ನಮಸ್ಕಾರ ಸ್ನೇಹಿತರೇ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಕೇಂದ್ರ ಸರ್ಕಾರದ ಕಿಸಾನ್ ಸಮ್ಯಾನ್ ನಿಧಿ ಯೋಜನೆಯ ಬಗ್ಗೆ. ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ನಿಧಿ ಯೋಜನೆಯ 14ನೇ ಕಂತನ್ನು ಇತ್ತೀಚಿಗಷ್ಟೇ ಬಿಡುಗಡೆ ಮಾಡಿದ್ದು ಅದರಂತೆ ಈಗ ರೈತರ 14ನೇ ಕಂತಿನ ಹಣವನ್ನು ಜಮಾ ಆಗಿದೆ. ಅದರಂತೆ ಈಗ ಕಿಸಾನ್ ಸಲ್ಮಾನ್ ನಿಧಿ ಯೋಜನೆಯ 15ನೇ ಕಂತಿನ ಹಣದ ಬಗ್ಗೆ ರೈತರು ಕಾಯುತ್ತಿದ್ದರೆ ಅವರಿಗೆ ಲೇಖನದಲ್ಲಿ 15ನೇ ಕಂತಿನ ಮಾಹಿತಿಯನ್ನು ತಿಳಿಸಲಾಗುತ್ತದೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ :
ನಮ್ಮ ದೇಶದ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿಯವರು ದೇಶದ ರೈತ ಸಹೋದರರಿಗಾಗಿ ಫೆಬ್ರವರಿ 2019ರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ ನಿಧಿ ಯೋಜನೆಯನ್ನು ಪ್ರಾರಂಭಿಸಿದರು. ಈ ಯೋಜನೆಯ ಅಡಿಯಲ್ಲಿ ರೈತರು ವಾರ್ಷಿಕವಾಗಿ ಕೇಂದ್ರ ಸರ್ಕಾರದಿಂದ 6,000ಗಳನ್ನು ಪಡೆಯುತ್ತಾರೆ. ಯೋಜನೆಗೆ ಸಂಬಂಧಿಸಿದಂತೆ ಈ ಯೋಜನೆಯ ಪ್ರಯೋಜನವನ್ನು ಎಲ್ಲ ರೈತರು ಪಡೆಯಬೇಕಾದರೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಈ ಯೋಜನೆಯ ಲಾಭವನ್ನು ಕೇಂದ್ರ ಸರ್ಕಾರವು ಆರ್ಥಿಕವಾಗಿ ಬಡ ರೈತರಿಗೆ ಒದಗಿಸಲು ನಿರ್ಧರಿಸಿದೆ.
ಪ್ರಧಾನ ಮಂತ್ರಿ ಕಿಸಾನ್ ನಿಧಿ ಯೋಜನೆಯ 15ನೇ ಕಂತು :
ಈಗಾಗಲೇ ಪ್ರಧಾನಮಂತ್ರಿ ಕಿಸಾನ್ ನಿಧಿ ಯೋಜನೆಯ 14ನೇ ಕಂತನ್ನು ರೈತರ ಎಲ್ಲಾ ಖಾತೆಗೆ ಕೇಂದ್ರ ಸರ್ಕಾರವು ಹಣವನ್ನು ಜಮಾ ಮಾಡಿದೆ ಅದರಂತೆ ಈಗ ರೈತರು ಪ್ರಧಾನ ಮಂತ್ರಿ ಕಿಸಾನ್ ನಿಧಿ ಯೋಜನೆಯ 15ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ರೈತರು ಪ್ರಧಾನಮಂತ್ರಿ ಕಿಸಾನ್ ನಿಧಿ ಯೋಜನೆಯ 15ನೇ ಕಂತನ್ನು ಪಡೆಯಬೇಕಾದರೆ ಈ ಕೆ ವೈ ಸಿ ಯನ್ನು ಪೂರ್ಣಗೊಳಿಸಿದಂತಹ ಎಲ್ಲಾ ಅರ್ಹರಿಗೆ ಕೇಂದ್ರ ಸರ್ಕಾರವು 15ನೇ ಕಂತಿನ ಹಣವನ್ನು ನೀಡಲಾಗುತ್ತದೆ. ಪ್ರಧಾನಮಂತ್ರಿ ಕಿಸಾನ್ ನಿಧಿ ಯೋಜನೆಯ 14 ನೆ ಕoತಿನ ಹಣವು 2023 ಜುಲೈ 27ರಂದು ಈಗಾಗಲೇ ಬಿಡುಗಡೆಯಾಗಿದೆ. ಫೆಬ್ರವರಿ 27 2023 ರಂದು 13ನೇ ಕಂತಿನ ಹಣವು ಬಿಡುಗಡೆಯಾಗಿದ್ದು ಈಗ ಪ್ರಧಾನಮಂತ್ರಿ ಕಿಸಾನ್ ನಿಧಿ ಯೋಜನೆಯ 15ನೇ ಕಂತಿನ ಹಣವು ಯಾವಾಗ ಬರುತ್ತದೆ ಎಂಬ ಕುತೂಹಲ ರೈತರಲ್ಲಿ ಮೂಡಿದೆ. ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ಯ ಯೋಜನೆಯ 15ನೇ ಕಂತಿನ ಹಣವು ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಎಂದು ಹೇಳಬಹುದಾಗಿದೆ.
ಇದನ್ನು ಓದಿ : IAS ಪ್ರಶ್ನೆ ಹೀಗಿದೆ ನೋಡಿ! ಹಾಲು ಹಾಗೂ ಮೊಟ್ಟೆ ಎರಡನ್ನು ಕೊಡುವ ಪ್ರಾಣಿ ಯಾವುದು?
ಪ್ರಧಾನ ಮಂತ್ರಿ ಕಿಸಾನ್ ಸಮಾನ್ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ :
ದೇಶದಲ್ಲಿರುವ ರೈತರು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ ನಿಧಿ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾದರೆ ಆನ್ಲೈನ್ ಮೂಲಕ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಕೇಂದ್ರ ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವುದರ ಮೂಲಕ ಅಭ್ಯರ್ಥಿಗಳು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಪ್ರತಿ ವರ್ಷ 6,000ಗಳನ್ನು ರೈತರು ಪಡೆಯಬಹುದಾಗಿದೆ.
ಹೀಗೆ ಕೇಂದ್ರ ಸರ್ಕಾರವು ರೈತರಿಗಾಗಿ ಪ್ರಧಾನಮಂತ್ರಿ ಕಿಸಾನ್ ನಿಧಿ ಯೋಜನೆಯನ್ನು ಪ್ರಾರಂಭಿಸಿದ್ದು ಈ ಯೋಜನೆಯಡಿಯಲ್ಲಿ ರೈತರು ಪ್ರತಿ ವರ್ಷ 6,000ಗಳನ್ನು ಪಡೆಯುತ್ತಿದ್ದಾರೆ. ಅದರಂತೆ ಈಗ ರೈತರು 15ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದು ಡಿಸೆಂಬರ್ ಒಳಗಾಗಿ 15ನೇ ಕಂತಿನ ಹಣವು ಬರುತ್ತದೆ ಎಂಬುದರ ಬಗ್ಗೆ ಈಗಾಗಲೇ ಮಾಹಿತಿ ತಿಳಿದು ಬರುತ್ತಿದೆ. ಹೀಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಬಗ್ಗೆ ನಿಮ್ಮ ಸ್ನೇಹಿತರು ಯಾರಾದರೂ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಅವರು ಡಿಸೆಂಬರ್ ಒಳಗಾಗಿ 15ನೇ ಕಂತಿನ ಹಣವು ಬರುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳಲಿ ಧನ್ಯವಾದಗಳು.
ಇತರೆ ವಿಷಯಗಳು :
ಗಂಗಾ ಕಲ್ಯಾಣ ಯೋಜನೆ ಅರ್ಜಿ ಆಹ್ವಾನ! ಈ ಯೋಜನೆಯ ಅಡಿಯಲ್ಲಿ ಸಿಗುತ್ತೆ ಉಚಿತ 3 ಲಕ್ಷ ರೂ