ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ರಾಜ್ಯದಲ್ಲಿ ಸುರಿಯುತ್ತಿರುವ ಭೀಕರ ಮಳೆಯ ಬಗ್ಗೆ. ಈಗಾಗಲೇ ಧಾರಾಕಾರವಾಗಿ ರಾಜ್ಯದಲ್ಲಿ ಸುರಿದ ಮಳೆಯಿಂದಾಗಿ ಅನೇಕ ಹಾನಿಗಳ ಉಂಟಾಗಿರುವುದನ್ನು ನಾವು ನೋಡಬಹುದು. ಅದರಂತೆ ಮತ್ತೆ ರಾಜ್ಯದಲ್ಲಿ ಮಳೆಯೂ ಮುಂದುವರೆಯಲಿದ್ದು ರಾಜ್ಯ ಸರ್ಕಾರವು ಈ ನಾಲ್ಕು ಜಿಲ್ಲೆಗಳಿಗೆ ಎಚ್ಚರಿಕೆಯನ್ನು ನೀಡಿದೆ. ಹೀಗೆ ರಾಜ್ಯದಲ್ಲಿ ಉಂಟಾದ ಮಳೆಯಿಂದಾಗಿ ಆಗಿರುವಂತಹ ಪರಿಣಾಮಗಳೇನು? ಹಾಗೂ ಈ ನಾಲ್ಕು ಜಿಲ್ಲೆಗಳು ಯಾವುವು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.
ರಾಜ್ಯದಲ್ಲಿ ಹೆಚ್ಚು ಮಳೆ ಆಗುತ್ತಿದೆ :
ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಅವರು ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ವಿಚಾರದಿಂದ ಆಗಿರುವಂತಹ ಪರಿಣಾಮದ ಬಗ್ಗೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದು, ಶೇಕಡ 56 ರಷ್ಟು ಜೂನ್ ನಲ್ಲಿ ಮಳೆ ಕೊರತೆಯಾಗಿದ್ದರೆ, ರಾಜ್ಯದಲ್ಲಿ ವಾಡಿಕೆಯಂತೆ ಜುಲೈನಲ್ಲಿ ಹೆಚ್ಚು ಮಳೆಯಾಗಿದೆ. ಹೀಗಾಗಿ ಶೇಕಡ 14ರಷ್ಟಕ್ಕೆ ಮಳೆ ಕೊರತೆ ಇಳಿದಿದೆ. ನಿರಂತರವಾಗಿ ನಾವು ಜಿಲ್ಲಾಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಹಾಗೂ ಹೆಚ್ಚಿನ ಜಾಗರೂಕರಾಗಿರಲು ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇವೆ ಎಂದು ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಅವರು ತಿಳಿಸಿದರು.
ವಿವಿಧ ಜಿಲ್ಲೆಗಳಲ್ಲಿ ಮಳೆ ಎಷ್ಟಾಗಿದೆ ಎಂಬುದರ ಮಾಹಿತಿ :
ಶೇಕಡ 170 ರಷ್ಟು ಉತ್ತರ ಒಳನಾಡಿನಲ್ಲಿ ವಾಡಿಕೆಯಂತೆ ಹೆಚ್ಚು ಮಳೆಯಾಗಿದ್ದು, ಶೇಕಡ 300ರಷ್ಟು ಕಲಬುರ್ಗಿಯಲ್ಲಿ ,ಶೇಕಡ 166 ರಷ್ಟು ಯಾದಗಿರಿಯಲ್ಲಿ, ಶೇಕಡ 155 ರಷ್ಟು ಬೀದರ್ ಜಿಲ್ಲೆಯಲ್ಲಿ ,ಶೇಕಡ 186 ರಷ್ಟು ಬೆಳಗಾವಿಯಲ್ಲಿ ,ಶೇಕಡ 174 ರಷ್ಟು ಬಾಗಲಕೋಟೆಯಲ್ಲಿ ,ಶೇಕಡ 185 ರಷ್ಟು ವಿಜಯಪುರದಲ್ಲಿ ಹಾಗೂ ಶೇಕಡ 1666ರಷ್ಟು ಗದಗ ಜಿಲ್ಲೆಯಲ್ಲಿ ಜುಲೈ 28 ರವರೆಗೆ ಉತ್ತಮ ಮಳೆಯಾಗಲಿದೆ ಎಂದು ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ ಹಾಗೂ ಮುಂದಿನ ನಾಲ್ಕು ದಿನಗಳು ನಿರ್ಣಾಯಕವಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದರು. ನಾಲ್ಕು ಜಿಲ್ಲೆಗಳಿಗೆ ಎಚ್ಚರ ನೀಡಿದ ಸರ್ಕಾರ : ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸರ್ಕಾರವು ಕಲಬುರಗಿ ಬೀದರ್ ಯಾದಗಿರಿ ಹಾಗೂ ವಿಜಯಪುರ ಈ ನಾಲ್ಕು ಜಿಲ್ಲೆಗಳಿಗೆ ಕಟ್ಟೆಚ್ಚರ ವಹಿಸಿದೆ. ಏಕೆಂದರೆ ಈ ನಾಲ್ಕು ಜಿಲ್ಲೆಗಳು ಮಹಾರಾಷ್ಟ್ರದ ಉಜ್ಜನಿ ಅಣೆಕಟ್ಟಿನಿಂದ ನೀರು ಬಿಟ್ಟರೆ ಭೀಮ ಜಲಾಶಯನ ಪ್ರದೇಶವು ಈ ನಾಲ್ಕು ಜಿಲ್ಲೆಗಳಿಗೆ ಹಂಚಲ್ಪಟ್ಟಿದ್ದು ಈ ಪ್ರದೇಶಗಳು ಜಲಾವೃತ ವಾಗುವ ಅಪಾಯವಿದೆ ಎಂದು ಹೇಳಿರುವುದರ ಮೂಲಕ ಈ ಪ್ರದೇಶದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಸಚಿವರು ಉಳಿಸಿದರು.
ರಾಜ್ಯದಲ್ಲಿರುವ ಜಲಾಶಯಗಳ ನೀರಿನ ಮಟ್ಟ :
ಈ ವೇಳೆಯಲ್ಲಿಯೇ 144 ಟಿಎಂಸಿ ಅಡಿ ಹೆಚ್ಚುವರಿ ಒಳಹರಿವು ರಾಜ್ಯಾದ್ಯಂತ ಜಲಾಶಯಗಳಲ್ಲಿ ಇರುವುದನ್ನು ಕಾಣಬಹುದು. 40 ಟಿಎಂಸಿ ಅಡಿ ಭಾನುವಾರ ದಂದು ಸಂಗ್ರಹವಾಗಿದೆ. ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ 678 ಕ್ಯೂಸೆ ಕೊಳಹರಿವು ಕಾವೇರಿ ಜಲಾಶಯನದ ಪ್ರದೇಶದಲ್ಲಿ ಇರುವುದನ್ನು ಕಾಣಬಹುದು. 9000 ಕ್ಯೂಸೆಕ್ ಹೊರಾರಿವು ನೀರು, ಕಬಿನಿ ಮತ್ತು ಕೆ ಆರ್ ಎಸ್ ಜಲಾಶಯಗಳಲ್ಲಿ ಇದೆ. ಅದರಂತೆ 2.61 ಲಕ್ಷ ಕ್ಯುಸೆಕ್ ಒಳಹರಿವು ಮಲಪ್ರಭಾ, ಘಟಪ್ರಭಾ ,ಆಲಮಟ್ಟಿ ,ನಾರಾಯಣಪುರ ಹಾಗೂ ತುಂಗಭದ್ರಾ ಅಣೆಕಟ್ಟುಗಳಲ್ಲಿ ಇರುವುದನ್ನು ಕಾಣಬಹುದು. ಇದಕ್ಕೆ ವ್ಯತಿರಿಕ್ತವಾದಂತೆ ಮಳೆಯ ಕೊರತೆಯು ಬೆಂಗಳೂರು, ಬೆಂಗಳೂರು ಗ್ರಾಮಾಂತರ ,ರಾಮನಗರ ,ಕೋಲಾರ ,ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಯಲ್ಲಿ ಇರುವುದನ್ನು ಕಾಣಬಹುದಾಗಿದೆ. ಅದೇನೇ ಇದ್ದರೂ ಸಹ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳು ಕಟ್ಟುನಿಟ್ಟಾಗಿರುವುದರಿಂದ ಯಾವುದೇ ಮಳೆ ಕೊರೆತ ಪ್ರದೇಶಗಳಲ್ಲಿ ಬರಗಾಲ ಎಂದು ಘೋಷಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಬರ ಮಾರ್ಗ ಸೂಚಿಗಳನ್ನು ಸಡಿಲಿಸುವಂತೆ ಕೇಂದ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರ ಬರೆಯುತ್ತಿದ್ದಾರೆ. ಸುಮಾರು ಶೇಕಡಾ 20ರಷ್ಟು 80 ತಾಲೂಕುಗಳಲ್ಲಿ ಮಳೆ ಕೊರತೆಯಾಗಿದೆ ಎಂದು ಕೃಷ್ಣೇಗೌಡ ಅವರು ತಿಳಿಸಿದ್ದಾರೆ.
ಹೀಗೆ ರಾಜ್ಯಾದ್ಯಂತ ಮಳೆಯೂ ಹೆಚ್ಚು ಪರಿಣಾಮವನ್ನು ಬೀರುತ್ತಿದ್ದು ಕೆಲವೊಂದಿಷ್ಟು ಪ್ರದೇಶಗಳಲ್ಲಿ ಮಳೆಯ ಕೊರತೆಯನ್ನು ಸಹ ಕಾಣಬಹುದಾಗಿದೆ. ಆದರೆ ನೀವು ಮೇಲೆ ತಿಳಿಸಿದಂತಹ ನಾಲ್ಕು ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಿರುವ ಕಾರಣ ಜಲಾವೃತ ಆಗಬಹುದು ಎಂಬ ಉದ್ದೇಶದಿಂದ ಆ ಪ್ರದೇಶಗಳ ಮೇಲೆ ರಾಜ್ಯ ಸರ್ಕಾರವು ಹೆಚ್ಚು ನಿಗ ವಹಿಸಿರುವುದನ್ನು ಕಾಣಬಹುದಾಗಿದೆ. ಹೀಗೆ ಈ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಸಹ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಹಿರಿಯ ನಾಗರೀಕರಿಗೆ ಪ್ರತಿ ತಿಂಗಳು 20,500 ರೂ..! ಅರ್ಜಿ ಅಹ್ವಾನ ಪ್ರಾರಂಭ, ಈ ಕಾರ್ಡ್ ಕಡ್ಡಾಯ!