ನಮಸ್ಕಾರ ಸ್ನೇಹಿತರೇ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಗೆ ಸಂಬಂಧಿಸಿ ದಂತೆ ಗೃಹಜೋತಿ ಯೋಜನೆಯು ಆಗಸ್ಟ್ ಐದರಂದು ಚಾಲನೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಗ್ಯಾರಂಟಿ ಯೋಜನೆಯಾಗಿ ಚುನಾವಣೆ ಪ್ರಣಾಳಿಕೆಯಲ್ಲಿ ಗೃಹ ಜ್ಯೋತಿ ಯೋಜನೆಯನ್ನು ಘೋಷಿಸಿದ್ದ ಕರ್ನಾಟಕ ಸರ್ಕಾರವು ಈ ಯೋಜನೆಯ ಮೂಲಕ ಪ್ರತಿ ಮನೆಗಳಿಗೂ ಸಹ 200 ಯೂನಿಟ್ ವರೆಗೆ ಉಚಿತ ವಿದ್ಯುತ್ತನ್ನು ನೀಡಲು ನಿರ್ಧರಿಸಿದೆ. ಹೀಗೆ ಜುಲೈ ತಿಂಗಳಿನಲ್ಲಿ ವಿದ್ಯುತ್ ಬಿಲ್ಲನ್ನು ಕಟ್ಟಿದವರಿಗೆ ಅವರ ಹಣ ವಾಪಸ್ ಬರಲಿದೆ ಎಂಬ ಮಾಹಿತಿಯು ತಿಳಿದು ಬರುತ್ತದೆ ಹಾಗಾದರೆ ಸಂಬಂಧಿಸಿದಂತೆ ಏನೆಲ್ಲ ಬದಲಾವಣೆಗಳನ್ನು ರಾಜ್ಯ ಸರ್ಕಾರ ಮಾಡಿದ ಎಂಬುದರ ಸಂಪೂರ್ಣ ಮಾಹಿತಿಯನ್ನು ನೀವು ಇದೀಗ ತಿಳಿದುಕೊಳ್ಳಬಹುದಾಗಿದೆ.
ಗೃಹಜ್ಯೋತಿ ಯೋಜನೆ :
ರಾಜ್ಯ ಸರ್ಕಾರವು ಈಗ ಅಂತಿಮವಾಗಿ ನುಡಿದಂತೆ ನಡೆದುಕೊಂಡಿದ್ದು ಗೃಹಜೋತಿ ಯೋಜನೆಗೆ ಸಂಬಂಧಿಸಿ ದಂತೆ ಜುಲೈ ತಿಂಗಳಿನಲ್ಲಿ ಗೃಹಜ್ಯೋತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರವು ಸೂಚನೆ ನೀಡಿತ್ತು. ಅದರಂತೆ ಸೇವಾ ಸಿಂಧು ಪೋರ್ಟಲ್ನ ಮೂಲಕ ಸರ್ಕಾರದ ಮಾರ್ಗಸೂಚಿಯಂತೆ ಪ್ರತಿಯೊಬ್ಬರೂ ಸಹ ಮನೆಯ ವಿದ್ಯುತ್ ಖಾತೆ ಸಂಖ್ಯೆ ಹಾಗೂ ಆಧಾರ್ ನಂಬರ್ ಅನ್ನು ನೀಡುವುದರ ಮೂಲಕ ಸಾಕಷ್ಟು ಜನರು ಗೃಹ ಜ್ಯೋತಿ ಯೋಜನೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಜುಲೈ ತಿಂಗಳಿನಲ್ಲಿ ಬಳಸಿರುವ ವಿದ್ಯುತ್ ಗೆ ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಕುಟುಂಬಗಳು ಆಗಸ್ಟ್ ತಿಂಗಳಿನಲ್ಲಿ ಶೂನ್ಯ ಬಿಲ್ಲನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಸರ್ಕಾರ ನಿರ್ಧರಿಸಿದೆ. ಆದರೆ ಗೃಹಜೋತಿ ಯೋಜನೆಗೆ ಸಂಬಂಧಿಸಿದಂತೆ ಕೆಲವೊಂದು ಕಂಡೀಶನ್ ಗಳನ್ನು ಕೂಡ ರಾಜ್ಯ ಸರ್ಕಾರ ಸೇರಿಸಿದೆ. ಏನೇ ಕಂಡೀಶನ್ ಗಳಿದ್ದರೂ ಸಹ ಗ್ರೋಜ್ಯತಿ ಯೋಜನೆಗೆ ಸಂಬಂಧಿಸಿ ದಂತೆ ಸಾಕಷ್ಟು ಜನರು ಅರ್ಜಿಯನ್ನು ಸಲ್ಲಿಸಿರುವುದರ ಮೂಲಕ ಆಗಸ್ಟ್ ತಿಂಗಳಿನಲ್ಲಿ ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ ಉಚಿತ ವಿದ್ಯುತ್ತನ್ನು ಪಡೆಯಲು ಅರ್ಹರಾಗಿರುತ್ತಾರೆ.
ವಿದ್ಯುತ್ ಬಿಲ್ ಪಾವತಿಸಿದವರ ಹಣ ವಾಪಸ್ :
ಗೃಹಜೋತಿ ಯೋಜನೆಯ ಬಗ್ಗೆ ಮಾತನಾಡಿದಂತಹ ಕೆಜೆ ಚಾರ್ಜ್ ಅವರು ತಿಳಿಸಿರುವಂತೆ ಜುಲೈ ತಿಂಗಳಿನಲ್ಲಿ ಹಾಗೂ ಜೂನ್ ತಿಂಗಳ ಕೆಲವು ದಿನಗಳು ಸಹ ಗೃಹಜೋತಿ ಯೋಜನೆಯ ಬಿಲ್ ಮೊತ್ತ ಹೆಚ್ಚಿಗೆ ಬಂದಿರಬಹುದು ಎಂದು ಹೇಳಿದ್ದಾರೆ. B ಯಾರು ಕಳೆದ ನಾಲ್ಕು ತಿಂಗಳಿನಿಂದ ಶುಲ್ಕ ಬಾಕಿ ಉಳಿಸಿಕೊಂಡಿರುವುದಲ್ಲವೋ ಅಂಥವರ ವಿದ್ಯುತ್ ಬಿಲ್ಲನ್ನು ಪರಿಶೀಲಿಸಿ ಹೆಚ್ಚಿನ ವಿದ್ಯುತ್ ಬಿಲ್ ಪಾವತಿ ಮಾಡಿರುವವರಿಗೆ ಅವರ ಹಣ ವಾಪಸ್ ಅನ್ನು ನೀಡಲಾಗುತ್ತದೆ ಎಂದು ಹಿಂದಿನ ಸಚಿವರು ಭರವಸೆ ನೀಡಿದ್ದಾರೆ. ಗೃಹಜಯತಿ ಯೋಜನೆಯ ಅಡಿಯಲ್ಲಿ ಜುಲೈ ತಿಂಗಳಿನಲ್ಲಿ ಉಚಿತವಾಗಿ 200 ಯೂನಿಟ್ ಗಳವರೆಗೆ ವಿದ್ಯುತ್ ಸೌಲಭ್ಯವನ್ನು ಹೊಂದಿದ್ದ ಕುಟುಂಬಗಳು ಕಳೆದ 12 ತಿಂಗಳಲ್ಲಿ ಬಳಸಿರುವ ವಿದ್ಯುತ್ ಬಳಕೆಯ ಆಧಾರದ ಮೇಲೆ ಶೇಕಡ 10ರಷ್ಟು ಮಾತ್ರ ಪಡೆಯಬಹುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಹಲವಾರು ನಿಯಮಗಳನ್ನು ರಾಜ್ಯ ಸರ್ಕಾರ ಜಾರಿಗೆ ತರುತ್ತಿದ್ದು ಅದರಂತೆ ಈಗ ಜುಲೈ ತಿಂಗಳಿನಲ್ಲಿ ವಿದ್ಯುತ್ ಬಿಲ್ ಅನ್ನು ಪಾವತಿಸಿದವರಿಗೆ ಅವರ ಹಣ ವಾಪಸ್ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ರಾಜ್ಯ ಸರ್ಕಾರದ ಈ ಮಾಹಿತಿಯ ಬಗ್ಗೆ ಗೃಹಜೋತಿ ಯೋಜನೆಗೆ ಯಾರೆಲ್ಲಾ ಅರ್ಜಿ ಯನ್ನು ಸಲ್ಲಿಸಿದ್ದಾರೆಯೋ ಹಾಗೆ ಇದುವರೆಗೂ ಸಹ ಗೃಹಜ್ಯೋತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿಲ್ಲವೋ ಅಂತವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.