ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಕರ್ನಾಟಕದಲ್ಲಿ ಉಚಿತ ವೈಫೈ ನೀಡುವ ಕುರಿತಾಗಿ. ಹಾಗಾದರೆ ಈ ಉಚಿತ ವೈಫೈ ಕರ್ನಾಟಕದ ಜನತೆಗೆ ಯಾವಾಗನಿಂದ ನೀಡಲಾಗುತ್ತದೆ. ಯಾರು ಈ ವಲಯವನ್ನು ಪ್ರಾರಂಭ ಮಾಡುತ್ತಾರೆ. ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.
ಉಚಿತ ವೈಫೈ ಸೇವೆ :
ಉಚಿತ ವೈಫೈ ಸೇವೆಯನ್ನು ಹಿಂದೆ ಐಟಿ ಮತ್ತು ಬೀಟಿ ಸಚಿವರಾಗಿದ್ದ ಅವಧಿಯಲ್ಲಿ ಒದಗಿಸಲು ಆಯೋಜಿಸಲಾಗಿತ್ತು. ಆದರೆ ಹಿಂದಿನ ಬಿಜೆಪಿ ಸರ್ಕಾರವು ಅದನ್ನು ಮುಂದುವರಿಸಲು ಸಾಧ್ಯವಾಗದೆ ವಿಫಲವಾಯಿತು ಎಂದು ಪ್ರಿಯಾಂಕ ಖರ್ಗೆ ಅವರು ಡಿ ಎಚ್ ಗೆ ತಿಳಿಸಿದರು. ಉಚಿತ ವೈಫೈ ವಲಯಗಳನ್ನು ಕರ್ನಾಟಕದ ಅತ್ಯಂತ ರಾಜ್ಯ ಸರ್ಕಾರವು ಸ್ಥಾಪಿಸಲು ಯೋಜಿಸುತ್ತಿದೆ ಎಂದು ಭಾನುವಾರ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.
ಉಪಮುಖ್ಯಮಂತ್ರಿಗಳ ಸ್ಪಷ್ಟನೆ :
ಡಿಕೆ ಶಿವಕುಮಾರ್ ಅವರು ಐಟಿ ಮತ್ತು ಬಿ ಟಿ ಸಚಿವ ಪ್ರಿಯಾಂಕ ಖರ್ಗೆ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದು ಉಚಿತ ವೈಫೈಯನ್ನು ಕರ್ನಾಟಕದಾದ್ಯಂತ ಸ್ಥಾಪಿಸುವ ವಲಯಗಳನ್ನು ಕುರಿತು ಚರ್ಚಿಸಲು ಪ್ರಿಯಾಂಕ ಖರ್ಗೆ ಅವರು ಬಂದಿದ್ದರು ಎಂದು ಹೇಳಿದರು b ಈ ಸಭೆಯನ್ನು ಆಗಸ್ಟ್ 30ರ ಮೊದಲು ಕರೆಯಲು ನಾನು ನಿರ್ಧರಿಸಿದ್ದೇನೆ. ಈ ಸಭೆಯು ನಡೆಯಲಿದ್ದು, ನಗರದ ಮೂಲ ಸೌಕರ್ಯ ಸೇರಿದಂತೆ ಇತರ ವಿಷಯಗಳ ಕುರಿತು ಚರ್ಚಿಸಲಾಗುತ್ತದೆ ಎಂದು ಸ್ವತಃ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರೇ, ಸುದ್ದಿಗಾರರಿಗೆ ತಿಳಿಸಿದರು.
ಇದನ್ನು ಓದಿ : ಸ್ಕಾಲರ್ಶಿಪ್ ಬಗ್ಗೆ ರಾಜ್ಯದ ಪ್ರತಿಯೊಬ್ಬ ವಿದ್ಯಾರ್ಥಿಯು ತಿಳಿದುಕೊಳ್ಳಿ ಹೊಸ ಅಪ್ಡೇಟ್ ಬಂದಿದೆ
ವಾಸ್ತವಂಶ ತಪಾಸಣೆ ಘಟಕ :
ಕಿಡಿಗೇಡಿಗಳು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಸೌಹಾರ್ದತೆ ಕದಡುವ ಸಲುವಾಗಿ ಪ್ರಚಾರಗಳು ಮಾಡುತ್ತಿರುವುದಲ್ಲದೆ ಇದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುವುದನ್ನು ಗಮನಿಸಿದ ರಾಜ್ಯ ಸರ್ಕಾರವು ವಾಸ್ತವ ಅಂಶ ತಪಾಸಣಾ ಘಟಕ ಸ್ಥಾಪಿಸುವ ಬಗ್ಗೆಯೂ ಗಂಭೀರವಾಗಿ ಚಿಂತಿಸಿದೆ ಎಂದು ಡಿಕೆ ಶಿವಕುಮಾರ್ ಅವರು ತಿಳಿಸಿದರು. ಉಚಿತ ವೈಫೈ ಸೇವೆಯನ್ನು ಐಟಿಬಿಟಿ ಸಚಿವರಾಗಿದ್ದ ಅವರ ಹಿಂದಿನ ಅವಧಿಯಲ್ಲಿ ಒದಗಿಸಲು ಆದರೆ ಅದನ್ನು ಮುಂದುವರಿಸಲು ಹಿಂದಿನ ಸರ್ಕಾರವು ವಿಫಲವಾಯಿತು ಆದ್ದರಿಂದ ಉಪಕ್ರಮವನ್ನು ಪ್ರಾರಂಭಿಸಲು ಸರ್ಕಾರವು ಯೋಜಿಸುತ್ತಿದೆ ಎಂದು ಪ್ರಿಯಾಂಕ ಡಿಎಚ್ಗೆ ತಿಳಿಸಿದರು.
ಹೀಗೆ ರಾಜ್ಯ ಸರ್ಕಾರವು ಕರ್ನಾಟಕದ ಜನತೆಗೆ ಉಚಿತ ವೈಫೈ ಯೋಜನೆಯನ್ನು ತಿಳಿಸುವ ಬಗ್ಗೆ ಹಿಂದೆ ತಮ್ಮ ಪೋಸ್ಟ್ ನಲ್ಲಿ ಟ್ವಿಟರ್ ನಲ್ಲಿ ನಗರ ಪರಿಹಾರ ಶೃಂಗಸಭೆಯನ್ನು ಆಯೋಜಿಸುವ ಬಗ್ಗೆ ಪ್ರಿಯಾಂಕ ಅವರು ಡಿಸಿಎಂ ರೊಂದಿಗೆ ಚರ್ಚಿಸಿದ್ದಾರೆ. ನಾಗರೀಕರಣ ನಗರ ಸವಾಲುಗಳನ್ನು ಎದುರಿಸಲು ತೊಡಗಿಸಿಕೊಳ್ಳುವ ಮತ್ತು ದೀರ್ಘಾವಧಿಯ ಹಾಗೂ ತಕ್ಷಣದ ಪರಿಹಾರಗಳನ್ನು ಪ್ರಸ್ತಾಪಿಸುವ ಗುರಿಯನ್ನು ಸಹ ಕಾಂಗ್ರೆಸ್ ಸರ್ಕಾರ ಹೊಂದಿದೆ ಎಂದು ತಿಳಿಸಿದರು. ಹೀಗೆ ಉಚಿತ ವೈಫೈ ಯೋಜನೆಯ ಬಗ್ಗೆ ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಇಡೀ ರಾಜ್ಯಕ್ಕೆ ಸೋಮವಾರದಿಂದ ಮಹಾದೊಡ್ಡ ಗಂಡಾಂತರ ಕಾದಿದೆ: ಏನಿದು ಭಯಾನಕ ಸುದ್ದಿ..?
ಮುಖ್ಯಮಂತ್ರಿ ಸಾಗರೋತ್ತರ ವಿದ್ಯಾರ್ಥಿವೇತನ: ಸರ್ಕಾರದಿಂದ ಸಿಗುತ್ತೆ 20 ಲಕ್ಷ; ಆನ್ಲೈನ್ನಲ್ಲಿ ಹೀಗೆ ಅರ್ಜಿ ಸಲ್ಲಿಸಿ