ನಮಸ್ಕಾರ ಸ್ನೇಹಿತರೇ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ಜನರಿಗೆ ಇದೀಗ ಹವಮಾನ ಇಲಾಖೆಯಿಂದ ಸಿಹಿ ಸುದ್ದಿ ಬಂದಿದೆ. ಇದೀಗ ವರ್ಷ ದಾರಿಯ ಸಿಹಿ ಸುದ್ದಿ ರಾಜ್ಯದಲ್ಲಿ ಬಿಸಿಲಿನ ಬೇಗೆಯಲ್ಲಿ ಬೆಂದ ಜನರಿಗೆ ಬರುತ್ತಿದೆ. ಈ ಮಾಹಿತಿಯನ್ನು ಹವಾಮಾನ ಇಲಾಖೆಯಿಂದ ನೀಡಲಾಗಿತ್ತು ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಹೆಚ್ಚಿನ ಮಳೆಯಾಗುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ಯಾವ ಜಿಲ್ಲೆಗಳಲ್ಲಿ ಎಷ್ಟು ಮಳೆಯಾಗುತ್ತಿದೆ ಎಂಬುದನ್ನು ತಿಳಿಸಲಾಗುತ್ತದೆ.
ಕರ್ನಾಟಕದ ಕೆಲವು ಸ್ಥಳಗಳಲ್ಲಿ ಭಾರಿ ಮಳೆ :
ದಕ್ಷಿಣ ಕರ್ನಾಟಕದ ಹಲವಡೆ ದೀರ್ಘಕಾಲದ ಒಣ ಹವೆಯ ನಂತರ ಉತ್ತರ ಮತ್ತು ಮಧ್ಯ ಕರ್ನಾಟಕದ ಕೆಲವು ಸ್ಥಳಗಳಲ್ಲಿ ಮಧ್ಯಾಹ್ನದಿಂದ ಭಾರಿ ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸುತ್ತಿದ್ದು ಈ ಮಾಹಿತಿಯು ಸ್ವಲ್ಪ ಸಮಾಧಾನವನ್ನು ರೈತರಿಗೆ ತಂದಿದೆ. ಸಂಜೆಯ ವೇಳೆಗೆ ತುಮಕೂರು ಮತ್ತು ಕೋಲಾರ ಜಿಲ್ಲೆಗಳು ಸೇರಿದಂತೆ, ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಮಳೆ ಸಿಂಚನವಾಗಿದೆ. ಕರ್ನಾಟಕಕ್ಕೆ ಆಗಸ್ಟ್ ನಲ್ಲಿ ಒಣ ಹಾವೇ ಅನುಭವದ ಬಳಿಕ ಮಳೆರಾಯನ ಆಗಮನ ವಾಗಿರುವುದು ಮಂದಹಾಸ ಮೂಡುವಂತೆ ಜನರ ಮೊಗದಲ್ಲಿ ಮಾಡಿದೆ.
ಎರಡು ದಿನಗಳ ಭಾರಿ ಮಳೆ :
ಮುಂದಿನ ಎರಡು ದಿನ ಕರ್ನಾಟಕದ ದಕ್ಷಿಣ ಹಾಗೂ ಉತ್ತರಗಳ ನಾಡಿನಲ್ಲಿ ಭಾರಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆಯು ಆ ಭಾಗದ ಜನರಿಗೆ ಸೂಚನೆಯನ್ನು ನೀಡಿದೆ. ಇದರ ಜೊತೆಗೆ ಎಲ್ಲೋ ಅಲರ್ಟ್ ಕೂಡ ಕೆಲವು ಭಾಗಗಳಲ್ಲಿ ಹವಾಮಾನ ಇಲಾಖೆಯ ಘೋಷಿಸಲಾಗಿದೆ. ಇವುಗಳಲ್ಲದೆ ಬೀದರ್, ಬೆಳಗಾವಿ ಬಾಗಲಕೋಟೆ ಕಲಬುರ್ಗಿ ಕೊಪ್ಪಳ ಚಿಕ್ಕಬಳ್ಳಾಪುರ ಯಾದಗಿರಿ ದಕ್ಷಿಣ ಒಳನಾಡಿನ ಚಾಮರಾಜನಗರ ಕೋಲಾರ ತುಮಕೂರು ರಾಮನಗರದಲ್ಲಿ ಮಳೆಯಾಗಲಿದೆ. ಇವುಗಳಲ್ಲದೆ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿಯೂ ಕೂಡ ಹವಾಮಾನ ಇಲಾಖೆಯು ಭಾರಿ ಮಳೆಯ ಮುನ್ಸೂಚನೆಯನ್ನು ರಾಜ್ಯದ ಜನತೆಗೆ ನೀಡಲಾಗಿದೆ.
ಇದನ್ನು ಓದಿ : ಸಿಮ್ ಕಾರ್ಡ್ ಬ್ರೇಕಿಂಗ್ ನ್ಯೂಸ್: ಈ ನಿಯಮ ಮೀರಿದ್ರೆ 10 ಲಕ್ಷ ದಂಡ ಕಟ್ಟಿಟ್ಟ ಬುತ್ತಿ..!
ಬೆಂಗಳೂರಿನ ಸ್ಥಿತಿ :
ಸದ್ಯ ಇನ್ನು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಕಾಣಬಹುದಾಗಿದೆ. ಮುಂದಿನ 10 ದಿನಗಳವರೆಗೆ ಕರ್ನಾಟಕದಲ್ಲಿ ವಿವಿಧ ಪ್ರದೇಶಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ರಾಜ್ಯದ ಜನತೆಗೆ ಮುನ್ಸೂಚನೆಯನ್ನು ಈಗಾಗಲೇ ನೀಡಿದೆ. ಅಲ್ಲದೆ ಕರಾವಳಿ ಕರ್ನಾಟಕದಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರತೀಯ ಹವಾಮಾನ ಇಲಾಖೆಯು ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಮಾಹಿತಿಯನ್ನು ನೀಡಿದೆ. ಕರಾವಳಿ ಮಲೆನಾಡು ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಸೆಪ್ಟೆಂಬರ್ 14ರವರೆಗೆ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯು ರಾಜ್ಯದ ರೈತರಿಗೆ ಮಾಹಿತಿಯನ್ನು ನೀಡುವ ಮೂಲಕ ಅವರ ಮುಖದಲ್ಲಿ ಸಂತೋಷವನ್ನು ತಂದಿದೆ.
ಹೀಗೆ ಹವಾಮಾನ ಇಲಾಖೆಯು ಕರ್ನಾಟಕ ರಾಜ್ಯದಲ್ಲಿ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟು ಮಳೆಯಾಗಲಿದೆ ಹಾಗೂ ಯಾವ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಅನ್ನು ಘೋಷಿಸಲಾಗಿದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದ್ದು, ನೀವು ಯಾವ ಜಿಲ್ಲೆಯವರು ಎಂಬುದರ ಬಗ್ಗೆ ತಿಳಿದುಕೊಂಡು ನಿಮ್ಮ ಜಿಲ್ಲೆಗಳಲ್ಲಿ ಎಷ್ಟು ಮಳೆ ಯಾಗಲಿದೆ ಎಂಬುದರ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಸಹ ಶೇರ್ ಮಾಡಿ ಅವರು ಯಾವ ಜಿಲ್ಲೆಗಳಲ್ಲಿ ಇದ್ದಾರೆಯೋ ಅವರು ಎಷ್ಟು ಮಳೆಯನ್ನು ಕಾಣಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ ಧನ್ಯವಾದಗಳು.
ಇತರೆ ವಿಷಯಗಳು :
ಬೆಳೆ ಹಾನಿ ಪರಿಹಾರ ಹಣ ಬಿಡುಗಡೆ: ರೈತರಿಗೆ ಈ ದಿನಾಂಕದಂದು ನಿಮ್ಮ ಖಾತೆಗೆ ಪರಿಹಾರ ಹಣ
IAS ಪ್ರಶ್ನೆ: 2 ಬಾರಿ ಬಿಸಿ ಮಾಡಿ ತಿಂದರೆ ಯಾವ ಆಹಾರದ ವಸ್ತು ಅಪಾಯವಾಗುತ್ತದೆ?