ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ಹವಾಮಾನ ಇಲಾಖೆಯು ರಾಜ್ಯದ ಜನತೆಗೆ ಸಿಹಿ ಸುದ್ದಿ ನೀಡಿರುವುದರ ಬಗ್ಗೆ ತಿಳಿಸುತಿದ್ದೇವೆ. ಶೇಕಡ 21ರಷ್ಟು, ಮಳೆಯೂ ರಾಜ್ಯದಲ್ಲಿ ಕೊರತೆಯ ದಾಖಲೆಯಾಗಿದೆ. ಆದರೆ ಶೇಕಡ 35 ರಷ್ಟು ಕಾವೇರಿ ಚಲಾನಯನ ಪ್ರದೇಶದಲ್ಲಿ ಕೊರತೆ ಇದೆ ಎಂದು ಹವಾಮಾನ ಇಲಾಖೆಯು ರಾಜ್ಯದ ಜನತೆಗೆ ತಿಳಿಸಿದೆ. ಹಾಗಾದರೆ ತಾಪಮಾನದಲ್ಲಿ ಏರಿಕೆ ಮುಂದುವರಿಯುತ್ತಿದ್ದು ರಾಜ್ಯಕ್ಕೆ ಯಾವಾಗ ಮಳೆಯಾಗುತ್ತಿದೆ ಎಂಬುದರ ಮುನ್ಸೂಚನೆ ಬಗ್ಗೆ ಭಾರತೀಯ ಹವಾಮಾನ ಇಲಾಖೆಯು ಮಾಹಿತಿಯನ್ನು ನೀಡುತ್ತಿದ್ದು ಆ ಮಾಹಿತಿಯನ್ನು ಈ ಲೇಖನದಲ್ಲಿ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.
ಭಾರತೀಯ ಹವಾಮಾನ ಇಲಾಖೆ ದಾಖಲೆಗಳ ಪ್ರಕಾರ :
ಸೆಪ್ಟೆಂಬರ್ ನಲ್ಲಿ ಕರ್ನಾಟಕಕ್ಕೆ 16 ಸೆಂಟಿಮೀಟರ್ ಸಾಮಾನ್ಯ ಮಳೆಯ ಆಗಲಿದ್ದು 21.7 ಸೆಂಟಿಮೀಟರ್ ಆಗಸ್ಟ್ ತಿಂಗಳಲ್ಲಿ ಸಾಮಾನ್ಯ ಮಳೆ ಹಾಗೂ 5.2 ಸೆಂಟಿಮೀಟರ್ ನಷ್ಟು ಮಳೆ ರಾಜ್ಯದಲ್ಲಿ ಆಗಸ್ಟ್ 29 2023ರ ವರೆಗೆ ಆಗಲಿದ್ದು 15 ದಿನಗಳ ಕಾಲ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು ರಾಜ್ಯವು ಪಡೆಯುತ್ತದೆ ಎಂದು ಹವಾಮಾನ ಇಲಾಖೆಯು ರಾಜ್ಯದ ಜನತೆಗೆ ಮಾಹಿತಿಯನ್ನು ನೀಡಿದೆ.
ಮಾನ್ಸೂನ್ ಮಳೆ:
ಹಿಮಾಲಯದ ತಪ್ಪಲಿನತ್ತ ನೈರುತ್ಯ ಮಾನ್ಸೂನ್ ಸಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹಿರಿಯ ಅಧಿಕಾರಿಯು ರಾಜ್ಯದ ಜನತೆಗೆ ತಿಳಿಸಿದ್ದು ಹೀಗಾಗಿ ದಕ್ಷಿಣ ಭಾರತದ ಬಹುತೇಕ ಭಾಗಗಳಲ್ಲಿ ಮಾನ್ಸೂನ್ ಮಾರುತವು ದುರ್ಬಲವಾಗಿದೆ ಎಂದು ಹೇಳಲಾಗುತ್ತಿದೆ. ಆದರೂ ಸಹ ತಮಿಳುನಾಡಿನ ಬಹುತೇಕ ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದ್ದು ಆದರೆ ಪಶ್ಚಿಮಘಟ್ಟ ಮತ್ತು ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಬರುತ್ತಿಲ್ಲ ಎಂದು ಹೇಳಬಹುದಾಗಿದೆ. ತಮಿಳುನಾಡಿನಲ್ಲಿ ಮುಂದಿನ 48 ಗಂಟೆಗಳಲ್ಲಿ 7 ಸೆಂಟಿಮೀಟರ್ ಗಿಂತ ಹೆಚ್ಚು ಅಂದರೆ ಭಾರಿ ಮಳೆ ಬಿಡಲಿದೆ ಎಂದು ಭಾರತೀಯ ಹವಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ತಮಿಳುನಾಡಿನಲ್ಲಿ ಪಶ್ಚಿಮ ಘಟ್ಟಗಳು ನೀಲಗಿರಿ ಮತ್ತು ಕೊಯಮತ್ತೂರು ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಲ್ಲ ಭಾಗಗಳಲ್ಲಿ ಸಾಕಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇದನ್ನು ಓದಿ : ಕಿಸಾನ್ ಯೋಜನೆಯ ಹಣ 6,000 ಬದಲಾಗಿ ಇನ್ನು ಮುಂದೆ 9,000 ಕೂಡಲೇ ಲಿಂಕ್ ನಲ್ಲಿ ರಿಜಿಸ್ಟರ್ ಮಾಡಿ
ಸೆಪ್ಟೆಂಬರ್ 8 ರಿಂದ ಮಳೆ :
ಸೆಪ್ಟೆಂಬರ್ 8 ರಿಂದ ಮೆಟ್ಟೂರು ಅಣೆಕಟ್ಟು ಮತ್ತು ಕಾವೇರಿ ಜಲಾನಯನ ಪ್ರದೇಶದಲ್ಲಿ ಅಂದರೆ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಮಳೆಯಾಗುತ್ತದೆ ಎಂದು ಹೇಳಿದ್ದು ಆದರೆ ಸಾಮಾನ್ಯ ಮಳೆಯ ಪ್ರಮಾಣ ಸೆಪ್ಟೆಂಬರ್ ನಲ್ಲಿ ಹೆಚ್ಚಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಲ್ಲದೆ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಎಲ್ ನೀನು ಸಕರಾತ್ಮಕವಾಗಿರುವುದರಿಂದ ಮುಂಗಾರು ಮಳೆ ದುರ್ಬಲವಾಗಿರುತ್ತದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಹೀಗೆ ಕರ್ನಾಟಕ ರಾಜ್ಯ ಮತ್ತು ತಮಿಳುನಾಡಿನಲ್ಲಿ ಕೆಲವೊಂದಿಷ್ಟು ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆಯನ್ನು ನೀಡಿದ್ದು ಇದರಿಂದ ಆ ಪ್ರದೇಶದ ರೈತರು ಸ್ವಲ್ಪಮಟ್ಟಿಗೆ ಸಮಾಧಾನಗೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಹೀಗೆ ಮುಂದಿನ ದಿನಗಳಲ್ಲಿ ಅಂದರೆ ಸೆಪ್ಟೆಂಬರ್ ನಲ್ಲಿ ಭಾರಿ ಮಳೆಯಾಗಲಿದೆ ಎಂದು ನಿಮ್ಮ ರೈತ ಸ್ನೇಹಿತರಿಗೆ ಈ ಮಾಹಿತಿಯನ್ನು ಹಾಗೂ ಮಳೆಯನ್ನೇ ನಂಬಿದಂತಹ ನಿಮ್ಮ ಸ್ನೇಹಿತರು ಯಾರಾದರೂ ಇದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ರೈತರಿಗಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ: ಮಿಸ್ ಕಾಲ್ ಕೊಡಿ ಹಣ ಪಡೆಯಿರಿ
ಜಿಯೋ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ : ಡಿಸೆಂಬರ್ 31ರವರೆಗೂ ಡೇಟಾ ಕರೆನ್ಸಿ ಉಚಿತ