ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರವು ಮಹಿಳೆಯರಿಗಾಗಿ ಗೃಹಲಕ್ಷ್ಮಿ ಯೋಜನೆ ಹಾಗೂ ಶಕ್ತಿ ಯೋಜನೆ ಎಂಬ ಯೋಜನೆಗಳನ್ನು ತರುವುದರ ಮೂಲಕ ಮಹಿಳೆಯರಿಗೆ ಸಂಪೂರ್ಣ ಬೆಂಬಲ ನೀಡುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ. ಮಹಿಳೆಯರಿಗೆ ತಂದಿರುವ ಇಂತಹ ಯೋಜನೆಗಳು ಸ್ವಲ್ಪಮಟ್ಟಿಗೆ ರಾಜ್ಯದ ಪುರುಷರಲ್ಲಿ ಬೇಸರವನ್ನು ಉಂಟುಮಾಡಿದೆ. ಆದರೆ ಈಗ ಸಿದ್ದರಾಮಯ್ಯ ಅವರು ಪುರುಷರಿಗೂ ಸಹ ಸಿಹಿ ಸುದ್ದಿಯನ್ನು ನೀಡಲು ಬಯಸುತ್ತಿದ್ದಾರೆ. ಅದರಂತೆ ರಾಜ್ಯದ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ಪುರುಷರಿಗೆ ಎಂತಹ ಸಿಹಿ ಸುದ್ದಿ ನೀಡಲಾಗುತ್ತದೆ ಎಂಬುದರ ಮಾಹಿತಿಯನ್ನು ಈ ಕೆಳಗಿನಂತೆ ತಿಳಿಸಲಾಗಿದೆ.
ಸರ್ಕಾರಿ ಬಸ್ಗಳ ಲಾಭ :
ರಾಜ್ಯದ್ಯಂತ ಶಕ್ತಿ ಯೋಜನೆ ಜಾರಿ ಬಂದ ಕಾರಣ ರಾಜ್ಯದಲ್ಲಿರುವ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಅಂಗ ಸಂಸ್ಥೆಗಳ ಪ್ರತಿಯೊಂದು ಸಾರಿಗೆ ನಿಗಮಗಳ ಬಸ್ಸುಗಳಲ್ಲಿ ಕೆಲಸ ಹೆಚ್ಚಾಗಿರುವುದನ್ನು ಈಗಾಗಲೇ ನಾವು ನೋಡಬಹುದಾಗಿದೆ. ಅದರಂತೆ ಈಗ ರಾಜ್ಯದ್ಯಂತ ಹೆಚ್ಚು ಬಸ್ಸುಗಳು ಹಾಗೂ ಹೆಚ್ಚಿನ ಸಿಬ್ಬಂದಿಗಳು ಕಾರ್ಯನಿರ್ವಹಿಸುವುದಕ್ಕಾಗಿ ಬೇಕಾಗಿರುವುದನ್ನು ತಿಳಿದುಕೊಂಡ ರಾಜ್ಯ ಸರ್ಕಾರವು, ರಾಜ್ಯದ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸಿದ್ದಿಯನ್ನು ನೀಡಲು ನಿರ್ಧರಿಸಿದೆ. 13 ಸಾವಿರಕ್ಕೂ ಹೆಚ್ಚಿನ ಸಾರಿಗೆ ಸಿಬ್ಬಂದಿಗಳನ್ನು ಹೊಸದಾಗಿ ನೇಮಕ ಮಾಡಿಕೊಳ್ಳಲು ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ರಾಜ್ಯದ ಜನರಿಗೆ ಮಾಹಿತಿ ನೀಡಿದ್ದಾರೆ.
ಉದ್ಯೋಗಿಗಳ ನೇಮಕ :
ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಇತ್ತೀಚಿಗಷ್ಟೇ ಎಲೆಕ್ಟ್ರಿಕ್ ಬಸ್ಸಿನ ಚಾಲನೆ ಮಾಡುತ್ತಾ ಸುದ್ದಿಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದ್ದಾರೆ. ಕೆಎಸ್ಆರ್ಟಿಸಿ ಅಲ್ಲಿ ಕೆಲಸಕ್ಕಾಗಿ 2016ರಲ್ಲಿ ಕೊನೆಯ ಬಾರಿಗೆ ಆಹ್ವಾನ ಮಾಡಲಾಗಿತ್ತು. ಆದರೆ ಈಗ ಕೇಸಾರ್ಟಿಸಿ ಕೆಲಸಕ್ಕಾಗಿ ನೇಮಕ ಮಾಡಿಕೊಳ್ಳಲು ಎಂಟು ವರ್ಷಗಳ ನಂತರ ನೇಮಕಾತಿಯ ಪ್ರಸ್ತಾವನೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ ಎಂದು ಹೇಳಿದ್ದಾರೆ. ಸಾರಿಗೆ ಸಿಬ್ಬಂದಿ ಡ್ರೈವರ್ ಕಂಡಕ್ಟರ್ ಹಾಗೂ ತಂತ್ರಜ್ಞಾನ ಹೊಸದಾಗಿ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸುವುದರ ಮೂಲಕ ಈ ಬಾರಿ ಕೆಲಸಕ್ಕೆ ಸೇರಿಸಿಕೊಳ್ಳುವ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ಸಚಿವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ ಮೆಕ್ಯಾನಿಕ್ ಡ್ರೈವರ್ ಕಂಡಕ್ಟರ್ ಸೇರಿದಂತೆ, ಹದಿಮೂರು ಸಾವಿರ ಸ್ಥಾನಗಳಿಗೆ ಸಾರಿಗೆ ಸಂಸ್ಥೆಯಲ್ಲಿ ನೇಮಕಾತಿಯನ್ನು ಈ ಬಾರಿ ನಡೆಸಲಾಗುತ್ತದೆ ಎಂಬುದಾಗಿ ಮಾಹಿತಿ ನೀಡಿದ್ದು ಈ ಬಗ್ಗೆ ಸರ್ಕಾರವು ಸಹ ಒಪ್ಪಿಗೆ ನೀಡುತ್ತಿದ್ದಂತೆ ಈ ನೇಮಕಾತಿ ಆಯ್ಕೆ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತದೆ ಎಂದು ಹೇಳಲಾಗಿದೆ.
ಹೊಸ ಬಸ್ಸುಗಳ ಖರೀದಿ :
ಕೆಲವೊಂದು ಕೆಎಸ್ಆರ್ಟಿಸಿ ಬಸ್ಸುಗಳು ಈಗಾಗಲೇ ರಾಜ್ಯಾದ್ಯಂತ ನಮಗೆಲ್ಲರಿಗೂ ತಿಳಿದಿರುವಂತೆ ಶಿಥಿಲಗೊಂಡಿದ್ದು ಅವುಗಳು ಅಪಾಯದ ಅಂಚಿನಲ್ಲಿದೆ. ಹಾಗಾಗಿ ರಾಜ್ಯದಲ್ಲಿ ರಾಜ್ಯ ಸರ್ಕಾರವು 5000 ಹೊಸ ಬಸ್ಸುಗಳನ್ನು ಈ ವರ್ಷದ ಅಂತ್ಯದ ಒಳಗೆ ಖರೀದಿಸಲು ವಿಧಾನಸಭೆಯಲ್ಲಿ ಹೆಚ್ಚಿಸಲಾಗಿದೆ ಹಾಗೂ ಖರೀದಿಸಲಾಗುತ್ತದೆ ಎಂಬ ಮಾಹಿತಿಯನ್ನು ಸಾರಿಗೆ ಸಚಿವರು ರಾಜ್ಯದ ಜನತೆಗೆ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಹೊಸ ಬಸ್ಸುಗಳ ಖರೀದಿಗಾಗಿ ಬಜೆಟ್ ನಲ್ಲಿ ಆರ್ಥಿಕ ವರ್ಷದಲ್ಲಿ 5000 ಕೋಟಿ ರೂಪಾಯಿಗಳ ಹಣವನ್ನು ರಾಜ್ಯ ಸರ್ಕಾರವು ಮೀಸಲಿಟ್ಟಿದೆ. ಬಿಎಂಟಿಸಿ ಅಧೀನದಲ್ಲಿ 1000 ಬಸ್ಸುಗಳನ್ನು ಹಾಗೂ ಉಳಿದ 4000 ಬಸ್ಸುಗಳನ್ನು ಕೆಎಸ್ಆರ್ಟಿಸಿ ಅಂಗ ಸಂಸ್ಥೆಗಳಿಗೆ ಖರೀದಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂಬುದಾಗಿ ಕೆಲವೊಂದು ಮೂಲಗಳಿಂದ ತಿಳಿದು ಬಂದಿದೆ. ಹಾಗಾಗಿ ಈ ವರ್ಷ ಖಂಡಿತವಾಗಿ ಕೆಎಸ್ಆರ್ಟಿಸಿ ಸಂಸ್ಥೆ ಈ ಬಾರಿ ದೊಡ್ಡ ಮಟ್ಟದಲ್ಲಿ ಬದಲಾವಣೆಯನ್ನು ಕಾಣಲಿದೆ ಹಾಗೂ ರಾಜ್ಯದ ಸಾರಿಗೆ ನಿಗಮ ವೇಗವಾಗಿ ಇನ್ನಷ್ಟು ಬೆಳೆಯುವುದಕ್ಕೆ ಈ ಯೋಜನೆಗಳು ಸಹಾಯಕವಾಗಲಿದೆ ಎಂದು ಹೇಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ.
ಹೀಗೆ ರಾಜ್ಯ ಸರ್ಕಾರವು ಸಾರಿಗೆ ನಿಗಮಕ್ಕೆ ಸಂಬಂಧಿಸಿದಂತೆ ಪುರುಷರಿಗೆ ಸಿಹಿ ಸುದ್ದಿಯನ್ನು ನೀಡಿದ್ದು, ಇದು ರಾಜ್ಯದಲ್ಲಿ ಒಂದು ಮಟ್ಟಿಗೆ ಸಂತೋಷದ ಸುದ್ದಿಯು ಎಂದು ಹೇಳಬಹುದಾಗಿದೆ. ಹೀಗೆ ಶಕ್ತಿ ಯೋಜನೆ ಜಾರಿಗೆ ತಂದ ರಾಜ್ಯ ಸರ್ಕಾರವು ಸಾರಿಗೆ ಸಂಸ್ಥೆಯಲ್ಲಿ ಹೆಚ್ಚು ಉದ್ಯೋಗವನ್ನು ಹಾಗೂ ಸರ್ಕಾರಿ ಬಸ್ಸುಗಳನ್ನು ಖರೀದಿಸಲು ಅನುವು ಮಾಡಿಕೊಟ್ಟಿದೆ ಎಂದು ಹೇಳಬಹುದಾಗಿದೆ. ಹೀಗೆ ಈ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರು ಹಾಗು ಸಂಬಂಧಿಕರಿಗೂ ಸಹ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಯೂಟ್ಯೂಬ್ ನಲ್ಲಿ 4400 ಕೋಟಿ ರೂಪಾಯಿ ಸಂಪಾದನೆ! ಯೂಟ್ಯೂಬ್ ಆರಂಭದಲ್ಲಿಯೇ ಆಸ್ತಿ ಸಂಪಾದಿಸಿದ ಉಪನ್ಯಾಸಕ ಯಾರು ಗೊತ್ತಾ?