ಡಾ. ದೀಪ ಕೃಷ್ಣಮೂರ್ತಿ ಟ್ವೀಟ್
ಮಹಿಳೆಯು ಬೆಂಗಳೂರಿನ ನಮ್ಮ ಮೆಟ್ರೋಗೆ ಉಚಿತ ಪ್ರಯಾಣ ನೀಡಬೇಕು ಎಂಬ ಮನವಿಯ ಬಗ್ಗೆ ಬೆಂಗಳೂರಿನ ಚಕ್ರವರ್ತಿ ಆಸ್ಪತ್ರೆಯ ಹಿರಿಯ ಇಂಟರ್ನ್ಯಾಷನಲ್ ಕಾರ್ಡಿಯಾಲಜಿಸ್ಟ್ ಆದ ಡಾಕ್ಟರ್ ದೀಪ ಕೃಷ್ಣಮೂರ್ತಿ ಅವರು ಈ ಮನವಿಗೆ ಸಂಬಂಧಿಸಿದಂತೆ ಮೀಟ್ ಮಾಡಿದ್ದಾರೆ. ಅವರು ಸಹ ಉಚಿತ ಸರ್ಕಾರಿ ಬಸ್ ಪ್ರಯಾಣಕ್ಕೆ ಅವಕಾಶ ನೀಡಿದಂತೆ ಮೆಟ್ರೋದಲ್ಲಿಯೂ ಸಹ ಉಚಿತ ಪ್ರಯಾಣ ಅವಕಾಶ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಸರ್ಕಾರಿ ಬಸ್ ನಷ್ಟೇ ರಾಜ್ಯದಲ್ಲಿ ಬೆಂಗಳೂರು ನಮ್ಮ ಮೆಟ್ರೋ ಸಹ ಫೇಮಸ್ ಆಗಿದ್ದು ಮಹಿಳೆಯರ ಅನುಕೂಲಕ್ಕಾಗಿ ಈ ರೀತಿಯ ಟ್ವೀಟ್ ಅನ್ನು ವೈದ್ಯರು ಮಾಡಿದ್ದಾರೆಂದು ಕೆಲವರು ಹೇಳಿದರೆ ಇನ್ನೂ ಕೆಲವರು ಸುಮ್ಮನೆ ಗಿಮಿಕ್ ಎಂದು ಹೇಳಿದ್ದಾರೆ.
ಹೀಗೆ ಮಹಿಳೆಯರ ಅನುಕೂಲಕ್ಕಾಗಿ ಉಚಿತ ಬಸ್ ಪ್ರಯಾಣವನ್ನು ಮಾಡಿದ ಕರ್ನಾಟಕ ಸರ್ಕಾರ ಈಗ ನಮ್ಮ ಮೆಟ್ರೋ ಉಚಿತ ಪ್ರಯಾಣಕ್ಕೆ ಮನವಿ ಸಲ್ಲಿಸುವುದರ ಬಗ್ಗೆ ಸೀರಿಯಸ್ ಆಗಿ ನಿರ್ಧಾರ ತೆಗೆದುಕೊಂಡು ಸ್ಪಂದನೆ ನೀಡುತ್ತದೆಯೋ ಇಲ್ಲವೋ ಎಂಬುದನ್ನು ಕಾದು ನೋಡಬೇಕು ಧನ್ಯವಾದಗಳು.
ಮಹಿಳೆಯರು ಬಸ್ ಜೊತೆಗೆ ಯಾವುದನ್ನು ಉಚಿತ ಕೇಳುತ್ತಿದ್ದಾರೆ ಪ್ರಯಾಣಕ್ಕೆ ?
ಮೆಟ್ರೋದಲ್ಲಿ ಉಚಿತ ಕೇಳುತ್ತಿದ್ದಾರೆ
ಉಚಿತ ಮನವಿ ಮಾಡಿದವರು ಯಾರು ?
ಡಾಕ್ಟರ್ ದೀಪಿಕಾ ಕೃಷ್ಣಮೂರ್ತಿ ಟ್ವೀಟ್ ಮೂಲಕ ಮನವಿ
ಇದನ್ನು ಓದಿ :ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದರೆ ಮಾತ್ರ ಉಚಿತ ಅಕ್ಕಿ ಜೊತೆಗೆ ಹಣ ಪಡೆಯಬಹುದು